Latest Updates
-
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ
ನಿಮ್ಮ ಸೌಂದರ್ಯಕ್ಕೆ ನೀವೇ ಜವಾಬ್ದಾರರು!

ಈ ಕ್ರೀಮ್ ಬಳಿದುಕೊಂಡರೆ ಏಳೇ ದಿನಗಳಲ್ಲಿ ಕಪ್ಪು ಮಾಯವಾಗಿ ಬೆಳ್ಳಗಾಗುತ್ತೀರಿ. ಈ ಸೋಪು ಹಚ್ಚಿಕೊಂಡರೆ ಹಾಲಿನಲ್ಲಿ ಅದ್ದಿತೆಗೆದಂತೆ ಫಳಫಳಿಸುತ್ತೀರಿ. ಈ ಪೌಡರ್ ಹಚ್ಚಿಕೊಂಡರೆ ಸೂರ್ಯ ಕೂಡ ನಿಮ್ಮ ಚರ್ಮವನ್ನು ಸೋಂಕಲಾರ... ಇತ್ಯಾದಿ. ಇವನ್ನೆಲ್ಲ ಹಚ್ಚಿಕೊಂಡರೆ, ಮೆತ್ತಿಕೊಂಡರೆ ಅಥವಾ ಬಳಿದುಕೊಂಡರೆ ಬೆಳ್ಳಗಾಗ್ತಾರಾ?
ಸೌಂದರ್ಯ ಎಂಬುದು ದೇವರು ಕೊಟ್ಟ ವರ. ಅದನ್ನು ನಾವು ಸಾಧ್ಯವಾದಷ್ಟು ರೀತಿಯಲ್ಲಿ ಪ್ರಾಕೃತಿಕವಾಗಿಯೇ ಕಾಪಾಡಿಕೊಂಡು ಬರಬೇಕು. ಆ ಕ್ರೀಮ್ ಗಳನ್ನು ಹಚ್ಚಿಕೊಂಡು ಬೆಳ್ಳಗಾಗುವ ಹಾಗಿದ್ದರೆ ಪ್ರಪಂಚದಲ್ಲಿ ಯಾರೂ ಕಪ್ಪಗೆ ಇರುತ್ತಿರಲಿಲ್ಲ. ಟಿವಿಗಳಲ್ಲಿ ಬರುವ ಸೌಂದರ್ಯವರ್ಧಕಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಇವು ಕೆಲವರಿಗೆ ಒಗ್ಗುವುದಿಲ್ಲ. ಅತಿಯಾಗಿ ಬಳಸಿದರೆ ಚರ್ಮಕ್ಕೆ ಹಾನಿ ಕೂಡ ಮಾಬಹುದು.
ಹೆಣ್ಣು ಹೇಗಿದ್ದರೇನು? ಎಷ್ಟೇ ಸುಂದರವಾಗಿದ್ದರೇನು? ಮುಖದಲ್ಲಿ ಸಣ್ಣದೊಂದು ನಗುವಿಲ್ಲದಿದ್ದರೆ ಅಂದವಾಗಿ ಕಾಣುವುದಿಲ್ಲ. ಎಷ್ಟು ಬೇಕೋ ಅಷ್ಟು ಅಲಂಕಾರ ಮಾಡಿಕೊಂಡರೆ ಹೆಚ್ಚು ಸುಂದರವಾಗಿ ಕಾಣಿಸುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಾವು ನಮ್ಮಲ್ಲಿ ಎಷ್ಟು ಆತ್ಮವಿಶ್ವಾಸ ಬೆಳೆಸಿಕೊಂಡಿದ್ದೇವೆ ಎಂಬುದರ ಮೇಲೆ ನಮ್ಮ ಸೌಂದರ್ಯ ಅಭಿವ್ಯಕ್ತವಾಗುತ್ತದೆ.
ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ದೊಡ್ಡದು. ಇರುವ ಸೌಂದರ್ಯವನ್ನೇ ಜತನದಿಂದ ಕಾಪಾಡಿಕೊಳ್ಳಲು ಮನೆಯಲ್ಲಿಯೇ ಮದ್ದುಗಳು ಸಿಗುತ್ತವೆ. ಕೆಲವು ಇಲ್ಲಿವೆ. ಇವನ್ನು ನಿಯಮಿತವಾಗಿ ಬಳಸಿರಿ ಮತ್ತು ದುಬಾರಿ ಕ್ರೀಮ್, ಸೋಪುಗಳಿಗೆ ಗೋಲಿ ಹೊಡೆಯಿರಿ.
* ಮುಖವನ್ನು ಆದಷ್ಟು ಸ್ವಚ್ಛವಾಗಿ ಇಟ್ಟುಕೊಳ್ಳಿ. ದಿನಕ್ಕೆ ಕನಿಷ್ಠ ಎರಡು ಬಾರಿ ತೊಳೆಯಲು ಮರೆಯಬೇಡಿ.
* ವಾರಕ್ಕೆ ಎರಡು ಬಾರಿ ಹಾಲಿನಿಂದ ಮುಖ ತೊಳೆಯಿರಿ. ಕೆನೆಯನ್ನು ಮುಖಕ್ಕೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ತೊಳೆದರೆ ಮುಖ ಕಾಂತಿಯುತವಾಗುತ್ತದೆ.
* ಜೇನುತುಪ್ಪ ಮುಖಕ್ಕೆ ತೆಳುವಾಗಿ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ತೊಳೆದರೆ ಮುಖ ಶುಭ್ರವಾಗುತ್ತದೆ ಹಾಗು ಕಾಂತಿಯುತವಾಗುತ್ತದೆ.
* ಮುಖಕ್ಕೆ ಕಡಲೆಹಿಟ್ಟು ಹಾಗು ಜೇನುತುಪ್ಪ ಬೆರೆಸಿ ಪೇಸ್ಟ್ ಮಾಡಿ ಫೇಸ್ ಪ್ಯಾಕ್ ಮಾಡಿ ಹಚ್ಚಿಕೊಂಡು ಹದಿನೈದು ನಿಮಿಷ ಬಿಟ್ಟು ತೊಳೆದರೆ ಕಪ್ಪುಕಲೆಗಳು ಮಾಯವಾಗಿರುತ್ತವೆ.
* ಅಕ್ಕಿ ಹಿಟ್ಟನ್ನು ಸ್ಕ್ರಬ್ ತರಹ ಉಪಯೋಗಿಸಬಹುದು. ಅಂದರೆ ಅಕ್ಕಿ ಹಿಟ್ಟು ಮುಖಕ್ಕೆ ಹಾಕಿ ಉಜ್ಜಿ ತೊಳೆದರೆ ಮುಖದಲ್ಲಿ ಇರುವ ಕೊಳೆ ಹಾಗು ಎಣ್ಣೆ ಮಂಗಮಾಯವಾಗುತ್ತದೆ.
;


Click it and Unblock the Notifications











