Latest Updates
-
ಹವಾಮಾನ ಇಲಾಖೆ ಎಚ್ಚರಿಕೆ: ಬಿರುಗಾಳಿ ಮಳೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ಸಂಬಂಧಗಳ ಆತಂಕ ಕಾಡ್ತಿದೆಯಾ? ನೆಮ್ಮದಿ ನೀಡುವ ಉಚಿತ ಸಹಾಯವಾಣಿಗಳು -
IMD ಮಳೆ ಮುನ್ಸೂಚನೆ: ಬಾಲ್ಕನಿ ಸುರಕ್ಷತೆಗೆ ಈ ಕ್ರಮಗಳನ್ನು ಪಾಲಿಸಿ -
ಆರೋಗ್ಯಕರ ಆಹಾರ ಪದ್ಧತಿ: ಬೇಸಿಗೆಯಲ್ಲಿ ಲವಲವಿಕೆಯಿಂದ ಇರಲು ಹೀಗೆ ಮಾಡಿ -
ಅನುಷ್ಕಾ ಶರ್ಮಾ ಸ್ಟೇಡಿಯಂ-ಕೋರ್ ಲುಕ್: ಕ್ರಿಕೆಟ್ ಸೀಸನ್ನ ಹೊಸ ಕ್ರೇಜ್ -
ಇಂದಿನ ರಾಶಿ ಭವಿಷ್ಯ: ನಿಮ್ಮ ಜೀವನದಲ್ಲಿ ಕಾದಿದೆ ಅಚ್ಚರಿಯ ಬದಲಾವಣೆ! -
ಅಹಮದಾಬಾದ್ ದೋಸೆ ಹಿಟ್ಟಿನ ಆತಂಕ: ನಿಮ್ಮ ಮಕ್ಕಳ ಆರೋಗ್ಯಕ್ಕೆ ಈ ಎಚ್ಚರಿಕೆ ಅಗತ್ಯ! -
ಫಿಟ್ನೆಸ್ ಕ್ರೇಜ್: ಮನೆಯಲ್ಲೇ ಫಿಟ್ ಆಗಿರೋದು ಹೇಗೆ? -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ!
7 ಬಗೆಯ ಕೂದಲಿನ ಸಮಸ್ಯೆಗೆ ಪರಿಹಾರ-ಲೋಳೆ ಸರ
ಕೂದಲಿನ ಸಮಸ್ಯೆಗೆ ನಾವೆಲ್ಲಾ ಯಾವ ಶ್ಯಾಂಪೂ ಬಳಸಿದರೆ ಕೂದಲು ಉದುರುವುದು ನಿಲ್ಲುತ್ತದೆ ಎಂದು ಯೋಚಿಸುತ್ತೇವೆ. ಆದರೆ ಲೋಳೆಸರ ಹಚ್ಚಿ ನೋಡಿದರೆ ಹೇಗೆ ಎಂದು ಯೋಚಿಸುವುದೇ ಇಲ್ಲ. ಈ ಲೋಳೆಸರವನ್ನು ಮನೆಯಲ್ಲಿ ಸ್ಥಳಾವಕಾಶ ಕಮ್ಮಿಯಿದ್ದರೂ ಬೆಳೆಸಬಹುದು. ಆದ್ದರಿಂದ ಈ ವಿಧಾನ ದುಬಾರಿಯಲ್ಲ, ಸೊಬಗಿನ ಕೂದಲನ್ನು ಪಡೆಯಬಹುದು.
ಇದನ್ನು ಈ ಕೆಳಗಿನ ಕೂದಲಿನ ಸಮಸ್ಯೆಗೆ ಬಳಸಿದರೆ ಅತ್ಯುತ್ತಮವಾದ ಪ್ರಯೋಜವನ್ನು ಪಡೆಯಬಹುದು.

ಕೂದುರು ಉದುರುವುದಕ್ಕೆ ಪರಿಹಾರ
ಕೂದಲಿನ ಬುಡಕ್ಕೆ ಲೋಳೆಸರ ಹಚ್ಚಿ ಅರ್ಧ ಗಂಟೆ ಬಿಟ್ಟು ತಲೆ ತೊಳೆದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ. ತಲೆಗೆ ಹಚ್ಚುವುದರ ಜೊತೆಗೆ ಇದರ ಜ್ಯೂಸ್ ಮಾಡಿ ಕುಡಿದರೆ ಕೂದಲು ಉದುರುವ ಸಮಸ್ಯೆಯಿಂದ ಬೇಗನೆ ಗುಣಮುಖವಾಗಬಹುದು.

