Latest Updates
-
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ
ಅಕ್ಟೋಬರ್ 30ಕ್ಕೆ ರಾಹು-ಕೇತು ಸಂಚಾರ: ರಾಹು-ಕೇತು ದೋಷಕ್ಕೆ ಪರಿಹಾರವೇನು?
ಅಕ್ಟೋಬರ್ 30ರಂದು ಎರಡು ಪ್ರಮುಖ ಗ್ರಹಗಳು ರಾಶಿ ಬದಲಾವಣೆ ಮಾಡುತ್ತಿವೆ. ಈ ದಿನ ನೆರಳು ಗ್ರಹಗಳಾದ ರಾಹು ಹಾಗೂ ಕೇತು ಸಂಚಾರ. ಶನಿಯ ನಂತರ, ನಿಧಾನವಾಗಿ ಚಲಿಸುವ ಗ್ರಹಗಳು ರಾಹು ಮತ್ತು ಕೇತುಗಳಾಗಿವೆ. ರಾಹು-ಕೇತುಗಳು ಹಿಮ್ಮುಖವಾಗಿ ಚಲಿಸುತ್ತವೆ, ಈ ಗ್ರಹಗಳು 1.8 ವರ್ಷಕ್ಕೊಮ್ಮೆ ತಮ್ಮ ರಾಶಿ ಬದಲಾವಣೆ ಮಾಡುತ್ತವೆ. ಈ ಸಂಚಾರದಲ್ಲಿ ರಾಹು ಮೀನ ರಾಶಿಗೆ ಕೇತು ಕನ್ಯಾ ರಾಶಿಗೆ ಪ್ರವೇಶಿಸಲಿದೆ.
ರಾಹು-ಕೇತುವನ್ನು ಶುಭ ಗ್ರಹಗಳೆಂದು ಪರಿಗಣಿಸುವುದಿಲ್ಲ, ಇವುಗಳು ಅನೇಕ ಸಮಸ್ಯೆಗಳನ್ನು ತರುವ ಗ್ರಹಗಳಾಗಿರುವುದರಿಂದ ಇವುಗಳನ್ನು ಅಶುಭ ಗ್ರಹಗಳೆಂದು ಕರೆಯಲಾಗುವುದು. ಜ್ಯೋತಿಷ್ಯವು ರಾಹು-ಕೇತು ದೋಷಕ್ಕೆ ಕೆಲವು ಪರಿಹಾರ ಹೇಳಿದೆ, ಆ ಪರಿಹಾರಗಳೇನು ಎಂದು ನೋಡೋಣ:

ಮೊದಲಿಗೆ ರಾಹು-ಕೇತು ದೋಷ ವ್ಯಕ್ತಿಯ ಮೇಲೆ ಬೀರುವ ಪ್ರಭಾವವೇನು?
ರಾಹು-ಕೇತು ದೋಷವಿದ್ದಾಗ ಮಾನಸಿಕ ಅಸ್ವಸ್ಥತೆ, ಹಣಕಾಸಿನಲ್ಲಿ ನಷ್ಟ, ಕಾನೂನು ಸಂಬಂಧಿತ ಸಮಸ್ಯೆ, ಕುಟುಂಬದಲ್ಲಿ ಸಾವು ಅಥವಾ ಕಾಯಿಲೆ, ಬದುಕಿನಲ್ಲಿ ಇದ್ದಕ್ಕಿದ್ದಂತೆ ತುಂಬಾ ತೊಂದರೆ ಬರುವುದು, ತ್ವಚೆ ಸಮಸ್ಯೆ, ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆ ಈ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವುದು.
ಕೇತುವಿನ ಸ್ಥಾನ ಸರಿಯಾಗಿ ಇಲ್ಲದಿದ್ದರೆ ಮೆದುಳಿನ ಸಮಸ್ಯೆ, ಕಿವಿ ಸಮಸ್ಯೆ, ಶ್ವಾಸಕೋಶದ ಸಮಸ್ಯೆ ಈ ರೀತಿಯ ತೊಂದರೆಗಳು ಉಂಟಾಗುವುದು. ರಾಹು-ಕೇತು ದೊಷವಿದ್ದರೆ ಬದುಕಿನ ಮೇಲೆ ತುಂಬಾನೇ ಋಣಾತ್ಮಕ ಪ್ರಭಾವ ಬೀರುವುದು.
ರಾಹು-ಕೇತುವಿಗೆ ಪರಿಹಾರ
* ಅನಾಥ ಮಕ್ಕಳಿಗೆ ಸಿಹಿತಿಂಡಿ ನೀಡಿ
* ದೋಷ ನಿವಾರಣ ಮಂತ್ರ 108 ಮಂತ್ರ ಪಠಿಸಿ.
* ರುದ್ರಾಕ್ಷ ಮಾಲೆ ಧರಿಸಿ
* ಬೆಳ್ಳಿಯ ನಿವಾರಣ ರಿಂಗ್ ಧರಿಸಿ
* ಶಿವನ ದೇವಾಲಯಕ್ಕೆ ಬೆಳ್ಳಿ ಅಥವಾಚಿನ್ನದ ಹೂವಿನ ಮೂರ್ತಿ ನೀಡಿ
* ಕೇತು, ರಾಹು ಮಂತ್ರ ಪಠಿಸಿ.
* ಸಾಸಿವೆಯೆಣ್ಣೆ ದಾನ ಮಾಡಿ
* ಬೀದಿ ನಾಯಿಗಳಿಗೆ ಆಹಾರ ನೀಡಿ.
* ಕಪ್ಪು ಬಟ್ಟೆ ಧರಿಸಿ
* ಹಳದಿ ಮತ್ತು ಬಿಳಿ ಕೇತುವಿಗೆ ಪ್ರಿಯವಾದ ಬಣ್ಣಗಳಾಗಿದೆ.
* ರಾಹು ದೋಷದ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಅಥವಾ ನೀಲಿ ಬಣ್ಣದ ಕರವಸ್ತ್ರ ಇಟ್ಟುಕೊಳ್ಳಿ. ಕೇತುದೋಷದ ಸಂದರ್ಭದಲ್ಲಿ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಿ, ಗುಲಾಬಿ ಬಣ್ಣದ ಕರವಸ್ತ್ರ ಸದಾ ನಿಮ್ಮ ಜೊತೆ ಇರಿಸಿ.
* ಪ್ರತಿದಿಮ 108 ಬಾರಿ 'ಓಂ ನಮಃ ಶಿವಾಯ' ಮಂತ್ರವನ್ನು ಪಠಿಸಿ. ಸೋಮವಾರ ರುದ್ರಾಭಿಷೇಕ ಮಾಡಿಸಿ.
* ರಾಹು ಮತ್ತು ಕೇತು ಗ್ರಹಗಳನ್ನು ಶಾಂತಗೊಳಿಸಲು, ಮನೆಯಲ್ಲಿ ಶ್ರೀಕೃಷ್ಣನ ಫೋಟೋವಿರಿಸಿ, ನಿತ್ಯವೂ ಪೂಜಿಸಿ.
* 'ಓಂ ನಮೋ ಭಗವತೇ ವಾಸುದೇವಾಯ ನಮಃ' ಮಂತ್ರವನ್ನು ಕನಿಷ್ಠ 108 ಬಾರಿ ಜಪಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications