Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಬೇಸಿಗೆಯಲ್ಲಿ ತ್ವಚೆಯ ಸಮಸ್ಯೆಗೆ, ಎಳೆ ನೀರಿನ ಆರೈಕೆ!
ಉರಿ ಬಿಸಿಲು, ಅದರ ಮಧ್ಯೆ ಧೂಳು, ಎಲ್ಲವೂ ಸೇರಿ ಮುಖದ ಅಂದವನ್ನೇ ಕೆಡಿಸಿದೆ. ಒಂದು ಐದು ನಿಮಿಷ ಬಿಸಿನಲ್ಲಿ ನಿಂತರೂ ಧಾರಾಕಾರವಾಗಿ ಬೆವರು ಸುರಿಯಲು ಆರಂಭವಾಗುತ್ತದೆ. ಮುಖದಿಂದ ಸುರಿಯುತ್ತಿರುವ ಬೆವರನ್ನು ದೂರ ಮಾಡಲು ನಾವು ದಿನದಲ್ಲಿ ಹಲವಾರು ಬಾರಿ ನೀರಿನಿಂದ ಮುಖ ತೊಳೆದುಕೊಳ್ಳುತ್ತೇವೆ. ನೀರಿನಿಂದ ಮುಖ ತೊಳೆದುಕೊಂಡರೆ ಮೊಡವೆಗಳು ಬರುವುದು ತಪ್ಪುವುದು, ಮಾತ್ರವಲ್ಲದೆ ಮುಖಕ್ಕೆ ಪುನರ್ಜೀವನ ನೀಡಿದಂತಾಗುವುದು.

ಆದರೆ ಸೌಂದರ್ಯ ತಜ್ಞರ ಪ್ರಕಾರ ಬೇಸಿಗೆಯಲ್ಲಿ ಬೆವರಿನ ತ್ವಚೆ, ಮೊಡವೆ ಹಾಗೂ ಕಲೆಗಳಿಂದ ದೂರ ಉಳಿಯಬೇಕೆಂದರೆ ನಾವು ಎಳೆ ನೀರಿನಿಂದ ಮುಖ ತೊಳೆಯಬೇಕಂತೆ. ಬೇಸಿಗೆಯಲ್ಲಿ ನೀವು ಸಮುದ್ರ ತೀರಕ್ಕೆ ತಿರುಗಾಡಲು ಹೋಗುತ್ತಿದ್ದೀರಿ ಎಂದಾದರೆ ಆಗ ಖಂಡಿತವಾಗಿಯೂ ನೀವು ಎಳೆ ನೀರಿನಿಂದ ಮುಖ ತೊಳೆಯಿರಿ. ಯಾಕೆಂದರೆ ಸೂರ್ಯನ ತಾಪ, ಮರಳಿನ ಬಿಸಿ ಮತ್ತು ಬಿಸಿ ಗಾಳಿ ನಿಮ್ಮ ಮುಖದ ಮೇಲೆ ಕಲೆಗಳನ್ನು ಉಂಟು ಮಾಡಬಹುದು. ಇದನ್ನು ಹೋಗಲಾಡಿಬೇಕಾದರೆ ನೀವು ತೆಂಗಿನಕಾಯಿ ನೀರಿನಿಂದ ಮುಖ ತೊಳೆದು ಆರಾಮವಾಗಿರಿ.
ಕಲೆಗಳನ್ನು ನಿವಾರಿಸುವುದು
ಮುಖದ ಮೇಲೆ ಕಲೆಗಳು ಕಾಣಿಸುತ್ತಿದ್ದರೆ ಆಗ ಎಳೆ ನೀರಿನಿಂದ ಮುಖವನ್ನು ತೊಳೆಯಿರಿ. ಕಲೆಗಳನ್ನು ನಿವಾರಿಸುವ ಗುಣಗಳು ತೆಂಗಿನಕಾಯಿ ನೀರಿನಲ್ಲಿದೆ. ಇದರಲ್ಲಿರುವ ಆ್ಯಸಿಡ್ ಅಂಶಗಳು ಕಲೆಗಳನ್ನು ನಿವಾರಿಸುವುದು ಮತ್ತು ಚರ್ಮವು ಹೊಳಪು ಪಡೆಯಲು ನೆರವಾಗುವುದು.
ಮೊಡವೆಗಳ ನಿವಾರಣೆ
ಕಪ್ಪು ಕಲೆಗಳಿಂದ ಮುಕ್ತಿ
ಕಪ್ಪು ಕಲೆಗಳಿಂದ ನಿಮಗೆ ಮುಖ ತೋರಿಸಲು ಅಸಹ್ಯವಾಗುತ್ತಿದ್ದರೆ ತೆಂಗಿನಕಾಯಿ ನೀರನ್ನು ಬಳಸಿಕೊಂಡು ಕೆಲವು ದಿನದಲ್ಲೇ ಇದರ ಫಲಿತಾಂಶವನ್ನು ನೋಡಿ. ನಿಮ್ಮ ತ್ವಚೆಯು ಅಲರ್ಜಿಯನ್ನು ಹೊಂದಿದ್ದರೆ ತೆಂಗಿನಕಾಯಿ ನೀರಿಗೆ ಸ್ವಲ್ಪ ಅರಿಶಿನ ಹಾಕಿ ಮುಖ ತೊಳೆಯಿರಿ.
ನೆರಿಗೆ ಮಾಯ
ಒಂದು ಲೋಟ ಎಳೆ ನೀರಿಗೆ, ಒಂದು ಚಮಚ ಜೇನುತುಪ್ಪ ಹಾಕಿ. ಇದನ್ನು ಸರಿಯಾಗಿ ಕಲಸಿಕೊಳ್ಳಿ ಮತ್ತು ಫೇಸ್ ಪ್ಯಾಕ್ ಆಗಿ ಬಳಸಿಕೊಳ್ಳಿ. ಇದರಿಂದ ಮುಖದ ಮೇಲಿನ ನೆರಿಗೆಗಳು ಮಾಯವಾಗುವುದು. ಇದನ್ನು ನಿಯಮಿತವಾಗಿ ಬಳಸಿಕೊಂಡರೆ ನೆರಿಗೆಗಳು ಮುಖದಿಂದ ಮಾಯವಾಗಿ ತ್ವಚೆಯು ಹೊಳಪನ್ನು ಪಡೆಯುವುದು.
ಕಂದುಬಣ್ಣ ನಿವಾರಣೆ
ಬೇಸಿಗೆಯಲ್ಲಿ ಪ್ರತಿಯೊಬ್ಬರು ಎದುರಿಸುವಂತಹ ಸಾಮಾನ್ಯ ಸಮಸ್ಯೆಯೆಂದರೆ ಮುಖದ ಮೇಲೆ ಕಂದುಬಣ್ಣ ಮೂಡುವುದು. ನಿಂಬೆರಸ ಮತ್ತು ತೆಂಗಿನಕಾಯಿ ನೀರನ್ನು ಜತೆಯಾಗಿಸಿ ಬಳಸಿದರೆ ಮುಖದ ಮೇಲಿನ ಕಂದುಕಲೆಗಳು ಮಾಯವಾಗುವುದು. ಈ ಎರಡು ಸಾಮಗ್ರಿಗಳಲ್ಲಿ ಬ್ಲೀಚಿಂಗ್ ಸಾಮರ್ಥ್ಯವಿದೆ. ಇದು ಕಂದು ಕಲೆಗಳನ್ನು ನಿವಾರಿಸುವುದು.



Click it and Unblock the Notifications














