Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ಬೇಸಿಗೆಯಲ್ಲಿ ಸಂಜೆ ಹೊತ್ತು ನಡೆಯುವುದರಿಂದ ದೊರೆಯುವ ಪ್ರಯೋಜನಗಳು
ನಡೆಯುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು ಎಲ್ಲರಿಗೂ ಗೊತ್ತು, ಆದರೆ ಈ ಬೇಸಿಗೆ ಕಾಲದಲ್ಲಿ ಸಂಜೆ ಹೊತ್ತು ನಡೆಯುವ ವ್ಯಾಯಾಮ ಮಾಡಿದರೆ ಇನ್ನೂ ಒಳ್ಳೆಯದು.
ಸಂಜೆ ಹೊತ್ತು ವ್ಯಾಯಾಮ ಮಾಡುವುದರಿಂದ ಸ್ನಾಯುಗಳನ್ನು ಬಲಪಡಿಸಲು ಸಹಕಾರಿ. ನಡೆಯುವುದರಿಂದ ತೂಕ ನಿಯಂತ್ರಣದ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಇನ್ನು ಈ ಪ್ರಯೋಜನಗಳನ್ನೂ ಪಡೆಯಬಹುದು:

ಸಂಜೆ ಹೊತ್ತು ತಂಪಾಗಿರುತ್ತದೆ
ಸಂಜೆ 5 ಗಂಟೆಯ ಮೇಲೆ ವಾತಾವರಣ ಸ್ವಲ್ಪ ತಂಪಾಗಿರುತ್ತದೆ, ಆದ್ದರಿಂದ ಸಂಜೆ ಹೊತ್ತು ನಡೆಯುವುದರಿಂದ ಸುಸ್ತಾಗುವುದಿಲ್ಲ, ಒಂದೆರಡು ಕಿ.ಮೀ ಹೆಚ್ಚೇ ನಡೆಯಬಹುದು.
ನಿದ್ದೆ ಚೆನ್ನಾಗಿ ಬರುತ್ತದೆ: ಸಂಜೆ ನಡೆದಾಗ ರಾತ್ರಿ ಮಲಗಿದ ತಕ್ಷಣ ನಿದ್ದೆ ಬರುವುದು, ಸೆಕೆಗೆ ನಿದ್ದೆ ಬರಲ್ಲ ಎಂಬ ಹಿಂಸೆ ಇರಲ್ಲ, ಮಲಗಿದ ತಕ್ಷಣ ಸುಖ ನಿದ್ದೆ ಬರುತ್ತದೆ.
ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ
ಬಳಗ್ಗೆಯಿಂದ ಸಂಜೆವರೆಗೆ ಕೆಲಸದಲ್ಲಿ ಮಾನಸಿಕ ಒತ್ತಡ ಹೆಚ್ಚಿರುತ್ತದೆ. ಒಂದು ಅರ್ಧ ಗಂಟೆ ನಡೆದು ನಂತರ 10 ನಿಮಿಷ ಧ್ಯಾನ ಮಾಡಿದರೆ ಮಾನಸಿಕ ಒತ್ತಡ ಕಡಿಮೆಯಾಗುವುದು.
ಹೃದಯದ ಆರೋಗ್ಯಕ್ಕೆ ಒಳ್ಳೆಯದು
ನಡೆಯುವ ವ್ಯಾಯಾಮ ಮಾಡುವುದರಿಂದ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಅಲ್ಲದೆ ಮೈ ತೂಕ ಕೂಡ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ, ಇದರಿಂದ ಒಟ್ಟು ಮೊತ್ತ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಇನ್ನು ಬೇಸಿಗೆಯಲ್ಲಿ ವ್ಯಾಯಾಮ ಮಾಡುವಾಗ ಈ ಅಂಶಗಳ ಬಗ್ಗೆ ಗಮನಿಸಿ
ನೀವು ಸಂಜೆ 4 ಗಂಟೆ ಮೇಲೆ ವ್ಯಾಯಾಮ ಮಾಡಬೇಕು, ನೀವು ಮನೆಯ ಒಳಗಡೆ ವ್ಯಾಯಾಮ ಮಾಡುವುದಾದರೂ ಸರಿ 4 ಗಂಟೆಯ ವ್ಯಾಯಾಮ ಮಾಡಿ, ಈಗ ನಾಲ್ಕು ಗಂಟೆಗೂ ಬಿಸಿಲಿನ ಉರಿ ಇದೆ, ಹಾಗಾಗಿ 5 ಗಂಟೆಯ ನಂತರದ ಸಮಯ ಒಳ್ಳೆಯದು.
