Latest Updates
-
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ
ಕೈಗೆಟಕುವ ಬೆಲೆಯ ಫೇಸ್ ಪ್ಯಾಕ್-ಮಿಸ್ ಮಾಡದಿರಿ!
ಸೌಂದರ್ಯಪ್ರಜ್ಞೆ ಪುರುಷರಿಗಿಂತಲೂ ಮಹಿಳೆಯರಲ್ಲಿಯೇ ಹೆಚ್ಚು. ತಮ್ಮ ಮುಖದ ಚೆಲುವು ಹೆಚ್ಚಿಸಲಿಕ್ಕಾಗಿ ಜೀವನಪರ್ಯಂತ ವಿವಿಧ ಪ್ರಸಾಧನಗಳ ಮತ್ತು ಚರ್ಮದ ಆರೈಕೆಗಳ ವಿಧಾನಗಳನ್ನು ಪ್ರಯೋಗಿಸುತ್ತಾ ಬರುತ್ತಾರೆ. ಇದನ್ನೇ ಬಂಡವಾಳವಾಗಿಸಿಕೊಂಡು ಹಲವು ಸಂಸ್ಥೆಗಳು ದುಬಾರಿ ಬೆಲೆಯ ಪ್ರಸಾಧನಗಳನ್ನು ಮಾರುಕಟ್ಟೆಯಲ್ಲಿ ಮಾರುತ್ತಿವೆ.
ವಾಸ್ತವವಾಗಿ ಯಾವುದೇ ರೀತಿಯ ಪ್ರಯೋಜನ ಪಡೆಯಬೇಕಾದರೆ ಮೊದಲು ಚರ್ಮದ ಆರೋಗ್ಯ ಒಳಗಿನಿಂದ ಚೆನ್ನಾಗಿರಬೇಕು. ಆಗಲೇ ಹೊರಗಿನಿಂದಲೂ ಉತ್ತಮವಾದ ಕಾಂತಿ ಪಡೆಯಲು ಸಾಧ್ಯ. ಮಾರುಕಟ್ಟೆಯ ದುಬಾರಿ ಪ್ರಸಾಧನಗಳು ಚರ್ಮದ ಹೊರಗಿನಿಂದ ಆರೈಕೆ ಮಾಡಬಲ್ಲವೇ ಹೊರತು ಒಳಗಿನಿಂದಲ್ಲ. ಅದರಲ್ಲೂ ಒಂದು ವೇಳೆ ಯಾವುದಾದರೊಂದು ರಾಸಾಯನಿಕ ಅಲರ್ಜಿಕಾರಕವಾಗಿದ್ದರೆ ಚರ್ಮವನ್ನು ಪೋಷಿಸುವ ಬದಲು ಆ ಪ್ರಸಾಧನ ಚರ್ಮಕ್ಕೆ ಹಾನಿಯನ್ನೇ ಎಸಗಬಹುದು. ಸೌಂದರ್ಯ ರಹಸ್ಯ-ಕಡಿಮೆ ವೆಚ್ಚ ಅಧಿಕ ಲಾಭ!
ಈ ತೊಂದರೆ ಬಂದ ಬಳಿಕ ಪ್ರಸಾಧನ ಸಂಸ್ಥೆಯ ವಿರುದ್ಧ ಮೊಕದ್ದಮೆ ಹೂಡಿದರೆ ಅವು ನಿಮ್ಮ ಮೇಲೆಯೇ ತಿರುಗಿಬೀಳುವುದು ಖಂಡಿತ, ಏಕೆಂದರೆ ನಾವು ಓದಿಯೇ ಇರದ ಚಿಕ್ಕ ಅಕ್ಷರಗಳ ಪಟ್ಟಿಯಲ್ಲಿ ಇದರ ಪ್ರಯೋಗದಿಂದ ಹಾನಿಯಾದರೆ ನಾವು ಜವಾಬ್ದಾರರಲ್ಲ ಎಂಬರ್ಥದಲ್ಲಿ ಮಾಹಿತಿ ನೀಡಿರುತ್ತಾರೆ. ಈ ದ್ವಂದ್ವದಿಂದ ಪಾರಾಗಲು ನಿಸರ್ಗದತ್ತವಾಗಿ ದೊರೆಯುವ ಮನೆಮದ್ದಿನ ಮೊರೆ ಹೋಗುವುದೇ ಉತ್ತಮ ಏಕೆಂದರೆ ಇವುಗಳ ಪರಿಣಾಮ ಕೊಂಚ ತಡ ಎಂದೆನ್ನಿಸಿದರೂ ಇವುಗಳಲ್ಲಿ ಯಾವುದೇ ಅಡ್ಡಪರಿಣಾಮ ಅಥವಾ ಪರೋಕ್ಷ ಪರಿಣಾಮ ಇಲ್ಲದಿರುವುದರಿಂದ ಸುರಕ್ಷಿತವಾಗಿ ಬಳಸಬಹುದು. ಬನ್ನಿ ಅವು ಯಾವುದು ಎಂಬುದನ್ನು ನೋಡೋಣ..

ಖರ್ಬೂಜ ಜೇನು ಮತ್ತು ಲ್ಯಾವೆಂಡರ್ ಹೂವಿನ ಎಣ್ಣೆ
ಎಂಟು ಪ್ರಮಾಣದ ಖರ್ಬೂಜದ ತಿರುಳಿಗೆ ಒಂದು ಪ್ರಮಾಣದ ಲ್ಯಾವೆಂಡರ್ ಹೂವಿನ ಎಣ್ಣೆ ಮತ್ತು ಒಂದು ಪ್ರಮಾಣದ ಜೇನು ಸೇರಿಸಿ ಲೇಪನ ತಯಾರಿಸಿ. ಈ ಪ್ರಮಾಣ ತುಂಬಾ ನೀರಾಗುವುದರಿಂದ ಕೊಂಚ ದಟ್ಟವಾಗಿಸಲು ಮೆಕ್ಕೆಜೋಳದ ಹಿಟ್ಟು ಅಥವಾ ರವೆಯನ್ನು ಸೇರಿಸಿ (cornmeal) ಸೂಕ್ತ ಪ್ರಮಾಣದ ಹದ ಬರುವವರೆಗೆ ಮಿಕ್ಸಿಯಲ್ಲಿ ರುಬ್ಬಿ. ಈ ಲೇಪನವನ್ನು ಮುಖ, ಕೈ ಕಾಲುಗಳು, ಕುತ್ತಿಗೆಗಳಿಗೆ ಹಚ್ಚಿ ಹದಿನೈದು ನಿಮಿಷಗಳ ಕಾಲ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಸೋಪು ಬಳಸದಿರಿ.
ಟೊಮೇಟೊ ಹಣ್ಣಿನ ಜ್ಯೂಸ್
ಅರಿಶಿನ, ಚಂದನ ಮತ್ತು ಹಾಲು
ಹಸಿ ಹಾಲು ಮತ್ತು ಲಿಂಬೆಯ ರಸ
ಬೀಟ್ರೂಟ್



Click it and Unblock the Notifications



