Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಬ್ಬರನ್ನು ಕೊನೆಗೆ ವಿಚ್ಛೇದನಕ್ಕೆ ತಂದು ನಿಲ್ಲಿಸುವ ಸೈಲೆಂಟ್ ಕಿಲ್ಲರ್ಗಳಿವು
ಇತ್ತೀಚಿಗೆ ಡಿವೋರ್ಸ್ ಹೆಚ್ಚಾಗಿ ಕೇಳಿ ಬರುತ್ತಿದೆ, ಕೆಲವೊಂದು ಡಿವೋರ್ಸ್ ಪ್ರಕರಣಕ್ಕೆ ಕಾರಣಗಳನ್ನು ಕೇಳಿದಾಗ ತುಂಬಾನೇ ಅಚ್ಚರಿ ಉಂಟಾಗುವುದು. ಗಂಡ-ಹೆಂಡತಿ ನಡುವೆ ಪ್ರತಿದಿನ ಜಗಳ ಉಂಟಾಗುತ್ತಿದ್ದರೆ ವಿಚ್ಛೇದನ ಉಂಟಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ಜಗಳವಾಡುವ ದಂಪತಿಗಳಿಗಿಂತ ಜಗಳ ಆಡದೇ ಇರುವ ದಂಪತಿಗಳು ವಿಚ್ಛೇದನದ ಹಾದಿ ಹಿಡಿಯುತ್ತಿದ್ದಾರೆ.
ಹೌದು ಸಂಬಂಧದಲ್ಲಿ ಕೆಲವೊಂದು ವಿಷಯವಿರುತ್ತದೆ, ಅವು ದಾಂಪತ್ಯ ಒಡೆದು ಹಾಕುವ ಸೈಲೆಂಟ್ ಕಿಲ್ಲರ್ಗಳು. ಅವುಗಳನ್ನು ಆರಂಭದಲ್ಲಿ ನಿರ್ಲಕ್ಷ್ಯ ಮಾಡುತ್ತಾ ಹೋದರೆ ಮುಂದೆ ದೊಡ್ಡ ಸಮಸ್ಯೆ ಉಂಟಾಗುವುದು. ಆದ್ದರಿಂದ ಸಂಸಾರದಲ್ಲಿ ಈ ಬಗ್ಗೆ ಸೂಚನೆಗಳು ಕಂಡು ಬಂದರೆ ನಿರ್ಲಕ್ಷ್ಯ ಬೇಡ್ವೆ ಬೇಡ, ಜಾಗ್ರತೆವಹಿಸಿ:

ಸಮಸ್ಯೆಗಳನ್ನು ಮಾತನಾಡಿ ಬಗೆಹರಿಸಲು ಯೋಚಿಸದೇ ಇರುವುದು
ಸಂಸಾರದಲ್ಲಿ ತುಂಬಾ ಮುಖ್ಯವಾಗಿ ಬೇಕಾಗಿರುವುದು ಸಂವಹನ, ಅದು ಇಲ್ಲದೆ ಇದ್ದರೆ ಆ ಸಂಬಂಧ ಬಡಕಲು ಆಗುವುದು. ಇಬ್ಬರ ನಡುವೆ ಮಾತಿಕತೆ ಇಲ್ಲ ಎಂದ ಮೇಲೆ ಆ ಸಂಸಾರದಲ್ಲಿ ಏನೇ ಸಮಸ್ಯೆ ಇದ್ದರೂ ಮಾತಿನ ಮೂಲಕ ಬಗೆಹರಿಯುವುದಿಲ್ಲ, ಬೂದಿ ಮುಚ್ಚಿದ ಕೆಂಡದಂತೆ ಇದ್ದು ಒಂದು ದಿನ ಮನೆ ಹೊತ್ತಿ ಉರಿಯುವುದು.
ಇಬ್ಬರ ನಡುವಿನ ಜೀವನ ಶೈಲಿ, ಆಚಾರಗಳು ಎಲ್ಲವೂ ಭಿನ್ನವಾದಾಗ
ಗಂಡ-ಹೆಂಡತಿ ಇಬ್ಬರು ಒಂದೇ ರೀತಿ ಯೋಚಿಸಿದರೆ ಮಾತ್ರ ಸಂಸಾರ ಚೆನ್ನಾಗಿರುತ್ತೆ ಎಂದು ಹೇಳುತ್ತಿಲ್ಲ ಅಂಥ ಸಂಸಾರವೂ ಇರಲ್ಲ. ಇಬ್ಬರ ನಡುವೆ ಯೋಚನೆ ತುಂಬಾನೇ ಭಿನ್ನವಾಗಿರುತ್ತದೆ, ಜೀವನಶೈಲಿ ಭಿನ್ನವಾಗಿರುತ್ತದೆ. ಆದರೆ ಆ ಭಿನ್ನತೆ ನಡುವೆ ಹೊಂದಾಣಿಕೆ ಇರಬೇಕು, ಆವಾಗ ಯಾವ ಸಮಸ್ಯೆಯೂ ಇರಲ್ಲ. ಆ ಹೊಂದಾಣಿಕೆ ಆಗುತ್ತಿಲ್ಲ ಎಂದಾದರೆ ಇಬ್ಬರ ನಡುವಿನ ಭಿನ್ನಾಭಿಪ್ರಾಯ ತುಂಬಾ ಹೆಚ್ಚಾಗುತ್ತಲೇ ಹೋಗುತ್ತದೆ.
