Latest Updates
-
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
Yearender 2022: 2022ರಲ್ಲಿ ಟಾಪ್ 10 ಸರ್ಚ್ನಲ್ಲಿರುವ ಈ ಗಿಡಮೂಲಿಕೆಗಳು ತುಂಬಾನೇ ಪರಿಣಾಮಕಾರಿ
ಭಾರತದಲ್ಲಿ ಆಯುರ್ವೇದ ಚಿಕಿತ್ಸೆಗೆ ತುಂಬಾನೇ ಮಹತ್ವವಿದೆ. ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಅನೇಕ ಆಯುರ್ವೇದ ಮದ್ದುಗಳನ್ನು ಬಳಸುತ್ತೇವೆ. ಸಣ್ಣ-ಪುಟ್ಟ ಸಮಸ್ಯೆಗೆ ಆಯುರ್ವೇದ ಮದ್ದು ಏನಿದೆ ಎಂದು ತಿಳಿಯ ಬಯಸುತ್ತೇವೆ. 2022ರಲ್ಲಿ ಜನರು ಈ 10 ಆಯುರ್ವೇದ ಹರ್ಬ್ಸ್ ಬಗ್ಗೆ ತಿಳಿಯಲು ಹೆಚ್ಚು ಆಸಕ್ತಿ ತೋರಿದ್ದಾರೆ.

1. ಚಕ್ಕೆ
ಚಕ್ಕೆ ಬಗ್ಗೆ ಗೂಗಲ್ ಬಗ್ಗೆ ತುಂಬಾನೇ ಸರ್ಚ್ ಮಾಡಲಾಗಿದೆ. ಚಕ್ಕೆಯನ್ನು ತೂಕ ಇಳಿಕೆಗೆ ಬಳಸಬಹುದು. ಬೆಳಗ್ಗೆ ಎದ್ದು ಬಿಸಿ ನೀರಿಗೆ ಸ್ವಲ್ಪ ಚಕ್ಕೆ ಹಾಕಿ ಕುಡಿದರೆ ಬೇಗನೆ ತೂಕ ಇಳಿಕೆಯಾಗುವುದು. ಆದರೆ ಇದನ್ನು ಮಿತಿಯಲ್ಲಿ ಕುಡಿಯಬೇಕು. ಚಕ್ಕೆಯನ್ನು ಅಡುಗೆಯಲ್ಲಿ ಬಳಸುವುದರಿಂದ ಚಯಪಚಯ ಕ್ರಿಯೆಗೆ ತುಂಬಾನೇ ಒಳ್ಳೆಯದು.

2. ಕಹಿಬೇವು
ಅನೇಕ ಸಮಸ್ಯೆಗಳಿಗೆ ಕಹಿಬೇವನ್ನು ಮನೆಮದ್ದಾಗಿ ಬಳಸಲಾಗುವುದು. ಇವುಗಳನ್ನು ತಿಂದರೂ ಒಳ್ಳೆಯದು, ತ್ವಚೆ ಅಲರ್ಜಿ ಹೋಗಲಾಡಿಸಲು ಬಳಸಲಾಗುವುದು. ಸ್ನಾನದ ನೀರಿಗೆ ಸ್ವಲ್ಪ ಕಹಿಬೇವು ಹಾಕಿ ಸ್ನಾನ ಮಾಡಿದರೆ ಬ್ಯಾಕ್ಟಿರಿಯಾಗಳನ್ನು ಹೋಗಲಾಡಿಸಬಹುದು. ದಿನಾ ಎರಡು ಎಲೆ ತಿಂದರೆ ರಕ್ತದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡಬಹುದು.

3. ಗ್ರೀನ್ ಟೀ ಎಲೆ
ಗ್ರೀನ್ ಟೀಯನ್ನು ತೂಕ ಇಳಿಕೆಗೆ ಹಾಗೂ ಸೌಂದರ್ಯವರ್ಧನೆಗೆ ಬಳಸಬಹುದು. ವ್ಯಾಯಾಮದ ಜೊತೆಗೆ ದಿನಾ ಒಂದು ಲೋಟ ಗ್ರೀನ್ ಟೀ ಕುಡಿಯುವುದರಿಂದ ಮೈ ತೂಕವನ್ನು ನಿಯಂತ್ರಣದಲ್ಲಿಡಬಹುದು. ಇನ್ನು ಇದರ ಎಲೆ ಹಾಕಿ ಕುದಿಸಿ ಆ ನೀರು ತಣ್ಣಗಾದ ಮೇಲೆ ಮುಖಕ್ಕೆ ಹಚ್ಚಿದರೆ ಮುಖದ ಹೊಳಪು ಹೆಚ್ಚುವುದು. ಆ ನೀರನ್ನು ಕೂದಲಿಗೆ ಹಚ್ಚಿದರೆ ಕೂದಲಿನ ಹೊಳಪು ಹೆಚ್ಚುವುದು.

