Just In
- 47 min ago ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- 1 hr ago ಚಪಾತಿ, ಅನ್ನಕ್ಕೆ ಟೊಮೆಟೋ ಬೇಳೆ ಸಾರು ಸಖತ್ ರುಚಿ..! ಮಾಡೋದು ಸುಲಭ..!
- 2 hrs ago ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- 5 hrs ago ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
Don't Miss
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Sports IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಶತಕ; ರೋಹಿತ್, ಕೊಹ್ಲಿಗೆ ಕ್ರೆಡಿಟ್ ನೀಡಿದ ಯಶಸ್ವಿ ಜೈಸ್ವಾಲ್!
- Technology Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- News ದಲಿತರ ಅಭಿವೃದ್ಧಿಯನ್ನು ಬಿಜೆಪಿ ಮಾಡಿಲ್ಲ; ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಂಯುಕ್ತ ಪಾಟೀಲ್
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Movies Sathya : ತಾಜ್ ಮಹಲ್ ಎದುರು ನಿಂತ ಸತ್ಯಾ, ಪತಿ ಜೊತೆ ಗೌತಮಿ ಪ್ರವಾಸ...!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಣ್ಣೆ ಹಣ್ಣಿನಲ್ಲಿ ಅಡಗಿದೆ-ಬೆಣ್ಣೆಯಂತಹ ಸೌಂದರ್ಯ!
ಅವಕಾಡೊ ಅಥವಾ ಬೆಣ್ಣೆ ಹಣ್ಣು ತ್ವಚೆಯ ತೇವಾಂಶವನ್ನು ಹೆಚ್ಚಿಸುವಲ್ಲಿ ಹೆಸರುವಾಸಿ. ಇದು ಚರ್ಮದ ನೈಸರ್ಗಿಕ ಸಮತೋಲನತೆಯನ್ನು ಕಾಪಾಡುವಲ್ಲಿ ಸಹಾಯಕಾರಿಯಾಗಿದೆ.
ಬೆಣ್ಣೆಹಣ್ಣು ಅತಿ ಹೆಚ್ಚಿನ ಪೋಷಕಾಂಶವುಳ್ಳ ಹಣ್ಣಾಗಿದ್ದು ಇದರ ಸೇವನೆಯಿಂದ ಹತ್ತು ಹಲವು ರೀತಿಯಲ್ಲಿ ಆರೋಗ್ಯ ಉತ್ತಮಗೊಳ್ಳುತ್ತದೆ. ಇದರಲ್ಲಿ ಆರೋಗ್ಯದ ಜೊತೆಗೇ ತ್ವಚೆಗೂ ಹಲವಾರು ಪ್ರಯೋಜನಗಳಿವೆ. ಈ ಹಣ್ಣಿನ ತಿರುಳನ್ನು ಮುಖಕ್ಕೆ ಹಚ್ಚಿಕೊಳ್ಳುವ ಮೂಲಕವೂ ಥಟ್ಟನೇ ಮುಖದ ಕಾಂತಿಯನ್ನು ಹೆಚ್ಚಿಸಬಹುದೆಂಬುದು ಮಾತ್ರ ನಿಮಗೆ ತಿಳಿದಿತ್ತೇ?
ಹೌದು ಬೆಣ್ಣೆಹಣ್ಣಿನಲ್ಲಿ ಕೊಬ್ಬಿನ ಆಮ್ಲಗಳು ಹೇರಳವಾಗಿದ್ದು ಇವು ಚರ್ಮದ ಸೂಕ್ಷ್ಮರಂಧ್ರದೊಳಕ್ಕಿಳಿದು ಆರ್ದ್ರತೆ ನೀಡುವ ಮೂಲಕ ಚರ್ಮದ ಕಾಂತಿ ಹೆಚ್ಚಿಸುತ್ತವೆ. ಅಲ್ಲದೇ ಇತರ ಮುಖಲೇಪಗಳಂತೆ ಇದು ಚರ್ಮಕ್ಕೆ ಉರಿಯನ್ನೂ ತರುವುದಿಲ್ಲ, ಬದಲಿಗೆ ತಣ್ಣನೆಯ ಮತ್ತು ಆರಾಮದಾಯಕ ಅನುಭವ ನೀಡುತ್ತದೆ. ಬೆಣ್ಣೆ ಹಣ್ಣು ತಿನ್ನಿ, ವೈದ್ಯರಿಂದ ದೂರವಿರಿ!
ವಿಶೇಷವಾಗಿ ಸೂಕ್ಷ್ಮ ಚರ್ಮದವರಿಗೂ ಇದು ಸುರಕ್ಷಿತವಾಗಿದ್ದು ಯಾವುದೇ ಅಡ್ಡಪರಿಣಾಮವನ್ನು ಹೊಂದಿಲ್ಲವಾದ ಕಾರಣ ಎಲ್ಲಾ ವಿಧದ ಚರ್ಮದವರು ಬಳಸಲು ಯೋಗ್ಯವಾಗಿದೆ. ಬನ್ನಿ, ಚರ್ಮತಜ್ಞರು ಈ ಹಣ್ಣನ್ನು ಹೇಗೆ ಬಳಸಬಹುದು ಎಂದು ಹೇಳಿರುವ ಮಾಹಿತಿಯನ್ನು ನೋಡೋಣ:
ಸಾಮಾನ್ಯ
ತ್ವಚೆಗಾಗಿ
*
ಒಂದುವರೆ
ಕಪ್
ಬೆಣ್ಣೆಹಣ್ಣಿನ
ತಿರುಳು
ಮತ್ತು
ಕಾಲು
ಕಪ್
ಗಟ್ಟಿಮೊಸರನ್ನು
ಬೆರೆಸಿ
ಈಗತಾನೇ
ತೊಳೆದುಕೊಂಡ
ಮುಖಕ್ಕೆ
ದಪ್ಪನಾಗಿ
ಹಚ್ಚಿ.
ಸುಮಾರು
ಇಪ್ಪತ್ತು
ನಿಮಿಷ
ಬಿಟ್ಟು
ಉಗುರುಬೆಚ್ಚನೆಯ
ನೀರಿನಿಂದ
ತೊಳೆದುಕೊಳ್ಳಿ.
*ಇದರ
ಸತ್ತ
ಜೀವಕೋಶಗಳನ್ನು
ನಿವಾರಿಸುವ
ಗುಣ
ಚರ್ಮದ
ಹೊರಪದರಲ್ಲಿ
ಅಂಟಿಕೊಂಡಿದ್ದ
ಪದರವನ್ನು
ನಿವಾರಿಸುತ್ತದೆ.
*ಮೊಸರಿನ
ಲ್ಯಾಕ್ಟಿಕ್
ಆಮ್ಲ
ಮತ್ತು
ಬೆಣ್ಣೆಹಣ್ಣಿನ
ವಿಟಮಿನ್
ಬಿ
ಯ
ಜೋಡಿ
ಚರ್ಮಕ್ಕೆ
ಅಗತ್ಯ
ಪೋಷಕಾಂಶಗಳನ್ನು
ಒದಗಿಸಿ
ಆರ್ದ್ರತೆ
ನೀಡುವ
ಮೂಲಕ
ಚರ್ಮಕ್ಕೆ
ತಕ್ಷಣವೇ
ಸಹಜವರ್ಣ
ಮತ್ತು
ಕಾಂತಿಯನ್ನು
ಪಡೆಯಲು
ನೆರವಾಗುತ್ತವೆ.
ಕಿತ್ತಳೆ
ಹಾಗೂ
ಬೆಣ್ಣೆ
ಹಣ್ಣಿನಲ್ಲಿದೆ,
ಬೆಣ್ಣೆಯಂತಹ
ಸೌಂದರ್ಯ!
ಸಾಮಾನ್ಯದಿಂದ
ಎಣ್ಣೆಪಸೆ
ಇರುವ
ತ್ವಚೆಗಾಗಿ
*ಎಣ್ಣೆ
ಪಸೆ
ಮತ್ತು
ಚರ್ಮದ
ಆಳದಲ್ಲಿರುವ
ಎಣ್ಣೆ
ಜಿಡ್ಡು
ಮೊಡವೆಗಳಿಗೆ
ಮೂಲವಾಗಿದೆ.
ಈ
ಚರ್ಮದವರಿಗಾಗಿ
ಲೋಳೆಸರ
ಮತ್ತು
ಕೊಬ್ಬರಿ
ಎಣ್ಣೆಯ
ಜೊತೆಯೂ
ಅಗತ್ಯ.
ಅರ್ಧ
ಬೆಣ್ಣೆಹಣ್ಣಿನ
ತಿರುಳನ್ನು
ಚೆನ್ನಾಗಿ
ಗೊಟಾಯಿಸಿ
ಇದಕ್ಕೆ
ಒಂದು
ದೊಡ್ಡ
ಚಮಚ
ಕೊಬ್ಬರಿ
ಎಣ್ಣೆ
ಮತ್ತು
ಒಂದು
ಚಿಕ್ಕ
ಚಮಚ
ಲೋಳೆಸರದ
ರಸವನ್ನು
ಬೆರೆಸಿ
ಚೆನ್ನಾಗಿ
ಮಿಶ್ರಣ
ಮಾಡಿ.
*ಈ
ಮಿಶ್ರಣವನ್ನು
ಈಗತಾನೇ
ತೊಳೆದುಕೊಂಡ
ಮುಖಕ್ಕೆ
ದಪ್ಪನಾಗಿ
ಹೆಚ್ಚಿ.
ಮೊಡವೆಗಳಿರುವಲ್ಲಿ
ಅಥವಾ
ಮೊಡವೆ
ಮೂಡುತ್ತಿರುವ
ಸ್ಥಳಗಳಲ್ಲಿ
ಹೆಚ್ಚು
ದಪ್ಪನಾಗಿ
ಹಚ್ಚಿ.
*ಸುಮಾರು
ಹತ್ತರಿಂದ
ಹದಿನೈದು
ನಿಮಿಷ
ಬಿಟ್ಟು
ಉಗುರುಬೆಚ್ಚನೆಯ
ನೀರಿನಿಂದ
ತೊಳೆದುಕೊಂಡು
ದಪ್ಪನೆಯ
ಟವೆಲ್
ಉಪಯೋಗಿಸಿ
ಒತ್ತಿ
ಒಣಗಿಸಿ.
ಒರೆಸಲು
ಹೋಗಬೇಡಿ,
ಇದರಿಂದ
ಮೊಡವೆಗಳ
ಮೇಲಿನ
ಚರ್ಮ
ಕಿತ್ತು
ಬರಬಹುದು.