Latest Updates
-
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ!
ವಿಚ್ಛೇದನದ ಬಳಿಕ ರಿಲೇಷನ್ಶಿಪ್ನಲ್ಲಿ ಈ ತಪ್ಪು ಮಾಡಲೇಬಾರದೆಂದ ಶಿಖರ್ಧವನ್
ಶಿಖರ್ ಧವನ್ ವಿಚ್ಛೇದನಕ್ಕೆ ಕೋರ್ಟ್ ಅನುಮತಿ ನೀಡಿದೆ, ಸುಂದರವಾಗಿದ್ದ ವೈವಾಹಿಕ ಜೀವನ ವಿಚ್ಛೇದನದ ಹಂತಕ್ಕೆ ತಲುಪಲು ಏನು ಕಾರಣ ಎಂಬುವುದನ್ನು ಬಹಿರಂಗಗೊಳಿಸಿದ್ದಾರೆ.
ವಿಚ್ಛೇದನಕ್ಕೆ ತನ್ನಿಂದಾದ ತಪ್ಪೇನು ಎಂಬುವುದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅಲ್ಲದೆ ಕೆಲವೊಂದು ಅದ್ಭುತ ರಿಲೇಷನ್ಶಿಪ್ ಟಿಪ್ಸ್ ನೀಡಿದ್ದಾರೆ. ಯಾರು ಚೆಂದದ ಸಂಸಾರ ನಡೆಸಬೇಕೆಂದು ಬಯಸುತ್ತೀರೋ ಅವರು ಶಿಖರ್ ಧವನ್ ಹೇಳಿರುವ ಈ ಮಾತುಗಳನ್ನು ನಿರ್ಲಕ್ಷ್ಯ ಮಾಡುವಂತೆಯೇ ಇಲ್ಲ.

ಶಿಖರ್ ಧವನ್ ಆಯೇಷಾ ಮುಖರ್ಜಿಯನ್ನು ಪ್ರೀತಿಸಿ ಮದುವೆಯಾದವರು, ಆಯೇಷಾರವರಿಗೆ ಇದು ಎರಡನೇ ಮದುವೆಯಾಗಿತ್ತು. ಅವರೇ ಹೇಳುವಂತೆ ಮೊದಲ ಜೀವನ ಮುರಿದು ಬಿದ್ದಂತೆ ಇದು ಬೀಳಬಾರದು ಎಂದು ಎಚ್ಚರಿಕೆವಹಿಸಿದ್ದರು, ಆದರೂ ಬೇರೆ-ಬೇರೆಯಾದರು.
ಶಿಖರ್ ಧವನ್ ಹಾಗೂ ಆಯೇಷಾ ಪ್ರತ್ಯೇಕವಾಗಿ ಎರಡು ವರ್ಷಗಳಾಗಿವೆ, ಆ ಸಂದರ್ಭದಲ್ಲಿ ಆಯೇಷಾ ವಿಚ್ಛೇದನ ಬದುಕಿನ ಬಗ್ಗೆ ಬರೆದುಕೊಂಡಿದ್ದರು, ಆದರೆ ಶಿಖರ್ ಧವನ್ ಈ ಬಗ್ಗೆ ಏನೂ ಹೇಳಿರಲಿಲ್ಲ.
ಇದೀಗ ತಮ್ಮ ವೈವಾಹಿಕ ಜೀವನ ಮುರಿದು ಬೀಳಲು ಕಾರಣವೇನು ಎಂದು ಹೇಳುವುದರ ಜೊತೆಗೆ ಕೆಲವೊಂದು ಟಿಪ್ಸ್ ಕೂಡ ಹೇಳಿದ್ದಾರೆ.
"ವ್ಯಕ್ತಿಯ ಕೊನೆಯ ನಿರ್ಧಾರ ಗೆದ್ದ ಕಾರಣ ನಾನು ಸೋತೆ, ಇದಕ್ಕೆ ನಾನು ಯಾರನ್ನೂ ದೂರುವುದಿಲ್ಲ" ಎಂದು ಹೇಳುತ್ತಾ ವೈವಾಹಿಕ ಜೀವನವನ್ನು ಕೂಡ ಕ್ರಿಕೆಟಿಗೆ ಹೋಲಿಸುತ್ತಾ ಆವಾಗ ನನಗೆ ಆ ಫೀಲ್ಡ್ನಲ್ಲಿ ಅನುಭವ ಇರಲಿಲ್ಲ, ಕ್ರಿಕೆಟ್ ಬಗ್ಗೆ ಹೇಳುವುದಾರೆ ಈಗ ಇರುವಷ್ಟು ಅನುಭವ 20 ವರ್ಷದ ಹಿಂದೆ ನನಗಿರಲಿಲ್ಲ, ಎಲ್ಲವೂ ಅನುಭವದಿಂದ ಬರಬೇಕು' ಎಂದು ಹೇಳಿದ್ದಾರೆ
ಶಿಖರ್ ಮರು ಮದುವೆಯ ವಿಚಾರ ಹೇಳುತ್ತಾ "ಸದ್ಯಕ್ಕೆ ಮರುಮದುವೆ ಬಗ್ಗೆ ಯೋಚನೆ ಮಾಡಿಲ್ಲ,ಇನ್ನೂ ವಿಚ್ಛೇದನ ಪ್ರಕ್ರಿಯೆ ಕೋರ್ಟ್ನಲ್ಲಿದೆ. ನಾಳೆ ನಾನು ಮದುವೆಯಾಗುವುದಾದರೆ ನಾನು ತುಂಬಾ ಬುದ್ಧಿವಂತಿಕೆಯಿಂದ ಜೀವನ ಸಂಗಾತಿಯನ್ನು ಆಯ್ಕೆ ಮಾಡುತ್ತೇನೆ. ಆವಾಗ ನನಗೆ 26-27 ವರ್ಷ ಸಂಬಂಧದ ಬಗ್ಗೆ ಅಷ್ಟೊಂದು ತಿಳಿದಿರಲಿಲ್ಲ, ಆದ್ದರಿಂದ ರೆಡ್ಫ್ಲ್ಯಾಗ್ ಗುರುತಿಸಲು ಸಾಧ್ಯವಾಗಿಲ್ಲ.
