Just In
- 2 hrs ago ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- 11 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 11 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 12 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
Don't Miss
- Finance ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ: ಬರಲಿವೆ 19 ಎತ್ತರದ ನಿಲ್ದಾಣಗಳು
- News ಬೆಳಗಾವಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಲಕ್ಷ್ಮಿ ಹೆಬ್ಬಾಳ್ಕರ್ಗೆ ಸಮನ್ಸ್ ಜಾರಿ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Movies "ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಧುಮೇಹಿಗಳು ಸೇವಿಸಬಹುದಾದ 7 ಸಿಹಿ ಹಣ್ಣುಗಳು
ರಕ್ತದಲ್ಲಿ ಗ್ಲೂಕೋಸ್ ಮಟ್ಟ ಹೆಚ್ಚಾಗಿ ಇನ್ಸುಲಿನ್ ಉತ್ಪತ್ತಿಯು ಕಡಿಮೆಯಾದಾಗ ಮಧುಮೇಹವು ದೇಹವನ್ನು ಆವರಿಸಿಕೊಳ್ಳುತ್ತದೆ. ಮಧುಮೇಹವೆಂದರೆ ಸ್ಲೋ ಪಾಯ್ಸನ್ ಎನ್ನಬಹುದು. ಯಾಕೆಂದರೆ ಇದು ನಿಧಾನವಾಗಿಯೇ ದೇಹವನ್ನು ಕೊಲ್ಲುತ್ತಿರುತ್ತದೆ. ಆದರೆ ಮಧುಮೇಹಿಗಳು ಕೂಡ ಕಠಿಣ ಆಹಾರ ಕ್ರಮ ಅಳವಡಿಸಿಕೊಂಡರೆ ಇದನ್ನು ನಿಯಂತ್ರಣದಲ್ಲಿಡಬಹುದು. ಮಧುಮೇಹಿಗಳು ತಮ್ಮ ಆಹಾರ ಕ್ರಮದಲ್ಲಿ ಹಲವಾರು ರೀತಿಯ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಮಧುಮೇಹ ನಿಯಂತ್ರಿಸುವ ಪವರ್-ಮೆಂತೆ ಕಾಳಿನಲ್ಲಿದೆ!
ಹೆಚ್ಚಿಗೆ ಸಿಹಿ ತಿನ್ನುವುದು, ಅತಿಯಾಗಿ ತಿನ್ನುವುದು ಮಧುಮೇಹಿಗಳಿಗೆ ವರ್ಜ್ಯ. ಮಧುಮೇಹಿಗಳು ಪಥ್ಯ ಮಾಡಿಕೊಂಡರೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಹೆಚ್ಚು ಕಷ್ಟವಿಲ್ಲ. ಇಲ್ಲವೆಂದಾದರೆ ಸಕ್ಕರೆ ಅಂಶವು ಮಿತಿಮೀರಿ ಸಮಸ್ಯೆಗೆ ತುತ್ತಾಗಬೇಕಾಗುತ್ತದೆ. ಆದರೆ ಮಧುಮೇಹಿಗಳು ಹೆಚ್ಚಾಗಿ ಕೇಳುವಂತಹ ಪ್ರಶ್ನೆಯೆಂದರೆ ಹಣ್ಣುಗಳನ್ನು ತಿನ್ನಬಹುದೇ? ಯಾಕೆಂದರೆ ಹಣ್ಣುಗಳಲ್ಲಿಯೂ ಸಕ್ಕರೆ ಅಂಶವು ಇದ್ದೇ ಇರುತ್ತದೆ. ಮಧುಮೇಹ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ- ನುಗ್ಗೆ ಸೊಪ್ಪು
ಮಧುಮೇಹಿಗಳು
ಹಣ್ಣುಗಳನ್ನು
ತಿನ್ನಬಹುದಾದರೂ
ಕೆಲವೊಂದು
ಹಣ್ಣುಗಳನ್ನು
ತಿನ್ನುವ
ಮೊದಲು
ಯೋಚಿಸಬೇಕು.
ಅದರಲ್ಲು
ಮಾವಿನ
ಹಣ್ಣುಗಳಿಂದ
ಮಧುಮೇಹಿಗಳು
ಆದಷ್ಟು
ದೂರವಿರುವುದೇ
ಲೇಸು,
ಅಲ್ಲದೆ
ಸಕ್ಕರೆ
ಮಟ್ಟವು
(200ಎಂಜಿ/ಡಿಎಲ್)
ಇದ್ದರೆ
ಇದನ್ನು
ದೂರವಿಡಲೇಬೇಕು.
ಮಧುಮೇಹಿಗಳು
ಯಾವ
ಹಣ್ಣುಗಳನ್ನು
ಎಷ್ಟು
ಪ್ರಮಾಣದಲ್ಲಿ
ತಿನ್ನಬಹುದು
ಎನ್ನುವ
ಬಗ್ಗೆ
ಇಲ್ಲಿ
ವಿವರಗಳನ್ನು
ನೀಡಿದ್ದೇವೆ
ಮುಂದೆ
ಓದಿ....
