Latest Updates
-
ಯುಗಾದಿಗೆ ಸ್ಪೆಷಲ್ ಹೊಸ ರೀತಿಯ ಕ್ಯಾರೆಟ್ ಒಬ್ಬಟ್ಟು: ಬಾಯಲ್ಲಿ ನೀರು ತರಿಸುವ ಸಿಹಿ -
ಅಕ್ಕಿ ನೆನೆಸುವಂತೆಯೇ ಇಲ್ಲ! ಸೌತೆಕಾಯಿಯಿಂದ ಮಾಡಿ ರುಚಿಕರ ಇಡ್ಲಿ.. ಹೊಟ್ಟೆ ತುಂಬುತ್ತೆ, ತೂಕ ಇಳಿಯುತ್ತೆ -
March 17 Horoscope: ಕುಟುಂಬದಲ್ಲಿ ಸಂತಸ ಅನುಭವಿಸುವ ದಿನವಿದು! -
ಕೌಟುಂಬಿಕ ಸುಖ & ಸಂಬಂಧಗಳಲ್ಲಿ ಮಧುರತೆ ಹೆಚ್ಚಳ! ಸಂಗಾತಿಯಿಂದ ಸಂಪೂರ್ಣ ಬೆಂಬಲ -
ಯುಗಾದಿ ಮಂತ್ರಗಳು: ಹಬ್ಬದಲ್ಲಿ ಈ ಮಂತ್ರ ಪಠಿಸಿದ್ರೆ ಕಷ್ಟಗಳು ದೂರಾಗುತ್ತೆ, ಅದೃಷ್ಟ ನಿಮ್ಮದಾಗುತ್ತೆ! -
ಯುಗಾದಿ ಹಬ್ಬದಲ್ಲಿ ಸಿಹಿಯೊಂದಿಗೆ ಬೇಬಿ ಕಾರ್ನ್ 65 ಸಹ ಮಾಡಿ! ಅದ್ಭುತ ರುಚಿಯ ತಿಂಡಿ ಇದು! -
Ugadi 2026: ಬೇವಿನ ಕಹಿ ಇರಲಿ, ಬೆಲ್ಲದ ಸಿಹಿ ಇರಲಿ! ನಿಮ್ಮ ಆತ್ಮೀಯರಿಗೆ ಈ ರೀತಿ ವಿಶೇಷ ಶುಭಾಶಯ ಕಳಿಸಿ -
ರವೆ ಮತ್ತು ತುಪ್ಪ ಬಳಸಿ ಸ್ಪಂಜಿನಂಥ ಕೇಕ್ ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ.. ಓವನ್ ಇಲ್ಲದೆ ಮಾಡಬಹುದು -
ಯುಗಾದಿ ಭವಿಷ್ಯ: ಹಬ್ಬದ ಬಳಿಕ ಈ ರಾಶಿಯವರಿಗೆ ಲಕ್ಷ್ಮಿ ಆಶೀರ್ವಾದ, ಆರ್ಥಿಕ ಲಾಭ! -
ಮುದ್ದೆ, ಗಂಜಿ ಬಿಡಿ.. ರಾಗಿ ಬಳಸಿ ಈ ರೆಸಿಪಿಗಳನ್ನು ಮಾಡಿ! ಆರೋಗ್ಯಕ್ಕೆ ಸೂಪರ್, ರುಚಿಯೂ ಮಿಸ್ ಆಗಲ್ಲ
ಬೇಸಿಗೆಯಲ್ಲಿ ತ್ವಚೆಯ ಸಮಸ್ಯೆಗೆ, ಎಳೆ ನೀರಿನ ಆರೈಕೆ!
ಉರಿ ಬಿಸಿಲು, ಅದರ ಮಧ್ಯೆ ಧೂಳು, ಎಲ್ಲವೂ ಸೇರಿ ಮುಖದ ಅಂದವನ್ನೇ ಕೆಡಿಸಿದೆ. ಒಂದು ಐದು ನಿಮಿಷ ಬಿಸಿನಲ್ಲಿ ನಿಂತರೂ ಧಾರಾಕಾರವಾಗಿ ಬೆವರು ಸುರಿಯಲು ಆರಂಭವಾಗುತ್ತದೆ. ಮುಖದಿಂದ ಸುರಿಯುತ್ತಿರುವ ಬೆವರನ್ನು ದೂರ ಮಾಡಲು ನಾವು ದಿನದಲ್ಲಿ ಹಲವಾರು ಬಾರಿ ನೀರಿನಿಂದ ಮುಖ ತೊಳೆದುಕೊಳ್ಳುತ್ತೇವೆ. ನೀರಿನಿಂದ ಮುಖ ತೊಳೆದುಕೊಂಡರೆ ಮೊಡವೆಗಳು ಬರುವುದು ತಪ್ಪುವುದು, ಮಾತ್ರವಲ್ಲದೆ ಮುಖಕ್ಕೆ ಪುನರ್ಜೀವನ ನೀಡಿದಂತಾಗುವುದು.