ದೇಹದಲ್ಲಿ ನೀರಿನಂಶ ಕಾಪಾಡಬೇಕು
ನೀವು ನಡೆಯುವ ಅಥವಾ ಯಾವುದೇ ವ್ಯಾಯಾಮ ಮಾಡುವುದಾದರೂ ದೇಹದಲ್ಲಿ ನೀರಿನಂಶ ಕಾಪಾಡಬೇಕು. ಬಾಟಲಿ ನೀರನ್ನು ಕೊಂಡೊಯ್ಯಿರಿ, ಇಲ್ಲದಿದ್ದರೆ ಸಂಜೆ ಒಂದು ಎಳನೀರು ಕುಡಿದು ವ್ಯಾಯಾಮ ಮಾಡಿದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗಲ್ಲ, ವ್ಯಾಯಾಮ ಮಾಡಲು ಎನರ್ಜಿ ಸಿಗುವುದು.
ಸಡಿಲವಾದ ಡ್ರೆಸ್ ಧರಿಸಿ
ಬೇಸಿಗೆ ಕಾಲದಲ್ಲಿ ನೀವು ಸಡಿಲವಾದ ಕಾಟನ್ ಡ್ರೆಸ್ ಧರಿಸಿ ವ್ಯಾಯಾಮ ಮಾಡಿ, ಬಿಗಿಯಾದ ಉಡುಪು ಧರಿಸಿದರೆ ಮೈ ಹೆಚ್ಚಾಗಿ ಬೆವರುವುದು, ಆದ್ದರಿಂದ ಈ ಬಗ್ಗೆ ಗಮನಹರಿಸಿ.
ನಿಮ್ಮ ದೇಹದ ಮಾತು ಕೇಳಿ
ಇನ್ನು ನೀವು ವ್ಯಾಯಾಮ ಮಾಡುವಾಗ ನೀವು ನಿಮ್ಮ ದೇಹದ ಮಾತು ಕೇಳಬೇಕು. ಆದ್ದರಿಂದ ನಿಮ್ಮ ದೇಹ ನನ್ನಿಂದ ಆಗಲ್ಲ ಎಂದು ಸೂಚಿಸಿದರೆ ಮತ್ತೆ ವರ್ಕೌಟ್ ಮಾಡಬೇಡಿ. ನಮ್ಮ ದೇಹದ ಮಾತು ಕೇಳಬೇಕು, ಆಗುತ್ತಿಲ್ಲ ಎಂದು ದೇಹ ಸೂಚನೆ ಕೊಟ್ಟಾಗ ಮತ್ತೆ ಒತ್ತಡ ಹಾಕಿ ವರ್ಕೌಟ್ ಮಾಡಲು ಹೋಗಬಾರದು.
ದೇಹದಲ್ಲಿ ನೀರಿನಂಶ ಕಡಿಮೆಯಿದ್ದಾಗ ವ್ಯಾಯಾಮ ಮಾಡಬೇಡಿ
ತಲೆನೋವು: ನೀವು ನೀರು ತುಂಬಾ ಕಡಿಮೆ ಕುಡಿದರೆ ತಲೆನೋವು ಉಂಟಾಗುವುದು, ಆದ್ದರಿಂದ ಬೇಸಿಗೆಯಲ್ಲಿ ತಲೆನೋವು ಉಂಟಾದರೆ ಮೊದಲು ನೀವು ಮಾಡಬೇಕಾಗಿರುವುದು ನೀರು ಅಧಿಕ ಕುಡಿಯುವುದು.
ಮೂತ್ರ ತುಂಬಾ ಹಳದಿ ಬಣ್ಣದಲ್ಲಿದ್ದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗಿದೆ ಎಂಬುವುದರ ಲಕ್ಷಣಗಳಾಗಿವೆ. ಆದ್ದರಿಂದ ಮೂತ್ರದ ಬಣ್ಣ ನೋಡಿ ನಿಮ್ಮ ದೇಹಕ್ಕೆ ನೀರಿನಂಶದ ಅವಶ್ಯಕತೆ ಇದೆಯೇ ಎಂಬುವುದನ್ನು ತಿಳಿಯಬಹುದು.
ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ವ್ಯಾಯಾಮ ಮಾಡಬೇಡಿ
ನೀರನ್ನು ಕುಡಿಯಿರಿ
ತಣ್ಣೀರಿನಲ್ಲಿ ಸ್ನಾನ ಮಾಡಿ
ಬಟ್ಟೆಯನ್ನು ಒದ್ದೆ ಮಾಡಿ ಕತ್ತಿನ ಭಾಗದಲ್ಲಿ ಇಡಿ
ತುಂಬಾನೇ ಸುಸ್ತು ಅನಿಸಿದಾಗ ವೈದ್ಯರನ್ನು ಭೇಟಿ ಮಾಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications