Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬು ಪಾನೀಯ ತುಂಬಾ ಒಳ್ಳೆಯದು, ಆದರೆ ಇವರಿಗಲ್ಲ!
ಬೆಳಗ್ಗೆ ಎದ್ದು ಒಂದು ಲೋಟ ಬಿಸಿ ನೀರಿಗೆ ಅರ್ಧ ನಿಂಬು ಹಿಂಡಿ ಕುಡಿದರೆ ತುಂಬಾ ಒಳ್ಳೆಯದು ಎಂದು ಆರೋಗ್ಯ ತಜ್ಞರು ಕೂಡ ಹೇಳುತ್ತಾರೆ. ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಇದೆ, ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಅಲ್ಲದೆ ಹೊಟ್ಟೆ ಬೊಜ್ಜು ಕರಗಿಸು, ಮೈ ತೂಕ ಕರಗಿಸಲು ಕೂಡ ನಿಂಬು ಪಾನೀಯ ತುಂಬಾನೇ ಒಳ್ಳೆಯದು.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ನಿಂಬು ಪಾನೀಯ ಹಾಕಿ ಕುಡಿಯುವುದು ತುಂಬಾನೇ ಒಳ್ಳೆಯದು ಎಂದು ಮಾತ್ರ ಹಲವರಿಗೆ ಗೊತ್ತಿರುತ್ತದೆ, ಆದರೆ ಇದರ ಅಡ್ಡಪರಿಣಾಮಗಳ ಬಗ್ಗೆ ಕೂಡ ತಿಳಿದಿರಬೇಕು, ಆವಾಗ ಮಾತ್ರ ಯಾರು ಈ ಪಾನೀಯ ಕುಡಿಯಬಹುದು, ಯಾರು ಕುಡಿಯಬಾರದು ಎಂದು ತಿಳಿಯಬಹುದು.

ದಿನಾ ಬಿಸಿ ನೀರಿಗೆ ನಿಂಬೆರಸ ಹಾಕಿ ಕುಡಿಯುವುದರಿಂದ ಉಂಟಾಗುವ ಅಡ್ಡಪರಿಣಾಮಗಳು
ಆಸಿಡ್ ರಿಫ್ಲೆಕ್ಸ್, ಎದೆಯುರಿ ಈ ಬಗೆಯ ಸಮಸ್ಯೆಯಿದ್ದರೆ ನಿಂಬೆರಸ ಹಾಕಿ ಕುಡಿಯುವುದು ಒಳ್ಳೆಯದಲ್ಲ. ಈಗಾಗಲೇ ಎದೆಯುರಿ ಇರುವವರು ನಿಂಬು ಪಾನೀಯ ಕುಡಿಯುವುದರಿಂದ ಕಿಬ್ಬೊಟ್ಟೆಯಲ್ಲಿ ನೋವು, ವಾಂತಿ, ತಲೆಸುತ್ತು ಈ ಬಗೆಯ ಸಮಸ್ಯೆ ಉಂಟಾಗುವುದು.
ಆಗಾಗ ಮೂತ್ರ ವಿಸರ್ಜನೆಯಾಗುವುದು
ಆಗಾಗ ಮೂತ್ರ ವಿಸರ್ಜನೆಯಾಗುತ್ತಿದ್ದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು. ನಿಂಬು ಪಾನೀಯ ಕುಡಿದಾಗ ಅದು ದೇಹವನ್ನು ಡಿಟಾಕ್ಸ್ ಮಾಡುತ್ತದೆ. ಹಾಗಾಗಿ ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದಾದರೆ ಸಾಕಷ್ಟು ನೀರು ಕುಡಿಯಬೇಕು. ದಿನದಲ್ಲಿ 2 ಲೀಟರ್ ನೀರು ತಪ್ಪದೆ ಕುಡಿಯಿರಿ.
ಕೆಲವರಿಗೆ ಅಲರ್ಜಿ ಉಂಟಾಗುವುದು
ಇದು ತುಂಬಾ ಅಪರೂಪ, ನೀವು ನಿಂಬೆರಸ ಪಾನೀಯ ಕುಡಿಯುವಾಗ ಅಲರ್ಜಿ ರಿಯಾಕ್ಷನ್ ಕಂಡು ಬರುವುದಾದರೆ ನೀವು ನಿಂಬೆಪಾನೀಯ ಕುಡಿದಾಗ ಈ ರೀತಿ ಏನಾದರು ರಿಯಾಕ್ಷನ್ ಕಂಡು ಬಂದರೆ ನೀವು ನಿಂಬು ಪಾನೀಯ ಕುಡಿಯದಿದ್ದರೆ ಒಳ್ಳೆಯದು. ನೀವು ನಿಂಬು ಪಾನೀಯ ಕುಡಿದಾಗ ಶರೀರದಲ್ಲಿ ಏನಾದರು ಅಲರ್ಜಿ ರಿಯಾಕ್ಷನ್ ಉಂಟಾದರೆ ನೀವು ನಿಂಬು ಪಾನೀಯ ಕುಡಿಯಲು ಹೋಗಬೇಡಿ.
