Latest Updates
-
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ?
ಬೇಸಿಗೆಯಲ್ಲಿ ತ್ವಚೆಯ ಸಮಸ್ಯೆಗೆ, ಎಳೆ ನೀರಿನ ಆರೈಕೆ!
ಉರಿ ಬಿಸಿಲು, ಅದರ ಮಧ್ಯೆ ಧೂಳು, ಎಲ್ಲವೂ ಸೇರಿ ಮುಖದ ಅಂದವನ್ನೇ ಕೆಡಿಸಿದೆ. ಒಂದು ಐದು ನಿಮಿಷ ಬಿಸಿನಲ್ಲಿ ನಿಂತರೂ ಧಾರಾಕಾರವಾಗಿ ಬೆವರು ಸುರಿಯಲು ಆರಂಭವಾಗುತ್ತದೆ. ಮುಖದಿಂದ ಸುರಿಯುತ್ತಿರುವ ಬೆವರನ್ನು ದೂರ ಮಾಡಲು ನಾವು ದಿನದಲ್ಲಿ ಹಲವಾರು ಬಾರಿ ನೀರಿನಿಂದ ಮುಖ ತೊಳೆದುಕೊಳ್ಳುತ್ತೇವೆ. ನೀರಿನಿಂದ ಮುಖ ತೊಳೆದುಕೊಂಡರೆ ಮೊಡವೆಗಳು ಬರುವುದು ತಪ್ಪುವುದು, ಮಾತ್ರವಲ್ಲದೆ ಮುಖಕ್ಕೆ ಪುನರ್ಜೀವನ ನೀಡಿದಂತಾಗುವುದು.

ಆದರೆ ಸೌಂದರ್ಯ ತಜ್ಞರ ಪ್ರಕಾರ ಬೇಸಿಗೆಯಲ್ಲಿ ಬೆವರಿನ ತ್ವಚೆ, ಮೊಡವೆ ಹಾಗೂ ಕಲೆಗಳಿಂದ ದೂರ ಉಳಿಯಬೇಕೆಂದರೆ ನಾವು ಎಳೆ ನೀರಿನಿಂದ ಮುಖ ತೊಳೆಯಬೇಕಂತೆ. ಬೇಸಿಗೆಯಲ್ಲಿ ನೀವು ಸಮುದ್ರ ತೀರಕ್ಕೆ ತಿರುಗಾಡಲು ಹೋಗುತ್ತಿದ್ದೀರಿ ಎಂದಾದರೆ ಆಗ ಖಂಡಿತವಾಗಿಯೂ ನೀವು ಎಳೆ ನೀರಿನಿಂದ ಮುಖ ತೊಳೆಯಿರಿ. ಯಾಕೆಂದರೆ ಸೂರ್ಯನ ತಾಪ, ಮರಳಿನ ಬಿಸಿ ಮತ್ತು ಬಿಸಿ ಗಾಳಿ ನಿಮ್ಮ ಮುಖದ ಮೇಲೆ ಕಲೆಗಳನ್ನು ಉಂಟು ಮಾಡಬಹುದು. ಇದನ್ನು ಹೋಗಲಾಡಿಬೇಕಾದರೆ ನೀವು ತೆಂಗಿನಕಾಯಿ ನೀರಿನಿಂದ ಮುಖ ತೊಳೆದು ಆರಾಮವಾಗಿರಿ.
ಕಲೆಗಳನ್ನು ನಿವಾರಿಸುವುದು
ಮುಖದ ಮೇಲೆ ಕಲೆಗಳು ಕಾಣಿಸುತ್ತಿದ್ದರೆ ಆಗ ಎಳೆ ನೀರಿನಿಂದ ಮುಖವನ್ನು ತೊಳೆಯಿರಿ. ಕಲೆಗಳನ್ನು ನಿವಾರಿಸುವ ಗುಣಗಳು ತೆಂಗಿನಕಾಯಿ ನೀರಿನಲ್ಲಿದೆ. ಇದರಲ್ಲಿರುವ ಆ್ಯಸಿಡ್ ಅಂಶಗಳು ಕಲೆಗಳನ್ನು ನಿವಾರಿಸುವುದು ಮತ್ತು ಚರ್ಮವು ಹೊಳಪು ಪಡೆಯಲು ನೆರವಾಗುವುದು.
ಮೊಡವೆಗಳ ನಿವಾರಣೆ
ಕಪ್ಪು ಕಲೆಗಳಿಂದ ಮುಕ್ತಿ
ಕಪ್ಪು ಕಲೆಗಳಿಂದ ನಿಮಗೆ ಮುಖ ತೋರಿಸಲು ಅಸಹ್ಯವಾಗುತ್ತಿದ್ದರೆ ತೆಂಗಿನಕಾಯಿ ನೀರನ್ನು ಬಳಸಿಕೊಂಡು ಕೆಲವು ದಿನದಲ್ಲೇ ಇದರ ಫಲಿತಾಂಶವನ್ನು ನೋಡಿ. ನಿಮ್ಮ ತ್ವಚೆಯು ಅಲರ್ಜಿಯನ್ನು ಹೊಂದಿದ್ದರೆ ತೆಂಗಿನಕಾಯಿ ನೀರಿಗೆ ಸ್ವಲ್ಪ ಅರಿಶಿನ ಹಾಕಿ ಮುಖ ತೊಳೆಯಿರಿ.
ನೆರಿಗೆ ಮಾಯ
ಒಂದು ಲೋಟ ಎಳೆ ನೀರಿಗೆ, ಒಂದು ಚಮಚ ಜೇನುತುಪ್ಪ ಹಾಕಿ. ಇದನ್ನು ಸರಿಯಾಗಿ ಕಲಸಿಕೊಳ್ಳಿ ಮತ್ತು ಫೇಸ್ ಪ್ಯಾಕ್ ಆಗಿ ಬಳಸಿಕೊಳ್ಳಿ. ಇದರಿಂದ ಮುಖದ ಮೇಲಿನ ನೆರಿಗೆಗಳು ಮಾಯವಾಗುವುದು. ಇದನ್ನು ನಿಯಮಿತವಾಗಿ ಬಳಸಿಕೊಂಡರೆ ನೆರಿಗೆಗಳು ಮುಖದಿಂದ ಮಾಯವಾಗಿ ತ್ವಚೆಯು ಹೊಳಪನ್ನು ಪಡೆಯುವುದು.
ಕಂದುಬಣ್ಣ ನಿವಾರಣೆ
ಬೇಸಿಗೆಯಲ್ಲಿ ಪ್ರತಿಯೊಬ್ಬರು ಎದುರಿಸುವಂತಹ ಸಾಮಾನ್ಯ ಸಮಸ್ಯೆಯೆಂದರೆ ಮುಖದ ಮೇಲೆ ಕಂದುಬಣ್ಣ ಮೂಡುವುದು. ನಿಂಬೆರಸ ಮತ್ತು ತೆಂಗಿನಕಾಯಿ ನೀರನ್ನು ಜತೆಯಾಗಿಸಿ ಬಳಸಿದರೆ ಮುಖದ ಮೇಲಿನ ಕಂದುಕಲೆಗಳು ಮಾಯವಾಗುವುದು. ಈ ಎರಡು ಸಾಮಗ್ರಿಗಳಲ್ಲಿ ಬ್ಲೀಚಿಂಗ್ ಸಾಮರ್ಥ್ಯವಿದೆ. ಇದು ಕಂದು ಕಲೆಗಳನ್ನು ನಿವಾರಿಸುವುದು.



Click it and Unblock the Notifications


