Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ಸೌಂದರ್ಯಕ್ಕೆ ನೀವೇ ಜವಾಬ್ದಾರರು!

ಈ ಕ್ರೀಮ್ ಬಳಿದುಕೊಂಡರೆ ಏಳೇ ದಿನಗಳಲ್ಲಿ ಕಪ್ಪು ಮಾಯವಾಗಿ ಬೆಳ್ಳಗಾಗುತ್ತೀರಿ. ಈ ಸೋಪು ಹಚ್ಚಿಕೊಂಡರೆ ಹಾಲಿನಲ್ಲಿ ಅದ್ದಿತೆಗೆದಂತೆ ಫಳಫಳಿಸುತ್ತೀರಿ. ಈ ಪೌಡರ್ ಹಚ್ಚಿಕೊಂಡರೆ ಸೂರ್ಯ ಕೂಡ ನಿಮ್ಮ ಚರ್ಮವನ್ನು ಸೋಂಕಲಾರ... ಇತ್ಯಾದಿ. ಇವನ್ನೆಲ್ಲ ಹಚ್ಚಿಕೊಂಡರೆ, ಮೆತ್ತಿಕೊಂಡರೆ ಅಥವಾ ಬಳಿದುಕೊಂಡರೆ ಬೆಳ್ಳಗಾಗ್ತಾರಾ?
ಸೌಂದರ್ಯ ಎಂಬುದು ದೇವರು ಕೊಟ್ಟ ವರ. ಅದನ್ನು ನಾವು ಸಾಧ್ಯವಾದಷ್ಟು ರೀತಿಯಲ್ಲಿ ಪ್ರಾಕೃತಿಕವಾಗಿಯೇ ಕಾಪಾಡಿಕೊಂಡು ಬರಬೇಕು. ಆ ಕ್ರೀಮ್ ಗಳನ್ನು ಹಚ್ಚಿಕೊಂಡು ಬೆಳ್ಳಗಾಗುವ ಹಾಗಿದ್ದರೆ ಪ್ರಪಂಚದಲ್ಲಿ ಯಾರೂ ಕಪ್ಪಗೆ ಇರುತ್ತಿರಲಿಲ್ಲ. ಟಿವಿಗಳಲ್ಲಿ ಬರುವ ಸೌಂದರ್ಯವರ್ಧಕಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಇವು ಕೆಲವರಿಗೆ ಒಗ್ಗುವುದಿಲ್ಲ. ಅತಿಯಾಗಿ ಬಳಸಿದರೆ ಚರ್ಮಕ್ಕೆ ಹಾನಿ ಕೂಡ ಮಾಬಹುದು.
ಹೆಣ್ಣು ಹೇಗಿದ್ದರೇನು? ಎಷ್ಟೇ ಸುಂದರವಾಗಿದ್ದರೇನು? ಮುಖದಲ್ಲಿ ಸಣ್ಣದೊಂದು ನಗುವಿಲ್ಲದಿದ್ದರೆ ಅಂದವಾಗಿ ಕಾಣುವುದಿಲ್ಲ. ಎಷ್ಟು ಬೇಕೋ ಅಷ್ಟು ಅಲಂಕಾರ ಮಾಡಿಕೊಂಡರೆ ಹೆಚ್ಚು ಸುಂದರವಾಗಿ ಕಾಣಿಸುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಾವು ನಮ್ಮಲ್ಲಿ ಎಷ್ಟು ಆತ್ಮವಿಶ್ವಾಸ ಬೆಳೆಸಿಕೊಂಡಿದ್ದೇವೆ ಎಂಬುದರ ಮೇಲೆ ನಮ್ಮ ಸೌಂದರ್ಯ ಅಭಿವ್ಯಕ್ತವಾಗುತ್ತದೆ.
ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ದೊಡ್ಡದು. ಇರುವ ಸೌಂದರ್ಯವನ್ನೇ ಜತನದಿಂದ ಕಾಪಾಡಿಕೊಳ್ಳಲು ಮನೆಯಲ್ಲಿಯೇ ಮದ್ದುಗಳು ಸಿಗುತ್ತವೆ. ಕೆಲವು ಇಲ್ಲಿವೆ. ಇವನ್ನು ನಿಯಮಿತವಾಗಿ ಬಳಸಿರಿ ಮತ್ತು ದುಬಾರಿ ಕ್ರೀಮ್, ಸೋಪುಗಳಿಗೆ ಗೋಲಿ ಹೊಡೆಯಿರಿ.
* ಮುಖವನ್ನು ಆದಷ್ಟು ಸ್ವಚ್ಛವಾಗಿ ಇಟ್ಟುಕೊಳ್ಳಿ. ದಿನಕ್ಕೆ ಕನಿಷ್ಠ ಎರಡು ಬಾರಿ ತೊಳೆಯಲು ಮರೆಯಬೇಡಿ.
* ವಾರಕ್ಕೆ ಎರಡು ಬಾರಿ ಹಾಲಿನಿಂದ ಮುಖ ತೊಳೆಯಿರಿ. ಕೆನೆಯನ್ನು ಮುಖಕ್ಕೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ತೊಳೆದರೆ ಮುಖ ಕಾಂತಿಯುತವಾಗುತ್ತದೆ.
* ಜೇನುತುಪ್ಪ ಮುಖಕ್ಕೆ ತೆಳುವಾಗಿ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ತೊಳೆದರೆ ಮುಖ ಶುಭ್ರವಾಗುತ್ತದೆ ಹಾಗು ಕಾಂತಿಯುತವಾಗುತ್ತದೆ.
* ಮುಖಕ್ಕೆ ಕಡಲೆಹಿಟ್ಟು ಹಾಗು ಜೇನುತುಪ್ಪ ಬೆರೆಸಿ ಪೇಸ್ಟ್ ಮಾಡಿ ಫೇಸ್ ಪ್ಯಾಕ್ ಮಾಡಿ ಹಚ್ಚಿಕೊಂಡು ಹದಿನೈದು ನಿಮಿಷ ಬಿಟ್ಟು ತೊಳೆದರೆ ಕಪ್ಪುಕಲೆಗಳು ಮಾಯವಾಗಿರುತ್ತವೆ.
* ಅಕ್ಕಿ ಹಿಟ್ಟನ್ನು ಸ್ಕ್ರಬ್ ತರಹ ಉಪಯೋಗಿಸಬಹುದು. ಅಂದರೆ ಅಕ್ಕಿ ಹಿಟ್ಟು ಮುಖಕ್ಕೆ ಹಾಕಿ ಉಜ್ಜಿ ತೊಳೆದರೆ ಮುಖದಲ್ಲಿ ಇರುವ ಕೊಳೆ ಹಾಗು ಎಣ್ಣೆ ಮಂಗಮಾಯವಾಗುತ್ತದೆ.
;


Click it and Unblock the Notifications