Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಕಲ್ಲಂಗಡಿ ತುಂಬಾ ಕೆಂಪಗೆ ಅಥವಾ ಈ ರೀತಿ ಇದೆಯೇ?ತಿಂದ್ರೆ ಕ್ಯಾನ್ಸರ್ ಬರುತ್ತೆ ಹುಷಾರ್!
ಇನ್ನೇನು ಬೇಸಿಗೆ ಕಾಲ ಶುರುವಾಗುವುದು, ಈಗಲೇ ಕೆಲವು ಕಡೆ ಸೆಕೆ ಶುರುವಾಗಿದೆ. ಬಿಸಿಲಿನ ದಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ತುಂಬಾನೇ ಬೇಡಿಕೆ, ಕೆಂಪನೆ ನೀರು ತುಂಬಿರುವ ಆ ಹಣ್ಣು ಇತರ ಹಣ್ಣುಗಳಿಗಿಂತ ಬೇಗನೆ ಸೆಳೆಯುವುದು. ಒಂದು ಪೀಸ್ ಕಲ್ಲಂಗಡಿ ಹಣ್ಣು ತಿಂದರೆ ಸಾಕು ಬಾಯಾರಿಕೆ ನೀಗುವುದು, ಹೊಟ್ಟೆಯೂ ತುಂಬುವುದು. ಕಲ್ಲಂಗಡಿ ಹಣ್ಣು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ನಾವು ತಂದು ತಿನ್ನುವ ಎಲ್ಲಾ ಕಲ್ಲಂಗಡಿ ಹಣ್ಣುಗಳೆಲ್ಲಾ ಆರೋಗ್ಯಕ್ಕೆ ಒಳ್ಳೆಯದಾ? ಖಂಡಿತ ಅಲ್ಲ...
ನಾವು ಆರೋಗ್ಯಕ್ಕೆ ಒಳ್ಳೆಯದು ಎಂದು ತಂದು ತಿನ್ನುವ ಆ ಹಣ್ಣಿನಿಂದಲೇ ಕ್ಯಾನ್ಸರ್ ಮತ್ತಿತರ ರೋಗ ಬರಬಹುದು. ಹೌದು ಈಗ ಮಾರುಕಟ್ಟೆಗೆ ಬರುತ್ತಿರುವ ಎಲ್ಲಾ ಹಣ್ಣುಗಳು ನೈಸರ್ಗಿಕವಾಗಿ ಹಣ್ಣಾಗುತ್ತಿಲ್ಲ, ಕೆಲವೊಂದು ಹಣ್ಣುಗಳನ್ನು ರಾಸಾಯನಿಕ ಹಾಕಿ ಹಣ್ಣು ಮಾಡಲಾಗುವುದು. ಅವುಗಳನ್ನು ತಿಂದರೆ ರೋಗ ಬರುವುದು.
ನಾವಿಲ್ಲಿ ಕೆಮಿಕಲ್ ಹಾಕಿ ಹಣ್ಣು ಮಾಡಿರುವ ಕಲ್ಲಂಗಡಿ ಹಣ್ಣನ್ನು ಕಂಡು ಹಿಡಿಯುವುದು ಹೇಗೆ, ಹಣ್ಣು ರೀತಿ ಇದ್ದರೆ ತಿನ್ನಬಾರದು ಎಂಬ ಮಾಹಿತಿ ನೀಡಿದ್ದೇವೆ, ಅದರ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ:

ಕೆಮಿಕಲ್ ಬಳಸಿ ಹಣ್ಣು ಮಾಡಿದ ಕಲ್ಲಂಗಡಿ ತುಂಬಾ ಅಪಾಯಕಾರಿ
ಕಲ್ಲಂಗಡಿ ಹಣ್ಣು ಕೆಂಪಾಗಿ ಕಾಣಬೇಕು, ಬೇಗನೆ ಹಣ್ಣಾಗಬೇಕು ಎಂಬ ಕಾರಣಕ್ಕೆ ನೈಟ್ರೇಟ್, ಕೃತಕ ಬಣ್ಣ ಬಳಸಲಾಗುವುದು.
* ಕಲ್ಲಂಗಡಿ ಬೇಗನೆ ಹಣ್ಣಾಗಲು ನೈಟ್ರೇಟ್ ಬಳಸಲಾಗುವುದು, ಇದು ದೇಹವನ್ನು ಸೇರಿದಾಗ ಆರೋಗ್ಯ ಹಾಳು ಮಾಡುವುದು.
* ಕ್ರೋಮೇಟ್, ಮೆಥನಾಲ್ ಯೆಲ್ಲೋ ಮುಂತಾದವು ಬಳಸಿ ಕಲ್ಲಂಗಡಿ ಹಣ್ಣು ತುಂಬಾ ಕಲರ್ಫುಲ್ ಆಗಿ ಕಾಣುವುದು, ಆದರೆ ಇವುಗಳನ್ನು ತಿನ್ನುವುದರಿಂದ ಕ್ಯಾನ್ಸರ್ ಬರುವುದು.
* ಕಲ್ಲಂಗಡಿ ತಿಂದರೆ ರಕ್ತ ಹೆಚ್ಚುವುದು ಆದರೆ ವಿಷ ಹಾಕಿರುವ ಕಲ್ಲಂಗಡಿ ತಿನ್ನುವುದರಿಂದ ದೇಹದಲ್ಲಿ ರಕ್ತ ಕಡಿಮೆಯಾಗುವುದು, ಮೆದುಳಿಗೆ ಹಾನಿಯುಂಟು ಮಾಡುವುದು, ಕುರುಡುತನ ಉಂಟಾಗುವುದು.
* ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುವುದು.

