Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಇಂಗ್ಲೆಂಡ್ನಲ್ಲಿ ಕ್ಯಾನ್ಸರ್ ರೋಗಿಗಳಿಗೆ 7 ನಿಮಿಷದ ಇಂಜೆಕ್ಷನ್ ಟ್ರೀಟ್ಮೆಂಟ್
ಕ್ಯಾನ್ಸರ್ ಎಂಬ ಮಹಾಮಾರಿಗೆ ಸಿಲುಕಿ ಬಹುತೇಕ ಜನರು ನರಳುತ್ತಿದ್ದಾರೆ. ಕ್ಯಾನ್ಸರ್ ನೀಡುವ ನೋವಿನಷ್ಟೇ ಅದರ ಚಿಕಿತ್ಸೆಯಲ್ಲೂ ನೋವನ್ನು ಅನುಭವಿಸಬೇಕಾಗುವುದು. ಒಂದೊಂದು ಕೀಮೋಥೆರಪಿ ಮಾಡಿಸಿ ಬಂದಾಗ ರೋಗಿ ಅನುಭವಿಸುವ ನೋವನ್ನು ನೋಡಿದಾಗ ಎಂಥವರಿಗೂ ಸಂಕಟವಾಗುವುದು.
ಕ್ಯಾನ್ಸರ್ ಚಿಕಿತ್ಸೆ ವಿಷಯದಲ್ಲಿ ಅತ್ಯಾಧುನಿಕ ಪ್ರಯೋಗಗಳು ನಡೆಯುತ್ತಲೇ ಇದೆ. ಇದೀಗ ಬ್ರಿಟನ್ನ ಆರೋಗ್ಯ ಸೇವಾ ಸಂಸ್ಥೆ ಕ್ಯಾನ್ಸರ್ ರೋಗಿಗೆ ನೀಡುವ ಇಂಜೆಕ್ಷನ್ನ ಸಮಯ ಕಡಿಮೆ ಮಾಡುವ ಮತ್ತೊಂದು ಹೊಸ ಆವಿಷ್ಕಾರ ಕಂಡು ಹಿಡಿದಿದೆ. ಇದರಿಂದ ಚಿಕತ್ಸೆಗೆ ಬೇಕಾದ ಸಮಯ ಉಳಿತಾಯವಾಗುವುದು, ಇದರಿಂದಾಗಿ ವೈದ್ಯರು ಇನ್ನೂ ಅಧಿಕ ರೋಗಿಗಳ ಕಡೆ ಗಮನ ನೀಡಲು ಸಾಧ್ಯವಾಗುವುದು.

ಕ್ಯಾನ್ಸರ್ ರೋಗಿಗಳಿಗೆ ಇಮ್ಯೂನೋಥೆರಪಿಯಲ್ಲಿ(atezolizumab)ಇಂಜೆಕ್ಷನ್ ನೀಡಲಾಗುವುದು. ಇದನ್ನು ಡ್ರಿಪ್ ಮೂಲಕ ಕೂಡ ಕೊಡಲಾಗುವುದು ಹೀಗೆ ಕೊಡಲು 30 ನಿಮಿಷದಿಂದ ಒಂದು ಗಂಟೆ ಸಮಯ ಬೇಕು. ಆದರೆ ಈಗ ಅನುಮತಿ ಸಿಕ್ಕಿರುವ ಔಷಧ ನೀಡಲು ಕೇವಲ 7 ನಿಮಿಷ ಸಮಯ ಸಾಕು, ಇದನ್ನು ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವವರಿಗೆ ಅನುಕೂಲಕರವಾಗುವುದು.
ಇಂಗ್ಲೆಂಡ್ನ MHRA (Medicines and Healthcare products Regulatory Agency)7 ನಿಮಿಷ ಚಿಕಿತ್ಸೆಗೆ ಅನುಮತಿ ನೀಡಿದ್ದು ಆಗಸ್ಟ್ 29ಕ್ಕೆ 100 ಕ್ಯಾನ್ಸರ್ ರೋಗಿಗಳಿಗೆ ಈ ಚುಚ್ಚುಮದ್ದು ನೀಡಲಾಯಿತು. ಈ ಚಿಕಿತ್ಸೆಯಿಂದ ರೋಗಿಗಳಿಗೆ ಚಿಕಿತ್ಸೆ ನೀಡುವ ಸಮಯ ಉಳಿತಾಯವಾಗುವುದರಿಂದ ವೈದ್ಯರು ಹಾಜಗೂ ನರ್ಸ್ಗಳಿಗೆ ಇನ್ನೂ ಅಧಿಕ ರೋಗಿಗಳ ಕಡೆ ಗಮನ ನೀಡಲು ಸಾಧ್ಯವಾಗುವುದು.
ಈ ಚಿಕಿತ್ಸೆಯನ್ನು ಶ್ವಾಶಕೋಶದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಲಿವರ್ ಕ್ಯಾನ್ಸರ್, ಬ್ಲೇಡರ್ ಕ್ಯಾನ್ಸರ್ ಇರುವವರಿಗೆ ನೀಡಲಾಗುವುದು ಎಂದು ಇಂಗ್ಲೆಂಡ್ನ ನ್ಯಾಷನಲ್ ಹೆಲ್ತ್ ಸರ್ವೀಸ್ ಹೇಳಿದೆ.
ಕ್ಯಾನ್ಸರ್ ರೋಗಿಗಳು ಗುಣ ಮುಖರಾಗಲು ಚಿಕಿತ್ಸೆ ಜೊತೆ ಈ ಅಂಶಗಳ ಕಡೆ ಗಮನ ನೀಡುವುದು ಮುಖ್ಯ
ಕ್ಯಾನ್ಸರ್ ರೋಗ ಬಂದರೆ ವ್ಯಕ್ತಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ತುಂಬಾ ಕುಗ್ಗಿ ಹೋಗುತ್ತಾನೆ. ಈ ಅ ಸಮಯದಲ್ಲಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವುದು ತುಂಬಾನೇ ಮುಖ್ಯ.
* ಅವರನ್ನು ಪ್ರೀತಿಯಿಂದ ಆರೈಕೆ ಮಾಡಬೇಕು: ಈ ಅವಧಿಯಲ್ಲಿ ರೋಗಿಗಳು ದೇಹದ ನೋವಿನ ಜೊತೆಗೆ ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿರುತ್ತಾರೆ, ಈ ಅವಧಿಯಲ್ಲಿ ಅವರಿಗೆ ಪ್ರೀತಿ ತೋರಬೇಕು, ಅವರಲ್ಲಿ ಧೈರ್ಯ ತುಂಬಬೇಕು.
* ನೀವು ನಂಬುವ ಕಡೆ ಚಿಕಿತ್ಸೆ ಪಡೆಯಿರಿ
ನಾವು ಚಿಕಿತ್ಸೆ ಪಡೆಯುವಾಗ ನಾವು ಚಿಕಿತ್ಸೆ ಪಡೆಯುವ ವೈದ್ಯರ ಮೇಲೆ ನಂಬಿಕೆ ಇರಬೇಕು, ಆವಾಗ ಆ ಔಷಧಿ ಕೂಡ ನಮ್ಮ ಮೇಲೆ ಒಳ್ಳೆಯ ಪ್ರಭಾವ ಬೀರುವುದು, ಆದ್ದರಿಂದ ನಿಮಗೆ ನಂಬಿಕೆ ಇರುವ ಕಡೆ ಚಿಕಿತ್ಸೆ ಪಡೆಯಿರಿ.
* ನಿನ್ನ ಜೊತೆ ನಾನು ಇದ್ದೇನೆ ಎಂದು ಧೈರ್ಯ ತುಂಬಿ: ನಿನಗೆ ಏನು ಅನಿಸುತ್ತದೆ ಎಂದು ನನಗೆ ಗೊತ್ತು ಎಂದು ಹೇಳುವ ಬದಲಿಗೆ ಏನೇ ಆಗಲಿ ನಿನ್ನ ಜೊತೆ ನಾನು ಇರುತ್ತೇನೆ ಎಂದು ಧೈರ್ಯ ತುಂಬಿ.
* ಚಿಕಿತ್ಸೆ, ಔಷಧಗಳನ್ನು ಸರಿಯಾದ ಸಮಯಕ್ಕೆ ಮಾಡಿಸಿ: ವೈದ್ಯರು ಸೂಚಿಸಿದ ಔಷಧಗಳನ್ನು ಸರಿಯಾಗಿ ತೆಗೆದುಕೊಳ್ಳಿ. ಚಿಕಿತ್ಸೆಯನ್ನು ಸರಿಯಾಗಿ ಸಮಯಕ್ಕೆ ಮಾಡಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications










