Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ!
ಶಿಖರ್ ಧವನ್ ವಿಚ್ಛೇದನ: ವಿಚ್ಛೇದಿತ ಜೋಡಿ ನೀಡಿದ ಅದ್ಭುತ ರಿಲೇಷನ್ಶಿಪ್ ಟಿಪ್ಸ್
ಶಿಖರ್ ಧವನ್ ಹಾಗೂ ಆಯೇಷಾ ಅವರ ವಿಚ್ಛೇದನಕ್ಕೆ ಕೊನೆಗೂ ಕಾನೂನೂ ಒಪ್ಪಿಗೆ ಸಿಕ್ಕಿದೆ. ಕಳೆದ ಮೂರು ವರ್ಷಗಳಿಂದ ಈ ಜೋಡಿ ಬೇರೆ-ಬೇರೆಯಾಗಲು ತೀರ್ಮಾನಿಸಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಇದೀಗ ದೆಹಲಿ ಹೈ ಕೋರ್ಟ್ ಇವರಿಬ್ಬರ ವಿಚ್ಛೇದನ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದೆ. ಸೆಲೆಬ್ರಿಟಿಗಳು ಎಂದ ಮೇಲೆ ಇದೆಲ್ಲಾ ಕಾಮನ್ ಎಂದು ಕೆಲವರು ಮಾತನಾಡಿಕೊಳ್ಳುತ್ತಾರೆ. ಆದರೆ ವಿಚ್ಛೇದನಕ್ಕೆ ಈ ದಂಪತಿ ಮುಂದಾದಾಗ ತಮ್ಮ ಬದುಕಿನ ಬಗ್ಗೆ ಕೆಲವೊಂದು ವಿಷಯಗಳನ್ನು ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಆಯೇಷಾ ವಿಚ್ಛೇದನ ಎಂಬುವುದು ಒಂದು ಹೆಣ್ಣನ್ನು ಹೇಗೆ ಕುಗ್ಗಿಸುತ್ತದೆ, ಆದರೂ ಅವಳಿಗೆ ಅದು ಅನಿವಾರ್ಯವಾದಾಗ ಅವಳು ಹೇಗೆ ಬದುಕಬೇಕೆಂದು ಹೇಳುವ ಮೂಲಕ ಅನೇಕ ವಿಚ್ಛೇದಿತ ಹೆಣ್ಮಕ್ಕಳಿಗೆ ಧೈರ್ಯ ತುಂಬಿದ್ದಾರೆ, ಶಿಖರ್ ಧವನ್ ಪ್ರೀತಿಯ ಬಗ್ಗೆ ದೊಡ್ಡ ಪಾಠವನ್ನೇ ಹೇಳಿದ್ದಾರೆ.
ವಿಚ್ಛೇದನ ಎಂದರೆ ನನ್ನ ಬದುಕನ್ನು ನಾನು ಆಯ್ಕೆ ಮಾಡುವುದಾಗಿದೆ. ಮದುವೆಯೆಂಬ ಹೆಸರಿನಲ್ಲಿ ಒಂದು ಭದ್ರತೆಯಿಲ್ಲದ ಸಂಬಂಧದಲ್ಲಿ ಇರುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬುವುದರ ಬಗ್ಗೆ ಹೇಳಿದ್ದಾರೆ.
ಎಷ್ಟೋ ಸಂಬಂಧಗಳು ಮೇಲ್ನೋಟಕ್ಕೆ ಕಾಣಲು ತುಂಬಾನೇ ಸುಂದರವಾಗಿರುತ್ತದೆ, ಹಣವಿರುತ್ತದೆ, ಪದವಿ ಇರುತ್ತದೆ, ಎಲ್ಲಾ ಐಶ್ವರ್ಯಗಳು ಇರುತ್ತದೆ. ಆದರೆ ಅವರಿಬ್ಬರ ಮನಸ್ಸಿನಲ್ಲಿ ಪ್ರೀತಿಯೆಂಬುವುದು ಅಳಿಸಿ ಹೋಗಿರುತ್ತದೆ. ಅಂಥ ಸಂಬಂಧದಲ್ಲಿ ಉಳಿದು ಕೂಡ ಏನೂ ಪ್ರಯೊಜನವಿಲ್ಲ, ಅದರಿಂದ ಹೊರಬರುವುದೇ ಒಳ್ಳೆಯದು ಎಂದು ಹೇಳಿದ್ದಾರೆ.
ಆಯೇಷ ಶಿಖರ್ ಧವನ್ ಅವರನ್ನು ಮದುವೆಯಾಗುವ ಮೊದಲು ಒಂದು ಮದುವೆಯಾಗಿ ವಿಚ್ಛೇದನ ಆಗಿತ್ತು, ಆ ಸಂಬಂಧದಿಂದ ಮಕ್ಕಳೂ ಇದ್ದರು. ಆದರೆ ಆ ವ್ಯಕ್ತಿಯಿಂದ ದೂರಾದ ಬಳಿಕ ಶಿಖರ್ ಧವನ್ ಅವರ ಬಾಳಿಗೆ ಬೆಳಕಾಗಿ ಬಂದಿದ್ದರು. ಈ ಜೋಡಿ ತುಂಬಾನೇ ಖುಷಿಯಾಗಿದ್ದರು, ಇವರಿಬ್ಬರ ಪ್ರೀತಿಗೆ ಸಾಕ್ಷಿಯೆಂಬಂತೆ ಒಬ್ಬ ಮಗನೂ ಇದ್ದಾನೆ, ಆದರೆ ಈ ಸಂಬಂಧ ಕೂಡ ಉಳಿಯಲಿಲ್ಲ, ಇಬ್ಬರ ನಡುವೆ ಪ್ರೀತಿ ಬತ್ತಿ ಹೋಯ್ತು. ಈ ಸಂಬಂಧ ಕೂಡ ಮುರಿದು ಬಿತ್ತು.
ಮೊದಲ ವಿಚ್ಛೇದನದ ನೋವಿನಿಂದ ಹೊರ ಬಂದು ಎರಡನೇ ಮದುವೆಯಾದಾಗ ಆ ಮದುವೆಯೂ ವಿಚ್ಛೇದನಲ್ಲಿಯೂ ಮುಕ್ತಾಯವಾಯ್ತು. ಇವರ ಬದುಕಿನಲ್ಲಿ ನಡೆದಂತೆ ಹಲವರ ಬದುಕಿನಲ್ಲಿ ನಡೆದಿರುತ್ತದೆ, ಮದುವೆ ಮುರಿದು ಬಿದ್ದಾಗ ತುಂಬಾನೇ ನೋವಾಗುತ್ತೆ, ನಂತರ ಸಿಗುವ ಮತ್ತೊಂದು ಬದುಕಿನ ಬಗ್ಗೆ ತುಂಬಾನೇ ಕನಸುಗಳಿರುತ್ತದೆ, ಆದರೆ ಆ ಕನಸುಗಳು ಕಮರಿದಾಗ ಹೇಗಾಗಬೇಡ, ಆದರೆ ಸಂಬಂಧ ಗಟ್ಟಿಯಾಗಿರದಿದ್ದರೆ ಆ ಸಂಬಂಧದಲ್ಲಿ ಇರುವುದರಲ್ಲಿ ಅರ್ಥವಿಲ್ಲ ಅಲ್ವೇ?
ಶಿಖರ್ ಧವನ್ ಕೂಡ ಪ್ರೀತಿ ಪಾಠ ಮಾಡಿದ್ದಾರೆ, ಪ್ರೀತಿಯಲ್ಲಿ ಬಿದ್ದಾಗ ಎಮೋಷನಲ್ ಆಗಿ ಮದುವೆಯಾಗಬಾರದು, ಪ್ರೀತಿಯನ್ನು ಅನುಭವಿಸಬೇಕು, ತುಂಬಾ ವರ್ಷಗಳು ಪ್ರೀತಿಯಲ್ಲಿ ಕಳೆಯಬೇಕು, ಆವಾಗ ಮಾತ್ರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು, ಸಂಬಂಧದಲ್ಲಿ ಪ್ರಾರಂಭದಲ್ಲಿಯೇ ರೆಡ್ ಫ್ಲ್ಯಾಗ್ ಕಂಡರೆ ಮದುವೆಯಾಗಲು ಹೋಗಬಾರದು ಎಂದು ಹೇಳಿದ್ದಾರೆ.
ಸಂಬಂಧದಲ್ಲಿ ಪ್ರೀತಿ ಮುಖ್ಯ
ಇಬ್ಬರು ಜೊತೆಯಾಗಿ ಬಾಳುವಾಗ ಅಲ್ಲಿ ಪ್ರೀತಿ ಇರಬೇಕು, ಆದರೆ ಮಾತ್ರ ಆ ಬದುಕಿಗೆ ಒಂದರ್ಥ.



Click it and Unblock the Notifications