For Quick Alerts
ALLOW NOTIFICATIONS  
For Daily Alerts

ಕಟ್ಟೆ ಪುರಾಣ: ಕಟ್ಟಾ ಯುಗಳ ಗೀತೆ ಚಿತ್ರಾನ್ನ ಚಿತ್ರಾನ್ನ

By Srinath
|
katta-subramanya-naidu-day-out-in-jail
ಬೆಂಗಳೂರು, ಆಗಸ್ಟ್ 9: ನಾಡಿನ ಸ್ವಾತಂತ್ರ್ಯೋತ್ಸವದ ಮುನ್ನಾ ಸಂದರ್ಭದಲ್ಲಿ ತಮ್ಮ ಸ್ವಾತಂತ್ರ್ಯವನ್ನೇ ಕಳೆದುಕೊಂಡು ಜೈಲು ಹಕ್ಕಿಯಾಗಿರುವ ಮಾಜಿ ಮಂತ್ರಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಜೈಲಾಘಾತಕ್ಕೆ ಒಳಗಾಗಿದ್ದು, ಇನ್ನೂ ಚೇತರಿಸಿಕೊಂಡಿಲ್ಲ. ಜಡ್ಜ್ ಕಟ್ಟಾ ಆಜ್ಞೆಯಿಂದಾಗಿ ಸೋಮವಾರ 12 ಗಂಟೆ ವೇಳೆಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಕಟ್ಟಾ ಸುಬ್ರಹ್ಮಣ್ಯ ದಡಬಡಾಯಿಸಿ ಬಂದಿದ್ದರು. ವಿಚಾರಣೆಯ ನಂತರ ಜೈಲೇ ಗತಿ ಎಂಬುದು ಸ್ಪಷ್ಟವಾಗುತ್ತಿದ್ದಂತೆ ಗಳಗಳನೆ ಅತ್ತಿದ್ದರು.

ಮನೆಯವರು, ಕಟ್ಟಾಳುಗಳು ಊಟ, ತಿಂಡಿ ಪ್ಯಾಕ್ ಹಿಡಿದುಬಂದಿದ್ದರು. ಆದರೆ ಸಂಕಟ ಹೆಚ್ಚಾಗಿ ಊಟ ಬೇಡವೆಂದರು ಕಟ್ಟಾ. ಆಯ್ತು, ಜೈಲಿಗೆ ಹೋದ ತಕ್ಷಣ ತಿನ್ನೋಕೆ ಏನಾದರು ಕೊಟ್ಟೇ ಕೊಡ್ತಾರೆ ಬಿಡು ಎಂದು ಸುಮ್ಮನಾದರು. ಆದರೆ 5 ಗಂಟೆಗೆ ಸರಿಯಾಗಿ ಜೈಲಿಗೆ ಎಂಟ್ರಿ ಹಾಕಿದ ಮಹಾನುಭಾವನಿಗೆ ಏನೂ ತಿನ್ನೋಕೂ ಮನಸು ಬರಲಿಲ್ಲ. ಶಿವಾ ಅಂತ ಬರಿ ಹೊಟ್ಟೆಯಲ್ಲೇ ತಾಚಿ.

ಮನೆಯಿಂದ ಬಂದಿದ್ದ ಊಟವೂ ವಾಪಸ್ ಮನೆ ಸೇರಿತು. ಇದೀಗ ಬೆಳಗ್ಗೆ ಎದ್ದು ಹೊಟ್ಟೆ ತಾಳ ಹಾಕುತ್ತಿದೆ ಕಟ್ಟಾ ಸಾಹೇಬರಿಗೆ. ಆದರೆ ಚಿಂತೆ ಬೇಡ. ಚಿತ್ರಾನ್ನ ಹದವಾಗಿ ಸಿದ್ಧವಾಗಿದೆ. ಉಣ್ಣಬಹುದು ಎಂದಿದ್ದಾರೆ ಜೈಲಾಧಿಕಾರಿಗಳು. ಇದು ಕಟ್ಟಾ ಪುತ್ರನಿಗೂ ಅನ್ವಯವಾಗಿದೆ. ಯಥಾ ಪಿತಾ ತಥಾ ಸುತಾ! ಒಟ್ಟಿನಲ್ಲಿ ಜೈಲಿನಲ್ಲಿ ಅಪ್ಪ-ಮಗನದು ಚಿತ್ರಾನ್ನ, ಚಿತ್ರಾನ್ನ, ಚಿತ್ರ, ಚಿತ್ರ, ವಿಚಿತ್ರಾನ್ನ...

English summary

Katta Subramanya Naidu Day out in Parappana Agrahara Jail, Katta Case- officers congratulated, Katta- no bail only jail, ಕಟ್ಟೆ ಪುರಾಣ: ಕಟ್ಟಾ ದ್ವಯರಿಂದ ಯುಗಳ ಗೀತೆ ಚಿತ್ರಾನ್ನ ಚಿತ್ರಾನ್ನ

Katta Subramanya Naidu Day out in Parappana Agrahara Jail, Katta Case- officers congratulated, Katta- no bail only jail,
Story first published: Tuesday, August 9, 2011, 11:29 [IST]
X
Desktop Bottom Promotion