ಕಂಡೀಷನರ್
ಲೋಳೆಸರ ನೈಸರ್ಗಿಕವಾದ ಕಂಡೀಷನರ್ ಆಗಿದ್ದು ಕೂದಲನ್ನು ಮೃದುವಾಗಿಸಿ, ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ.

ಬಕ್ಕತಲೆ ಉಂಟಾಗುವುದನ್ನು ತಡೆಯುತ್ತದೆ
ಬಕ್ಕ ತಲೆ ಹೆಚ್ಚಿನ ಪುರುಷರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಬಕ್ಕೆ ತಲೆ ಉಂಟಾಗುತ್ತಿದ್ದರೆ ಪ್ರತಿದಿನಾ ಲೋಳೆಸರ ಹಚ್ಚಿ. ಈ ರೀತಿ2-3 ಕಾಲದವರೆಗೆ ಹಚ್ಚಿದರೆ ಹೊಸ ಕೂದಲು ಹುಟ್ಟುತ್ತದೆ.

ನೈಸರ್ಗಿಕವಾದ ಮಾಯಿಶ್ಚರೈಸರ್
ಒಣ ಕೂದಲು ಇದ್ದರೆ ಕೂದಲು ಕವಲೊಡೆಯುವುದು, ಉದುರುವುದು, ತಲೆಹೊಟ್ಟು ಈ ರೀತಿಯ ಸಮಸ್ಯೆ ಕಂಡು ಬರುತ್ತದೆ, ಅಲ್ಲದೆ ಕೂದಲು ಕೂಡ ಆಕರ್ಷಕವಾಗಿ ಕಾಣುವುದಿಲ್ಲ. ಲೋಳೆ ಸರ ಹಚ್ಚಿದರೆ ಕೂದಲಿನಲ್ಲಿ ಮಾಯಿಶ್ಚರೈಸರ್ ಇರುತ್ತದೆ. ಇದರಿಂದ ಕೂದಲಿನ ಆರೋಗ್ಯ ಹೆಚ್ಚುವುದು, ನೋಡಲು ಆಕರ್ಷಕವಾಗಿ ಕಾಣುವುದು.

ತಲೆಹೊಟ್ಟನ್ನು ಹೋಗಲಾಡಿಸುತ್ತದೆ
ತಲೆ ಹೊಟ್ಟಿನ ಸಮಸ್ಯೆಯನ್ನು ಹೋಗಲಾಡಿಸಲು ಬೆಸ್ಟ್ ಮದ್ದು ಲೋಳೆಸರ. ಕೂದಲಿನ ಬುಡ ಒಣಗಿದರೆ ತಲೆಹೊಟ್ಟು ಉಂಟಾಗುವುದು, ಲೋಳೆಸರವನ್ನು ತಲೆಗೆ ಹಚ್ಚಿ 20-30 ನಿಮಿಷ ಇಟ್ಟು ತಲೆ ತೊಳೆಯಿರಿ. ಈ ರೀತಿ ಮಾಡಿದರೆ ಉತ್ತಮ ಫಲಿತಾಂಶವನ್ನು ಕಾಣಬಹುದು.

ತಲೆ ತುರಿಕೆಗೆ
ತಲೆಹೊಟ್ಟು ಇದ್ದರೆ ತಲೆ ತುರಿಸಿ ಗಾಯವಾಗಿರುತ್ತದೆ. ಅಂತಹವರು ಲೋಳೆಸರ ಹಚ್ಚಿ ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿ ಕೂದಲನ್ನು ಚೆನ್ನಾಗಿ ಒಣಗಿಸಬೇಕು. ಹೀಗೆ ಮಾಡಿದರೆ ಗಾಯ ಬೇಗನೆ ಒಣಗುವುದು, ಕೂದಲೂ ಸೊಂಪಾಗಿ ಬೆಳೆಯುತ್ತದೆ.

ಹಣೆಯ ಮೇಲ್ಭಾಗದ ಕೂದಲು ಕಡಿಮೆಯಾಗುವುದು
ಕೆಲವರಿಗೆ ಹಣೆಯ ಮೇಲ್ಬಾಗದ ಕೂದಲು ಉದುರಿಸಲಾರಂಭಿಸುತ್ತದೆ. ಇದು ಕೂಡ ಬಕ್ಕ ತಲೆಯ ಲಕ್ಷಣವಾಗಿದೆ. ಈ ಎಲ್ಲಾ ಕೂದಲಿನ ಸಮಸ್ಯೆಗೆ ಪರಿಹಾರ ಲೋಳೆಸರದಲ್ಲಿದೆ.



Click it and Unblock the Notifications




