Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ನಿಜವಾದ ಕರಿಮಣಿ ಮಾಲೀಕನಾಗಲು ಈ 6 ಅರ್ಹತೆಗಳಿರಬೇಕು
ಕರಿಮಣಿ ಮಾಲಿಕ ನಾನಲ್ಲ ಎಂಬವುದು ಎಷ್ಟು ವೈರಲ್ ಆಗಿದೆ ಎಂದರೆ ಇದಕ್ಕೆ ರೀಲ್ಸ್ ಮಾಡದವರೇ ವಿರಳ ಅನ್ನಬಹುದು, ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರು ಈ ಕರಿಮಣಿ ಮಾಲಿಕ ಹಾಡನ್ನು ಗುನುಗುತ್ತಿದ್ದಾರೆ.
ಕೆಲವರು ಇದನ್ನು ಕರಿ ಮಣಿ ಮಾಲೀಕ ನೀನಲ್ಲ ಎಂದರೆ ಇನ್ನು ಕೆಲವರು ಕರಿಮಣಿ ಮಾಲೀಕ ನೀ.. ನಲ್ಲ ಅಂತಿದ್ದಾರೆ, ಒಟ್ಟಿನಲ್ಲಿ ಈ ಹಾಡಿನ ಕ್ರೇಝ್ ಅಂತೂ ಸಕತ್ ಆಗಿದೆ, 2 ದಶಕ ಹಿಂದಿನ ಹಾಡು ಈಗೀನ ಕಾಲದವರಿಗೆ ಇಷ್ಟವಾಗಿದ್ದು ಇನ್ನೂ ವಿಶೇಷ.

ಇದೀಗ ಈ ಹಾಡನ್ನು ಮತ್ತಷ್ಟು ಡೆವಲಪ್ ಮಾಡಿ ಕರಿಮಾಣಿ ಮಾಲೀಕ ರಾವುಲ್ಲ ಎಂದು ಹಾಡುತ್ತಿದ್ದಾರೆ, ಇದನ್ನು ಕೇಳುವಾಗ ತಮಾಷೆ ಅನಿಸುವುದು, ಆದರೆ ನಿಜವಾದ ಕರಿಮಣಿ ಮಾಲೀಕ ಯಾರು ಎಂಬುವುದು ತುಂಬಾ ಜವಾಬ್ದಾರಿಯುತ ಸ್ಥಾನ, ಯಾರು ಆ ಸ್ಥಾನವನ್ನು ತುಂಬುತ್ತಾರೋ ಅವರು ಮಾತ್ರ ಕರಿಮಣಿ ಮಾಲೀಕನಾಗಲು ಸಾಧ್ಯ..ಆದ್ದರಿಂದ ಕರಿಮಣಿ ಮಾಲೀಕನಿಗೆ ಕೆಲ ಯೋಗ್ಯತೆಗಳಿರಬೇಕು.
ಹಾಗಾದರೆ ಕರಿಮಣಿ ಮಾಲೀಕನಾಗಲು ಅವನಲ್ಲಿರುವ ಯೋಗ್ಯತೆಗಳೇನು ಎಂಬುವುದು ಕೂಡ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ, ಆ ಅರ್ಥಪೂರ್ಣ ಸಾಲುಗಳು ನಿಮಗಾಗಿ:
ಭೋಗೇಷು ರಾಜ:
ಕರಿಮಣಿ ಮಾಲೀಕನಾದವ ತನ್ನ ಪತ್ನಿಯನ್ನು ರಾಣಿತರ ನೋಡಿಕೊಳ್ಳಬೇಕು, ಅವಳಿಗೆ ಒಂದಿಷ್ಟೂ ಕಷ್ಟವಾಗದಂತೆ ನೋಡಿಕೊಳ್ಳಬೇಕು. ಕೆಲವರು ಪತ್ನಿಯನ್ನು ರಾಣಿ ತರ ನೋಡಿಕೊಳ್ಳುತ್ತೇನೆ ಎಂದು ಹೇಳಿ ಸೇವಕಿ ತರ ನೋಡಿಕೊಳ್ಳುತ್ತಾನೆ, ಅಂಥವನು ಕರಿಮಣಿ ಮಾಲೀಕನಾಗಲಾರ.
ವಚನೇಷು ರಾಮ:
ನುಡಿದ ವಚನ ಶ್ರೀರಾಮನಂತಿರಬೇಕು, ಪತ್ನಿಗೆ ಸುಳ್ಳು ಹೇಳಬಾರದು, ಮೋಸ ಮಾಡಬಾರದು, ಕೊಟ್ಟ ಮಾತನ್ನು ತಪ್ಪಬಾರದು, ತನ್ನ ಹೆಂಡತಿಗೆ ಸದಾ ರಕ್ಷೆಯನ್ನು ನೀಡಬೇಕು. ಶ್ರೀರಾಮ ಸೀತೆಗಾಗಿ ಮಾಡಿದ ಹೋರಾಟ ರಾಮಾಯಣವಾಗುವುದು, ಪತಿಯಾದವ ತನ್ನ ಪತ್ನಿಯನ್ನು ಎಂಥದ್ದೇ ಪರಿಸ್ಥಿತಿ ಇರಲಿ ಅಲ್ಲಿಂದ ಪಾರು ಮಾಡಬೇಕು, ಅವಳನ್ನು ಖುಷಿಯಾಗಿಡಬೇಕು, ಅವಳಿಗೆ ವಂಚನೆ ಮಾಡಬಾರದು.
ಚತುರಸ್ಯ ಕೃಷ್ಣ:
ತುಂಬಾ ಬುದ್ಧಿವಂತನಾಗಿರಬೇಕು, ಶ್ರೀಕೃಷ್ಣನಂತೆ ತನ್ನ ಕುಟುಂಬವನ್ನು ಕಾಪಾಡಲು ಉಪಾಯ ಬಲ್ಲವನು ಆಗಿರಬೇಕು, ತನ್ನ ಕುಟುಂಬಕ್ಕೆ ಯಾವುದೇ ವಿಪತ್ತು ಬರದಂತೆ ತಡೆದು ಕುಟುಂಬವನ್ನು ರಕ್ಷಿಸುವವನು ಆಗಬೇಕು. ನ್ಯಾಯದ ಪರ ಇರುವವನು ಆಗಿರಬೇಕು, ಸತ್ಯ-ಧರ್ಮವನ್ನು ಗೌರವಿಸಬೇಕು. ಇಂಥ ಪುರುಷ ಪಡೆದವಳು ಅದೃಷ್ಟವಂತೆ.
ಧೈರ್ಯೇಷು ಕರ್ಣ:
ಕರ್ಣ ತನ್ನವರನ್ನೂ ಎಂದಿಗೂ ಬಿಟ್ಟುಕೊಟ್ಟಿಲ್ಲ, ಅದರಂತೆ ಪತಿಯೂ ತನ್ನ ನಂಬಿ ಬಂದವಳನ್ನು ಎಂದಿಗೂ ಬಿಟ್ಟುಕೊಡಬಾರದು, ದುರ್ಯೋದನಿಗೆ ಕರ್ಣ ಸ್ನೇಹಕ್ಕಾಗಿ ತನ್ನ ಸಹೋದರರ ವಿರುದ್ಧ ನಿಲ್ಲುತ್ತಾನೆ, ಅದರಂತೆ ಪತ್ನಿಗೆ ಆಪತ್ತು ಬಂದರೆ ಅವನು ತನ್ನವರ ಎದುರು ನಿಲ್ಲಲು ಕೂಡ ಹಿಂದೆ ಮುಂದೆ ನೋಡಬಾರದು, ಅವಳ ರಕ್ಷಣೆಗೆ ಸದಾ ಸಿದ್ಧನಿರಬೇಕು.
ರೂಪೇಷ ಇಂದ್ರ:
ರೂಪದಲ್ಲಿ ಆತ ಇಂದ್ರನಂತಿರಬೇಕು, ವ್ಯಕ್ತಿ ತನ್ನ ಅಂದಕ್ಕಿಂತ ತನ್ನ ಗುಣದಿಂದ ತುಂಬಾ ಸುಂದರನ್ನಾಗಿ ಕಾಣುತ್ತಾನೆ. ಆದ್ದರಿಂದ ಇಲ್ಲಿ ರೂಪ ಅನ್ನುವುದು ಬಾಹ್ಯ ರೂಪವಲ್ಲ, ಅದು ಆಂತರಿಕ ಸೌಂದರ್ಯ ಆಗಿರಬೇಕು, ಅಂಥ ಗುಣವನ್ನೇ ಪತ್ನಿ ಮೆಚ್ಚಿಕೊಳ್ಳುವುದು.
ಕಾಮೇಷು ಮದನ:
ಮನ್ಮಥನಂತೆ ಇರಬೇಕು ಗಂಡನಾದವ, ಅವಳಿಗೆ ದೈಹಿಕ ಸುಖ ನೀಡಬೇಕು, ತನ್ನ ರಸಮಯ ಮಾತುಗಳಿಂದ ಮಾನಸಿಕ ಹಾಗೂ ದೈಹಿಕ ಸಂತೃಪ್ತಿ ನೀಡಬೇಕು. ಸುಖ ಸಂಸಾರಕ್ಕೆ ಲೈಂಗಿಕ ತೃಪ್ತಿ ಅಡಿಪಾಯ. ಅದ್ದರಿಂದಲೇ ಅವನು ಕಾಮೆಷ ಮದನನಾಗಿರಬೇಕು ಎಂದು ಹೇಳಲಾಗಿದೆ.
ಷಟ್ಧರ್ಮಯುಕ್ತ ಮನಧರ್ಮ ರಮಣ: ಈ 6 ಗುಣಗಳನ್ನು ಹೊಂದಿರುವವನೇ ನಿಜವಾದ ಕರಿಮಣಿ ಮಾಲೀಕ... ಈ ಗುಣಗಳು ಇದ್ದರೆ ಕರಿಮಣಿ ಮಾಲೀಕ ನೀನಲ್ಲ ಅಂತ ಹಾಡಿ....



Click it and Unblock the Notifications