Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಕೇರಳದಿಂದ ಕರ್ನಾಟಕಕ್ಕೆ ಬರುವ ಸ್ನ್ಯಾಕ್ಸ್ಗಳಲ್ಲಿದೆ ಕ್ಯಾನ್ಸರ್ ತರುವ ರಾಸಾಯನಿಕ, ಜಾಗ್ರತೆ
ಜನರ ಆರೋಗ್ಯಕ್ಕಾಗಿ ಆಹಾರದ ಬಗ್ಗೆ ಕರ್ನಾಟಕ ಸರ್ಕಾರ ತುಂಬಾನೇ ಕಾಳಜಿವಹಿಸುತ್ತಿರುವುದು ಸಂತೋಷದ ವಿಷಯ, ಈಗಾಗಲೇ ಆಹಾರಗಳನ್ನು ಬ್ಯಾನ್ ಮಾಡಲಾಗಿದೆ. ಗೋಬಿಗೆ ಹಾನಿಕಾರಕ ಬಣ್ಣ ಹಾಕುವುದು, ಕಬಾಬ್ಗೆ ಕಲರ್ ಪುಡಿ ಹಾಕುವುದು ಇವುಗಳನ್ನು ಬ್ಯಾನ್ ಮಾಡಲಾಯ್ತು. ಇತ್ತೀಚೆಗೆ ಬೇಕರಿಗಳಿಗೆ ಕೇಕ್ಗೆ ಬಣ್ಣದ ರಾಸಾಯನಿಕ ಬಳಸದಂತೆ ಎಚ್ಚರಿಕೆ ನೀಡಿದೆ.
ಇದೀಗ ಪಕ್ಕದ ರಾಜ್ಯ ಕೇರಳದಿಂದ ಬರುತ್ತಿರುವ ಹಲವಾರು ತಿಂಡಿಗಳನ್ನು ಆರೋಗ್ಯಕ್ಕೆ ಹಾನಿಕಾರಕ ಎಂದು ಬ್ಯಾನ್ ಮಾಡಲಾಗಿದೆ. FSSAI(Food Safety and Standards Authority of India) ಕೇರಳದಲ್ಲಿ ತಯಾರಿಸಿ ಗಡಿ ಭಾಗದ ಕರ್ನಾಟಕದ ರಾಜ್ಯಗಳಿಗೆ ಮಾರಾಟ ಮಾಡುತ್ತಿರುವ ಸುಮಾರು 31 ತಿಂಡಿಗಳನ್ನು ಅಸುರಕ್ಷಿತ ಎಂದು ಪಟ್ಟಿ ಮಾಡಿದೆ. ಅದರಲ್ಲಿಯೂ ಕೊಡಗಿನ ಜನತೆ ಹೆಚ್ಚು ಜಾಗ್ರತೆವಹಿಸಬೇಕು.

ಸುಮಾರು 90 ಬಗೆಯ ಸ್ನ್ಯಾಕ್ಸ್ ಪರಿಶೀಲನೆ ಮಾಡಲಾಯ್ತು
ಮಿಕ್ಸರ್, ಚಿಪ್ಸ್, ಹಲ್ವಾ, ಚಕ್ಕೂಲಿ, ಡ್ರೈ ಫ್ರೂಟ್ಸ್ ಸೇರಿದಂತೆ ಹಲವು ಆಹಾರ ಪದಾರ್ಥಗಳನ್ನು ಪರಿಶೀಲನೆ ಮಾಡಲಾಯ್ತು. ಆಹಾರ ವಸ್ತುಗಳು ಆಕರ್ಷಕವಾಗಿ ಕಾಣಲು ಹಾನಿಕಾರಕ ರಾಸಾಯನಿಕ ಬಳಸುತ್ತಿರುವುದು ಪತ್ತೆಯಾಗಿದೆ. ಸೂರ್ಯಾಸ್ತದ ಸಮಯದಲ್ಲಿ ಕಂಡು ಬರುವ ಬಣ್ಣ, ಕೆಂಪು, Azorubine ಮತ್ತು Tartrazine ಈ ಬಗೆಯ ರಾಸಾಯನಿಕ ಬಳಸುತ್ತಿರುವುದು ಪತ್ತೆಯಾಗಿದೆ.
