Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಉತ್ತರ ಕರ್ನಾಟಕದಲ್ಲಿ ಕೋಡಿಮಠ ಸ್ವಾಮಿ ಪ್ರವಾಸ

ಯಡಿಯೂರಪ್ಪನವರ ಕುರ್ಚಿ ಗಡಗಡ ಎಂದು ಅವರು ಹೇಳಿದರೆ ವಿಧಾನಸೌಧದ ಕಿಟಕಿಗಳು ಕೂಡ ಕಟಕಟ ಎಂದಿರುತ್ತವೆ. ಅಡ್ವಾಣಿ ಪ್ರಧಾನಿ ಆಗಲ್ಲ ಅಂದಿದ್ದರು, ನಿಜವಾಯಿತು. ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿಯಾಗುವ ಯೋಗವಿದೆ ಎಂದು ಅವರು ಹೇಳಿದ್ದರು, ಏನಾಗುತ್ತೋ ಏನೋ. ರಾಜಕೀಯ ಭವಿಷ್ಯ ಹೇಳುವಲ್ಲಿ ಅವರದು ಎತ್ತಿದ ಕೈ. ಯಾವುದೇ ರಾಜಕೀಯ ಪಕ್ಷಭೇದ ಮಾಡದ ಶ್ರೀಗಳು ಬಿಡುವ ಈ ರಾಜಕೀಯ ಭವಿಷ್ಯವೆಂಬ ಬಾಣಗಳು ಅವರಿಗೆ ತಿರುಗುಬಾಣವಾಗಿವೆ. ಬೆದರಿಕೆಗಳು ಬಂದ ಕಾರಣ ಬಿಗಿ ಭದ್ರತೆಯನ್ನೂ ಒದಗಿಸಲಾಗಿತ್ತು.
ಇಂತಿರುವ ಹಾಸನ ಜಿಲ್ಲೆಯ ಹಾರನಹಳ್ಳಿಯ ಕೋಡಿಮಠದ ಶ್ರೀಗಳು ಏ.19ರಿಂದ ಕರ್ನಾಟಕದಲ್ಲಿ ಹಿರಿಯೂರು, ಬಳ್ಳಾರಿ, ಗಂಗಾವತಿ ಮತ್ತು ಕೊಪ್ಪಳ ಪ್ರವಾಸ ಕೈಗೊಂಡಿದ್ದು, ಕೆಲ ಭಕ್ತರ ಮನೆಗಳಿಗೆ ತೆರಳಿ, ಭಕ್ತಾದಿಗಳಿಗೆ ಹಿತವಚನ ನೀಡಲಿದ್ದಾರೆ, ಆಶೀರ್ವಚನ ನುಡಿಯಲಿದ್ದಾರೆ ಎಂಬ ಸುದ್ದಿ ಆ ಪ್ರದೇಶದಲ್ಲಿರುವ ಶ್ರೀಸಾಮಾನ್ಯರಲ್ಲಿ ಮಾತ್ರವಲ್ಲ ಆ ಪ್ರದೇಶದಲ್ಲಿರುವ ರಾಜಕೀಯ ಧುರೀಣರಿಗೂ ಮೈಮೇಲೆ ರೋಮಾಂಚನದ ಗುಳ್ಳೆಗಳೇಳುವಂತೆ ಮಾಡಿದೆ.
ಈ ಭೇಟಿಗೆ ಅಷ್ಟೊಂದು ಮಹತ್ವವೇಕೆಂದರೆ, ಅವರು ಭೇಟಿ ಮಾಡುತ್ತಿರುವುದು ಬಳ್ಳಾರಿ ನಗರಕ್ಕೆ. ಬಿರು ಬಿಸಿಲಿಗೂ ಅಕ್ರಮ ಗಣಿಗಾರಿಕೆಯ ಕಾವು ತಾಗಿದ್ದರಿಂದ ಅಲ್ಲಲ್ಲಿ ಆಗಾಗ ಆಲಿಕಲ್ಲು ಸಮೇತ ಮಳೆ ಕಾಣುತ್ತಿರುವ ಬಳ್ಳಾರಿಗೆ ಹಿರಿಯೂರು ಮುಖಾಂತರ ಏ.19ರಂದು ತಲುಪಲಿದ್ದಾರೆ. ಶ್ರೀಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಸೋಮವಾರ ರಾತ್ರಿ ಹಿರಿಯೂರಿನ ಭಕ್ತರ ಮನೆಯಲ್ಲಿ ವಸತಿ ಮಾಡಲಿದ್ದು, ಮಂಗಳವಾರ ಬಳ್ಳಾರಿ ತಲುಪಲಿದ್ದಾರೆ.
ಅವರ ರಾಜಕೀಯ ಭವಿಷ್ಯಗೇಳನೇ ಇರಲಿ, ಯಾರೇ ಅಧಿಕಾರ ಗದ್ದುಗೆ ಏರಲಿ, ಯಾರೇ ಬೀಳಲಿ... ಅವರು ಇತ್ತೀಚೆಗೆ ನೀಡಿರುವ ಮತ್ತೊಂದು ಭವಿಷ್ಯ ಉತ್ತರ ಕರ್ನಾಟಕದಲ್ಲಿ ತಲ್ಲಣವನ್ನುಂಟು ಮಾಡಿರುವುದು ಸುಳ್ಳಲ್ಲ. ಉತ್ತರ ಕರ್ನಾಟಕದಲ್ಲಿ ಮತ್ತೆ ಜಲಪ್ರಳಯವಾಗಲಿದೆ, ಧಾರ್ಮಿಕ ಗುರುವೊಬ್ಬರು ಅಸ್ತಂಗತರಾಗಲಿದ್ದಾರೆ, ತುಂಗಾ ನದಿ ಉಕ್ಕಿಹರಿದು ತುಂಬಾ ನಷ್ಟ ಉಂಟುಮಾಡಲಿದೆ, ಕಾರ್ತೀಕ ಮಾಸದಲ್ಲಿ ಪಕ್ಷವೊಂದು ಅವನತಿ ದಾರಿ ಹಿಡಿಯಲಿದೆ....
ಇಷ್ಟು ಸಾಕಲ್ಲ? ಜನ ಕಳವಳಕ್ಕೀಡಾಗಲು. ಇಂಥ ಸಂದರ್ಭದಲ್ಲಿಯೇ ಶ್ರೀಗಳು ಪ್ರವಾಸ ಕೈಗೊಳ್ಳುತ್ತಿರುವುದು ನಾನಾ ಊಹಾಪೋಹಗಳಿಗೆ ಕಾರಣವಾಗಿದೆ. ಕೋಡಿಮಠದ ಸ್ವಾಮೀಜಿಗಳು ಮತ್ತೇನು ನುಡಿಯಲಿದ್ದಾರೆ, ಜನರಿಗೆ ಏನು ಸಾಂತ್ವನ ನೀಡಲಿದ್ದಾರೆ, ಪ್ರಳಯ ತಪ್ಪಿಸಿಕೊಳ್ಳಲು ಏನು ಪರಿಹಾರ ಹೇಳಲಿದ್ದಾರೆ... ಅಥವಾ ಅಕ್ರಮ ಗಣಿಗಾರಿಕೆಯ ಬಗ್ಗೆಯೇ ಹೊಸ ಭವಿಷ್ಯವೇನಾದರೂ ನುಡಿಯಲಿದ್ದಾರಾ? ಜಸ್ಟ್ ವೇಟ್ ಅಂಡ್ ವಾಚ್.



Click it and Unblock the Notifications
