Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ರಾತ್ರೋ ರಾತ್ರಿ ಸಿಕ್ಕು ಕೂದಲಿನ ಸಮಸ್ಯೆಯಿಂದ ಮುಕ್ತಿ ಹೊಂದಿ!
ಸಿಕ್ಕಾದ ಕೂದಲಿನ ಸಮಸ್ಯೆಯ ಬಗ್ಗೆ ನೋಡುವವರಿಗೆ ನಗು ಬಂದರು, ಅನುಭವಿಸುವವರಿಗೆ ಮಾತ್ರ ಅದರ ಕಷ್ಟ ಗೊತ್ತಗುತ್ತದೆ. ಯಾರಿಗೆ ಈ ಸಮಸ್ಯೆ ಇರುತ್ತದೆಯೋ, ಅವರು ಬೇಗ ಕೆಲಸಕ್ಕೆ ಹೋಗಲು, ಕಾರ್ಯಕ್ರಮಗಳಿಗೆ ಹೋಗಲು ತಲೆ ಬಾಚಿಕೊಳ್ಳಲು ಆಗದೆ ಹೆಣಗಾಡುವ ಪರಿಯನ್ನು ನೋಡಿದರೆ, ಮುಂದೆ ಇದರ ಬಗ್ಗೆ ನೆನೆಸಿಕೊಳ್ಳಲು ಸಹ ನೀವು ಹೆದರುತ್ತೀರಿ.
ಅದೆಂತಹದೇ ಅದ್ಭುತ ಬಟ್ಟೆಯನ್ನು ಧರಿಸಿದ್ದರು, ಅದೆಂತಹ ಚಂದ ಕಾಣಿಸುವ ಮೇಕಪ್ ಧರಿಸಿದ್ದರು, ನಿಮಗೆ ಸಿಕ್ಕಾದ ಕೂದಲು ಇದ್ದಲ್ಲಿ, ಅವೆಲ್ಲವೂ ನೀರಿನಲ್ಲಿ ಮಾಡಿದ ಹೋಮವಾಗುತ್ತದೆ. ಕೂದಲಿನ ಬುಡವು ಎದ್ದು, ಎಳೆಗಳು ಸಡಿಲಗೊಂಡು, ತೇವಾಂಶ ಬಿಡುಗಡೆ ಮಾಡಿದಾಗ ಈ ಬಗೆಯ ಸಿಕ್ಕುತನ ಕೂದಲಿಗೆ ಉಂಟಾಗುತ್ತದೆ. ಇದು ಸಾಮಾನ್ಯವಾಗಿ ಕೂದಲುಗಳ ಬುಡವು ನಿರ್ಜಲೀಕರಣಗೊಂಡಾಗ ಸಂಭವಿಸುತ್ತದೆ.

ಜೊತೆಗೆ ನಿಮ್ಮ ಜೀವನಶೈಲಿ, ನಿಮ್ಮ ಆರೋಗ್ಯವು ನಿಮ್ಮ ಸೌಂದರ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಇಲ್ಲಿ ಅರ್ಥ ಮಾಡಿಕೊಳ್ಳಬೇಕು. ಈ ಬಗೆಯ ಸಿಕ್ಕುತನವನ್ನು ನಿವಾರಿಸಲು ಮಾರುಕಟ್ಟೆಯಲ್ಲಿ ಸಾವಿರಾರು ಬಗೆಯ ಶಾಂಪೂಗಳು, ಸೆರಮ್ಗಳು, ಕಂಡೀಶನರ್ಗಳು, ಇತ್ಯಾದಿಗಳು ದೊರೆಯುತ್ತವೆ. ಆದರೆ ಅವೆಲ್ಲವೂ ನಿಮ್ಮ ಕೂದಲಿನ ಬುಡವನ್ನು ಹಾಳು ಮಾಡುತ್ತವೆ.
ಹಾಗೆಂದು ನೀವು ಚಿಂತಿಸಬೇಕಾಗಿಲ್ಲ. ನಿಮಗಾಗಿ ಕೆಲವೊಂದು ಸ್ವಾಭಾವಿಕ ಪದಾರ್ಥಗಳು ದೊರೆಯುತ್ತವೆ. ಇವು ನಿಮ್ಮ ಕೂದಲಿನ ಸಿಕ್ಕುತನವನ್ನು ನಿವಾರಿಸಿ, ಅದಕ್ಕೆ ತನ್ನ ಹಿಂದಿನ ಆಕರ್ಷಣೆಯನ್ನು ಮತ್ತು ಲವಲವಿಕೆಯನ್ನು ಮರಳಿ ನೀಡುತ್ತವೆ. ಬನ್ನಿ ಬೋಲ್ಡ್ ಸ್ಕೈ ಇಂದು ಆ ಪದಾರ್ಥಗಳು ಯಾವುವು ಎಂಬುದನ್ನು ನಿಮಗೆ ತಿಳಿಸಿಕೊಡುತ್ತದೆ. ಈ ಪದಾರ್ಥಗಳನ್ನು ಬಳಸಿ, ನಿಮ್ಮ ಕೂದಲಿನ ಸಿಕ್ಕುತನವನ್ನು ನಿವಾರಿಸಿಕೊಳ್ಳಿ.
ನಾವು ನಿಮಗೆ ಹೇಳುತ್ತಿರುವ ಹೇರ್ ಮಾಸ್ಕ್ ಅನ್ನು ತಯಾರಿಸಲು ನಿಮಗೆ 3 ಪದಾರ್ಥಗಳ ಅವಶ್ಯಕತೆ ಇರುತ್ತದೆ. ಈ ಪದಾರ್ಥಗಳು ನಿಮ್ಮ ಮನೆಯ ಅಡುಗೆ ಮನೆಯಲ್ಲಿ ಈಗಾಗಲೇ ಇವೆ. ಅವೇ ಜೇನು ತುಪ್ಪ, ಮೊಸರು ಮತ್ತು ಬಾದಾಮಿ ಎಣ್ಣೆ. ಈ ಅನನ್ಯ ಪದಾರ್ಥಗಳು ನಿಮ್ಮ ಕೂದಲಿನ ಸಿಕ್ಕುತನವನ್ನು ಮತ್ತು ಒಣ ಕೂದಲಿನ ಸಮಸ್ಯೆಯನ್ನು ನಿವಾರಿಸಿ. ಇವು ಸ್ವಾಭಾವಿಕವಾಗಿ ಕೂದಲಿಗೆ ಮೊಯಿಶ್ಚರೈಸ್ ಮಾಡುತ್ತದೆ ಹಾಗು ಕೂದಲಿನ ಬುಡಕ್ಕೆ ಡೀಪ್ ಕಂಡೀಶನ್ ಮತ್ತು ಮೃದುತ್ವವನ್ನು ನೀಡುತ್ತದೆ. ಬನ್ನಿ ಈ ಹೇರ್ ಮಾಸ್ಕ್ ಅನ್ನು ತಯಾರಿಸಲು ಈ ಪದಾರ್ಥಗಳನ್ನು ಎಷ್ಟು ಪ್ರಮಾಣದಲ್ಲಿ ಬೆರೆಸಿಕೊಳ್ಳಬೇಕು ಎಂದು ನೋಡೋಣ ಬನ್ನಿ.
ಪದಾರ್ಥಗಳು:
*2 ಟೇಬಲ್ ಸ್ಪೂನ್ಗಳ ಬಾದಾಮಿ ಎಣ್ಣೆ
*1/2 ಕಪ್ ಮೊಸರು
*1/4th ಕಪ್ ಜೇನು ತುಪ್ಪ
ಬಳಸುವ ವಿಧಾನ:
*ಈ ಎಲ್ಲಾ ಪದಾರ್ಥಗಳನ್ನು ಒಂದು ಬಟ್ಟಲಿನಲಿ ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ಇವುಗಳನ್ನು ಒಂದು ಗಟ್ಟಿಯಾದ ಪೇಸ್ಟ್ ರೀತಿ ಬೆರೆಸಿಕೊಳ್ಳಿ. ತದನಂತರ ಇದನ್ನು ನಿಮ್ಮ ಕೂದಲಿಗೆ ಲೇಪಿಸಿ, ಮೃದುವಾಗಿ 5-10 ನಿಮಿಷಗಳ ಕಾಲ ಬಿಡಿ.
*ಇನ್ನು 25-30 ನಿಮಿಷಗಳು ಈ ಮಾಸ್ಕ್ ನಿಮ್ಮ ಕೂದಲನ್ನು ನೆನೆಸಲು ಬಿಡಿ. ಇದನ್ನು ಮಾಡುವ ಮೊದಲು ನಿಮ್ಮ ಕೂದಲನ್ನು ಚೆನ್ನಾಗಿ ಶಾಂಪೂವಿನಿಂದ ತೊಳೆದುಕೊಂಡಿರಿ.
*ಈ ಮಾಸ್ಕಿನ ಪರಿಣಾಮವು ತುಂಬಾ ಕಾಲ ಇರುತ್ತದೆ. ಆದ್ದರಿಂದ ಈ ಪರಿಹಾರವನ್ನು ನೀವು ತಿಂಗಳಿಗೆ ಒಮ್ಮೆಯಾದರು ಮಾಡಬೇಕಾಗುತ್ತದೆ.
*ಸಿಕ್ಕಾದ ಕೂದಲು ಇರಿಸಿಕೊಂಡು, ಸೌಂದರ್ಯದ ಸಮಸ್ಯೆಗೆ ಸಿಕ್ಕಿಕೊಳ್ಳಬೇಡಿ. ಆದ್ದರಿಂದ ಮೊದಲು ಸಿಕ್ಕಾದ ಕೂದಲಿನಿಂದ ಮುಕ್ತರಾಗಿ.



Click it and Unblock the Notifications


