Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ವಾಹ್ ! ಮುಪ್ಪಿನ ನೆರಿಗೆಗಳನ್ನು ನಿವಾರಿಸುವ ಅದ್ಭುತ ಮನೆಮದ್ದುಗಳು
Skin Care
oi-Staff
By Super
ಒಂದು ವೇಳೆ ನಿಮ್ಮ ಚರ್ಮ ಎಣ್ಣೆಯುಕ್ತವಾಗಿದ್ದರೆ ಸೂಕ್ತ ಮುಖಲೇಪದಿಂದ (ಫೇಸ್ಪ್ಯಾಕ್) ಈ ತೊಂದರೆಯನ್ನೂ ಹೋಗಲಾಡಿಸಬಹುದು. ಅಲ್ಲದೇ ಈ ಲೇಪಗಳು ಸುಲಭವಾಗಿ ದೊರಕುವಂತಹದ್ದೂ ಮತ್ತು ಕಡಿಮೆ ಬೆಲೆಯವೂ ಆಗಿರುವುದರಿಂದ ಎಲ್ಲರೂ ಅನುಸರಿಸಬಹುದಾಗಿದೆ. ಇಂತಹ ಕೆಲವು ಮುಖಲೇಪಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಆರೋಗ್ಯವಂತ ಕೇಶಕ್ಕಾಗಿ ಪರಿಪೂರ್ಣ ಹೇರ್ ಮಸಾಜ್ ಸಲಹೆಗಳು
ಜೇನು

ಇದುವರೆಗೆ ನೀವು ಯಾವುದೇ ಮುಖಲೇಪವನ್ನು ಪ್ರಯತ್ನಿಸದೇ ಇದ್ದಲ್ಲಿ ಜೇನುತುಪ್ಪದಿಂದ ಪ್ರಾರಂಭಿಸುವುದು ಉತ್ತಮ. ಚರ್ಮ ಇತ್ತೀಚೆಗೆ ನೆರಿಗೆ ಬೀಳಲು ಪ್ರಾರಂಭವಾಗಿದ್ದರೆ ಜೇನು ಉತ್ತಮ ಆರೈಕೆಯಾಗಿದೆ. ಇದಕ್ಕಾಗಿ ಮುಖವನ್ನು ಚೆನ್ನಾಗಿ ಮೃದುವಾದ ಸೋಪಿನಿಂದ ತೊಳೆದುಕೊಂಡು ಸ್ವಚ್ಛವಾದ ಬಟ್ಟೆಯಿಂದ ಒರೆಸಿಕೊಳ್ಳಿ. ಬಳಿಕ ಜೇನುತುಪ್ಪದ ಕೆಲವು ಹನಿಗಳನ್ನು ಎರಡೂ ಹಸ್ತಗಳ ಮೇಲೆ ಸುರಿದು ಉಜ್ಜಿಕೊಂಡು ಮುಖಕ್ಕೆ ತೆಳುವಾಗಿ ಹಚ್ಚಿಕೊಳ್ಳಿ. ಹುಬ್ಬು, ಕಣ್ಣು ಮತ್ತು ಕೂದಲುಗಳಿಗೆ ಜೇನು ತಾಕದಂತೆ ಎಚ್ಚರವಹಿಸಿ. ಬಳಿಕ ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ (ಜೇನು ಒಣಗುವವರೆಗೆ) ಹಾಗೇ ಬಿಟ್ಟು ಮೊತ್ತೊಮ್ಮೆ ಕೇವಲ ನೀರಿನಿಂದ ತೊಳೆದುಕೊಳ್ಳಿ (ಸೋಪು ಹಚ್ಚಬಾರದು). ಈ ವಿಧಾನದಿಂದ ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ದೊರೆತು ತನ್ನ ಸಹಜ ಸೆಳೆತವನ್ನು ಪಡೆದುಕೊಳ್ಳುತ್ತದೆ ಹಾಗೂ ನೆರಿಗೆಗಳು ದೂರಾಗುತ್ತವೆ. ಜೊತೆಗೆ ಚರ್ಮದ ಸೂಕ್ಷ್ಮರಂಧ್ರಗಳಲ್ಲಿ ಕುಳಿತಿದ್ದ ಧೂಳು ಸೋಪಿನಿಂದಲೂ ಹೋಗದೇ ಇದ್ದದ್ದು ಈಗ ಸುಲಭವಾಗಿ ತೊಲಗುತ್ತದೆ. ಇದು ಒಣಚರ್ಮ ಮತ್ತು ಎಣ್ಣೆಚರ್ಮದವರೂ ಬಳಸಬಹುದು.
