Latest Updates
-
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ?
ಹಳ್ಳಿ ಮದ್ದಿರುವಾಗ ತಲೆಹೊಟ್ಟಿನ ಸಮಸ್ಯೆಯ ಚಿಂತೆ ಏತಕ್ಕೆ?
ತಲೆ ಹೊಟ್ಟಿನ ಸಮಸ್ಯೆ ಈಗ ಎಲ್ಲಾ ಕಡೆ, ಎಲ್ಲರಲ್ಲಿಯೂ ಕಾಣಿಸಿಕೊಳ್ಳುವಷ್ಟು ದೊಡ್ಡ ಸಮಸ್ಯೆಯಾಗಿದೆ. ಬಹುಶಃ ನೀವು ಸಹ ಗಮನಿಸಿರಬಹುದು. ನಿಮ್ಮ ತಲೆ ಮತ್ತು ಹೆಗಲ ಮೇಲೆ ಬಿಳಿಯ ಬಣ್ಣದ ಪುಡಿ ರೀತಿಯ ತುಣುಕುಗಳು ಅಲ್ಲಲ್ಲಿ ಬಿದ್ದಿರುವುದನ್ನು. ಅದನ್ನೇ ತಲೆ ಹೊಟ್ಟು ಎಂದು ಕರೆಯುತ್ತಾರೆ. ಇಂದಿನ ಧಾವಂತದ ಜೀವನದಲ್ಲಿ ತಲೆಗೆ ನೀಡಲಾಗದ ಆರೈಕೆ ಈ ಸೂಕ್ಷ್ಮಾಣುಗಳಿಗೆ ಬೆಳೆಯಲು ಅವಕಾಶ ನೀಡಿದಂತಾಗುತ್ತದೆ. ಇವು ಅತಿ ಹೆಚ್ಚಾಗಿ ಬೆಳೆದು ತಲೆಹೊಟ್ಟನ್ನು ಹೆಚ್ಚಿಸುತ್ತವೆ.
ವಾಸ್ತವವಾಗಿ ತಲೆಹೊಟ್ಟು ಒಂದು ರೋಗವಲ್ಲ, ನಮ್ಮ ತಲೆಯ ಚರ್ಮದ ಜೀವಕೋಶಗಳು ಸತ್ತು ಒಣಗಿದ ಬಳಿಕ ಪಕಳೆಯಂತೆ ಏಳುವುದೇ ಹೊಟ್ಟು. ಇದಕ್ಕೆ ಹಲವು ಕಾರಣಗಳಿವೆ. ಪ್ರಮುಖವಾದ ಕಾರಣವೆನೆಂದರೆ ತಲೆಯ ಚರ್ಮಕ್ಕೆ ಸೂಕ್ತ ಆರ್ದ್ರತೆ ದೊರಕದೇ ಇರುವುದು. ಆಗ ಚರ್ಮ ಹೆಚ್ಚಾಗಿ ಒಣಗಿ ಪಕಳೆಗಳಂತೆ ಏಳುತ್ತದೆ.

ಇದು ಅರ್ಧ ಎದ್ದು ಅರ್ಧ ಚರ್ಮಕ್ಕೆ ಅಂಟಿಕೊಂಡೇ ಇರುವುದರಿಂದ ಕೂದಲು ಅಲುಗಾಡಿದಾಗಲೆಲ್ಲಾ ಈ ಅಂಟಿಕೊಂಡಿದ್ದ ಚರ್ಮ ಜೀವಂತ ಚರ್ಮವನ್ನು ಎಳೆದಂತಾಗುವುದೇ ತುರಿಕೆ. ಕೆಲವೊಮ್ಮೆ ಈ ಹೊಟ್ಟನ್ನು ಹಲವು ಕ್ರಿಮಿಗಳು ಮತ್ತು ಬ್ಯಾಕ್ಟೀರಿಯಾಗಳು ಬಿರಿಯಾನಿಯಂತೆ ಭಕ್ಷಿಸಿ ಮನೆಮಾಡಿಕೊಂಡಾಗಲೂ ತುರಿಕೆ ಉಂಟಾಗುತ್ತದೆ.
ಈ ತುರಿಕೆ ಮತ್ತು ಇದಕ್ಕೆ ಕಾರಣವಾದ ತಲೆಹೊಟ್ಟನ್ನು ನಿವಾರಿಸುವುದು ಅಷ್ಟು ಸುಲಭವಲ್ಲ, ಅಂತೆಯೇ ಕಷ್ಟವೂ ಅಲ್ಲ. ತುರಿಕೆ ಹೆಚ್ಚಾಗಿ ಗಾಯಗಳಾಗುವುದು, ಈಗಾಗಲೇ ಆಗಿರುವ ಗಾಯವನ್ನು ಇನ್ನಷ್ಟು ಕೆದಕಿ ಆಳವಾಗಿಸುವುದು, ತುರಿಸಿದಾದ ಆದ ಗೀರುಗಳಲ್ಲಿ ಸೋಂಕು ಮೊದಲಾದವು ತಲೆಹೊಟ್ಟಿನ ಪರೋಕ್ಷ ತೊಂದರೆಗಳು. ಇದನ್ನು ನಿವಾರಿಸಲು ಹಲವು ಫಲಪ್ರದ ಮನೆಮದ್ದುಗಳಿವೆ, ಬನ್ನಿ ಅವು ಯಾವುದು ಎಂಬುದನ್ನು ನೋಡೋಣ...
ಲಿಂಬೆಹಣ್ಣಿನ ರಸ
ಬಳಸಿ ಮೂರು ಲಿಂಬೆಹಣ್ಣಿನ ರಸವನ್ನು ಒಂದು ಬಕೆಟ್ ನೀರಿನಲ್ಲಿ ಸೇರಿಸಿ ಕಲಕಿ. ಈ ನೀರನ್ನು ನಿಧಾನವಾಗಿ ತಲೆಯ ಮೇಲೆ ಸುರಿದುಕೊಳ್ಳುತ್ತಾ ಮಸಾಜ್ ಮಾಡಿ. ಇಡಿಯ ಬಕೆಟ್ ಖಾಲಿಯಾಗುವವರೆಗೆ ನೀರು ಸುರಿಯುವುದನ್ನು ಮುಂದುವರೆಸಿ ಬಳಿಕ ದಪ್ಪ ಟವೆಲ್ಲನ್ನು ಒತ್ತಿಕೊಂಡು ಒರೆಸಿ. ಅಷ್ಟಕ್ಕೂ ತಲೆಹೊಟ್ಟಿನ ಸಮಸ್ಯೆಗೆ ನಿಜವಾದ ಕಾರಣವೇನು?
ಬೇವಿನ ಎಣ್ಣೆ
ಈರುಳ್ಳಿ ರಸ ಪ್ರಯತ್ನಿಸಿ
ಸೀಗೆಪುಡಿ ಬಳಸಿ



Click it and Unblock the Notifications