ಸಂಗಾತಿಯ ಭಾವನೆಗಳನ್ನು ಗಮನಿಸುವುದೇ ಇಲ್ಲ
ಬಹುತೇಕ ಸಂಸಾರದಲ್ಲಿ ಈ ರೀತಿ ಇರುತ್ತದೆ. ನನ್ನ ಸಂಗಾತಿ ಮೊದಲಿದ್ದ ರೀತಿಯಲ್ಲಿ ಈಗ ನನ್ನ ಜೊತೆ ಇಲ್ಲ ಎಂಬ ಭಾವನೆ ಮೂಡುತ್ತದೆ, ಅವರಲ್ಲಿ ತುಂಬಾನೇ ಬದಲಾವಣೆ ಕಂಡು ಬರುವುದು. ಮೊದಲೆಲ್ಲಾ ಅಷ್ಟೊಂದು ಕಾಳಜಿ ವಹಿಸುತ್ತಿದ್ದ, ನನ್ನ ಜೊತೆ ಎಲ್ಲಾ ವಿಷಯವನ್ನು ಹಂಚಿಕೊಳ್ಳುತ್ತಿದ್ದ ವ್ಯಕ್ತಿ ಬದಲಾದಂತೆ ಕಂಡು ಬರುವುದು. ಈ ರೀತಿ ಅನಿಸಿದಾಗ ಆ ಸಂಬಂಧದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಲೇ ಹೋಗುವುದು, ಇಬ್ಬರ ನಡುವಿನ ಅಂತರ ಹೆಚ್ಚಾಗುವುದು.
ಬಂದು ಹೋಗುವ ಸಂಬಂಧ
ಅದು ಪ್ರೀತಿಯಲ್ಲಿ ಆದರೂ ಆಗಬಹುದು, ದಾಂಪತ್ಯದಲ್ಲಿ ಆಗಬಹುದು. ಕೆಲವು ಸಮಯ ಇಬ್ಬರು ಚೆನ್ನಾಗಿ ಇರುತ್ತಾರೆ ನಂತರ ಬ್ರೇಕಪ್ ಮಾಡಿ ಹೋಗುವುದು ಅಥವಾ ಸಂಗಾತಿ ಜೊತೆ ಜಗಳವಾಡಿ ಹೋಗುವುದು, ಮತ್ತೆ ಪ್ಯಾಚ್ ಆಗುವುದು, ಅದಾಗಿ ಮತ್ತೆ ಆ ರೀತಿ ನಮ್ಮನ್ನು ಒಂಟಿಯಾಗಿ ಬಿಟ್ಟು ಹೋಗುವುದು ಮಾಡುತ್ತಿದ್ದರೆ ಆ ಸಂಬಂಧದ ಬಗ್ಗೆ ತುಂಬಾನೇ ಜಾಗ್ರತೆವಹಿಸಬೇಕು. ಏಕೆಂದರೆ ಅವರು ಅವರಿಗೆ ಬೇಕಾದಾಗ ನಮ್ಮನ್ನು ಬಳಸಿ ನಂತರ ನಮ್ಮ ಬಗ್ಗೆ ಒಂದಿಷ್ಟೂ ಕಾಳಜಿವಹಿಸದೆ ಬಿಟ್ಟು ಹೋಗುತ್ತಾರೆ.
ನಿಮ್ಮ ಸಂಬಂಧದಲ್ಲಿ ಅಹಂ ಪ್ರಾಬಲ್ಯ ಬೀರಿದಾಗ
ಸಂಬಂಧದಲ್ಲಿ ಅಹಂ ಹೆಚ್ಚಾಗುತ್ತಿದ್ದಂತೆ ಸಮಸ್ಯೆಯೂ ಹೆಚ್ಚಾಗುವುದು. ನಾನು ಹೇಳಿದಂತೆ ನಡೆಯಬೇಕೆಂದು ಇವನು ಬಯಸಿದರೆ ಅವಳು ಹೇಳಿದಂತೆ ನಡೆಯಬೇಕೆಂಬ ಹಠ ಅವಳಾದರೆ, ಇಬ್ಬರಿಗೂ ಅವರವರದ್ದೇ ಸರಿ ಅಂತಾದರೆ ಸಂಬಂಧವನ್ನೇ ಕೊಂದು ಹಾಕುವುದು.
ಸಂಗಾತಿ ಎಂದರೆ ಒಂದಿಷ್ಟೂ ಗೌರವ ಇಲ್ಲದಿರುವುದು
ಏಕೆ ಅವಳ ಅಥವಾ ಅವನ ಅಭಿಪ್ರಾಯ ಕೇಳಬೇಕು? ಇದರಿಂದ ಆಗಬೇಕಾಗಿರುವುದೇನು? ಅವಳಿಗೇನು ಗೊತ್ತು ಇಂಥ ನಿರ್ಲಕ್ಷ್ಯ ಭಾವನೆ ಸಂಬಂಧದ ಮೇಲೆ ತುಂಬಾನೇ ಪ್ರಭಾವ ಬೀರುವುದು, ಆದ್ದರಿಂದ ಈ ಬಗ್ಗೆ ಜಾಗ್ರತೆವಹಿಸಿ.



Click it and Unblock the Notifications