Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಳ್ಳಿ ಮದ್ದಿರುವಾಗ ತಲೆಹೊಟ್ಟಿನ ಸಮಸ್ಯೆಯ ಚಿಂತೆ ಏತಕ್ಕೆ?
ತಲೆ ಹೊಟ್ಟಿನ ಸಮಸ್ಯೆ ಈಗ ಎಲ್ಲಾ ಕಡೆ, ಎಲ್ಲರಲ್ಲಿಯೂ ಕಾಣಿಸಿಕೊಳ್ಳುವಷ್ಟು ದೊಡ್ಡ ಸಮಸ್ಯೆಯಾಗಿದೆ. ಬಹುಶಃ ನೀವು ಸಹ ಗಮನಿಸಿರಬಹುದು. ನಿಮ್ಮ ತಲೆ ಮತ್ತು ಹೆಗಲ ಮೇಲೆ ಬಿಳಿಯ ಬಣ್ಣದ ಪುಡಿ ರೀತಿಯ ತುಣುಕುಗಳು ಅಲ್ಲಲ್ಲಿ ಬಿದ್ದಿರುವುದನ್ನು. ಅದನ್ನೇ ತಲೆ ಹೊಟ್ಟು ಎಂದು ಕರೆಯುತ್ತಾರೆ. ಇಂದಿನ ಧಾವಂತದ ಜೀವನದಲ್ಲಿ ತಲೆಗೆ ನೀಡಲಾಗದ ಆರೈಕೆ ಈ ಸೂಕ್ಷ್ಮಾಣುಗಳಿಗೆ ಬೆಳೆಯಲು ಅವಕಾಶ ನೀಡಿದಂತಾಗುತ್ತದೆ. ಇವು ಅತಿ ಹೆಚ್ಚಾಗಿ ಬೆಳೆದು ತಲೆಹೊಟ್ಟನ್ನು ಹೆಚ್ಚಿಸುತ್ತವೆ.
ವಾಸ್ತವವಾಗಿ ತಲೆಹೊಟ್ಟು ಒಂದು ರೋಗವಲ್ಲ, ನಮ್ಮ ತಲೆಯ ಚರ್ಮದ ಜೀವಕೋಶಗಳು ಸತ್ತು ಒಣಗಿದ ಬಳಿಕ ಪಕಳೆಯಂತೆ ಏಳುವುದೇ ಹೊಟ್ಟು. ಇದಕ್ಕೆ ಹಲವು ಕಾರಣಗಳಿವೆ. ಪ್ರಮುಖವಾದ ಕಾರಣವೆನೆಂದರೆ ತಲೆಯ ಚರ್ಮಕ್ಕೆ ಸೂಕ್ತ ಆರ್ದ್ರತೆ ದೊರಕದೇ ಇರುವುದು. ಆಗ ಚರ್ಮ ಹೆಚ್ಚಾಗಿ ಒಣಗಿ ಪಕಳೆಗಳಂತೆ ಏಳುತ್ತದೆ.

ಇದು ಅರ್ಧ ಎದ್ದು ಅರ್ಧ ಚರ್ಮಕ್ಕೆ ಅಂಟಿಕೊಂಡೇ ಇರುವುದರಿಂದ ಕೂದಲು ಅಲುಗಾಡಿದಾಗಲೆಲ್ಲಾ ಈ ಅಂಟಿಕೊಂಡಿದ್ದ ಚರ್ಮ ಜೀವಂತ ಚರ್ಮವನ್ನು ಎಳೆದಂತಾಗುವುದೇ ತುರಿಕೆ. ಕೆಲವೊಮ್ಮೆ ಈ ಹೊಟ್ಟನ್ನು ಹಲವು ಕ್ರಿಮಿಗಳು ಮತ್ತು ಬ್ಯಾಕ್ಟೀರಿಯಾಗಳು ಬಿರಿಯಾನಿಯಂತೆ ಭಕ್ಷಿಸಿ ಮನೆಮಾಡಿಕೊಂಡಾಗಲೂ ತುರಿಕೆ ಉಂಟಾಗುತ್ತದೆ.
ಈ ತುರಿಕೆ ಮತ್ತು ಇದಕ್ಕೆ ಕಾರಣವಾದ ತಲೆಹೊಟ್ಟನ್ನು ನಿವಾರಿಸುವುದು ಅಷ್ಟು ಸುಲಭವಲ್ಲ, ಅಂತೆಯೇ ಕಷ್ಟವೂ ಅಲ್ಲ. ತುರಿಕೆ ಹೆಚ್ಚಾಗಿ ಗಾಯಗಳಾಗುವುದು, ಈಗಾಗಲೇ ಆಗಿರುವ ಗಾಯವನ್ನು ಇನ್ನಷ್ಟು ಕೆದಕಿ ಆಳವಾಗಿಸುವುದು, ತುರಿಸಿದಾದ ಆದ ಗೀರುಗಳಲ್ಲಿ ಸೋಂಕು ಮೊದಲಾದವು ತಲೆಹೊಟ್ಟಿನ ಪರೋಕ್ಷ ತೊಂದರೆಗಳು. ಇದನ್ನು ನಿವಾರಿಸಲು ಹಲವು ಫಲಪ್ರದ ಮನೆಮದ್ದುಗಳಿವೆ, ಬನ್ನಿ ಅವು ಯಾವುದು ಎಂಬುದನ್ನು ನೋಡೋಣ...
ಲಿಂಬೆಹಣ್ಣಿನ ರಸ
ಬಳಸಿ ಮೂರು ಲಿಂಬೆಹಣ್ಣಿನ ರಸವನ್ನು ಒಂದು ಬಕೆಟ್ ನೀರಿನಲ್ಲಿ ಸೇರಿಸಿ ಕಲಕಿ. ಈ ನೀರನ್ನು ನಿಧಾನವಾಗಿ ತಲೆಯ ಮೇಲೆ ಸುರಿದುಕೊಳ್ಳುತ್ತಾ ಮಸಾಜ್ ಮಾಡಿ. ಇಡಿಯ ಬಕೆಟ್ ಖಾಲಿಯಾಗುವವರೆಗೆ ನೀರು ಸುರಿಯುವುದನ್ನು ಮುಂದುವರೆಸಿ ಬಳಿಕ ದಪ್ಪ ಟವೆಲ್ಲನ್ನು ಒತ್ತಿಕೊಂಡು ಒರೆಸಿ. ಅಷ್ಟಕ್ಕೂ ತಲೆಹೊಟ್ಟಿನ ಸಮಸ್ಯೆಗೆ ನಿಜವಾದ ಕಾರಣವೇನು?
ಬೇವಿನ ಎಣ್ಣೆ
ಈರುಳ್ಳಿ ರಸ ಪ್ರಯತ್ನಿಸಿ
ಸೀಗೆಪುಡಿ ಬಳಸಿ



Click it and Unblock the Notifications