ದೇಹ ಪೋಷಕಾಂಶ ಹೀರಿಕೊಳ್ಳುವಲ್ಲಿ ಸಮಸ್ಯೆ ಉಂಟಾಗುತ್ತದೆ
ದಿನದಲ್ಲಿ ಒಂದು ಲೋಟ ನಿಂಬು ಪಾನೀಯ ಕುಡಿದರೆ ಒಳ್ಳೆಯದು, ಅದೇ ಒಂದು ಲೋಟಕ್ಕಿಂತ ಹೆಚ್ಚು ಕುಡಿಯಲು ಹೋಗಬೇಡಿ, ನೀವು ಹೆಚ್ಚು ನಿಂಬು ಪಾನೀಯ ಕುಡಿದರೆ ಅದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನಿಂಬು ಪಾನೀಯ ಹೆಚ್ಚು ಕುಡಿದಾಗ ಕ್ಯಾಲ್ಸಿಯಂ, ಖನಿಜಾಂಶ ಹೀರಿಕೊಳ್ಳಲು ತೊಂದರೆಯಾಗುವುದು. ಹಾಗಾಗಿ ನಿಂಬು ಪಾನೀಯ ಹೆಚ್ಚಾಗಿ ಕುಡಿಯಬೇಡಿ.
ಹಲ್ಲು ಮತ್ತಷ್ಟು ಸೆನ್ಸಿಟಿವ್ ಆಗುವುದು
ನಿಮ್ಮ ಹಲ್ಲು ತುಂಬಾ ಸೆನ್ಸಿಟಿವ್ ಆಗಿದ್ದರೆ ನಿಂಬು ಪಾನೀಯ ಪ್ರತಿದಿನ ಕುಡಿಯುವುದರಿಂದ ಅದರಲ್ಲಿರುವ ಸಿಟ್ರಿಕ್ ಆಮ್ಲದಿಂದಾಗಿ ಹಲ್ಲು ಮತ್ತಷ್ಟು ಸೆನ್ಸಿಟವ್ ಆಗುವುದು. ಸೆನ್ಸಿಟಿವ್ ಹಲ್ಲಿನವರು ನಿಂಬು ಪಾನೀಯ ಕುಡಿಯುವಾಗ ಸ್ಟ್ರಾ ಬಳಸಿದರೆ ಹಲ್ಲು ಮತ್ತಷ್ಟು ಸೆನ್ಸಿಟಿವ್ ಆಗುವುದನ್ನು ತಡೆಗಟ್ಟಬಹುದು. ಅಲ್ಲದೆ ನಿಂಬು ಪಾನೀಯ ಕುಡಿದ ಬಳಿಕ ಬಾಯಿ ಮುಕ್ಕಳಿಸಿ, ಇಲ್ಲದಿದ್ದರೆ ಹಲ್ಲಿಗೆ ಹಾನಿಯುಂಟಾಗುವುದನ್ನು ತಡೆಗಟ್ಟಬಹುದು.
ಇದಷ್ಟೂ ಅಡ್ಡಪರಿಣಾಮವಾದರೆ ಇದರಿಂದ ಪ್ರಯೋಜನವೂ ಇದೆ
ತೂಕ ಇಳಿಕೆಗೆ ಸಹಕಾರಿ: ನಿಂಬೆಹಣ್ಣು ಬಿಸಿ ನೀರಿಗೆ ಹಾಕಿ ಕುಡಿಯುವುದರಿಂದ ತೂಕ ನಿಯಂತ್ರಣಕ್ಕೆ ಸಹಕಾರಿ. ಆಹಾರ ಸೇವಿಸುವ ಮುನ್ನ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಬೇಕು. ಈ ಪಾನೀಯ ಸೇವಿಸಿ ವರ್ಕೌಟ್ ಮಾಡಿದರೆ ಮತ್ತಷ್ಟು ಒಳ್ಳೆಯದು.
ಕಿಡ್ನಿ ಸ್ಟೋನ್ ಉಂಟಾಗುವುದನ್ನು ತಡೆಗಟ್ಟುತ್ತದೆ
ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಮ್ಲ ಕಿಡ್ನಿ ಸ್ಟೋನ್ಸ್(ಮೂತ್ರ ಪಿಂಡದಲ್ಲಿ ಕಲ್ಲುಗಳು ಉಂಟಾಗುವುದನ್ನು) ತಡೆಗಟ್ಟುತ್ತದೆ. ನಿಂಬು ಪಾನೀಯ ಕುಡಿದಾಗ ಮೂತ್ರದ ಮೂಲಕ ಚಿಕ್ಕ ಕಲ್ಲುಗಳನ್ನು ಹೊರ ಹಾಕುವುದರಿಂದ ಕಿಡ್ನಿ ಸ್ಟೋನ್ ಉಂಟಾಗುವುದನ್ನು ತಡೆಗಟ್ಟಬಹುದು.
ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು
2022ರಲ್ಲಿ ನಡೆಸಿದ ಅಧ್ಯಯನವು ನಿಂಬು ಪಾನೀಯ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು ಊಟದ ಮೊದಲು ನಿಂಬು ಪಾನೀಯ ಕುಡಿಯುವುದರಿಂದ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications