Latest Updates
-
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ! -
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ!
ಮನೆಯಲ್ಲಿಯೇ ಮಾಡಿ ಕೆಮ್ಮು ಹೋಗಲಾಡಿಸುವ ಈರುಳ್ಳಿ ಸಿರಪ್
ಮೊದಲೆಲ್ಲಾ ಕೆಮ್ಮು, ಶೀತಕ್ಕೆ ಯಾರು ಅಷ್ಟೇನು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗ ಸಣ್ಣದಾಗಿ ಕೆಮ್ಮು ಬಂದರೂ ಭಯ ಶುರುವಾಗುತ್ತೆ. ಏಕೆಂದರೆ ಕೋವಿಡ್ 19 ಎಂಬ ಮಹಾಮಾರಿಯ ಲಕ್ಷಣವೂ ಕೆಮ್ಮು, ಜ್ವರವಾಗಿರುವುದರಿಂದ ಕೆಮ್ಮು ಬಂದಾಗ ಕೋವುಡ್ 19 ಇರಬಹುದೇ ಎಂಬ ಭಯ ಕಾಡುವುದು ಸಹಜ.

ಮೇ ತಿಂಗಳು ಶುರುವಾಗುತ್ತಿದ್ದಂತೆ ಒಂದೆರಡು ಮಳೆ ಬರುವುದು ಸಹಜ. ವಾತಾವರಣ ಬದಲಾದಂತೆ ಕೆಮ್ಮು, ನೆಗಡಿ ಬರುವುದು ಸಹಜ. ಸಾಧಾರಣ ಕೆಮ್ಮು, ನೆಗಡಿಯನ್ನು ಮನೆಮದ್ದಿನಿಂದ ಹೋಗಲಾಡಿಸಬಹುದು. ಇಲ್ಲಿ ಒಣ ಕೆಮ್ಮು ಹೋಗಲಾಡಿಸಲು ಈರುಳ್ಳಿ ಸಿರಪ್ ಬಗ್ಗೆ ಹೇಳಿದ್ದೇವೆ.ಇದನ್ನು ಮಾಡುವುದು ಸುಲಭವಾಗಿದ್ದು ಮನೆಯಲ್ಲಿ ಮಾಡಿ ಒಂದು ಡಬ್ಬದಲ್ಲಿ ತುಂಬಿಟ್ಟು ಕೆಮ್ಮು ಹೋಗಲಾಡಿಸಲು ಮದ್ದಾಗಿ ಬಳಸಬಹುದು.

ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
ಮನೆಯಲ್ಲಿಯೇ ಈರುಳ್ಳಿ ಸಿರಪ್ ಮಾಡುವ ವಿಧಾನ
1. ಈರುಳ್ಳಿಯ ಸಿಪ್ಪೆ ಸುಲಿದು ಅದನ್ನು ಚಿಕ್ಕದಾಗಿ ಕತ್ತರಿಸಿ ಗಾಜಿನ ಜಾರ್ನಲ್ಲಿ ಹಾಕಿಡಿ.
2. ಅದರ ಮೇಲೆ 2 ಚಮಚ ಜೇನು ಹಾಕಿ.
3. ಈ ಮಿಶ್ರಣ ರಾತ್ರಿ ಮಾಡಿ ಜಾರ್ನ ಮುಚ್ಚಳ ಹಾಕಿಡಿ. ಮಿಶ್ರಣ 6-10 ಗಂಟೆ ಇಡಿ.
4. ಈಗ ತಳದಲ್ಲಿ ಸಂಗ್ರಹವಾದ ಮಿಶ್ರಣವನ್ನು ಬೇರೆ ಪಾತ್ರೆಯಲ್ಲಿ ಸುರಿದಿಡಿ. ಈ ರಸವನ್ನು ಒಂದು ಚಮಚದಂತೆ ದಿನದಲ್ಲಿ 2-3 ಬಾರಿ ತೆಗೆದುಕೊಳ್ಳಿ. ಹೀಗೆ ಮಾಡಿದರೆ ಕೆಮ್ಮು ಕಡಿಮೆಯಾಗುವುದು.

ಜೇನಿನ ಪ್ರಯೋಜನಗಳು:
- ಜೇನಿನಲ್ಲಿ ಖನಿಜಾಂಶಗಳು, ವಿಟಮಿನ್ ಬಿ, ಪ್ರೀಬಯೋಟಿಕ್, ಆ್ಯಂಟಿಬಾಡಿ ಅಂಸಗಳಿವೆ.
- ಇದರಲ್ಲಿರುವ ಆ್ಯಂಟಿಬ್ಯಾಕ್ಟಿರಿಯಾ ಅಂಶಗಳು ಮನುಷ್ಯನಿಗೆ ಆಹಾರವಾಗಿ ಹಾಗೂ ಔಷಧವಾಗಿ ಕಾರ್ಯನಿರ್ವಹಿಸುತ್ತದೆ.
- ಜೇನು ಗಂಟಲಿನಲ್ಲಿ ಉಂಟಾದ ಕೆರೆತ ಕಡಿಮೆಮಾಡುತ್ತೆ
- ಜೇನಿನಲ್ಲಿ ಆ್ಯಂಟಿಬಯೋಟಿಕ್ ಹಾಗೂ ಆ್ಯಂಟಿಫಂಗಲ್ ಅಂಶವಿರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಆರೋಗ್ಯ ಕಾಪಾಡುತ್ತದೆ.
- ಜೇನಿನ ಗುಣಗಳು ಹಾಳಾಗದಿರಲು ಬಿಸಿ ಮಾಡಬಾರದು.
- ಈರುಳ್ಳಿಯಲ್ಲಿ ರಂಜಕದ ಅಂಶವಿದೆ. ಈರುಳ್ಳಿ ಖಾರ ಹಾಗೂ ಘಾಟು ಅದರಲ್ಲಿರುವ ಔಷಧೀಯ ಗುಣಗಳನ್ನು ಸೂಚಿಸುತ್ತದೆ.
- ದೇಹದಲ್ಲಿರುವ ಬ್ಯಾಕ್ಟರಿಯಾಗಳ ವಿರುದ್ಧ ಹೋರಾಡುವಲ್ಲಿ ಸಹಕಾರಿ.
- ಈರುಳ್ಳಿ ದೇಹದಲ್ಲಿ ರೋಗನಿರೋಧಕ ಕಣಗಳಾದ ಬಿಳಿ ರಕ್ತಕಣಗಳನ್ನು ಹೆಚ್ಚಿಸುತ್ತದೆ.
- ಏಲ್ಲಿನ್ ಈರುಳ್ಳಿಯಲ್ಲಿರುವ ಮತ್ತೊಂದು ಪ್ರಮುಖ ಅಂಶ. ಇದು ಬೆಳ್ಳುಳ್ಳಿಯಲ್ಲಿಯೂ ಇರುತ್ತದೆ. ಈರುಳ್ಳಿಯನ್ನು ಕತ್ತರಿಸಿದಾಗ ಅದರಲ್ಲಿ ಏಲ್ಲಿನ್ ಅಂಶ ಉತ್ಪತ್ತಿಯಾಗುತ್ತದೆ. ಇದು ಉಸಿರಾಟದ ತೊಂದರೆಗಳನ್ನು ಕಡಿಮೆ ಮಾಡುವಲ್ಲಿ ಸಹಕಾರಿ.

ಈರುಳ್ಳಿಯ ಪ್ರಯೋಜನಗಳು

ಜೇನು, ಬೆಳ್ಳುಳ್ಳಿ, ಈರುಳ್ಳಿ ಸಿರಪ್
ಅರ್ಧ ಕಪ್ ಜೇನು, ಅರ್ಧ ಕಪ್ ನೀರು ಹಾಕಿ, ಅದಕ್ಕೆ ಈರುಳ್ಳಿ ಕತ್ತರಿಸಿ ಹಾಕಿ , 8-10 ಎಸಳು ಬೆಳ್ಳುಳ್ಳಿ ಹಾಕಿ, ದೊಡ್ಡಪತ್ರೆ ಅಥವಾ ಥೈಮೆ ಹಾಕಬಹುದು, ಇದನ್ನು ಒಂದು ರಾತ್ರಿ ಬಿಟ್ಟು ನಂತರ ನೀರು ಸೋಸಿ, ಆ ನೀರನ್ನು ಫ್ರಿಡ್ಜ್ನಲ್ಲಿಟ್ಟು ಸಿರಪ್ ಆಗಿ ಬಳಸಬಹುದು.
ಸೂಚನೆ: ಇಲ್ಲಿ ನೀಡಿರುವ ಎರಡೂ ಸಿರಪ್ ಅನ್ನು ದೊಡ್ಡವರು ಹಾಗೂ ಮಕ್ಕಳಿಗೆ ಕೊಡಬಹುದು. ಆದರೆ ಒಂದು ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ನೀಡಲು ಹೋಗಬೇಡಿ.



Click it and Unblock the Notifications