Latest Updates
-
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ! -
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ!
ಕೂದಲು ಉದುರುವ ಸಮಸ್ಯೆಗೆ ಮನೆಯಲ್ಲಿಯೇ ಪರಿಹಾರ
ಕೂದಲು ಉದುರುವುದು ಅನೇಕರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಅನಾರೋಗ್ಯ, ವಿಟಮಿನ್ ಗಳ ಕೊರತೆ, ಕೂದಲಿನ ಆರೈಕೆ ಸರಿಯಾಗಿ ಮಾಡದಿರುವುದು ಅಥವಾ ph ಸಮತೋಲದಲ್ಲಿ ಇಲ್ಲದಿರುವ ಶ್ಯಾಂಪೂಗಳನ್ನು ಬಳಕೆ ಇವುಗಳು ಕೂದಲು ಉದುರಲು ಪ್ರಮುಖ ಕಾರಣಗಳಾಗಿವೆ. ಈ ರೀತಿ ಕೂದಲು ಉದುರುವುದನ್ನು ತಡೆಗಟ್ಟಲು ಆದಷ್ಟು ರಾಸಯನಿಕ ಇರುವ ಶ್ಯಾಂಪೂಗಳನ್ನು ಬಳಸಲು ಹೋಗಬಾರದು. ನೈಸರ್ಗಿಕ ಸಾಧನಗಳಾದ ಸೀಗೆಕಾಯಿ, ಅಂಟವಾಳ (ಅಂಟ್ವಾಳ) ಬಳಸಿ ತಲೆಯನ್ನು ಶುಚಿಗೊಳಿಸುವುದು ಒಳ್ಳೆಯದು. ಸ್ವಾಭಾವಿಕವಾಗಿ ದೊರೆಯುವ ಸಾಧನಗಳಿಂದ ನೀವೆ ಶ್ಯಾಂಪೂ ಕೂಡ ತಯಾರಿಸಿಬಹುದಾಗಿದ್ದು, ಈ ರೀತಿ ತಯಾರಿಸಿದ ಶ್ಯಾಂಪೂ ಕೂದಲಿಗೆ ಬಳಸಿದರೆ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುವುದು. ನೈಸರ್ಗಿಕ ಶ್ಯಾಂಪೂ ಬಳಸುವ ವಿಧಾನ ನೋಡಿ ಇಲ್ಲಿದೆ.

1. ಅಂಟವಾಳ ಶ್ಯಾಂಪೂ: ಅಂಟವಾಳ ಬಳಸಿ ಕೂದಲಿನ ಪೋಷಣೆ ಮಾಡವುದಷ್ಟೇ ಅಲ್ಲ ತಲೆಯಲ್ಲಿ ಹೇನಿನ ಸಮಸ್ಯೆ ಇದ್ದರೆ ಇದನ್ನು ಬಳಸಿದರೆ ಆ ಸಮಸ್ಯೆಯನ್ನು ಹೋಗಲಾಡಿಸಬಹುದು. 4-5 ಅಂಟವಾಳ ಕಾಯಿಗಳನ್ನು ತೆಗೆದುಕೊಂಡು ಸ್ವಲ್ಪ ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ಹಾಕಿ ಒಂದು ರಾತ್ರಿ ಬಿಡಬೇಕು. ನಂತರ ಸ್ನಾನ ಮಾಡುವ 20 ನಿಮಿಷ ಮುನ್ನ ಅಂಟವಾಳ ಚೆನ್ನಾಗಿ ಕೈಯಲ್ಲಿ ಹಿಸುಕಿ, ನಂತರ ನೀರನ್ನು ತಲೆಗೆ ಹಚ್ಚಿ 20 ನಿಮಿಷ ಬಿಡಬೇಕು. ನಂತರ ಸ್ನಾನ ಮಾಡುವಾಗ ತಲೆಯನ್ನು ಚೆನ್ನಾಗಿ ಉಜ್ಜಿ ತೊಳೆದರೆ ಕೂದಲು ನುಣುಪಾಗುವುದು ಮತ್ತು ಕೂದಲು ಉದುರುವುದು ಕಡಿಮೆಯಾಗುತ್ತದೆ.
2. ಅಡುಗೆ ಸೋಡಾ: ಅಡುಗೆ ಸೋಡಾ ಕೂದಲಿನ ಆರೈಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದನ್ನು ಬಳಸಿ ಕೂದಲಿನಲ್ಲಿರುವ ಕೊಳೆಯನ್ನು ತೆಗೆಯಬಹುದು. ಒಂದು ಚಮಚ ಅಡುಗೆ ಸೋಡಾವನ್ನು ಒಂದು ಕಪ್ ನೀರಿಗೆ ಹಾಕಿ ಮಿಶ್ರ ಮಾಡಿ ಚೆನ್ನಾಗಿ ಕೂದಲಿಗೆ ಮಸಾಜ್ ಮಾಡಬೇಕು. ನಂತರ ಅದರಿಂದ ಮೆಲ್ಲನೆ ಮಸಾಜ್ ಮಾಡಿ 10 ನಿಮಿಷದ ಬಳಿಕ ತಲೆ ತೊಳೆದರೆ ಕೊಳೆ ಹೋಗುವುದು, ಕೂದಲು ಆರೋಗ್ಯವನ್ನು ಪಡೆಯುತ್ತದೆ. ದಪ್ಪ ಅಥವಾ ಗುಂಗುರು ಕೂದಲು ಇರುವವರಿಗೆ ಸ್ವಲ್ಪ ಅಧಿಕ ಅಡುಗೆ ಸೋಡಾ ಬೇಕಾಗುವುದು. ಈ ರೀತಿ ಮಾಡಿದಾಗ ಕೂದಲು ತುಂಬಾ ಒಣಗಿದಂತೆ ಭಾಸವಾದರೆ ಅರ್ಥ ಬಕೆಟ್ ನೀರಿಗೆ ಒಂದು ಚಮಚ ವಿನಿಗರ್ ಹಾಕಿ ಕಂಡೀಷನರ್ ಆಗಿ ಬಳಸಿದರೆ ಕೂದಲು ಮೃದುವಾಗುವುದು.
3.ವಿನಿಗರ್ ಮತ್ತು ನೀರು: 2 ಚಮಚ ವಿನಿಗರ್ ಅನ್ನು ಹದ ಬಿಸಿ ನೀರಿನಲ್ಲಿ ಕಲೆಸಿ ಅದನ್ನು ತಲೆಗೆ ಮಸಾಜ್ ಮಡಿ 15-20 ನಿಮಿಷ ಬಿಡಬೇಕು. ಅದರಲ್ಲೂ ಆಪಲ್ ವಿನಿಗರ್ ಸೈಡರ್ ಬಳಸಿದರೆ ಒಳ್ಳೆಯದು. ಈ ರೀತಿ ಮಾಡಿದರೆ ಕೂದಲಿನ ಆರೈಕೆ ಒಳ್ಳೆಯದು.
4. ಸೀಗೆಕಾಯಿ: ತಲೆಗೆ ಸೀಗೆಕಾಯಿ ಪುಡಿ ಹಚ್ಚಿ ತೊಳೆದರೆ ಕೂದಲು ಉದುರುವುದು ನಿಂತು ಸೊಂಪಾಗಿ ಬೆಳೆಯುವುದು. ಸೀಗೆಕಾಯಿ ಹಚ್ಚಿದಾಗ ಕೆಲವರಿಗೆ ಕಣ್ಣಿನಲ್ಲಿ ತುರಿಕೆ ಕಂಡು ಬರುತ್ತದೆ. ಆದ್ದರಿಂದ ಕಣ್ಣಿಗೆ ತಾಗಿಸಿದಂತೆ ಹಚ್ಚಿ.
ಸಲಹೆ: ಸ್ನಾನಕ್ಕೆ ಅರ್ಧ ಗಂಟೆ ಮುಂಚೆ ಕೂದಲಿಗೆ ಚೆನ್ನಾಗಿ ಎಣ್ಣೆ ಹಚ್ಚಿ ಮಸಾಜ್ ಮಾಡಿ.



Click it and Unblock the Notifications