Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಉತ್ತರ ಕರ್ನಾಟಕದಲ್ಲಿ ಕೋಡಿಮಠ ಸ್ವಾಮಿ ಪ್ರವಾಸ

ಯಡಿಯೂರಪ್ಪನವರ ಕುರ್ಚಿ ಗಡಗಡ ಎಂದು ಅವರು ಹೇಳಿದರೆ ವಿಧಾನಸೌಧದ ಕಿಟಕಿಗಳು ಕೂಡ ಕಟಕಟ ಎಂದಿರುತ್ತವೆ. ಅಡ್ವಾಣಿ ಪ್ರಧಾನಿ ಆಗಲ್ಲ ಅಂದಿದ್ದರು, ನಿಜವಾಯಿತು. ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿಯಾಗುವ ಯೋಗವಿದೆ ಎಂದು ಅವರು ಹೇಳಿದ್ದರು, ಏನಾಗುತ್ತೋ ಏನೋ. ರಾಜಕೀಯ ಭವಿಷ್ಯ ಹೇಳುವಲ್ಲಿ ಅವರದು ಎತ್ತಿದ ಕೈ. ಯಾವುದೇ ರಾಜಕೀಯ ಪಕ್ಷಭೇದ ಮಾಡದ ಶ್ರೀಗಳು ಬಿಡುವ ಈ ರಾಜಕೀಯ ಭವಿಷ್ಯವೆಂಬ ಬಾಣಗಳು ಅವರಿಗೆ ತಿರುಗುಬಾಣವಾಗಿವೆ. ಬೆದರಿಕೆಗಳು ಬಂದ ಕಾರಣ ಬಿಗಿ ಭದ್ರತೆಯನ್ನೂ ಒದಗಿಸಲಾಗಿತ್ತು.
ಇಂತಿರುವ ಹಾಸನ ಜಿಲ್ಲೆಯ ಹಾರನಹಳ್ಳಿಯ ಕೋಡಿಮಠದ ಶ್ರೀಗಳು ಏ.19ರಿಂದ ಕರ್ನಾಟಕದಲ್ಲಿ ಹಿರಿಯೂರು, ಬಳ್ಳಾರಿ, ಗಂಗಾವತಿ ಮತ್ತು ಕೊಪ್ಪಳ ಪ್ರವಾಸ ಕೈಗೊಂಡಿದ್ದು, ಕೆಲ ಭಕ್ತರ ಮನೆಗಳಿಗೆ ತೆರಳಿ, ಭಕ್ತಾದಿಗಳಿಗೆ ಹಿತವಚನ ನೀಡಲಿದ್ದಾರೆ, ಆಶೀರ್ವಚನ ನುಡಿಯಲಿದ್ದಾರೆ ಎಂಬ ಸುದ್ದಿ ಆ ಪ್ರದೇಶದಲ್ಲಿರುವ ಶ್ರೀಸಾಮಾನ್ಯರಲ್ಲಿ ಮಾತ್ರವಲ್ಲ ಆ ಪ್ರದೇಶದಲ್ಲಿರುವ ರಾಜಕೀಯ ಧುರೀಣರಿಗೂ ಮೈಮೇಲೆ ರೋಮಾಂಚನದ ಗುಳ್ಳೆಗಳೇಳುವಂತೆ ಮಾಡಿದೆ.
ಈ ಭೇಟಿಗೆ ಅಷ್ಟೊಂದು ಮಹತ್ವವೇಕೆಂದರೆ, ಅವರು ಭೇಟಿ ಮಾಡುತ್ತಿರುವುದು ಬಳ್ಳಾರಿ ನಗರಕ್ಕೆ. ಬಿರು ಬಿಸಿಲಿಗೂ ಅಕ್ರಮ ಗಣಿಗಾರಿಕೆಯ ಕಾವು ತಾಗಿದ್ದರಿಂದ ಅಲ್ಲಲ್ಲಿ ಆಗಾಗ ಆಲಿಕಲ್ಲು ಸಮೇತ ಮಳೆ ಕಾಣುತ್ತಿರುವ ಬಳ್ಳಾರಿಗೆ ಹಿರಿಯೂರು ಮುಖಾಂತರ ಏ.19ರಂದು ತಲುಪಲಿದ್ದಾರೆ. ಶ್ರೀಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಸೋಮವಾರ ರಾತ್ರಿ ಹಿರಿಯೂರಿನ ಭಕ್ತರ ಮನೆಯಲ್ಲಿ ವಸತಿ ಮಾಡಲಿದ್ದು, ಮಂಗಳವಾರ ಬಳ್ಳಾರಿ ತಲುಪಲಿದ್ದಾರೆ.
ಅವರ ರಾಜಕೀಯ ಭವಿಷ್ಯಗೇಳನೇ ಇರಲಿ, ಯಾರೇ ಅಧಿಕಾರ ಗದ್ದುಗೆ ಏರಲಿ, ಯಾರೇ ಬೀಳಲಿ... ಅವರು ಇತ್ತೀಚೆಗೆ ನೀಡಿರುವ ಮತ್ತೊಂದು ಭವಿಷ್ಯ ಉತ್ತರ ಕರ್ನಾಟಕದಲ್ಲಿ ತಲ್ಲಣವನ್ನುಂಟು ಮಾಡಿರುವುದು ಸುಳ್ಳಲ್ಲ. ಉತ್ತರ ಕರ್ನಾಟಕದಲ್ಲಿ ಮತ್ತೆ ಜಲಪ್ರಳಯವಾಗಲಿದೆ, ಧಾರ್ಮಿಕ ಗುರುವೊಬ್ಬರು ಅಸ್ತಂಗತರಾಗಲಿದ್ದಾರೆ, ತುಂಗಾ ನದಿ ಉಕ್ಕಿಹರಿದು ತುಂಬಾ ನಷ್ಟ ಉಂಟುಮಾಡಲಿದೆ, ಕಾರ್ತೀಕ ಮಾಸದಲ್ಲಿ ಪಕ್ಷವೊಂದು ಅವನತಿ ದಾರಿ ಹಿಡಿಯಲಿದೆ....
ಇಷ್ಟು ಸಾಕಲ್ಲ? ಜನ ಕಳವಳಕ್ಕೀಡಾಗಲು. ಇಂಥ ಸಂದರ್ಭದಲ್ಲಿಯೇ ಶ್ರೀಗಳು ಪ್ರವಾಸ ಕೈಗೊಳ್ಳುತ್ತಿರುವುದು ನಾನಾ ಊಹಾಪೋಹಗಳಿಗೆ ಕಾರಣವಾಗಿದೆ. ಕೋಡಿಮಠದ ಸ್ವಾಮೀಜಿಗಳು ಮತ್ತೇನು ನುಡಿಯಲಿದ್ದಾರೆ, ಜನರಿಗೆ ಏನು ಸಾಂತ್ವನ ನೀಡಲಿದ್ದಾರೆ, ಪ್ರಳಯ ತಪ್ಪಿಸಿಕೊಳ್ಳಲು ಏನು ಪರಿಹಾರ ಹೇಳಲಿದ್ದಾರೆ... ಅಥವಾ ಅಕ್ರಮ ಗಣಿಗಾರಿಕೆಯ ಬಗ್ಗೆಯೇ ಹೊಸ ಭವಿಷ್ಯವೇನಾದರೂ ನುಡಿಯಲಿದ್ದಾರಾ? ಜಸ್ಟ್ ವೇಟ್ ಅಂಡ್ ವಾಚ್.



Click it and Unblock the Notifications