ಸೇಬು
ಮಧ್ಯಮ ಗಾತ್ರದ ಸೇಬು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಯಾಕೆಂದರೆ ಇದರಲ್ಲಿ ಕಡಿಮೆ ಕ್ಯಾಲರಿ, ಜಿಐ ಇದೆ ಮತ್ತು ನಾರಿನಾಂಶ ಅಧಿಕವಾಗಿದೆ. ಕೆಂಪು ಸೇಬಿಗಿಂತ ಹಸಿರು ಸೇಬು ಮಧುಮೇಹಿಗಳಿಗೆ ಒಳ್ಳೆಯದು.
ಕಿತ್ತಳೆ ಹಣ್ಣು
ಕಿತ್ತಳೆಯಲ್ಲಿ ವಿಟಮಿನ್ ಸಿ ಮತ್ತು ನಾರಿನಾಂಶವು ಹೇರಳವಾಗಿದೆ. ಇದು ರಕ್ತದ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಿ ಇನ್ಸುಲಿನ್ ಕ್ರಿಯೆಯನ್ನು ಸುಧಾರಿಸುತ್ತದೆ. ಇದರಲ್ಲಿ ಹೆಸ್ಪೆರೆಟಿನ್ ಎನ್ನುವ ಅಂಶವಿದೆ. ಇದು ಬೊಜ್ಜನ್ನು ಕಡಿಮೆ ಮಾಡಿ ತೂಕ ಕಳೆದುಕೊಳ್ಳಲು ನೆರವಾಗುತ್ತದೆ. ಒಂದು ಸಣ್ಣ ಗಾತ್ರದ ಕಿತ್ತಳೆ ಅಥವಾ ಕಿತ್ತಳೆಯ 5-6 ಭಾಗಗಳನ್ನು ತಿನ್ನಬಹುದು.
ಜಾಮೂನು
ರಕ್ತದ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡಲು ದಿನದಲ್ಲಿ 5-6 ಜಾಮೂನುಗಳನ್ನು ತಿನ್ನಿ. ಜಾಮೂನಿನಲ್ಲಿ ಜಿಐ ಕಡಿಮೆ ಇರುವುದು ಮಾತ್ರವಲ್ಲದೆ ಗ್ಲುಕೋಸೈಡ್ ಕೂಡ ಒಳಗೊಂಡಿದೆ. ಇದು ರಕ್ತದಲ್ಲಿ ಗ್ಲೂಕೋಸ್ ಅನ್ನು ನಿಯಂತ್ರಣದಲ್ಲಿಡುತ್ತದೆ.
ಪಪ್ಪಾಯಿ
ಪಪ್ಪಾಯಿ ಸಿಹಿ ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುವ ಕಾರಣದಿಂದ ಹೆಚ್ಚಿನ ಮಧುಮೇಹಿಗಳು ಇದನ್ನು ಕಡೆಗಣಿಸುತ್ತಾರೆ. ಆದರೆ ಒಂದು ತುಂಡು ಪಪ್ಪಾಯಿ ಅಥವಾ ಸಣ್ಣ ಪಿಂಗಾಣಿಯಲ್ಲಿ ಪಪ್ಪಾಯಿ ತುಂಡುಗಳನ್ನು ತಿಂದರೆ ಪೋಷಕಾಂಶಗಳು ಸಿಗುವುದು.
ಸೀಬೆಹಣ್ಣು
ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ಸೀಬೆಹಣ್ಣಿನಲ್ಲಿ ಆ್ಯಂಟಿಆಕ್ಸಿಡೆಂಟ್ ಗಳು ತುಂಬಿ ಹೋಗಿವೆ. ಇದು ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ. ನಾರಿನಾಂಶ ಅಧಿಕವಾಗಿರುವ ಮತ್ತು ಗ್ಲೈಸೆಮಿಕ್ ಕಡಿಮೆ ಇರುವ ಹಣ್ಣಾಗಿರುವ ಇದು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು.
ಬಾಳೆಹಣ್ಣು
ಮಧ್ಯಮ ಗಾತ್ರದ ಬಾಳೆಹಣ್ಣು ಇದ್ದರೆ ಕೇವಲ ಅರ್ಧ ಮಾತ್ರ ತಿಂದರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ನಿಯಂತ್ರಣದಲ್ಲಿರುತ್ತದೆ. ಮಧುಮೇಹವು ನಿಯಂತ್ರಣದಲ್ಲಿ ಇರದಿದ್ದರೆ ಮತ್ತು ಕಳೆದ ಮೂರು ತಿಂಗಳಿಂದ ರಕ್ತದಲ್ಲಿನ ಸಕ್ಕರೆ ಅಂಶವು ಸ್ಥಿರವಾಗಿಲ್ಲವೆಂದಾದರೆ ಬಾಳೆಹಣ್ಣು ತಿನ್ನುವುದನ್ನು ಬಿಡಿ.
ಸ್ಟ್ರಾಬೆರಿ
ಒಂದು ಕಪ್ ಅಥವಾ ಒಂದು ಪಿಂಗಾಣಿ(180 ಗ್ರಾಂ) ಸ್ಟ್ರಾಬೆರಿ ಸೇವಿಸಬಹುದು. ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ, ನಾರಿನಾಂಶ ಮತ್ತು ಆ್ಯಂಟಿಆಕ್ಸಿಡೆಂಟ್ ಇದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ.