Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಕ್ಟೋಬರ್ 30ಕ್ಕೆ ರಾಹು-ಕೇತು ಸಂಚಾರ: ರಾಹು-ಕೇತು ದೋಷಕ್ಕೆ ಪರಿಹಾರವೇನು?
ಅಕ್ಟೋಬರ್ 30ರಂದು ಎರಡು ಪ್ರಮುಖ ಗ್ರಹಗಳು ರಾಶಿ ಬದಲಾವಣೆ ಮಾಡುತ್ತಿವೆ. ಈ ದಿನ ನೆರಳು ಗ್ರಹಗಳಾದ ರಾಹು ಹಾಗೂ ಕೇತು ಸಂಚಾರ. ಶನಿಯ ನಂತರ, ನಿಧಾನವಾಗಿ ಚಲಿಸುವ ಗ್ರಹಗಳು ರಾಹು ಮತ್ತು ಕೇತುಗಳಾಗಿವೆ. ರಾಹು-ಕೇತುಗಳು ಹಿಮ್ಮುಖವಾಗಿ ಚಲಿಸುತ್ತವೆ, ಈ ಗ್ರಹಗಳು 1.8 ವರ್ಷಕ್ಕೊಮ್ಮೆ ತಮ್ಮ ರಾಶಿ ಬದಲಾವಣೆ ಮಾಡುತ್ತವೆ. ಈ ಸಂಚಾರದಲ್ಲಿ ರಾಹು ಮೀನ ರಾಶಿಗೆ ಕೇತು ಕನ್ಯಾ ರಾಶಿಗೆ ಪ್ರವೇಶಿಸಲಿದೆ.
ರಾಹು-ಕೇತುವನ್ನು ಶುಭ ಗ್ರಹಗಳೆಂದು ಪರಿಗಣಿಸುವುದಿಲ್ಲ, ಇವುಗಳು ಅನೇಕ ಸಮಸ್ಯೆಗಳನ್ನು ತರುವ ಗ್ರಹಗಳಾಗಿರುವುದರಿಂದ ಇವುಗಳನ್ನು ಅಶುಭ ಗ್ರಹಗಳೆಂದು ಕರೆಯಲಾಗುವುದು. ಜ್ಯೋತಿಷ್ಯವು ರಾಹು-ಕೇತು ದೋಷಕ್ಕೆ ಕೆಲವು ಪರಿಹಾರ ಹೇಳಿದೆ, ಆ ಪರಿಹಾರಗಳೇನು ಎಂದು ನೋಡೋಣ:

ಮೊದಲಿಗೆ ರಾಹು-ಕೇತು ದೋಷ ವ್ಯಕ್ತಿಯ ಮೇಲೆ ಬೀರುವ ಪ್ರಭಾವವೇನು?
ರಾಹು-ಕೇತು ದೋಷವಿದ್ದಾಗ ಮಾನಸಿಕ ಅಸ್ವಸ್ಥತೆ, ಹಣಕಾಸಿನಲ್ಲಿ ನಷ್ಟ, ಕಾನೂನು ಸಂಬಂಧಿತ ಸಮಸ್ಯೆ, ಕುಟುಂಬದಲ್ಲಿ ಸಾವು ಅಥವಾ ಕಾಯಿಲೆ, ಬದುಕಿನಲ್ಲಿ ಇದ್ದಕ್ಕಿದ್ದಂತೆ ತುಂಬಾ ತೊಂದರೆ ಬರುವುದು, ತ್ವಚೆ ಸಮಸ್ಯೆ, ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆ ಈ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವುದು.
ಕೇತುವಿನ ಸ್ಥಾನ ಸರಿಯಾಗಿ ಇಲ್ಲದಿದ್ದರೆ ಮೆದುಳಿನ ಸಮಸ್ಯೆ, ಕಿವಿ ಸಮಸ್ಯೆ, ಶ್ವಾಸಕೋಶದ ಸಮಸ್ಯೆ ಈ ರೀತಿಯ ತೊಂದರೆಗಳು ಉಂಟಾಗುವುದು. ರಾಹು-ಕೇತು ದೊಷವಿದ್ದರೆ ಬದುಕಿನ ಮೇಲೆ ತುಂಬಾನೇ ಋಣಾತ್ಮಕ ಪ್ರಭಾವ ಬೀರುವುದು.
ರಾಹು-ಕೇತುವಿಗೆ ಪರಿಹಾರ
* ಅನಾಥ ಮಕ್ಕಳಿಗೆ ಸಿಹಿತಿಂಡಿ ನೀಡಿ
* ದೋಷ ನಿವಾರಣ ಮಂತ್ರ 108 ಮಂತ್ರ ಪಠಿಸಿ.
* ರುದ್ರಾಕ್ಷ ಮಾಲೆ ಧರಿಸಿ
* ಬೆಳ್ಳಿಯ ನಿವಾರಣ ರಿಂಗ್ ಧರಿಸಿ
* ಶಿವನ ದೇವಾಲಯಕ್ಕೆ ಬೆಳ್ಳಿ ಅಥವಾಚಿನ್ನದ ಹೂವಿನ ಮೂರ್ತಿ ನೀಡಿ
* ಕೇತು, ರಾಹು ಮಂತ್ರ ಪಠಿಸಿ.
* ಸಾಸಿವೆಯೆಣ್ಣೆ ದಾನ ಮಾಡಿ
* ಬೀದಿ ನಾಯಿಗಳಿಗೆ ಆಹಾರ ನೀಡಿ.
* ಕಪ್ಪು ಬಟ್ಟೆ ಧರಿಸಿ
* ಹಳದಿ ಮತ್ತು ಬಿಳಿ ಕೇತುವಿಗೆ ಪ್ರಿಯವಾದ ಬಣ್ಣಗಳಾಗಿದೆ.
* ರಾಹು ದೋಷದ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಅಥವಾ ನೀಲಿ ಬಣ್ಣದ ಕರವಸ್ತ್ರ ಇಟ್ಟುಕೊಳ್ಳಿ. ಕೇತುದೋಷದ ಸಂದರ್ಭದಲ್ಲಿ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಿ, ಗುಲಾಬಿ ಬಣ್ಣದ ಕರವಸ್ತ್ರ ಸದಾ ನಿಮ್ಮ ಜೊತೆ ಇರಿಸಿ.
* ಪ್ರತಿದಿಮ 108 ಬಾರಿ 'ಓಂ ನಮಃ ಶಿವಾಯ' ಮಂತ್ರವನ್ನು ಪಠಿಸಿ. ಸೋಮವಾರ ರುದ್ರಾಭಿಷೇಕ ಮಾಡಿಸಿ.
* ರಾಹು ಮತ್ತು ಕೇತು ಗ್ರಹಗಳನ್ನು ಶಾಂತಗೊಳಿಸಲು, ಮನೆಯಲ್ಲಿ ಶ್ರೀಕೃಷ್ಣನ ಫೋಟೋವಿರಿಸಿ, ನಿತ್ಯವೂ ಪೂಜಿಸಿ.
* 'ಓಂ ನಮೋ ಭಗವತೇ ವಾಸುದೇವಾಯ ನಮಃ' ಮಂತ್ರವನ್ನು ಕನಿಷ್ಠ 108 ಬಾರಿ ಜಪಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications