Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಬೇಸಿಗೆಯಲ್ಲಿ ತ್ವಚೆಯ ಸಮಸ್ಯೆಗೆ, ಎಳೆ ನೀರಿನ ಆರೈಕೆ!
ಉರಿ ಬಿಸಿಲು, ಅದರ ಮಧ್ಯೆ ಧೂಳು, ಎಲ್ಲವೂ ಸೇರಿ ಮುಖದ ಅಂದವನ್ನೇ ಕೆಡಿಸಿದೆ. ಒಂದು ಐದು ನಿಮಿಷ ಬಿಸಿನಲ್ಲಿ ನಿಂತರೂ ಧಾರಾಕಾರವಾಗಿ ಬೆವರು ಸುರಿಯಲು ಆರಂಭವಾಗುತ್ತದೆ. ಮುಖದಿಂದ ಸುರಿಯುತ್ತಿರುವ ಬೆವರನ್ನು ದೂರ ಮಾಡಲು ನಾವು ದಿನದಲ್ಲಿ ಹಲವಾರು ಬಾರಿ ನೀರಿನಿಂದ ಮುಖ ತೊಳೆದುಕೊಳ್ಳುತ್ತೇವೆ. ನೀರಿನಿಂದ ಮುಖ ತೊಳೆದುಕೊಂಡರೆ ಮೊಡವೆಗಳು ಬರುವುದು ತಪ್ಪುವುದು, ಮಾತ್ರವಲ್ಲದೆ ಮುಖಕ್ಕೆ ಪುನರ್ಜೀವನ ನೀಡಿದಂತಾಗುವುದು.

ಆದರೆ ಸೌಂದರ್ಯ ತಜ್ಞರ ಪ್ರಕಾರ ಬೇಸಿಗೆಯಲ್ಲಿ ಬೆವರಿನ ತ್ವಚೆ, ಮೊಡವೆ ಹಾಗೂ ಕಲೆಗಳಿಂದ ದೂರ ಉಳಿಯಬೇಕೆಂದರೆ ನಾವು ಎಳೆ ನೀರಿನಿಂದ ಮುಖ ತೊಳೆಯಬೇಕಂತೆ. ಬೇಸಿಗೆಯಲ್ಲಿ ನೀವು ಸಮುದ್ರ ತೀರಕ್ಕೆ ತಿರುಗಾಡಲು ಹೋಗುತ್ತಿದ್ದೀರಿ ಎಂದಾದರೆ ಆಗ ಖಂಡಿತವಾಗಿಯೂ ನೀವು ಎಳೆ ನೀರಿನಿಂದ ಮುಖ ತೊಳೆಯಿರಿ. ಯಾಕೆಂದರೆ ಸೂರ್ಯನ ತಾಪ, ಮರಳಿನ ಬಿಸಿ ಮತ್ತು ಬಿಸಿ ಗಾಳಿ ನಿಮ್ಮ ಮುಖದ ಮೇಲೆ ಕಲೆಗಳನ್ನು ಉಂಟು ಮಾಡಬಹುದು. ಇದನ್ನು ಹೋಗಲಾಡಿಬೇಕಾದರೆ ನೀವು ತೆಂಗಿನಕಾಯಿ ನೀರಿನಿಂದ ಮುಖ ತೊಳೆದು ಆರಾಮವಾಗಿರಿ.
ಕಲೆಗಳನ್ನು ನಿವಾರಿಸುವುದು
ಮುಖದ ಮೇಲೆ ಕಲೆಗಳು ಕಾಣಿಸುತ್ತಿದ್ದರೆ ಆಗ ಎಳೆ ನೀರಿನಿಂದ ಮುಖವನ್ನು ತೊಳೆಯಿರಿ. ಕಲೆಗಳನ್ನು ನಿವಾರಿಸುವ ಗುಣಗಳು ತೆಂಗಿನಕಾಯಿ ನೀರಿನಲ್ಲಿದೆ. ಇದರಲ್ಲಿರುವ ಆ್ಯಸಿಡ್ ಅಂಶಗಳು ಕಲೆಗಳನ್ನು ನಿವಾರಿಸುವುದು ಮತ್ತು ಚರ್ಮವು ಹೊಳಪು ಪಡೆಯಲು ನೆರವಾಗುವುದು.
ಮೊಡವೆಗಳ ನಿವಾರಣೆ
ಕಪ್ಪು ಕಲೆಗಳಿಂದ ಮುಕ್ತಿ
ಕಪ್ಪು ಕಲೆಗಳಿಂದ ನಿಮಗೆ ಮುಖ ತೋರಿಸಲು ಅಸಹ್ಯವಾಗುತ್ತಿದ್ದರೆ ತೆಂಗಿನಕಾಯಿ ನೀರನ್ನು ಬಳಸಿಕೊಂಡು ಕೆಲವು ದಿನದಲ್ಲೇ ಇದರ ಫಲಿತಾಂಶವನ್ನು ನೋಡಿ. ನಿಮ್ಮ ತ್ವಚೆಯು ಅಲರ್ಜಿಯನ್ನು ಹೊಂದಿದ್ದರೆ ತೆಂಗಿನಕಾಯಿ ನೀರಿಗೆ ಸ್ವಲ್ಪ ಅರಿಶಿನ ಹಾಕಿ ಮುಖ ತೊಳೆಯಿರಿ.
ನೆರಿಗೆ ಮಾಯ
ಒಂದು ಲೋಟ ಎಳೆ ನೀರಿಗೆ, ಒಂದು ಚಮಚ ಜೇನುತುಪ್ಪ ಹಾಕಿ. ಇದನ್ನು ಸರಿಯಾಗಿ ಕಲಸಿಕೊಳ್ಳಿ ಮತ್ತು ಫೇಸ್ ಪ್ಯಾಕ್ ಆಗಿ ಬಳಸಿಕೊಳ್ಳಿ. ಇದರಿಂದ ಮುಖದ ಮೇಲಿನ ನೆರಿಗೆಗಳು ಮಾಯವಾಗುವುದು. ಇದನ್ನು ನಿಯಮಿತವಾಗಿ ಬಳಸಿಕೊಂಡರೆ ನೆರಿಗೆಗಳು ಮುಖದಿಂದ ಮಾಯವಾಗಿ ತ್ವಚೆಯು ಹೊಳಪನ್ನು ಪಡೆಯುವುದು.
ಕಂದುಬಣ್ಣ ನಿವಾರಣೆ
ಬೇಸಿಗೆಯಲ್ಲಿ ಪ್ರತಿಯೊಬ್ಬರು ಎದುರಿಸುವಂತಹ ಸಾಮಾನ್ಯ ಸಮಸ್ಯೆಯೆಂದರೆ ಮುಖದ ಮೇಲೆ ಕಂದುಬಣ್ಣ ಮೂಡುವುದು. ನಿಂಬೆರಸ ಮತ್ತು ತೆಂಗಿನಕಾಯಿ ನೀರನ್ನು ಜತೆಯಾಗಿಸಿ ಬಳಸಿದರೆ ಮುಖದ ಮೇಲಿನ ಕಂದುಕಲೆಗಳು ಮಾಯವಾಗುವುದು. ಈ ಎರಡು ಸಾಮಗ್ರಿಗಳಲ್ಲಿ ಬ್ಲೀಚಿಂಗ್ ಸಾಮರ್ಥ್ಯವಿದೆ. ಇದು ಕಂದು ಕಲೆಗಳನ್ನು ನಿವಾರಿಸುವುದು.



Click it and Unblock the Notifications