ಆದರೆ ಸೌಂದರ್ಯ ತಜ್ಞರ ಪ್ರಕಾರ ಬೇಸಿಗೆಯಲ್ಲಿ ಬೆವರಿನ ತ್ವಚೆ, ಮೊಡವೆ ಹಾಗೂ ಕಲೆಗಳಿಂದ ದೂರ ಉಳಿಯಬೇಕೆಂದರೆ ನಾವು ಎಳೆ ನೀರಿನಿಂದ ಮುಖ ತೊಳೆಯಬೇಕಂತೆ. ಬೇಸಿಗೆಯಲ್ಲಿ ನೀವು ಸಮುದ್ರ ತೀರಕ್ಕೆ ತಿರುಗಾಡಲು ಹೋಗುತ್ತಿದ್ದೀರಿ ಎಂದಾದರೆ ಆಗ ಖಂಡಿತವಾಗಿಯೂ ನೀವು ಎಳೆ ನೀರಿನಿಂದ ಮುಖ ತೊಳೆಯಿರಿ. ಯಾಕೆಂದರೆ ಸೂರ್ಯನ ತಾಪ, ಮರಳಿನ ಬಿಸಿ ಮತ್ತು ಬಿಸಿ ಗಾಳಿ ನಿಮ್ಮ ಮುಖದ ಮೇಲೆ ಕಲೆಗಳನ್ನು ಉಂಟು ಮಾಡಬಹುದು. ಇದನ್ನು ಹೋಗಲಾಡಿಬೇಕಾದರೆ ನೀವು ತೆಂಗಿನಕಾಯಿ ನೀರಿನಿಂದ ಮುಖ ತೊಳೆದು ಆರಾಮವಾಗಿರಿ.
ಕಲೆಗಳನ್ನು ನಿವಾರಿಸುವುದು
ಮುಖದ ಮೇಲೆ ಕಲೆಗಳು ಕಾಣಿಸುತ್ತಿದ್ದರೆ ಆಗ ಎಳೆ ನೀರಿನಿಂದ ಮುಖವನ್ನು ತೊಳೆಯಿರಿ. ಕಲೆಗಳನ್ನು ನಿವಾರಿಸುವ ಗುಣಗಳು ತೆಂಗಿನಕಾಯಿ ನೀರಿನಲ್ಲಿದೆ. ಇದರಲ್ಲಿರುವ ಆ್ಯಸಿಡ್ ಅಂಶಗಳು ಕಲೆಗಳನ್ನು ನಿವಾರಿಸುವುದು ಮತ್ತು ಚರ್ಮವು ಹೊಳಪು ಪಡೆಯಲು ನೆರವಾಗುವುದು.
ಮೊಡವೆಗಳ ನಿವಾರಣೆ
ಕಪ್ಪು ಕಲೆಗಳಿಂದ ಮುಕ್ತಿ
ಕಪ್ಪು ಕಲೆಗಳಿಂದ ನಿಮಗೆ ಮುಖ ತೋರಿಸಲು ಅಸಹ್ಯವಾಗುತ್ತಿದ್ದರೆ ತೆಂಗಿನಕಾಯಿ ನೀರನ್ನು ಬಳಸಿಕೊಂಡು ಕೆಲವು ದಿನದಲ್ಲೇ ಇದರ ಫಲಿತಾಂಶವನ್ನು ನೋಡಿ. ನಿಮ್ಮ ತ್ವಚೆಯು ಅಲರ್ಜಿಯನ್ನು ಹೊಂದಿದ್ದರೆ ತೆಂಗಿನಕಾಯಿ ನೀರಿಗೆ ಸ್ವಲ್ಪ ಅರಿಶಿನ ಹಾಕಿ ಮುಖ ತೊಳೆಯಿರಿ.
ನೆರಿಗೆ ಮಾಯ
ಒಂದು ಲೋಟ ಎಳೆ ನೀರಿಗೆ, ಒಂದು ಚಮಚ ಜೇನುತುಪ್ಪ ಹಾಕಿ. ಇದನ್ನು ಸರಿಯಾಗಿ ಕಲಸಿಕೊಳ್ಳಿ ಮತ್ತು ಫೇಸ್ ಪ್ಯಾಕ್ ಆಗಿ ಬಳಸಿಕೊಳ್ಳಿ. ಇದರಿಂದ ಮುಖದ ಮೇಲಿನ ನೆರಿಗೆಗಳು ಮಾಯವಾಗುವುದು. ಇದನ್ನು ನಿಯಮಿತವಾಗಿ ಬಳಸಿಕೊಂಡರೆ ನೆರಿಗೆಗಳು ಮುಖದಿಂದ ಮಾಯವಾಗಿ ತ್ವಚೆಯು ಹೊಳಪನ್ನು ಪಡೆಯುವುದು.
ಕಂದುಬಣ್ಣ ನಿವಾರಣೆ
ಬೇಸಿಗೆಯಲ್ಲಿ ಪ್ರತಿಯೊಬ್ಬರು ಎದುರಿಸುವಂತಹ ಸಾಮಾನ್ಯ ಸಮಸ್ಯೆಯೆಂದರೆ ಮುಖದ ಮೇಲೆ ಕಂದುಬಣ್ಣ ಮೂಡುವುದು. ನಿಂಬೆರಸ ಮತ್ತು ತೆಂಗಿನಕಾಯಿ ನೀರನ್ನು ಜತೆಯಾಗಿಸಿ ಬಳಸಿದರೆ ಮುಖದ ಮೇಲಿನ ಕಂದುಕಲೆಗಳು ಮಾಯವಾಗುವುದು. ಈ ಎರಡು ಸಾಮಗ್ರಿಗಳಲ್ಲಿ ಬ್ಲೀಚಿಂಗ್ ಸಾಮರ್ಥ್ಯವಿದೆ. ಇದು ಕಂದು ಕಲೆಗಳನ್ನು ನಿವಾರಿಸುವುದು.



Click it and Unblock the Notifications














