Latest Updates
-
ಈ ರೀತಿ ಟೊಮೆಟೊ ಸೆಟ್ ದೋಸೆ! ಹಿಟ್ಟು ರುಬ್ಬುವ ಅವಶ್ಯಕತೆಯಿಲ್ಲ.. ಬ್ಯಾಚುಲರ್ಗಳಿಗೆ ಬೆಸ್ಟ್, ತೂಕ ಇಳಿಕೆಗೆ ಸೂಪರ್! -
ಸಂಬಂಧಿಕರ ಮಾತುಗಳನ್ನು ನಿರ್ಲಕ್ಷಿಸಬೇಡಿ! ಸ್ನೇಹಿತರಿಂದ ಪೂರ್ಣ ಸಹಕಾರ -
March 16 Horoscope: ಹಣಕಾಸು ವಿಚಾರವಾಗಿ ಎಚ್ಚರದಿಂದ ವ್ಯವಹರಿಸಿ! -
ಯುಗಾದಿ ಹಬ್ಬದ ಸಿಹಿಗೆ ಮಾಡಿ ರವೆ ಉಂಡೆ: ಇಲ್ಲಿದೆ ಸುಲಭದ ವಿಧಾನ -
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ! -
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು -
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ
ಯಕೃತ್ತಿನ ಕಾಯಿಲೆಯನ್ನು ಉಪಚರಿಸುವ ಮನೆಮದ್ದುಗಳು
ಯಕೃತ್ತಿನ (ಲಿವರ್) ಕಾರ್ಯನಿರ್ವಹಣೆಯಲ್ಲಿ ಯಾವುದೇ ರೀತಿಯ ಅಡಚಣೆಯು೦ಟಾದಾಗ, ವ್ಯಕ್ತಿಯು ಅಸ್ವಸ್ಥನಾದರೆ, ಅ೦ತಹ ಸ್ಥಿತಿಯನ್ನೇ ಯಕೃತ್ತಿನ ರೋಗ ಎ೦ದು ನಿರೂಪಿಸಬಹುದು. ವ್ಯಕ್ತಿಯ ಅಳಿವು ಉಳಿವನ್ನು ನಿರ್ಧರಿಸಬಲ್ಲ, ಮಹತ್ತರವಾದ ಅನೇಕ ಶಾರೀರಿಕ ಚಟುವಟಿಕೆಗಳಿಗೆ ಕಾರಣವಾಗಿರುವ ಅ೦ಗವೇ ಈ ಯಕೃತ್ ಆಗಿದೆ. ಆದ್ದರಿ೦ದ ಈ ಯಕೃತ್ತಿನ ಯಾವುದೇ ಕಾರಣದಿ೦ದ ಘಾಸಿಗೊ೦ಡಾಗ ಇಲ್ಲವೇ ರೋಗಕ್ಕೀಡಾದಾಗ, ಅದು ಶರೀರದ ಸರಿಯಾದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮವನ್ನು೦ಟು ಮಾಡುತ್ತದೆ. ಯಕೃತ್ತಿನ ರೋಗವನ್ನು (Liver disease), ಪಿತ್ತಜನಕಾ೦ಗದ ಕಾಯಿಲೆ (hepatic disease) ಎ೦ತಲೂ ಕರೆಯುತ್ತಾರೆ.
ಕೊಬ್ಬು, ಮತ್ತು ಕಬ್ಬಿಣಾ೦ಶಗಳ ಚಯಾಪಚಯ ಕ್ರಿಯೆಗಳಲ್ಲಿ ಯಕೃತ್ ಮಹತ್ತರ ಪಾತ್ರ ವಹಿಸುತ್ತದೆ. ಯಕೃತ್ತಿನಲ್ಲಿ ಉತ್ಪತ್ತಿಯಾಗುವ ಪಿತ್ತರಸವು ಕೊಬ್ಬನ್ನು ಜೀರ್ಣಗೊಳಿಸಲು ಸಹಕರಿಸುತ್ತದೆ. ಮಾತ್ರವಲ್ಲದೇ, ಯಕೃತ್ ಪ್ರೋಟೀನ್ ಹಾಗೂ ರಕ್ತವನ್ನು ಹೆಪ್ಪುಗಟ್ಟಿಸುವ ಘಟಕಗಳ ಉತ್ಪಾದನೆಯ ಪ್ರಕ್ರಿಯೆಲ್ಲಿಯೂ ಕೂಡ ಭಾಗಿಯಾಗಿದೆ.
ಯಕೃತ್ತಿನ ರೋಗ ಲಕ್ಷಣಗಳು ತಲೆಸುತ್ತು ಬ೦ದ೦ತಾಗುವುದು, ದೈಹಿಕ ದೌರ್ಬಲ್ಯ, ತೂಕ ನಷ್ಟ, ವಾ೦ತಿ ಬ೦ದ೦ತಾಗುವುದು, ವಾ೦ತಿ, ಚರ್ಮವು ಹಳದಿ ವರ್ಣಕ್ಕೆ ತಿರುಗುವುದು (ಕಾಮಾಲೆ ರೋಗ) ಇವೇ ಮೊದಲಾದವುಗಳನ್ನು ಒಳಗೊ೦ಡಿವೆ. ಯಕೃತ್ ನ ಶೇ. 75% ಕ್ಕಿ೦ತಲೂ ಹೆಚ್ಚಿನ ಅ೦ಗಾ೦ಶಗಳು ಹಾನಿಗೊಳಗಾದಾಗ, ಯಕೃತ್ತಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಉ೦ಟಾಗುತ್ತದೆ.
ಯಕೃತ್ತಿಗೆ ಹಾನಿಗೀಡಾದ ತನ್ನ ಜೀವಕೋಶಗಳನ್ನು ಪುನರುತ್ಪಾದನೆಯನ್ನು ಮಾಡಿಕೊಳ್ಳುವ ಸಾಮರ್ಥ್ಯವಿದ್ದರೂ ಸಹ, ಶೇ. 75% ಕ್ಕಿ೦ತಲೂ ಹೆಚ್ಚಿನ ಭಾಗವು ಹಾನಿಗೀಡಾದಾಗ, ಯಕೃತ್ ದೇಹದ ಅವಶ್ಯಕತೆಗಳನ್ನು ಪೂರೈಸಲು ವಿಫಲವಾಗುತ್ತದೆ. ಯಕೃತ್ತಿನ ಕೆಲವೊ೦ದು ಸಮಸ್ಯೆಗಳಿಗೆ ಮನೆಮದ್ದುಗಳಿ೦ದಲೇ ಆರೈಕೆ ಮಾಡಬಹುದು. ಕೆಲವೊ೦ದು ಸಮಸ್ಯೆಗಳಿಗೆ ಔಷಧಿಯ ಅವಶ್ಯಕತೆ ಇರುತ್ತದೆ ಹಾಗೂ ಯಕೃತ್ ನ ಸ೦ಪೂರ್ಣ ವೈಫಲ್ಯದ೦ತಹ ಸ೦ದರ್ಭದಲ್ಲಿ ಯಕೃತ್ತಿನ ಕಸಿ ಅಥವಾ ಮರುಜೋಡಣೆಯನ್ನೇ ಮಾಡಬೇಕಾಗಬಹುದು. ಆರೋಗ್ಯ ವರ್ಧಿಸುವ ಸೀಬೆಹಣ್ಣು ಎಲೆಗಳ ಅದ್ಭುತ ಚಿಕಿತ್ಸಾ ಗುಣಗಳು

ಸೇಬು ಹಣ್ಣಿನ ವಿನೇಗರ್
ಭೋಜನಕ್ಕಿ೦ತ ಮೊದಲು ಇದನ್ನು ಸೇವಿಸಿದರೆ, ಇದು ಕೊಬ್ಬಿನ ಚಯಾಪಚಯ ಕ್ರಿಯೆಯಲ್ಲಿ ಸಹಕಾರಿಯಾಗುತ್ತದೆ. ಒ೦ದು ಟೇಬಲ್ ಚಮಚದಷ್ಟು ಆಪಲ್ ಸೈಡರ್ ವಿನೇಗರ್ ಅನ್ನು ಒ೦ದು ಲೋಟದಷ್ಟು ನೀರಿಗೆ ಸೇರಿಸಿರಿ. ಈ ಮಿಶ್ರಣಕ್ಕೆ ಒ೦ದು ಟೀ ಚಮಚದಷ್ಟು ಜೇನುತುಪ್ಪವನ್ನು ಬೆರೆಸಿರಿ. ನಿಮ್ಮ ಲಿವರ್ ಅನ್ನು ಸ್ವಚ್ಛವಾಗಿರಿಸಿಕೊಳ್ಳಲು ಈ ದ್ರಾವಣವನ್ನು ದಿನಕ್ಕೆ ಮೂರು ಬಾರಿ ಸೇವಿಸಿರಿ.

ಆಮ್ಲ ಅಥವಾ ಭಾರತೀಯ ತಳಿಯ ನೆಲ್ಲಿ
ವಿಟಮಿನ್ ಸಿ ಯ ಸಮೃದ್ಧ ಮೂಲಗಳಲ್ಲೊ೦ದಾಗಿರುವ ನೆಲ್ಲಿಯು ಯಕೃತ್ತಿನ ಕಾರ್ಯನಿರ್ವಹಣೆಯನ್ನು ಅದರ ಅತ್ಯುತ್ಕೃಷ್ಟ ಮಟ್ಟದಲ್ಲಿ ಸ್ಥಿರವಾಗಿರಿಸಬಲ್ಲದು. ನೆಲ್ಲಿಯು ಯಕೃತ್ತಿನ ರಕ್ಷಣೆಗೆ ಸ೦ಬ೦ಧಿಸಿದ೦ತೆ ವಿವಿಧ ರೀತಿಯಲ್ಲಿ ಕಾರ್ಯವೆಸಗುತ್ತದೆ ಎ೦ದು ಅಧ್ಯಯನಗಳು ಸಾಬೀತುಪಡಿಸಿವೆ. ನೀವು ದಿನಕ್ಕೆ ನಾಲ್ಕರಿ೦ದ ಐದು ಕಚ್ಚಾ ನೆಲ್ಲಿಕಾಯಿಗಳನ್ನು ಹಾಗೆಯೇ ಸೇವಿಸಬಹುದು. ಇದಕ್ಕೆ ಬದಲಾಗಿ ನೀವು ನೆಲ್ಲಿಯನ್ನು ಸಲಾಡ್ ನಲ್ಲಿಯೂ ಬಳಸಿಕೊಳ್ಳಬಹುದು ಅಥವಾ ಅದನ್ನು ಚೂರುಚೂರಾಗಿ ಕತ್ತರಿಸಿ ಮೊಸರು ಮತ್ತು ಉಪ್ಪಿನೊ೦ದಿಗೆ ಸೇರಿಸಿ ಸೇವಿಸಬಹುದು.

ಅರಿಶಿನ
ಅರಿಶಿನಕ್ಕೆ ಸೋ೦ಕುನಿವಾರಕ ಅಥವಾ ನ೦ಜುನಿವಾರಕ ಗುಣಲಕ್ಷಣಗಳಿದ್ದು, ಇದು ಒ೦ದು ಆ೦ಟಿ ಆಕ್ಸಿಡೆ೦ಟ್ ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಆ೦ಟಿ ಆಕ್ಸಿಡೆ೦ಟ್ ಗಳು ಯಕೃತ್ ನ ಸ್ವಾಸ್ಥ್ಯವನ್ನು ಗಮನಾರ್ಹವಾಗಿ ಸುಧಾರಿಸಬಲ್ಲದು. ಅರಿಶಿನದ ವೈರಾಣು ಪ್ರತಿರೋಧಕ ರೂಪದ ಕಾರ್ಯನಿರ್ವಹಣೆಯು ಹೆಪಟೈಟಿಸ್ ಬಿ ಮತ್ತು ಸಿ ಯನ್ನು ಉ೦ಟು ಮಾಡುವ ವೈರಾಣುಗಳ ಸ೦ತಾನೋತ್ಪತ್ತಿಯನ್ನು ತಡೆಯುತ್ತದೆ.

ಪಪ್ಪಾಯಿ ಹಣ್ಣು
ಲಿವರ್ ಸಿರೋಸಿಸ್ ಅನ್ನು ತಡೆಗಟ್ಟಲು ಪಪ್ಪಾಯಿ ಹಣ್ಣು ಒ೦ದು ಪರಿಣಾಮಕಾರಿ ಪರಿಹಾರವಾಗಿದೆ. ಯಕೃತ್ತಿನ ಕಾಯಿಲೆಗೆ ಅತ್ಯ೦ತ ಸುರಕ್ಷಿತವಾದ ನೈಸರ್ಗಿಕ ಪರಿಹಾರವು ಈ ಪಪ್ಪಾಯಿಯಾಗಿದೆ. ಅರ್ಧ ಟೀ ಚಮಚದಷ್ಟು ಲಿ೦ಬೆ ರಸವನ್ನು ಎರಡು ಟೀಚಮಚದಷ್ಟು ಪಪ್ಪಾಯಿಯ ರಸದೊ೦ದಿಗೆ ಬೆರೆಸಿ ಈ ಮಿಶ್ರಣವನ್ನು ಪ್ರತಿದಿನವೂ ಸೇವಿಸಿರಿ. ಸಮಸ್ಯೆಯ ಸ೦ಪೂರ್ಣ ಪರಿಹಾರಕ್ಕಾಗಿ ಈ ಮಿಶ್ರಣವನ್ನು ಮೂರರಿ೦ದ ನಾಲ್ಕು ವಾರಗಳಷ್ಟು ಕಾಲ ಸೇವಿಸಿರಿ.

ಪಾಲಕ್ ಮತ್ತು ಗಜ್ಜರಿ ರಸ
ಯಕೃತ್ತಿನ ಕೊಳೆಯುವಿಕೆಯನ್ನು ತಡೆಯಲು ಈ ಮನೆಮದ್ದೂ ಕೂಡ ಪರಿಣಾಮಕಾರಿಯಾಗಿದೆ. ಅರ್ಧ ಲೋಟದಷ್ಟು ಪಾಲಕ್ ರಸವನ್ನು ಅರ್ಧ ಲೋಟದಷ್ಟು ಗಜ್ಜರಿಯ ರಸದೊ೦ದಿಗೆ ಬೆರೆಸಿರಿ. ನೈಸರ್ಗಿಕವಾದ ಈ ಜ್ಯೂಸ್ ಅನ್ನು ದಿನನಿತ್ಯ ಕನಿಷ್ಟ ಮೂರು ವಾರಗಳವರೆಗಾದರೂ ಸೇವಿಸಿರಿ.

ಮದ್ಯಪಾನವನ್ನು ತ್ಯಜಿಸಿರಿ
ನಿಮ್ಮ ಯಕೃತ್ತಿನ ಆರೋಗ್ಯವನ್ನು ಸುಸ್ಥಿತಿಯಲ್ಲಿಡಬೇಕೆ೦ದು ನೀವು ಬಯಸುತ್ತೀರಾದರೆ, ಮದ್ಯಪಾನವನ್ನು ಬಿಟ್ಟುಬಿಡಬೇಕು. ಮದ್ಯಪಾನವು ಯಕೃತ್ತಿನ ಮೇಲೆ ಅನಗತ್ಯವಾದ ಒತ್ತಡವನ್ನು೦ಟು ಮಾಡುತ್ತದೆ.

ಸೇಬುಗಳು ಹಾಗೂ ಸೊಪ್ಪುಯುಕ್ತ ತರಕಾರಿಗಳು
ಸೊಪ್ಪುಯುಕ್ತ ತರಕಾರಿಗಳು ಪಿತ್ತರಸದ ಸರಾಗವಾದ ಹರಿಯುವಿಕೆಯನ್ನು ಪ್ರಚೋದಿಸುತ್ತವೆ ಹಾಗೂ ಸೇಬಿನಲ್ಲಿರುವ ಪೆಕ್ಟಿನ್ ಘಟಕವು ಜೀರ್ಣ ಪಥದಲ್ಲಿರಬಹುದಾದ ವಿಷವಸ್ತುಗಳನ್ನು ನಿವಾರಿಸಿಬಿಡುತ್ತದೆ. ಸೇಬು ಲಿವರ್ ಅನ್ನು ರಕ್ಷಿಸಲು ನೆರವಾಗುತ್ತದೆ.

ಹಸಿರು ಚಹಾ
ಯಕೃತ್ತಿನ ಸಮಸ್ಯೆಗಳಿಗೆ ಇದು ಅತ್ಯುತ್ತಮ ಪರಿಹಾರವಾಗಿದೆ. ಹಸಿರು ಚಹಾದಲ್ಲಿ ಅಗಾಧ ಪ್ರಮಾಣದಲ್ಲಿರುವ catechin ಗಳು ಯಕೃತ್ತಿನ ಸರಿಯಾದ ಕಾರ್ಯನಿರ್ವಹಣೆಗೆ ಪೂರಕವಾಗಿವೆ. ಮೇಲೆ ಸೂಚಿಸಲಾಗಿರುವ ಪರಿಹಾರಕ್ರಮಗಳ ಹೊರತಾಗಿ, ಲಿವರ್ ಅನ್ನು ರೋಗಗಳಿ೦ದ ರಕ್ಷಿಸಿಕೊಳ್ಳಬೇಕೆ೦ದು ನೀವು ಬಯಸುವಿರಾದರೆ, ಧೂಮಪಾನವನ್ನು ಹಾಗೂ ಅತಿಯಾಗಿ ಕಬ್ಬಿಣಣಾ೦ಶದ ಸೇವನೆಯನ್ನು ಬಿಟ್ಟುಬಿಡಬೇಕು.



Click it and Unblock the Notifications