ಕೆಮಿಕಲ್ ಹಾಕಿದ ಕಲ್ಲಂಗಡಿ ಹಣ್ಣನ್ನು ಕಂಡು ಹಿಡಿಯುವುದು ಹೇಗೆ?
ಕಲ್ಲಂಗಡಿ ಹಣ್ಣಿನ ಮೇಲೆ ಬಿಳಿ ಅಥವಾ ಹಳದಿ ಪೌಡರ್ ಇದ್ದರೆ ಅದಕ್ಕೆ ರಾಸಾಯನಿಕ ಹಾಕಲಾಗಿದೆ ಎಂದು ಹೇಳಬಹುದು. ಬೇಗ ಹಣ್ಣಾಗಲು ರಾಸಾಯನಿಕಗಳನ್ನು ಹಾಕಲಾಗಿರುತ್ತೆ, ಈ ಕಾರ್ಬೈಡ್ಗಳನ್ನು ಮಾವಿನಕಾಯಿ ಹಾಗೂ ಬಾಳೆಕಾಯಿ ಹಣ್ಣು ಮಾಡಲು ಬಳಸುತ್ತಾರೆ. ಈ ರೀತಿ ಹುಡಿ ಇರುವ ಕಲ್ಲಂಗಡಿ ಹಣ್ಣನ್ನು ಖರೀದಿಸಬೇಡಿ.

ಕಲ್ಲಂಗಡಿ ಹಣ್ಣು ತುಂಬಾ ಕೆಂಪಗಿದೆಯೇ?
ಕಲ್ಲಂಗಡಿ ಕಟ್ ಮಾಡುವಾಗ ತುಂಬಾ ಕಲರ್ ಅಥವಾ ಸಿಹಿ ಇದೆ ಎಂದಾದರೆ ಅದರ ಮಧ್ಯದಲ್ಲಿ ಸ್ವಲ್ಪ ಬಿಳಿ-ಬಿಳಿಯಿದ್ದರೆ ಸಂಶಯವೇ ಇಲ್ಲ, ಅದಕ್ಕೆ ರಾಸಾಯನಿಕ ಹಾಕಲಾಗಿದೆ.

ಕಲ್ಲಂಗಡಿ ಹಣ್ಣು ಕತ್ತರಿಸಿದಾಗ ಅದು ಒಡೆದಂತೆ ಇದ್ದರೆ ಅಥವಾ ರಂಧ್ರ ಇದ್ದರೆ
ನೀವು ಕಲ್ಲಂಗಡಿ ಹಣ್ಣು ಕೊಂಡು ಕತ್ತರಿಸಿದಾಗ ಅದರ ಒಳಭಾಗ ಒಡೆದಂತೆ ಅಥವಾ ಮಧ್ಯಭಾಗದಲ್ಲಿ ರಂಧ್ರ ಅಂದರೆ ಆ ಭಾಗದಲ್ಲಿ ಕಲ್ಲಂಗಡಿ ಇರುವುದೇ ಇಲ್ಲ, ಕರಗಿ ಹೋಗಿರುತ್ತದೆ, ಈ ರೀತಿ ಇದ್ದರೆ ಆ ಕಲ್ಲಂಗಡಿಗೆ ರಾಸಾಯನಿಕ ಹಾಕಲಾಗಿದೆ ಎಂದರ್ಥ.

ಕಲ್ಲಂಗಡಿಯನ್ನು ಟಿಶ್ಯೂನಿಂದ ಒರೆಸಿ
ಕಲ್ಲಂಗಡಿ ಕತ್ತರಿಸಿ ಅದನ್ನು ವೈಟ್ ಶೀಟ್ ಅಥವಾ ಟಿಶ್ಯೂವಿನಿಂದ ಒರೆಸಿದರೆ ಅದರಲ್ಲಿ ಬಣ್ಣ ಹಿಡಿದರೆ ಅದರಲ್ಲಿ ರಾಸಾಯನಿಕ ಬಳಿಸಲಾಗಿದೆ ಎಂದರ್ಥ. ಆದ್ದರಿಂದ ಇಂಥ ಹಣ್ಣುಗಳನ್ನು ತಿನ್ನಬೇಡಿ.

ಕಲ್ಲಂಗಡಿ ಖರೀದಿಸುವಾಗ ಹೀಗೆ ಮಾಡಿ?
ನೀವು ಕಲ್ಲಂಗಡಿ ಖರೀದಿಸುವಾಗ ಮೇಲೆ ಹೇಳಿದಂತೆ ಅದರ ಮೇಲ್ಬಾಗದಲ್ಲಿ ಪುಡಿ ಇದ್ದರೆ ಖರೀದಿಸಬೇಡಿ. ಇನ್ನು ಅವರಲ್ಲಿ ಕತ್ತರಿಸಿ ಕೊಡಲು ಹೇಳಿ, ಕತ್ತರಿಸಿದಾಗ ಅದರಲ್ಲಿ ರಾಸಾಯನಿಕ ಹಾಕಿದೆ ಎಂಬ ಸಂಶಯ ಬಂದರೆ ಖರೀದಿಸಬೇಡಿ.



Click it and Unblock the Notifications











