Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನೆಯಲ್ಲಿಯೇ ಮಾಡಿ ಕೆಮ್ಮು ಹೋಗಲಾಡಿಸುವ ಈರುಳ್ಳಿ ಸಿರಪ್
ಮೊದಲೆಲ್ಲಾ ಕೆಮ್ಮು, ಶೀತಕ್ಕೆ ಯಾರು ಅಷ್ಟೇನು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗ ಸಣ್ಣದಾಗಿ ಕೆಮ್ಮು ಬಂದರೂ ಭಯ ಶುರುವಾಗುತ್ತೆ. ಏಕೆಂದರೆ ಕೋವಿಡ್ 19 ಎಂಬ ಮಹಾಮಾರಿಯ ಲಕ್ಷಣವೂ ಕೆಮ್ಮು, ಜ್ವರವಾಗಿರುವುದರಿಂದ ಕೆಮ್ಮು ಬಂದಾಗ ಕೋವುಡ್ 19 ಇರಬಹುದೇ ಎಂಬ ಭಯ ಕಾಡುವುದು ಸಹಜ.

ಮೇ ತಿಂಗಳು ಶುರುವಾಗುತ್ತಿದ್ದಂತೆ ಒಂದೆರಡು ಮಳೆ ಬರುವುದು ಸಹಜ. ವಾತಾವರಣ ಬದಲಾದಂತೆ ಕೆಮ್ಮು, ನೆಗಡಿ ಬರುವುದು ಸಹಜ. ಸಾಧಾರಣ ಕೆಮ್ಮು, ನೆಗಡಿಯನ್ನು ಮನೆಮದ್ದಿನಿಂದ ಹೋಗಲಾಡಿಸಬಹುದು. ಇಲ್ಲಿ ಒಣ ಕೆಮ್ಮು ಹೋಗಲಾಡಿಸಲು ಈರುಳ್ಳಿ ಸಿರಪ್ ಬಗ್ಗೆ ಹೇಳಿದ್ದೇವೆ.ಇದನ್ನು ಮಾಡುವುದು ಸುಲಭವಾಗಿದ್ದು ಮನೆಯಲ್ಲಿ ಮಾಡಿ ಒಂದು ಡಬ್ಬದಲ್ಲಿ ತುಂಬಿಟ್ಟು ಕೆಮ್ಮು ಹೋಗಲಾಡಿಸಲು ಮದ್ದಾಗಿ ಬಳಸಬಹುದು.

ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
ಮನೆಯಲ್ಲಿಯೇ ಈರುಳ್ಳಿ ಸಿರಪ್ ಮಾಡುವ ವಿಧಾನ
1. ಈರುಳ್ಳಿಯ ಸಿಪ್ಪೆ ಸುಲಿದು ಅದನ್ನು ಚಿಕ್ಕದಾಗಿ ಕತ್ತರಿಸಿ ಗಾಜಿನ ಜಾರ್ನಲ್ಲಿ ಹಾಕಿಡಿ.
2. ಅದರ ಮೇಲೆ 2 ಚಮಚ ಜೇನು ಹಾಕಿ.
3. ಈ ಮಿಶ್ರಣ ರಾತ್ರಿ ಮಾಡಿ ಜಾರ್ನ ಮುಚ್ಚಳ ಹಾಕಿಡಿ. ಮಿಶ್ರಣ 6-10 ಗಂಟೆ ಇಡಿ.
4. ಈಗ ತಳದಲ್ಲಿ ಸಂಗ್ರಹವಾದ ಮಿಶ್ರಣವನ್ನು ಬೇರೆ ಪಾತ್ರೆಯಲ್ಲಿ ಸುರಿದಿಡಿ. ಈ ರಸವನ್ನು ಒಂದು ಚಮಚದಂತೆ ದಿನದಲ್ಲಿ 2-3 ಬಾರಿ ತೆಗೆದುಕೊಳ್ಳಿ. ಹೀಗೆ ಮಾಡಿದರೆ ಕೆಮ್ಮು ಕಡಿಮೆಯಾಗುವುದು.

ಜೇನಿನ ಪ್ರಯೋಜನಗಳು:
- ಜೇನಿನಲ್ಲಿ ಖನಿಜಾಂಶಗಳು, ವಿಟಮಿನ್ ಬಿ, ಪ್ರೀಬಯೋಟಿಕ್, ಆ್ಯಂಟಿಬಾಡಿ ಅಂಸಗಳಿವೆ.
- ಇದರಲ್ಲಿರುವ ಆ್ಯಂಟಿಬ್ಯಾಕ್ಟಿರಿಯಾ ಅಂಶಗಳು ಮನುಷ್ಯನಿಗೆ ಆಹಾರವಾಗಿ ಹಾಗೂ ಔಷಧವಾಗಿ ಕಾರ್ಯನಿರ್ವಹಿಸುತ್ತದೆ.
- ಜೇನು ಗಂಟಲಿನಲ್ಲಿ ಉಂಟಾದ ಕೆರೆತ ಕಡಿಮೆಮಾಡುತ್ತೆ
- ಜೇನಿನಲ್ಲಿ ಆ್ಯಂಟಿಬಯೋಟಿಕ್ ಹಾಗೂ ಆ್ಯಂಟಿಫಂಗಲ್ ಅಂಶವಿರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಆರೋಗ್ಯ ಕಾಪಾಡುತ್ತದೆ.
- ಜೇನಿನ ಗುಣಗಳು ಹಾಳಾಗದಿರಲು ಬಿಸಿ ಮಾಡಬಾರದು.
- ಈರುಳ್ಳಿಯಲ್ಲಿ ರಂಜಕದ ಅಂಶವಿದೆ. ಈರುಳ್ಳಿ ಖಾರ ಹಾಗೂ ಘಾಟು ಅದರಲ್ಲಿರುವ ಔಷಧೀಯ ಗುಣಗಳನ್ನು ಸೂಚಿಸುತ್ತದೆ.
- ದೇಹದಲ್ಲಿರುವ ಬ್ಯಾಕ್ಟರಿಯಾಗಳ ವಿರುದ್ಧ ಹೋರಾಡುವಲ್ಲಿ ಸಹಕಾರಿ.
- ಈರುಳ್ಳಿ ದೇಹದಲ್ಲಿ ರೋಗನಿರೋಧಕ ಕಣಗಳಾದ ಬಿಳಿ ರಕ್ತಕಣಗಳನ್ನು ಹೆಚ್ಚಿಸುತ್ತದೆ.
- ಏಲ್ಲಿನ್ ಈರುಳ್ಳಿಯಲ್ಲಿರುವ ಮತ್ತೊಂದು ಪ್ರಮುಖ ಅಂಶ. ಇದು ಬೆಳ್ಳುಳ್ಳಿಯಲ್ಲಿಯೂ ಇರುತ್ತದೆ. ಈರುಳ್ಳಿಯನ್ನು ಕತ್ತರಿಸಿದಾಗ ಅದರಲ್ಲಿ ಏಲ್ಲಿನ್ ಅಂಶ ಉತ್ಪತ್ತಿಯಾಗುತ್ತದೆ. ಇದು ಉಸಿರಾಟದ ತೊಂದರೆಗಳನ್ನು ಕಡಿಮೆ ಮಾಡುವಲ್ಲಿ ಸಹಕಾರಿ.

ಈರುಳ್ಳಿಯ ಪ್ರಯೋಜನಗಳು

ಜೇನು, ಬೆಳ್ಳುಳ್ಳಿ, ಈರುಳ್ಳಿ ಸಿರಪ್
ಅರ್ಧ ಕಪ್ ಜೇನು, ಅರ್ಧ ಕಪ್ ನೀರು ಹಾಕಿ, ಅದಕ್ಕೆ ಈರುಳ್ಳಿ ಕತ್ತರಿಸಿ ಹಾಕಿ , 8-10 ಎಸಳು ಬೆಳ್ಳುಳ್ಳಿ ಹಾಕಿ, ದೊಡ್ಡಪತ್ರೆ ಅಥವಾ ಥೈಮೆ ಹಾಕಬಹುದು, ಇದನ್ನು ಒಂದು ರಾತ್ರಿ ಬಿಟ್ಟು ನಂತರ ನೀರು ಸೋಸಿ, ಆ ನೀರನ್ನು ಫ್ರಿಡ್ಜ್ನಲ್ಲಿಟ್ಟು ಸಿರಪ್ ಆಗಿ ಬಳಸಬಹುದು.
ಸೂಚನೆ: ಇಲ್ಲಿ ನೀಡಿರುವ ಎರಡೂ ಸಿರಪ್ ಅನ್ನು ದೊಡ್ಡವರು ಹಾಗೂ ಮಕ್ಕಳಿಗೆ ಕೊಡಬಹುದು. ಆದರೆ ಒಂದು ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ನೀಡಲು ಹೋಗಬೇಡಿ.



Click it and Unblock the Notifications