Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಇಂದು(ಡಿ.11) ಮೋಕ್ಷದ ಏಕಾದಶಿ: ಧಾರ್ಮಿಕ ನಂಬಿಕೆ ಪ್ರಕಾರ ಈ ಏಕಾದಶಿ ವ್ರತ ಮಾಡಿದವರಿಗೆ ಈ ಪ್ರಯೋಜನಗಳಿವೆ
ಡಿಸೆಂಬರ್ 11ಕ್ಕೆ ಮೋಕ್ಷದ ಏಕಾದಶಿ, ಮಾರ್ಶಿರ ಮಾಸದ ಶುಕ್ಲಪಕ್ಷದಲ್ಲಿ ಬರುವ ಏಕಾದಶಿಯಿದು. ಈ ದಿನದ ಮತ್ತೊಂದು ವಿಶೇಷವೆಂದರೆ ಗೀತಾ ಜಯಂತಿ ಕೂಡ ಹೌದು. ಶ್ರೀ ಕೃಷ್ಣನು ಅರ್ಜುನನಿಗೆ ಗೀತೋಪದೇಶ ನೀಡಿದ ದಿನವೂ ಆಗಿದೆ. ಈ ದಿನ ತುಳಸಿ ಪೂಜೆ ಮಾಡಿ ಏಕಾದಶಿಯನ್ನು ಆಚರಿಸಲಾಗುವುದು.

ಮೋಕ್ಷದ ಏಕಾದಶಿ ಮಹತ್ವ, ಆಚರಣೆಯ ವಿಧಿ ನಿಯಮಗಳ ಬಗ್ಗೆ ತಿಳಿಯೋಣ:
ಮೋಕ್ಷದ ಏಕಾದಶಿ ತಿಥಿ: ಮುಂಜಾನೆ 3:24ಕ್ಕೆ ಪ್ರಾರಂಭವಾಗಿದೆ.
ಏಕಾದಶಿ ತಿಥಿ ಮುಕ್ತಾಯ ಮಧ್ಯರಾತ್ರಿ 1.09ಕ್ಕೆ ಮುಕ್ತಾಯವಾಗಲಿದೆ.
ಮೋಕ್ಷದ ಏಕಾದಶಿ ಹೆಸರೇ ಸೂಚಿಸುವಂತೆ ಮೋಕ್ಷ ಸಿಗುತ್ತದೆ ಎಂದು ಹೇಳಲಾಗುವುದು. ಈ ಏಕಾದಶಿ ಆಚರಣೆ ಉಳಿದ 23 ಏಕಾದಶಿ ಆಚರಣೆಗಳಿಗೆ ಸಮ ಎಂದು ಹೇಳಲಾಗುವುದು. ಯಾರು ಈ ಏಕಾದಶಿಯನ್ನು ಆಚರಣೆ ಮಾಡುತ್ತಾರೋ ಅವರಿಗೆ ಮೋಕ್ಷ ಸಿಗಲಿದೆ, ಜೀವನದಲ್ಲಿ ಎದುರಿಸುತ್ತಿದ್ದ ಕಷ್ಟಗಳು ದೂರಾಗಲಿದೆ ಎಂದು ಹೇಳಲಾಗುವುದು.
ಮೋಕ್ಷದ ಏಕಾದಶಿಯಂದು ತುಳಸಿ ಪೂಜೆ ಮಾಡುವುದರಿಂದ ಕಷ್ಟಗಳು ದೂರಾಗಲಿದೆ
ಮೋಕ್ಷದ ಏಕಾದಶಿಯಂದು ತುಳಸಿಯನ್ನು ಪೂಜಿಸುವುದರಂದ ಕಷ್ಟಗಳು ದೂರಾಗಿ ಸಂತೋಷ, ಸಮೃದ್ಧಿ ಹೆಚ್ಚಾಗಲಾಗಿದೆ ಎಂದು ಹೇಳಾಗುವುದು. ಸಂತಾನ ಭಾಗ್ಯಕ್ಕಾಗಿ ಕೂಡ ಈ ದಿನ ಪೂಜೆ ಸಲ್ಲಿಸಲಾಗುವುದು. ಮೋಕ್ಷದ ಏಕಾದಶಿ ಆಚರಣೆ ಮಾಡುವುದರಿಂದ ಆರ್ಥಿಕಸಮಸ್ಯೆಗಳಿದ್ದರೆ ದೂರಾಗುವುದು, ವೈವಾಹಿಕ ಬದುಕಿನಲ್ಲಿನ ಭಿನ್ನಾಭಿಪ್ರಾಯ ದೂರಾಗಲಿದೆ.
