Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಹಳ್ಳಿ ಮದ್ದಿರುವಾಗ ತಲೆಹೊಟ್ಟಿನ ಸಮಸ್ಯೆಯ ಚಿಂತೆ ಏತಕ್ಕೆ?
ತಲೆ ಹೊಟ್ಟಿನ ಸಮಸ್ಯೆ ಈಗ ಎಲ್ಲಾ ಕಡೆ, ಎಲ್ಲರಲ್ಲಿಯೂ ಕಾಣಿಸಿಕೊಳ್ಳುವಷ್ಟು ದೊಡ್ಡ ಸಮಸ್ಯೆಯಾಗಿದೆ. ಬಹುಶಃ ನೀವು ಸಹ ಗಮನಿಸಿರಬಹುದು. ನಿಮ್ಮ ತಲೆ ಮತ್ತು ಹೆಗಲ ಮೇಲೆ ಬಿಳಿಯ ಬಣ್ಣದ ಪುಡಿ ರೀತಿಯ ತುಣುಕುಗಳು ಅಲ್ಲಲ್ಲಿ ಬಿದ್ದಿರುವುದನ್ನು. ಅದನ್ನೇ ತಲೆ ಹೊಟ್ಟು ಎಂದು ಕರೆಯುತ್ತಾರೆ. ಇಂದಿನ ಧಾವಂತದ ಜೀವನದಲ್ಲಿ ತಲೆಗೆ ನೀಡಲಾಗದ ಆರೈಕೆ ಈ ಸೂಕ್ಷ್ಮಾಣುಗಳಿಗೆ ಬೆಳೆಯಲು ಅವಕಾಶ ನೀಡಿದಂತಾಗುತ್ತದೆ. ಇವು ಅತಿ ಹೆಚ್ಚಾಗಿ ಬೆಳೆದು ತಲೆಹೊಟ್ಟನ್ನು ಹೆಚ್ಚಿಸುತ್ತವೆ.
ವಾಸ್ತವವಾಗಿ ತಲೆಹೊಟ್ಟು ಒಂದು ರೋಗವಲ್ಲ, ನಮ್ಮ ತಲೆಯ ಚರ್ಮದ ಜೀವಕೋಶಗಳು ಸತ್ತು ಒಣಗಿದ ಬಳಿಕ ಪಕಳೆಯಂತೆ ಏಳುವುದೇ ಹೊಟ್ಟು. ಇದಕ್ಕೆ ಹಲವು ಕಾರಣಗಳಿವೆ. ಪ್ರಮುಖವಾದ ಕಾರಣವೆನೆಂದರೆ ತಲೆಯ ಚರ್ಮಕ್ಕೆ ಸೂಕ್ತ ಆರ್ದ್ರತೆ ದೊರಕದೇ ಇರುವುದು. ಆಗ ಚರ್ಮ ಹೆಚ್ಚಾಗಿ ಒಣಗಿ ಪಕಳೆಗಳಂತೆ ಏಳುತ್ತದೆ.

ಇದು ಅರ್ಧ ಎದ್ದು ಅರ್ಧ ಚರ್ಮಕ್ಕೆ ಅಂಟಿಕೊಂಡೇ ಇರುವುದರಿಂದ ಕೂದಲು ಅಲುಗಾಡಿದಾಗಲೆಲ್ಲಾ ಈ ಅಂಟಿಕೊಂಡಿದ್ದ ಚರ್ಮ ಜೀವಂತ ಚರ್ಮವನ್ನು ಎಳೆದಂತಾಗುವುದೇ ತುರಿಕೆ. ಕೆಲವೊಮ್ಮೆ ಈ ಹೊಟ್ಟನ್ನು ಹಲವು ಕ್ರಿಮಿಗಳು ಮತ್ತು ಬ್ಯಾಕ್ಟೀರಿಯಾಗಳು ಬಿರಿಯಾನಿಯಂತೆ ಭಕ್ಷಿಸಿ ಮನೆಮಾಡಿಕೊಂಡಾಗಲೂ ತುರಿಕೆ ಉಂಟಾಗುತ್ತದೆ.
ಈ ತುರಿಕೆ ಮತ್ತು ಇದಕ್ಕೆ ಕಾರಣವಾದ ತಲೆಹೊಟ್ಟನ್ನು ನಿವಾರಿಸುವುದು ಅಷ್ಟು ಸುಲಭವಲ್ಲ, ಅಂತೆಯೇ ಕಷ್ಟವೂ ಅಲ್ಲ. ತುರಿಕೆ ಹೆಚ್ಚಾಗಿ ಗಾಯಗಳಾಗುವುದು, ಈಗಾಗಲೇ ಆಗಿರುವ ಗಾಯವನ್ನು ಇನ್ನಷ್ಟು ಕೆದಕಿ ಆಳವಾಗಿಸುವುದು, ತುರಿಸಿದಾದ ಆದ ಗೀರುಗಳಲ್ಲಿ ಸೋಂಕು ಮೊದಲಾದವು ತಲೆಹೊಟ್ಟಿನ ಪರೋಕ್ಷ ತೊಂದರೆಗಳು. ಇದನ್ನು ನಿವಾರಿಸಲು ಹಲವು ಫಲಪ್ರದ ಮನೆಮದ್ದುಗಳಿವೆ, ಬನ್ನಿ ಅವು ಯಾವುದು ಎಂಬುದನ್ನು ನೋಡೋಣ...
ಲಿಂಬೆಹಣ್ಣಿನ ರಸ
ಬಳಸಿ ಮೂರು ಲಿಂಬೆಹಣ್ಣಿನ ರಸವನ್ನು ಒಂದು ಬಕೆಟ್ ನೀರಿನಲ್ಲಿ ಸೇರಿಸಿ ಕಲಕಿ. ಈ ನೀರನ್ನು ನಿಧಾನವಾಗಿ ತಲೆಯ ಮೇಲೆ ಸುರಿದುಕೊಳ್ಳುತ್ತಾ ಮಸಾಜ್ ಮಾಡಿ. ಇಡಿಯ ಬಕೆಟ್ ಖಾಲಿಯಾಗುವವರೆಗೆ ನೀರು ಸುರಿಯುವುದನ್ನು ಮುಂದುವರೆಸಿ ಬಳಿಕ ದಪ್ಪ ಟವೆಲ್ಲನ್ನು ಒತ್ತಿಕೊಂಡು ಒರೆಸಿ. ಅಷ್ಟಕ್ಕೂ ತಲೆಹೊಟ್ಟಿನ ಸಮಸ್ಯೆಗೆ ನಿಜವಾದ ಕಾರಣವೇನು?
ಬೇವಿನ ಎಣ್ಣೆ
ಈರುಳ್ಳಿ ರಸ ಪ್ರಯತ್ನಿಸಿ
ಸೀಗೆಪುಡಿ ಬಳಸಿ



Click it and Unblock the Notifications