ಈಗ ಪ್ರೀತಿಯಲ್ಲಿ ಬಿದ್ದರೆ ರೆಡ್ಫ್ಲ್ಯಾಗ್ ಸುಲಭವಾಗಿ ಗುರುತಿಸಬಲ್ಲೆ, ಆ ರೀತಿ ಕಂಡು ಬಂದರೆ ಆ ಸಂಬಂಧದಿಂದ ಹೊರ ನಡೆಯುತ್ತೇನೆ, ಇಲ್ಲದಿದ್ದರೆ ಮುಂದುವರೆಯುತ್ತೇನೆ ಎಂದು ಹೇಳಿದ್ದಾರೆ.
ಯುವಕರಿಗೂ ಕಿವಿಮಾತು
ಯವಕರು ಪ್ರೀತಿಯಲ್ಲಿ ಬಿದ್ದಾಗ ಪ್ರೀತಿಯನ್ನು ಅನುಭವಿಸಬೇಕು, ಅದು ತುಂಬಾ ಮುಖ್ಯವಾಗುತ್ತದೆ. ಎಮೋಷನಲ್ ಆಗಿ ಮದುವೆಯಾಗಬಾರದು. ಕೆಲವು ವರ್ಷಗಳು ಪ್ರೀತಿಸುತ್ತಾ ಕಳೆಯಿರಿ, ಆಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು, ಆವಾಗ ನಿಮ್ಮಿಬ್ಬರಿಗೆ ಮ್ಯಾಚ್ ಆಗುತ್ತಿದೆಯೇ ಅಥವಾ ಬೇರೆಯವರ ಕಂಪನಿಯಲ್ಲಿ ಖುಷಿಯಾಗಿರುತ್ತೀರಾ ಎಂಬುವುದು ತಿಳಿಯುತ್ತದೆ.
ಸಂಬಂಧವೆಂಬುವುದು ಕೂಡ ಒಂದು ಮ್ಯಾಚ್ನಂತೆ, ಕೆಲವರಿಗೆ 4-5 ಸಂಬಂಧಗಳು ಬೇಕಾಗುವುದು, ಕೆಲವರಿಗೆ 8-9 ರಿಲೇಷನ್ಶಿಪ್ ಬೇಕಾಗಬಹುದು. ಅದರಲ್ಲಿ ತಪ್ಪೇನೂ ಇಲ್ಲ, ಇದರಿಂದ ನೀವು ಕಲಿಯುತ್ತೀರಿ, ಮದುವೆಗೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುತ್ತೀರಿ ಎಂದು ಹೇಳಿದ್ದಾರೆ.
ಶಿಖರ್ ಧವನ್ ಪತ್ನಿ ವಿಚ್ಛೇದನದ ಅನುಭವದ ಬಗ್ಗೆ ಈ ರೀತಿ ಬರೆದುಕೊಂಡಿದ್ದರು
ಈಗ ಯೋಚಿಸಿ ನಾನು 2ನೇ ಭಾರಿಯೂ ವಿಚ್ಛೇದನ ಪಡೆಯುವಂತಾಗಿದೆ. Woooahhhhhh.ಇದು ಇನ್ನೂ ಭೀಕರ ಅನಿಸಿದೆ. ಮೊದಲ ಭಾರಿಗೆ ವಿಚ್ಛೇದನ ಆದಾಗ ಎರಡನೇ ಬಾರಿ ನಾನು ಹಾಗೇ ಆಗಲೇ ಬರದು, ಈ ಸಂಬಂಧದಲ್ಲಿ ಚೆನ್ನಾಗಿದ್ದು ಸಾಬೀತು ಮಾಡಬೇಕು ಎಂದು ಬಯಸಿದ್ದೆ, ಆದರೆ ಎರಡನೇ ಮದುವೆಯೂ ಮುರಿದು ಬಿದ್ದಿದೆ, ತುಂಬಾ ಭಯವಾಗುತ್ತಿದೆ. ಮೊದಲನೇ ಬಾರಿ ವಿಚ್ಛೇದನವಾದಾಗ ಅನುಭವಿಸಿದ್ದ ಭಯ, ಹತಾಶೆ, ಸೋಲು ಈ ಬಾರಿ ನೂರು ಪಟ್ಟು ಹೆಚ್ಚಿದೆ. ಈ ವಿಚ್ಛೇದನಗಳು ನನ್ನ ಬಗ್ಗೆ, ನನ್ನ ವೈವಾಹಿಕ ಸಂಬಂಧದ ಬಗ್ಗೆ ಹೇಗೆ ವ್ಯಾಖ್ಯಾನಿಸುತ್ತದೆ? ವೆಲ್, ಸ್ವಲ್ಪ ಹೊತ್ತು ಕೂತು ಯೋಚಿಸಿದಾಗ ನಾನು ಏನು ಅವಶ್ಯಕವಿತ್ತೋ ಅದನ್ನೇ ಮಾಡಿದ್ದೇನೆ ಎಂದು ಅನಿಸಿದೆ" ಎಂದು ಬರೆದುಕೊಂಡಿದ್ದರು.



Click it and Unblock the Notifications