ಮೋಕ್ಷದ ಏಕಾದಶಿ ಆಚರಣೆಯನ್ನು ಹೇಗೆ ಮಾಡಲಾಗುವುದು?
ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ ಸಂಕಲ್ಪ ತೆಗೆದುಕೊಳ್ಳುಲಾಗುವುದು
ಈ ದಿನ ಉಪವಾಸವಿದ್ದು ಏಕಾದಶಿ ವ್ರತ ಆಚರಿಸಲಾಗುವುದು
ಶ್ರೀ ವಿಷ್ಣುವಿಗೆ ತುಪ್ಪದ ದೀಪ ಹಚ್ಚಿ ಹೂವು, ಹಣ್ಣುಗಳನ್ನು ಅರ್ಪಿಸಿ, ಧೂಪ ಅರ್ಪಿಸಿ ಪೂಜೆ ಮಾಡಲಾಗುವುದು.
ಮಧ್ಯರಾತ್ರಿಯಲ್ಲಿ ಪೂಜೆ
ಮೋಕ್ಷದ ಏಕಾದಶಿ ಪೂಜೆಯನ್ನು ಮಧ್ಯರಾತ್ರಿಯಲ್ಲಿ ಮಾಡಲಾಗುವುದು, ಇಡೀ ದಿನ ನಿದ್ದೆ ಮಾಡದೆ ಶ್ರೀ ವಿಷ್ಣುವಿನ ಮಂತ್ರಗಳನ್ನು ಪಠಿಸುತ್ತಾ ಅಥವಾ ಭಗವದ್ಗೀತೆ ಓದುತ್ತಾ ಸಮಯ ಕಳೆಯಬೇಕು. ಹಗೆ ಮಾಡುವುದರಿಂದ ಕಷ್ಟಗಳು ದೂರಾಗಿ ಇಷ್ಟಾರ್ಥ ನೆರವೇರಲಿದೆ.
ಪಾರಣ ಸಮಯ
ಡಿಸೆಂಬರ್ 12 ಬೆಳಗ್ಗೆ 06:32ರಿಂದ 08:49
ಪಿತೃದೋಷ ನಿವಾರಣೆಯಾಗುವುದು
ಮೋಕ್ಷದ ಏಕಾದಶಿಯಂದು ವೈಕುಂಠದ ಬಾಗಿಲು ತೆರೆಯುತ್ತದೆ ಎಂದು ಹೇಳಲಾಗುವುದು, ಈ ದಿನ ಏಕಾದಶಿ ಆಚರಣೆ ಮಾಡಿದವರು ಮರಣದ ನಂತರ ವೈಕುಂಠಕ್ಕೆ ಹೋಗುತ್ತಾರೆ ಎಂಬುವುದು ಧಾರ್ಮಿಕ ನಂಬಿಕೆ.
ಪಿತೃದೋಷ ಎಂಬುವುದು ದೊಡ್ಡ ಶಾಪ, ಪಿತೃದೋಷವಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಆದರೆ ಮೋಕ್ಷದ ಏಕಾದಶಿ ಆಚರಣೆ ಮಾಡುವುದರಿಂದ ಪಿತೃದೋಷ ನಿವಾರಣೆಯಾಗುವುದು, ಆದ್ದರಿಂದ ಈ ಏಕಾದಶಿ ವ್ಯಕ್ತಿಯನ್ನು ಪಾಪ ಮುಕ್ತವಾಗಿಸುವುದು ಎಂದು ಹೇಳಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
