Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ನಂದನ್ ನಿಲೇಕಣಿ ಯಾಕಿಂಗಾದರೋ ಶಿವಾ !?

ಬಲಿಷ್ಠ ಜನ ಲೋಕಪಾಲ ಮಸೂದೆಗಾಗಿ ಅಣ್ಣಾ ನಡೆಸುತ್ತಿರುವ ಹೋರಾಟ ಅಣ್ಣ ನಿಲೇಕಣಿಗೆ ಬಾಲಿಶವಾಗಿದೆಯಂತೆ. ಈ ಹೋರಾಟದ ಹಿಮ್ಮೇಳದಲ್ಲಿ ನಿಲೇಕಣಿ ನಮ್ಮ ದೇಶದ ಸಂಸತ್ತಿನ ಸ್ಥಾಯಿ ಸಮಿತಿಯನ್ನು (standing committee) ಇಡೀ ವಿಶ್ವದಲ್ಲೇ ಅದ್ವಿತೀಯ ಎಂದೆಲ್ಲ ಕೊಂಡಾಡಿದ್ದಾರೆ. ok fine!
'ಈ ಭೂಮಿ ಮೇಲಿನ ನಾಲ್ಕಾರು ಸಂಸತ್ತುಗಳನ್ನು ನೇರವಾಗಿ ಪರಾಮರ್ಶಿಸಿದ್ದೇನೆ. ನೂರಾರು ವಿಶ್ವ ನಾಯಕರನ್ನು ಭೇಟಿ ಮಾಡಿದ್ದೇನೆ. ಆದರೆ ನಮ್ಮಲ್ಲಿರುವಂತಹ standing committee ಅಲ್ಲೆಲ್ಲೂ ಕಂಡುಬರಲಿಲ್ಲ. ನಮ್ಮ ಸಮಿತಿಯ ಕಾರ್ಯತತ್ಪರತೆ ಅಮೋಘ. ಸಮಿತಿಯಲ್ಲಿನ ಪರಿಣತರ ಪರ/ವಿರೋಧ ಪ್ರಶ್ನಾವಳಿ ವೈಖರಿ ವಿಷಯವನ್ನು ಪರಿಪೂರ್ಣ ದೃಷ್ಟಿಯಿಂದ ನೋಡುತ್ತದೆ.
;ಒಟ್ನಲ್ಲಿ ಬಾಟಮ್ ಲೈನ್ ಏನಪಾ ಅಂತಂತಂದರೆ standing committee ಅನುಮೋದಿಸುವ ಮಸೂದೆಗಳೆಲ್ಲ ಶಂಖುವಿಂದ ಬಂದ ತೀರ್ಥದಂತೆ ಪಂಚಾಮೃತವಾಗಿರುತ್ತದೆ' ಎಂದಿದ್ದಾರೆ ಅಣ್ಣ ನಿಲೇಕಣಿ.
ok fine! ಅಣ್ಣ ನಿಲೇಕಣಿ ನೀವೇಳಿದ್ದೆಲ್ಲ ಒಪ್ಕೋತೀವಿ. ಆದರೆ ನೀವೇ ಹೇಳಿದಂತೆ ಈ second-to-none standing committee ಇದುವರೆಗೆ ಅನುಮೋದಿಸಿರುವ ಮಸೂದೆಗಳೆಲ್ಲ ಏನಾಗಿವೆ ಅಣ್ಣ? ಅವೆಲ್ಲ ಅದ್ಭುತವಾಗಿ ಕಾರ್ಯತತ್ಪರವಾಗಿವೆಯಾ ಅಣ್ಣ? ಹಾಗಾದರೆ ಇಂತಹ standing committeeಯಿಂದಲೇ ಅನುಮೋದಿತವಾದ ಕಾನೂನುಗಳ ಹೊರತಾಗಿಯೂ ಯಾಕಣ್ಣ ಭಾರತದಲ್ಲಿ ಭ್ರಷ್ಟ ವ್ಯವಸ್ಥೆ ತಾಂಡವವಾಡುತ್ತಿದೆ. ಇಡೀ ಭಾರತ 'ನಂದನ'ವನವಾಗಿರಬೇಕಿತ್ತಲ್ಲ ಅಣ್ಣ.



Click it and Unblock the Notifications