4. ಅರಿಶಿಣ:
ಅರಿಶಿಣವನ್ನು ಅನೇಕ ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದಾಗಿ ಬಳಸಲಾಗುವುದು. ಅರಿಶಿಣ ಬಳಸುವುದರಿಂದ ಕ್ಯಾನ್ಸರ್ ತಡೆಗಟ್ಟಬಹುದು, ರೋಗ ನಿರೋಧಕ ಶಕ್ತಿ ಹೆಚ್ಚುವುದು. ಅಲರ್ಜಿ ಸಮಸ್ಯೆ ತಡೆಗಟ್ಟುತ್ತದೆ, ಗಾಯವನ್ನುಬೇಗನೆ ಒಣಗಿಸಲು ಸಹಕಾರಿ.

5. ಸೋಂಪು
ಊಟದ ಬಳಿಕ ಸ್ವಲ್ಪ ಸೋಂಪು ತಿಂದರೆ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಅಲ್ಲದೆ ಬಾಯಿಯ ದುರ್ವಾಸನೆ ತಡೆಗಟ್ಟಲು ತುಂಬಾನೇ ಸಹಕಾರಿ. ದೇಹದ ಉಷ್ಣಾಂಶ ನಿಯಂತ್ರಣದಲ್ಲಿಡುವಲ್ಲಿ ಸಹಕಾರಿ.

6. ಅಮೃತಬಳ್ಳಿ
ಅಮೃತಬಳ್ಳಿಯಿಂದ ಅನೇಕ ಆರೋಗ್ಯ ಸಮಸ್ಯೆ ಬಗೆಹರಿಸಬಹುದು. ಇದನ್ನು ಬಳಸಿ ಮಧುಮೇಹ ನಿಯಂತ್ರಣದಲ್ಲಿಡಬಹುದು, ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು. ಕೆಮ್ಮು-ಶೀತ ಹೋಗಲಾಡಿಸಲು ಅತ್ಯುತ್ತಮವಾದ ಮನೆಮದ್ದು. ಅಮೃತಬಳ್ಳಿ ಬಳಸುವ ಮುನ್ನ ಆಯುರ್ವೇದ ತಜ್ಞರ ಸಲಹೆ ಪಡೆದ ಬಳಿಕ ಮಾಡಿ.

7. ಕ್ಯಾಮೊಮೈಲ್
ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶ ಅಧಿಕವಿದೆ. ಇದನ್ನು ಬಳಸಿದರೆ ಮಾನಸಿಕ ಒತ್ತಡ ಕಡಿಮೆಯಾಗುವುದು.

8. ತುಳಸಿ
ತುಳಸಿಯನ್ನು ಕೂಡ ಮನೆಮದ್ದಾಗಿ ಬಳಸಬಹುದು. ಇದನ್ನು ಬಳಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು. ಕುಡಿಯುವ ನೀರಿಗೆ 2 ಎಲೆ ತುಳಸಿ ಹಾಕಿ ಕುದಿಸಿ ಆ ನೀರು ಕುಡಿಯಿರಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.

9. ಜೇನು
ಜೇನನ್ನು ಕೂಡ ಅನೇಕ ರೀತಿಯಲ್ಲಿ ಮನೆಮದ್ದಾಗಿ ಬಳಸಲಾಗುವುದು. ಜೇನನ್ನು ಬಿಸಿ ನೀರಿನಲ್ಲಿ ಹಾಕಿ ಕುಡಿದರೆ ಮೈ ಬೊಜ್ಜು ಕರಗುವುದು. ಜೇನನ್ನು ಕೆಮ್ಮು-ಶೀತ ಹೋಗಲಾಡಿಸಲು ಮನೆಮದ್ದಾಗಿ ಕೂಡ ಬಳಸಬಹುದು.

10. ನುಗ್ಗೆಸೊಪ್ಪು
ನುಗ್ಗೆಸೊಪ್ಪಿನಲ್ಲಿ ಹತ್ತಾರು ಔಷಧೀಯ ಗುಣವಿದೆ. ನುಗ್ಗೆ ಸೊಪ್ಪು ಅಧಿಕ ರಕ್ತದೊತ್ತಡ ನಿಯಂತ್ರಿಸಲು ತುಂಬಾನೇ ಸಹಕಾರಿ. ಇದರ ಸೊಪ್ಪಿನ ಟೀ ತೂಕ ಇಳಿಕೆಗೆ ಒಳ್ಳೆಯದು,



Click it and Unblock the Notifications