ಈ ರಾಸಾಯನಿಕ ಇರುವ ಆಹಾರಗಳನ್ನು ಬಳಸುವುದರಿಂದ ಆರೋಗ್ಯಕ್ಕೆ ತುಂಬಾನೇ ಹಾನಿಕಾರಕವಾಗಿದೆ. ಹಾಗಾಗಿ ಈ ಆಹಾರಗಳನ್ನು ಕರ್ನಾಟಕಕ್ಕೆ ಬತಂದು ಬಾರದಂತೆ ಎಚ್ಚರಿಕೆ ನೀಡಲಾಗಿದೆ. ಕೇರಳದಿಂದ ಕಾಸರಗೋಡು, ದಕ್ಷಿಣ ಕನ್ನಡ, ಬೆಂಗಳೂರು ಈ ಕಡೆಗೆ ಕೇರಳದಿಂದ ಆಹಾರ ಪದಾರ್ಥಗಳು ಬರುತ್ತಿವೆ, FSSAI ಪ್ರಕಾರ ಕೇರಳದಿಂದ ಬರುವ ಆಹಾರಗಳು ಸುರಕ್ಷಿತವಲ್ಲ ಎಂದು ಹೇಳಿದೆ.
ಈ ಕುರಿತು ಗಮನಹರಿಸುವಂತೆ ಕೇರಳ ಸರ್ಕಾರಕ್ಕೆ ಮನವಿ ಮಾಡದ ಕರ್ನಾಟಕ ಸರ್ಕಾರ
ಕೇರಳದಿಂದ ಬರುವ ಆಹಾರ ವಸ್ತುಗಳು ಜನರ ಆರೋಗ್ಯದ ಮೇಲೆ ತುಂಬಾನೇ ದುಷ್ಪಾರಿಣಾಮ ಬೀರುತ್ತಿದೆ, ಈ ರೀತಿ ರಾಸಾಯನಿಕವಿರುವ ಆಹಾರ ವಸ್ತುಗಳನ್ನು ತಯಾರಸಿಉತ್ತಿರುವವರ ಮೇಲೆ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ. ಚಾಮರಾಜನಗರ, ಕೊಡಗು, ಹಾಸನ, ದಕ್ಷಿಣ ಕನ್ನಡ, ಮಂಗಳೂರು ಈ ಭಾಗಗಳಲ್ಲಿ ಕರ್ನಾಟಕದ ಆಹಾರ ಹೆಚ್ಚು ಮಾರಾಟವಾಗುತ್ತಿದೆ.
ಇಂಥ ಆಹಾರಗಳನ್ನು ತಿನ್ನುವುದರಿಂದ ಮಕ್ಕಳ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುತ್ತಿದೆ
ಈ ಬಗೆಯ ಆಹಾರ ಸೇಚಿಸುತ್ತಾ ಇದ್ದರೆ ಅನೇಕ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಮಕ್ಕಳಲ್ಲಿ ಹೈಪರ್ ಆಕ್ಟಿವ್,ಅಲರ್ಜಿ ಮುಂತಾದ ಸಮಸ್ಯೆ ಕಂಡು ಬರುವುದು. ಈ ಬಗೆಯ ಆಹಾರ ಸೇವಿಸುತ್ತಾ ಇದ್ದರೆ ಕ್ಯಾನ್ಸರ್ ಕೂಡ ಉಂಟಾಗಬಹುದು.
ಆದಷ್ಟು ಮಕ್ಕಳಿಗೆ ಹೊರಗಿನ ಆಹಾರ ತೆಗೆದುಕೊಡಬೇಡಿ
ಬಣ್ಣ-ಬಣ್ಣದ ಆಹಾರಗಳನ್ನು ನೋಡುವಾಗ ಮಕ್ಕಳು ತುಂಬಾನೇ ಇಷ್ಟಪಟ್ಟು ಸೇವಿಸುತ್ತಾರೆ. ಅಲ್ಲದೆ ಅದೇ ಬೇಕೆಂದು ಹಠ ಹಿಡಿಯುತ್ತಾರೆ, ಆದರೆ ಆ ಆಕರ್ಷಕ ಬಣ್ಣದ ಹಿಂದೆ ಕ್ಯಾನ್ಸರ್ ಎಂಬ ಭೂತವಿರುತ್ತದೆ, ಈ ಬಗೆಯ ಆಹಾರಗಳನ್ನು ಮಕ್ಕಳಿಗೆ ನೀಡುವುದು ಕಡಿಮೆ ಮಾಡಬೇಕು.
ಮನೆಯ ಆಹಾರ ಹೆಚ್ಚಾಗಿ ನೀಡಿ
ಮಕ್ಕಳಿಗೆ ಮನೆಯಲ್ಲಿಯೇ ಬಗೆ ಬಗೆಯ ಆಹಾರ ನೀಡಿದರೆ ತುಂಬಾನೇ ಇಷ್ಟಪಡುತ್ತಾರೆ, ಮನೆಯ ಆಹಾರ ಮಾಡಿ ಕೊಡಿ. ಅವರ ಆಹಾರದಲ್ಲಿ ಪೋಷಕಾಂಶವಿದೆಯೇ ಎಂದು ಗಮನಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











