Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಚ್ಛೇದನದ ಬಳಿಕ ರಿಲೇಷನ್ಶಿಪ್ನಲ್ಲಿ ಈ ತಪ್ಪು ಮಾಡಲೇಬಾರದೆಂದ ಶಿಖರ್ಧವನ್
ಶಿಖರ್ ಧವನ್ ವಿಚ್ಛೇದನಕ್ಕೆ ಕೋರ್ಟ್ ಅನುಮತಿ ನೀಡಿದೆ, ಸುಂದರವಾಗಿದ್ದ ವೈವಾಹಿಕ ಜೀವನ ವಿಚ್ಛೇದನದ ಹಂತಕ್ಕೆ ತಲುಪಲು ಏನು ಕಾರಣ ಎಂಬುವುದನ್ನು ಬಹಿರಂಗಗೊಳಿಸಿದ್ದಾರೆ.
ವಿಚ್ಛೇದನಕ್ಕೆ ತನ್ನಿಂದಾದ ತಪ್ಪೇನು ಎಂಬುವುದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅಲ್ಲದೆ ಕೆಲವೊಂದು ಅದ್ಭುತ ರಿಲೇಷನ್ಶಿಪ್ ಟಿಪ್ಸ್ ನೀಡಿದ್ದಾರೆ. ಯಾರು ಚೆಂದದ ಸಂಸಾರ ನಡೆಸಬೇಕೆಂದು ಬಯಸುತ್ತೀರೋ ಅವರು ಶಿಖರ್ ಧವನ್ ಹೇಳಿರುವ ಈ ಮಾತುಗಳನ್ನು ನಿರ್ಲಕ್ಷ್ಯ ಮಾಡುವಂತೆಯೇ ಇಲ್ಲ.

ಶಿಖರ್ ಧವನ್ ಆಯೇಷಾ ಮುಖರ್ಜಿಯನ್ನು ಪ್ರೀತಿಸಿ ಮದುವೆಯಾದವರು, ಆಯೇಷಾರವರಿಗೆ ಇದು ಎರಡನೇ ಮದುವೆಯಾಗಿತ್ತು. ಅವರೇ ಹೇಳುವಂತೆ ಮೊದಲ ಜೀವನ ಮುರಿದು ಬಿದ್ದಂತೆ ಇದು ಬೀಳಬಾರದು ಎಂದು ಎಚ್ಚರಿಕೆವಹಿಸಿದ್ದರು, ಆದರೂ ಬೇರೆ-ಬೇರೆಯಾದರು.
ಶಿಖರ್ ಧವನ್ ಹಾಗೂ ಆಯೇಷಾ ಪ್ರತ್ಯೇಕವಾಗಿ ಎರಡು ವರ್ಷಗಳಾಗಿವೆ, ಆ ಸಂದರ್ಭದಲ್ಲಿ ಆಯೇಷಾ ವಿಚ್ಛೇದನ ಬದುಕಿನ ಬಗ್ಗೆ ಬರೆದುಕೊಂಡಿದ್ದರು, ಆದರೆ ಶಿಖರ್ ಧವನ್ ಈ ಬಗ್ಗೆ ಏನೂ ಹೇಳಿರಲಿಲ್ಲ.
ಇದೀಗ ತಮ್ಮ ವೈವಾಹಿಕ ಜೀವನ ಮುರಿದು ಬೀಳಲು ಕಾರಣವೇನು ಎಂದು ಹೇಳುವುದರ ಜೊತೆಗೆ ಕೆಲವೊಂದು ಟಿಪ್ಸ್ ಕೂಡ ಹೇಳಿದ್ದಾರೆ.
"ವ್ಯಕ್ತಿಯ ಕೊನೆಯ ನಿರ್ಧಾರ ಗೆದ್ದ ಕಾರಣ ನಾನು ಸೋತೆ, ಇದಕ್ಕೆ ನಾನು ಯಾರನ್ನೂ ದೂರುವುದಿಲ್ಲ" ಎಂದು ಹೇಳುತ್ತಾ ವೈವಾಹಿಕ ಜೀವನವನ್ನು ಕೂಡ ಕ್ರಿಕೆಟಿಗೆ ಹೋಲಿಸುತ್ತಾ ಆವಾಗ ನನಗೆ ಆ ಫೀಲ್ಡ್ನಲ್ಲಿ ಅನುಭವ ಇರಲಿಲ್ಲ, ಕ್ರಿಕೆಟ್ ಬಗ್ಗೆ ಹೇಳುವುದಾರೆ ಈಗ ಇರುವಷ್ಟು ಅನುಭವ 20 ವರ್ಷದ ಹಿಂದೆ ನನಗಿರಲಿಲ್ಲ, ಎಲ್ಲವೂ ಅನುಭವದಿಂದ ಬರಬೇಕು' ಎಂದು ಹೇಳಿದ್ದಾರೆ
ಶಿಖರ್ ಮರು ಮದುವೆಯ ವಿಚಾರ ಹೇಳುತ್ತಾ "ಸದ್ಯಕ್ಕೆ ಮರುಮದುವೆ ಬಗ್ಗೆ ಯೋಚನೆ ಮಾಡಿಲ್ಲ,ಇನ್ನೂ ವಿಚ್ಛೇದನ ಪ್ರಕ್ರಿಯೆ ಕೋರ್ಟ್ನಲ್ಲಿದೆ. ನಾಳೆ ನಾನು ಮದುವೆಯಾಗುವುದಾದರೆ ನಾನು ತುಂಬಾ ಬುದ್ಧಿವಂತಿಕೆಯಿಂದ ಜೀವನ ಸಂಗಾತಿಯನ್ನು ಆಯ್ಕೆ ಮಾಡುತ್ತೇನೆ. ಆವಾಗ ನನಗೆ 26-27 ವರ್ಷ ಸಂಬಂಧದ ಬಗ್ಗೆ ಅಷ್ಟೊಂದು ತಿಳಿದಿರಲಿಲ್ಲ, ಆದ್ದರಿಂದ ರೆಡ್ಫ್ಲ್ಯಾಗ್ ಗುರುತಿಸಲು ಸಾಧ್ಯವಾಗಿಲ್ಲ.
ಈಗ ಪ್ರೀತಿಯಲ್ಲಿ ಬಿದ್ದರೆ ರೆಡ್ಫ್ಲ್ಯಾಗ್ ಸುಲಭವಾಗಿ ಗುರುತಿಸಬಲ್ಲೆ, ಆ ರೀತಿ ಕಂಡು ಬಂದರೆ ಆ ಸಂಬಂಧದಿಂದ ಹೊರ ನಡೆಯುತ್ತೇನೆ, ಇಲ್ಲದಿದ್ದರೆ ಮುಂದುವರೆಯುತ್ತೇನೆ ಎಂದು ಹೇಳಿದ್ದಾರೆ.
ಯುವಕರಿಗೂ ಕಿವಿಮಾತು
ಯವಕರು ಪ್ರೀತಿಯಲ್ಲಿ ಬಿದ್ದಾಗ ಪ್ರೀತಿಯನ್ನು ಅನುಭವಿಸಬೇಕು, ಅದು ತುಂಬಾ ಮುಖ್ಯವಾಗುತ್ತದೆ. ಎಮೋಷನಲ್ ಆಗಿ ಮದುವೆಯಾಗಬಾರದು. ಕೆಲವು ವರ್ಷಗಳು ಪ್ರೀತಿಸುತ್ತಾ ಕಳೆಯಿರಿ, ಆಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು, ಆವಾಗ ನಿಮ್ಮಿಬ್ಬರಿಗೆ ಮ್ಯಾಚ್ ಆಗುತ್ತಿದೆಯೇ ಅಥವಾ ಬೇರೆಯವರ ಕಂಪನಿಯಲ್ಲಿ ಖುಷಿಯಾಗಿರುತ್ತೀರಾ ಎಂಬುವುದು ತಿಳಿಯುತ್ತದೆ.
ಸಂಬಂಧವೆಂಬುವುದು ಕೂಡ ಒಂದು ಮ್ಯಾಚ್ನಂತೆ, ಕೆಲವರಿಗೆ 4-5 ಸಂಬಂಧಗಳು ಬೇಕಾಗುವುದು, ಕೆಲವರಿಗೆ 8-9 ರಿಲೇಷನ್ಶಿಪ್ ಬೇಕಾಗಬಹುದು. ಅದರಲ್ಲಿ ತಪ್ಪೇನೂ ಇಲ್ಲ, ಇದರಿಂದ ನೀವು ಕಲಿಯುತ್ತೀರಿ, ಮದುವೆಗೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುತ್ತೀರಿ ಎಂದು ಹೇಳಿದ್ದಾರೆ.
ಶಿಖರ್ ಧವನ್ ಪತ್ನಿ ವಿಚ್ಛೇದನದ ಅನುಭವದ ಬಗ್ಗೆ ಈ ರೀತಿ ಬರೆದುಕೊಂಡಿದ್ದರು
ಈಗ ಯೋಚಿಸಿ ನಾನು 2ನೇ ಭಾರಿಯೂ ವಿಚ್ಛೇದನ ಪಡೆಯುವಂತಾಗಿದೆ. Woooahhhhhh.ಇದು ಇನ್ನೂ ಭೀಕರ ಅನಿಸಿದೆ. ಮೊದಲ ಭಾರಿಗೆ ವಿಚ್ಛೇದನ ಆದಾಗ ಎರಡನೇ ಬಾರಿ ನಾನು ಹಾಗೇ ಆಗಲೇ ಬರದು, ಈ ಸಂಬಂಧದಲ್ಲಿ ಚೆನ್ನಾಗಿದ್ದು ಸಾಬೀತು ಮಾಡಬೇಕು ಎಂದು ಬಯಸಿದ್ದೆ, ಆದರೆ ಎರಡನೇ ಮದುವೆಯೂ ಮುರಿದು ಬಿದ್ದಿದೆ, ತುಂಬಾ ಭಯವಾಗುತ್ತಿದೆ. ಮೊದಲನೇ ಬಾರಿ ವಿಚ್ಛೇದನವಾದಾಗ ಅನುಭವಿಸಿದ್ದ ಭಯ, ಹತಾಶೆ, ಸೋಲು ಈ ಬಾರಿ ನೂರು ಪಟ್ಟು ಹೆಚ್ಚಿದೆ. ಈ ವಿಚ್ಛೇದನಗಳು ನನ್ನ ಬಗ್ಗೆ, ನನ್ನ ವೈವಾಹಿಕ ಸಂಬಂಧದ ಬಗ್ಗೆ ಹೇಗೆ ವ್ಯಾಖ್ಯಾನಿಸುತ್ತದೆ? ವೆಲ್, ಸ್ವಲ್ಪ ಹೊತ್ತು ಕೂತು ಯೋಚಿಸಿದಾಗ ನಾನು ಏನು ಅವಶ್ಯಕವಿತ್ತೋ ಅದನ್ನೇ ಮಾಡಿದ್ದೇನೆ ಎಂದು ಅನಿಸಿದೆ" ಎಂದು ಬರೆದುಕೊಂಡಿದ್ದರು.



Click it and Unblock the Notifications
