Latest Updates
-
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್!
ಶಾಲಾ ಬಾಲಕನ ಆಹುತಿ: ನೆಲಮಂಗಲ ರೆಸಾರ್ಟಲ್ಲಿ ಯಾವುದೂ ಸರಿಯಿಲ್ಲ

ಆತಂಕದ ವಿಷಯವೆಂದರೆ ರೆಸಿಡೆನ್ಸಿ ಹಾಲಿಡೇ ರೆಸಾರ್ಟ್ ನವರು ತಮ್ಮ ರೆಸಾರ್ಟಿಗೆ ವಿವಿಧ ಹೆಸರುಗಳನ್ನು ನೀಡಿ ಶಾಲೆಗಳನ್ನು ವಂಚಿಸುತ್ತಿದೆ. ಈ ಮಧ್ಯೆ, ಪ್ರೆಸಿಡೆನ್ಸಿ ರೆಸಾರ್ಟ್ ಎಂಬ ಹೆಸರಿನ ಇದೇ ರೆಸಾರ್ಟಿಗೆ ಬೆಂಗಳೂರಿನ ಮತ್ತೊಂದು ಪ್ರತಿಷ್ಠಿತ ಶಾಲೆಯೂ ಮಕ್ಕಳನ್ನು ಇದೇ ಬುಧವಾರ ಪಿಕ್ನಿಕ್ ಗೆ ಕರೆದುಕೊಂಡು ಹೋಗಲು ಸಜ್ಜಾಗಿದೆ. ಆದರೆ ಪೋಷಕರು ಯಾವುದೇ ಕಾರಣಕ್ಕೂ ತಮ್ಮ ಮಕ್ಕಳನ್ನು ಈ ರೆಸಾರ್ಟಿಗೆ ಕಳಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ವಾಸ್ತವವಾಗಿ, ಹೆಸರಿಗಷ್ಟೇ ಉತ್ತಮ ರೆಸಾರ್ಟ್ ಎನಿಸಿಕೊಂಡಿರುವ ರೆಸಿಡೆನ್ಸಿ ಹಾಲಿಡೇ ರೆಸಾರ್ಟ್ ಅವ್ಯವಸ್ಥೆಗಳ ಆಗರವಾಗಿದೆ. ಇಲ್ಲಿ ಸುರಕ್ಷಾ ಕ್ರಮಗಳು ಇಲ್ಲ. ಬಾಲಕ ತೇಜಸ್ ನ ಸಾವಿಗೆ ಇದೇ ಕಾರಣ ಎಂದು ಪೋಷಕರು ದೂರಿದ್ದಾರೆ.
ಹಣದ ದುರಾಸೆಗೆ ಬಿದ್ದು ಮೂರ್ನಾಲ್ಕು ಶಾಲೆಗಳ ಮಕ್ಕಳನ್ನು ಒಟ್ಟಿಗೇ ಕರೆಸಿಕೊಳ್ಳುವ ಈ ರೆಸಾರ್ಟಿನವರು ಮಕ್ಕಳ ಸುರಕ್ಷತೆಯತ್ತ ಗಮನವೇ ಹರಿಸುತ್ತಿಲ್ಲ. ಇಲ್ಲಿರುವುದು ಎಲ್ಲಾ ಹರಕುಮುರುಕು ಸೌಲಭ್ಯಗಳು. ಸ್ವಿಮ್ಮಿಂಗ್ ಪೂಲ್ ಅಂತೂ ಅಪಾಯದ ಕೂಪವಾಗಿದೆ. ಇನ್ನು ಮಕ್ಕಳಿಗೆ ಇಲ್ಲಿ ನೀಡುವ ತಿಂಡಿ ತಿನಿಸೂ ಕಳಪೆ ಮಟ್ಟದ್ದು. ಇರುವ ನಾಲ್ಕಾರು ಸಿಬ್ಬಂದಿಯೇ ಎಲ್ಲವನ್ನೂ ನಿಭಾಯಿಸಬೇಕಾಗುತ್ತದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಇದೇ ರೆಸಾರ್ಟ್ ಗೆ ಪಿಕ್ ನಿಕ್ ನಿಗದಿಪಡಿಸಿರುವ ಬೇರೆ ಬೇರೆ ಶಾಲೆಗಳ ಮಕ್ಕಳನ್ನು ಇಲ್ಲಿಗೆ ಕಳಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ತಕ್ಷಣ ಸಂಬಂಧಪಟ್ಟ ಇಲಾಖೆಯವರು ಇಲ್ಲಿಗೆ ಭೇಟಿ ನೀಡಬೇಕು. ಇಲ್ಲಿರುವ ಸೌಲಭ್ಯಗಳ ಬಗ್ಗೆ ತನಿಖೆ ನಡೆಸಬೇಕು. ಪಿಕ್ನಿಕ್ ಹೆಸರಿನಲ್ಲಿ ಮಕ್ಕಳನ್ನು ಇಲ್ಲಿಗೆ ಕರೆತರುವುದಕ್ಕೆ ಅನುಮತಿ ನೀಡಬಾರದು ಎಂದು ಪೋಷಕರು ಸರಕಾರವನ್ನು ಆಗ್ರಹಿಸಿದ್ದಾರೆ.



Click it and Unblock the Notifications
