Latest Updates
-
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ!
ಅಕ್ಟೋಬರ್ 30ಕ್ಕೆ ರಾಹು-ಕೇತು ಸಂಚಾರ: ರಾಹು-ಕೇತು ದೋಷಕ್ಕೆ ಪರಿಹಾರವೇನು?
ಅಕ್ಟೋಬರ್ 30ರಂದು ಎರಡು ಪ್ರಮುಖ ಗ್ರಹಗಳು ರಾಶಿ ಬದಲಾವಣೆ ಮಾಡುತ್ತಿವೆ. ಈ ದಿನ ನೆರಳು ಗ್ರಹಗಳಾದ ರಾಹು ಹಾಗೂ ಕೇತು ಸಂಚಾರ. ಶನಿಯ ನಂತರ, ನಿಧಾನವಾಗಿ ಚಲಿಸುವ ಗ್ರಹಗಳು ರಾಹು ಮತ್ತು ಕೇತುಗಳಾಗಿವೆ. ರಾಹು-ಕೇತುಗಳು ಹಿಮ್ಮುಖವಾಗಿ ಚಲಿಸುತ್ತವೆ, ಈ ಗ್ರಹಗಳು 1.8 ವರ್ಷಕ್ಕೊಮ್ಮೆ ತಮ್ಮ ರಾಶಿ ಬದಲಾವಣೆ ಮಾಡುತ್ತವೆ. ಈ ಸಂಚಾರದಲ್ಲಿ ರಾಹು ಮೀನ ರಾಶಿಗೆ ಕೇತು ಕನ್ಯಾ ರಾಶಿಗೆ ಪ್ರವೇಶಿಸಲಿದೆ.
ರಾಹು-ಕೇತುವನ್ನು ಶುಭ ಗ್ರಹಗಳೆಂದು ಪರಿಗಣಿಸುವುದಿಲ್ಲ, ಇವುಗಳು ಅನೇಕ ಸಮಸ್ಯೆಗಳನ್ನು ತರುವ ಗ್ರಹಗಳಾಗಿರುವುದರಿಂದ ಇವುಗಳನ್ನು ಅಶುಭ ಗ್ರಹಗಳೆಂದು ಕರೆಯಲಾಗುವುದು. ಜ್ಯೋತಿಷ್ಯವು ರಾಹು-ಕೇತು ದೋಷಕ್ಕೆ ಕೆಲವು ಪರಿಹಾರ ಹೇಳಿದೆ, ಆ ಪರಿಹಾರಗಳೇನು ಎಂದು ನೋಡೋಣ:

ಮೊದಲಿಗೆ ರಾಹು-ಕೇತು ದೋಷ ವ್ಯಕ್ತಿಯ ಮೇಲೆ ಬೀರುವ ಪ್ರಭಾವವೇನು?
ರಾಹು-ಕೇತು ದೋಷವಿದ್ದಾಗ ಮಾನಸಿಕ ಅಸ್ವಸ್ಥತೆ, ಹಣಕಾಸಿನಲ್ಲಿ ನಷ್ಟ, ಕಾನೂನು ಸಂಬಂಧಿತ ಸಮಸ್ಯೆ, ಕುಟುಂಬದಲ್ಲಿ ಸಾವು ಅಥವಾ ಕಾಯಿಲೆ, ಬದುಕಿನಲ್ಲಿ ಇದ್ದಕ್ಕಿದ್ದಂತೆ ತುಂಬಾ ತೊಂದರೆ ಬರುವುದು, ತ್ವಚೆ ಸಮಸ್ಯೆ, ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆ ಈ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವುದು.
ಕೇತುವಿನ ಸ್ಥಾನ ಸರಿಯಾಗಿ ಇಲ್ಲದಿದ್ದರೆ ಮೆದುಳಿನ ಸಮಸ್ಯೆ, ಕಿವಿ ಸಮಸ್ಯೆ, ಶ್ವಾಸಕೋಶದ ಸಮಸ್ಯೆ ಈ ರೀತಿಯ ತೊಂದರೆಗಳು ಉಂಟಾಗುವುದು. ರಾಹು-ಕೇತು ದೊಷವಿದ್ದರೆ ಬದುಕಿನ ಮೇಲೆ ತುಂಬಾನೇ ಋಣಾತ್ಮಕ ಪ್ರಭಾವ ಬೀರುವುದು.
ರಾಹು-ಕೇತುವಿಗೆ ಪರಿಹಾರ
* ಅನಾಥ ಮಕ್ಕಳಿಗೆ ಸಿಹಿತಿಂಡಿ ನೀಡಿ
* ದೋಷ ನಿವಾರಣ ಮಂತ್ರ 108 ಮಂತ್ರ ಪಠಿಸಿ.
* ರುದ್ರಾಕ್ಷ ಮಾಲೆ ಧರಿಸಿ
* ಬೆಳ್ಳಿಯ ನಿವಾರಣ ರಿಂಗ್ ಧರಿಸಿ
* ಶಿವನ ದೇವಾಲಯಕ್ಕೆ ಬೆಳ್ಳಿ ಅಥವಾಚಿನ್ನದ ಹೂವಿನ ಮೂರ್ತಿ ನೀಡಿ
* ಕೇತು, ರಾಹು ಮಂತ್ರ ಪಠಿಸಿ.
* ಸಾಸಿವೆಯೆಣ್ಣೆ ದಾನ ಮಾಡಿ
* ಬೀದಿ ನಾಯಿಗಳಿಗೆ ಆಹಾರ ನೀಡಿ.
* ಕಪ್ಪು ಬಟ್ಟೆ ಧರಿಸಿ
* ಹಳದಿ ಮತ್ತು ಬಿಳಿ ಕೇತುವಿಗೆ ಪ್ರಿಯವಾದ ಬಣ್ಣಗಳಾಗಿದೆ.
* ರಾಹು ದೋಷದ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಅಥವಾ ನೀಲಿ ಬಣ್ಣದ ಕರವಸ್ತ್ರ ಇಟ್ಟುಕೊಳ್ಳಿ. ಕೇತುದೋಷದ ಸಂದರ್ಭದಲ್ಲಿ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಿ, ಗುಲಾಬಿ ಬಣ್ಣದ ಕರವಸ್ತ್ರ ಸದಾ ನಿಮ್ಮ ಜೊತೆ ಇರಿಸಿ.
* ಪ್ರತಿದಿಮ 108 ಬಾರಿ 'ಓಂ ನಮಃ ಶಿವಾಯ' ಮಂತ್ರವನ್ನು ಪಠಿಸಿ. ಸೋಮವಾರ ರುದ್ರಾಭಿಷೇಕ ಮಾಡಿಸಿ.
* ರಾಹು ಮತ್ತು ಕೇತು ಗ್ರಹಗಳನ್ನು ಶಾಂತಗೊಳಿಸಲು, ಮನೆಯಲ್ಲಿ ಶ್ರೀಕೃಷ್ಣನ ಫೋಟೋವಿರಿಸಿ, ನಿತ್ಯವೂ ಪೂಜಿಸಿ.
* 'ಓಂ ನಮೋ ಭಗವತೇ ವಾಸುದೇವಾಯ ನಮಃ' ಮಂತ್ರವನ್ನು ಕನಿಷ್ಠ 108 ಬಾರಿ ಜಪಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications