Latest Updates
-
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ!
7 ಬಗೆಯ ಕೂದಲಿನ ಸಮಸ್ಯೆಗೆ ಪರಿಹಾರ-ಲೋಳೆ ಸರ
ಕೂದಲಿನ ಸಮಸ್ಯೆಗೆ ನಾವೆಲ್ಲಾ ಯಾವ ಶ್ಯಾಂಪೂ ಬಳಸಿದರೆ ಕೂದಲು ಉದುರುವುದು ನಿಲ್ಲುತ್ತದೆ ಎಂದು ಯೋಚಿಸುತ್ತೇವೆ. ಆದರೆ ಲೋಳೆಸರ ಹಚ್ಚಿ ನೋಡಿದರೆ ಹೇಗೆ ಎಂದು ಯೋಚಿಸುವುದೇ ಇಲ್ಲ. ಈ ಲೋಳೆಸರವನ್ನು ಮನೆಯಲ್ಲಿ ಸ್ಥಳಾವಕಾಶ ಕಮ್ಮಿಯಿದ್ದರೂ ಬೆಳೆಸಬಹುದು. ಆದ್ದರಿಂದ ಈ ವಿಧಾನ ದುಬಾರಿಯಲ್ಲ, ಸೊಬಗಿನ ಕೂದಲನ್ನು ಪಡೆಯಬಹುದು.
ಇದನ್ನು ಈ ಕೆಳಗಿನ ಕೂದಲಿನ ಸಮಸ್ಯೆಗೆ ಬಳಸಿದರೆ ಅತ್ಯುತ್ತಮವಾದ ಪ್ರಯೋಜವನ್ನು ಪಡೆಯಬಹುದು.

ಕೂದುರು ಉದುರುವುದಕ್ಕೆ ಪರಿಹಾರ
ಕೂದಲಿನ ಬುಡಕ್ಕೆ ಲೋಳೆಸರ ಹಚ್ಚಿ ಅರ್ಧ ಗಂಟೆ ಬಿಟ್ಟು ತಲೆ ತೊಳೆದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ. ತಲೆಗೆ ಹಚ್ಚುವುದರ ಜೊತೆಗೆ ಇದರ ಜ್ಯೂಸ್ ಮಾಡಿ ಕುಡಿದರೆ ಕೂದಲು ಉದುರುವ ಸಮಸ್ಯೆಯಿಂದ ಬೇಗನೆ ಗುಣಮುಖವಾಗಬಹುದು.

ಕಂಡೀಷನರ್
ಲೋಳೆಸರ ನೈಸರ್ಗಿಕವಾದ ಕಂಡೀಷನರ್ ಆಗಿದ್ದು ಕೂದಲನ್ನು ಮೃದುವಾಗಿಸಿ, ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ.

ಬಕ್ಕತಲೆ ಉಂಟಾಗುವುದನ್ನು ತಡೆಯುತ್ತದೆ
ಬಕ್ಕ ತಲೆ ಹೆಚ್ಚಿನ ಪುರುಷರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಬಕ್ಕೆ ತಲೆ ಉಂಟಾಗುತ್ತಿದ್ದರೆ ಪ್ರತಿದಿನಾ ಲೋಳೆಸರ ಹಚ್ಚಿ. ಈ ರೀತಿ2-3 ಕಾಲದವರೆಗೆ ಹಚ್ಚಿದರೆ ಹೊಸ ಕೂದಲು ಹುಟ್ಟುತ್ತದೆ.

ನೈಸರ್ಗಿಕವಾದ ಮಾಯಿಶ್ಚರೈಸರ್
ಒಣ ಕೂದಲು ಇದ್ದರೆ ಕೂದಲು ಕವಲೊಡೆಯುವುದು, ಉದುರುವುದು, ತಲೆಹೊಟ್ಟು ಈ ರೀತಿಯ ಸಮಸ್ಯೆ ಕಂಡು ಬರುತ್ತದೆ, ಅಲ್ಲದೆ ಕೂದಲು ಕೂಡ ಆಕರ್ಷಕವಾಗಿ ಕಾಣುವುದಿಲ್ಲ. ಲೋಳೆ ಸರ ಹಚ್ಚಿದರೆ ಕೂದಲಿನಲ್ಲಿ ಮಾಯಿಶ್ಚರೈಸರ್ ಇರುತ್ತದೆ. ಇದರಿಂದ ಕೂದಲಿನ ಆರೋಗ್ಯ ಹೆಚ್ಚುವುದು, ನೋಡಲು ಆಕರ್ಷಕವಾಗಿ ಕಾಣುವುದು.

ತಲೆಹೊಟ್ಟನ್ನು ಹೋಗಲಾಡಿಸುತ್ತದೆ
ತಲೆ ಹೊಟ್ಟಿನ ಸಮಸ್ಯೆಯನ್ನು ಹೋಗಲಾಡಿಸಲು ಬೆಸ್ಟ್ ಮದ್ದು ಲೋಳೆಸರ. ಕೂದಲಿನ ಬುಡ ಒಣಗಿದರೆ ತಲೆಹೊಟ್ಟು ಉಂಟಾಗುವುದು, ಲೋಳೆಸರವನ್ನು ತಲೆಗೆ ಹಚ್ಚಿ 20-30 ನಿಮಿಷ ಇಟ್ಟು ತಲೆ ತೊಳೆಯಿರಿ. ಈ ರೀತಿ ಮಾಡಿದರೆ ಉತ್ತಮ ಫಲಿತಾಂಶವನ್ನು ಕಾಣಬಹುದು.

ತಲೆ ತುರಿಕೆಗೆ
ತಲೆಹೊಟ್ಟು ಇದ್ದರೆ ತಲೆ ತುರಿಸಿ ಗಾಯವಾಗಿರುತ್ತದೆ. ಅಂತಹವರು ಲೋಳೆಸರ ಹಚ್ಚಿ ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿ ಕೂದಲನ್ನು ಚೆನ್ನಾಗಿ ಒಣಗಿಸಬೇಕು. ಹೀಗೆ ಮಾಡಿದರೆ ಗಾಯ ಬೇಗನೆ ಒಣಗುವುದು, ಕೂದಲೂ ಸೊಂಪಾಗಿ ಬೆಳೆಯುತ್ತದೆ.

ಹಣೆಯ ಮೇಲ್ಭಾಗದ ಕೂದಲು ಕಡಿಮೆಯಾಗುವುದು
ಕೆಲವರಿಗೆ ಹಣೆಯ ಮೇಲ್ಬಾಗದ ಕೂದಲು ಉದುರಿಸಲಾರಂಭಿಸುತ್ತದೆ. ಇದು ಕೂಡ ಬಕ್ಕ ತಲೆಯ ಲಕ್ಷಣವಾಗಿದೆ. ಈ ಎಲ್ಲಾ ಕೂದಲಿನ ಸಮಸ್ಯೆಗೆ ಪರಿಹಾರ ಲೋಳೆಸರದಲ್ಲಿದೆ.



Click it and Unblock the Notifications