ಅಕ್ರೋಟು, ಬಾದಾಮಿ ಎಣ್ಣೆ ಮತ್ತು ಮೊಸರು
ಈ ಮೂರೂ ಸಾಮಾಗ್ರಿಗಳು ಚರ್ಮದ ಕಾಂತಿಯನ್ನು ಮರಳಿಸಲು ಮತ್ತು ನೆರಿಗೆಮುಕ್ತವಾಗಿಸಲು ಉತ್ತಮವಾಗಿವೆ. ಇದಕ್ಕಾಗಿ ಎರಡು ಅಕ್ರೋಟಿನ ತಿರುಳನ್ನು ನುಣ್ಣಗೆ ಕುಟ್ಟಿ ಪುಡಿಮಾಡಿ (ಮಿಕ್ಸಿ ಬಳಸಬೇಡಿ, ಇದರಿಂದ ಬಿಸಿಯಾಗಿ ಇದರ ಪೋಷಕಾಂಶಗಳು ಕಡಿಮೆಯಾಗುತ್ತವೆ) ಸಮಪ್ರಮಾಣದ ಮೊಸರಿನೊಂಗಿದೆ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಕೆಲವು ಬಾದಾಮಿ ಎಣ್ಣೆಯ ಹನಿಗಳನ್ನು ಸೇರಿಸಿ. (ಸುಮಾರು ಒಂದು ಚಮಚಕ್ಕೆ ಒಂದು ಹನಿಯ ಪ್ರಮಾಣದಲ್ಲಿ). ಈ ಲೇಪನವನ್ನು ರಾತ್ರಿ ಮಲಗುವ ಮುನ್ನ ದಪ್ಪನಾಗಿ ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. (ಸೋಪು ಬಳಸಬಾರದು). ಇದನ್ನು ಎಣ್ಣೆಚರ್ಮದವರೂ ಒಣಚರ್ಮದವರೂ ಸಮಾನವಾಗಿ ಬಳಸಬಹುದು. ವಾರಕ್ಕೆ ಮೂರರಿಂದ ನಾಲ್ಕು ಬಾರಿ ಈ ವಿಧಾನವನ್ನು ಪುನರಾವರ್ತಿಸಿ.
ಮೊಟ್ಟೆ
ನಾಟಿ ಮೊಟ್ಟೆಯ ಬಿಳಿಭಾಗವನ್ನು ಬೇರ್ಪಡಿಸಿ. ಮೊದಲು ನೀವು ಸಹಿಸುವಷ್ಟು ಬಿಸಿನೀರಿನಿಂದ ಮುಖವನ್ನು ನಾಲ್ಕೈದು ಬಾರಿ ತೊಳೆದುಕೊಳ್ಳಿ. ಇದರಿಂದ ಮುಖದ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ. ರಾತ್ರಿ ಮಲಗುವ ಮುನ್ನ ಮೊಟ್ಟೆಯ ಬಿಳಿಭಾಗವನ್ನು ತೆಳುವಾಗಿ ಲೇಪಿಸಿ ಹದಿನೈದು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದನ್ನು ಎಣ್ಣೆಚರ್ಮದವರೂ ಒಣಚರ್ಮದವರೂ ಸಮಾನವಾಗಿ ಬಳಸಬಹುದು. ವಾರಕ್ಕೆ ಮೂರರಿಂದ ನಾಲ್ಕು ಬಾರಿ ಈ ವಿಧಾನವನ್ನು ಪುನರಾವರ್ತಿಸಿ.
Comments
English summary



Click it and Unblock the Notifications


