Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಕೂದಲು ಉದುರುವ ಸಮಸ್ಯೆಗೆ ಮನೆಯಲ್ಲಿಯೇ ಪರಿಹಾರ
ಕೂದಲು ಉದುರುವುದು ಅನೇಕರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಅನಾರೋಗ್ಯ, ವಿಟಮಿನ್ ಗಳ ಕೊರತೆ, ಕೂದಲಿನ ಆರೈಕೆ ಸರಿಯಾಗಿ ಮಾಡದಿರುವುದು ಅಥವಾ ph ಸಮತೋಲದಲ್ಲಿ ಇಲ್ಲದಿರುವ ಶ್ಯಾಂಪೂಗಳನ್ನು ಬಳಕೆ ಇವುಗಳು ಕೂದಲು ಉದುರಲು ಪ್ರಮುಖ ಕಾರಣಗಳಾಗಿವೆ. ಈ ರೀತಿ ಕೂದಲು ಉದುರುವುದನ್ನು ತಡೆಗಟ್ಟಲು ಆದಷ್ಟು ರಾಸಯನಿಕ ಇರುವ ಶ್ಯಾಂಪೂಗಳನ್ನು ಬಳಸಲು ಹೋಗಬಾರದು. ನೈಸರ್ಗಿಕ ಸಾಧನಗಳಾದ ಸೀಗೆಕಾಯಿ, ಅಂಟವಾಳ (ಅಂಟ್ವಾಳ) ಬಳಸಿ ತಲೆಯನ್ನು ಶುಚಿಗೊಳಿಸುವುದು ಒಳ್ಳೆಯದು. ಸ್ವಾಭಾವಿಕವಾಗಿ ದೊರೆಯುವ ಸಾಧನಗಳಿಂದ ನೀವೆ ಶ್ಯಾಂಪೂ ಕೂಡ ತಯಾರಿಸಿಬಹುದಾಗಿದ್ದು, ಈ ರೀತಿ ತಯಾರಿಸಿದ ಶ್ಯಾಂಪೂ ಕೂದಲಿಗೆ ಬಳಸಿದರೆ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುವುದು. ನೈಸರ್ಗಿಕ ಶ್ಯಾಂಪೂ ಬಳಸುವ ವಿಧಾನ ನೋಡಿ ಇಲ್ಲಿದೆ.

1. ಅಂಟವಾಳ ಶ್ಯಾಂಪೂ: ಅಂಟವಾಳ ಬಳಸಿ ಕೂದಲಿನ ಪೋಷಣೆ ಮಾಡವುದಷ್ಟೇ ಅಲ್ಲ ತಲೆಯಲ್ಲಿ ಹೇನಿನ ಸಮಸ್ಯೆ ಇದ್ದರೆ ಇದನ್ನು ಬಳಸಿದರೆ ಆ ಸಮಸ್ಯೆಯನ್ನು ಹೋಗಲಾಡಿಸಬಹುದು. 4-5 ಅಂಟವಾಳ ಕಾಯಿಗಳನ್ನು ತೆಗೆದುಕೊಂಡು ಸ್ವಲ್ಪ ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ಹಾಕಿ ಒಂದು ರಾತ್ರಿ ಬಿಡಬೇಕು. ನಂತರ ಸ್ನಾನ ಮಾಡುವ 20 ನಿಮಿಷ ಮುನ್ನ ಅಂಟವಾಳ ಚೆನ್ನಾಗಿ ಕೈಯಲ್ಲಿ ಹಿಸುಕಿ, ನಂತರ ನೀರನ್ನು ತಲೆಗೆ ಹಚ್ಚಿ 20 ನಿಮಿಷ ಬಿಡಬೇಕು. ನಂತರ ಸ್ನಾನ ಮಾಡುವಾಗ ತಲೆಯನ್ನು ಚೆನ್ನಾಗಿ ಉಜ್ಜಿ ತೊಳೆದರೆ ಕೂದಲು ನುಣುಪಾಗುವುದು ಮತ್ತು ಕೂದಲು ಉದುರುವುದು ಕಡಿಮೆಯಾಗುತ್ತದೆ.
2. ಅಡುಗೆ ಸೋಡಾ: ಅಡುಗೆ ಸೋಡಾ ಕೂದಲಿನ ಆರೈಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದನ್ನು ಬಳಸಿ ಕೂದಲಿನಲ್ಲಿರುವ ಕೊಳೆಯನ್ನು ತೆಗೆಯಬಹುದು. ಒಂದು ಚಮಚ ಅಡುಗೆ ಸೋಡಾವನ್ನು ಒಂದು ಕಪ್ ನೀರಿಗೆ ಹಾಕಿ ಮಿಶ್ರ ಮಾಡಿ ಚೆನ್ನಾಗಿ ಕೂದಲಿಗೆ ಮಸಾಜ್ ಮಾಡಬೇಕು. ನಂತರ ಅದರಿಂದ ಮೆಲ್ಲನೆ ಮಸಾಜ್ ಮಾಡಿ 10 ನಿಮಿಷದ ಬಳಿಕ ತಲೆ ತೊಳೆದರೆ ಕೊಳೆ ಹೋಗುವುದು, ಕೂದಲು ಆರೋಗ್ಯವನ್ನು ಪಡೆಯುತ್ತದೆ. ದಪ್ಪ ಅಥವಾ ಗುಂಗುರು ಕೂದಲು ಇರುವವರಿಗೆ ಸ್ವಲ್ಪ ಅಧಿಕ ಅಡುಗೆ ಸೋಡಾ ಬೇಕಾಗುವುದು. ಈ ರೀತಿ ಮಾಡಿದಾಗ ಕೂದಲು ತುಂಬಾ ಒಣಗಿದಂತೆ ಭಾಸವಾದರೆ ಅರ್ಥ ಬಕೆಟ್ ನೀರಿಗೆ ಒಂದು ಚಮಚ ವಿನಿಗರ್ ಹಾಕಿ ಕಂಡೀಷನರ್ ಆಗಿ ಬಳಸಿದರೆ ಕೂದಲು ಮೃದುವಾಗುವುದು.
3.ವಿನಿಗರ್ ಮತ್ತು ನೀರು: 2 ಚಮಚ ವಿನಿಗರ್ ಅನ್ನು ಹದ ಬಿಸಿ ನೀರಿನಲ್ಲಿ ಕಲೆಸಿ ಅದನ್ನು ತಲೆಗೆ ಮಸಾಜ್ ಮಡಿ 15-20 ನಿಮಿಷ ಬಿಡಬೇಕು. ಅದರಲ್ಲೂ ಆಪಲ್ ವಿನಿಗರ್ ಸೈಡರ್ ಬಳಸಿದರೆ ಒಳ್ಳೆಯದು. ಈ ರೀತಿ ಮಾಡಿದರೆ ಕೂದಲಿನ ಆರೈಕೆ ಒಳ್ಳೆಯದು.
4. ಸೀಗೆಕಾಯಿ: ತಲೆಗೆ ಸೀಗೆಕಾಯಿ ಪುಡಿ ಹಚ್ಚಿ ತೊಳೆದರೆ ಕೂದಲು ಉದುರುವುದು ನಿಂತು ಸೊಂಪಾಗಿ ಬೆಳೆಯುವುದು. ಸೀಗೆಕಾಯಿ ಹಚ್ಚಿದಾಗ ಕೆಲವರಿಗೆ ಕಣ್ಣಿನಲ್ಲಿ ತುರಿಕೆ ಕಂಡು ಬರುತ್ತದೆ. ಆದ್ದರಿಂದ ಕಣ್ಣಿಗೆ ತಾಗಿಸಿದಂತೆ ಹಚ್ಚಿ.
ಸಲಹೆ: ಸ್ನಾನಕ್ಕೆ ಅರ್ಧ ಗಂಟೆ ಮುಂಚೆ ಕೂದಲಿಗೆ ಚೆನ್ನಾಗಿ ಎಣ್ಣೆ ಹಚ್ಚಿ ಮಸಾಜ್ ಮಾಡಿ.



Click it and Unblock the Notifications











