Latest Updates
-
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ!
ಬೃಂದಾ-ವಾಸುಕಿ ವೈಭವ್ರ ಪ್ರೀತಿ ಎಷ್ಟು ಸ್ಟ್ರಾಂಗ್ ಇತ್ತು ಎಂಬುವುದಕ್ಕೆ ಈ ಫೋಟೋಗಳೇ ಸಾಕ್ಷಿ
ಸ್ಯಾಂಡಲ್ವುಡ್ನ ಯುವ ಸಂಗೀತ ನಿರ್ದೇಶಕ, ಗಾಯಕ ವಾಸುಕಿ ವೈಭವ್ ತನ್ನ ಬಹುಕಾಲದ ಗೆಳತಿ ಜೊತೆಗೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ, ಅವರ ಹೊಸ ಬದುಕು ತುಂಬಾ ಸುಂದರವಾಗಿರಲಿ ಎಂಬುವುದೇ ಎಲ್ಲರ ಹಾರೈಕೆ.
ವಾಸುಕಿ ವೈಭವ್ ಮನಗೆದ್ದ ಹುಡುಗಿ ಯಾರು ಎಂಬ ಕುತೂಹಲ ತುಂಬಾ ಜನರಿಗಿತ್ತು, ಅದಕ್ಕೆ ಉತ್ತರ ಸಿಕ್ಕಿದೆ, ಬಿಗ್ಬಾಸ್ನಲ್ಲಿ ವಾಸುಕಿ ವೈಭವ್ ಅವರ ಆಟದ ಶೈಲಿಯನ್ನು ಎಲ್ಲರೂ ಮೆಚ್ಚಿಕೊಂಡಿದ್ದರು, ವಿನ್ನರ್ ಪಟ್ಟಕ್ಕೆ ಕಠಿಣ ಸ್ಪರ್ಧೆ ನೀಡುವಲ್ಲಿ ಯಶಸ್ವಿಯಾಗಿದ್ದರು, ಬಿಗ್ಬಾಸ್ನಲ್ಲಿರುವಾಗ ಅವರ ರಚಿಸಿದ ಮನಸ್ಸಿಂದ ಯಾರೂ ಕೆಟ್ಟವರಲ್ಲ... ಹಾಡನ್ನು ಸುದೀಪ್ ಅವರು ಹಾಡಿದ ಮೇಲೆ ಆ ಹಾಡು ಮನೆ ಮನೆಗೆ ತಲುಪುವ ಮೂಲಕ ವಾಸುಕಿ ವೈಭವ್ ಎಂಬ ಯುವ ಪ್ರತಿಭೆ ಮತ್ತಷ್ಟು ಗುರುತಿಸಿಕೊಂಡರು.

ಮನಸ್ಸಿಂದ ಯಾರೂ ಕೆಟ್ಟವರಲ್ಲಾ ಹಾಡನ್ನು ಇಂದಿಗೂ ಜನ ಮರೆತಿಲ್ಲ, ಇದೀಗ ಚಿತ್ರ ನಟನೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ ಇಂಥ ಪ್ರತಿಭೆಯ ಮನಕದ್ದ ಸುಂದರಿ ಯಾರು ಎಂಬ ಕುತೂಹಲ ವಾಸುಕಿ ವೈಭವ್ ಅವರ ಅಭಿಮಾನಿಗಳಿತ್ತು, ಆ ಹುಡುಗಿ ಬೃಂದಾ ವಿಕ್ರಮ್.
ಗಟ್ಟಿ ಗೆಳೆತನದಲ್ಲಿ ಅರಳಿದ ಪ್ರೀತಿಯಿದು
ಬೃಂದಾ ವಿಕ್ರಮ್ ರಂಗಭೂಮಿ ಕಲಾವಿದೆ ಅಲ್ಲದೆ ಶಿಕ್ಷಕಿಯೂ ಹೌದು. ಇವರಿಬ್ಬರದು ಇಂದು ನೆನ್ನೆಯ ಪ್ರೀತಿಯಲ್ಲ, ಗಟ್ಟಿಯಾದ ಸ್ನೇಹ ಬಂಧದಿಂದ ಹುಟ್ಟಿಕೊಂಡ ನವಿರಾದ ಪ್ರೀತಿಯ ಬಂಧವಿದು ಎಂಬುವುದು ಅವರ ಫೋಟೋಗಳನ್ನು ನೋಡಿದಾಗಲೇ ತಿಳಿಯುತ್ತದೆ.
ಇವರಿಬ್ಬರ ಪ್ರೀತಿಯ ಬಗ್ಗೆ ವಾಸುಕಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ, ಆದರೆ ಇವರ ಸ್ನೇಹಿತರಿಗಷ್ಟೇ ತಿಳಿದಿತ್ತು
ಇವರು ತುಂಬಾ ವರ್ಷದಿಂದ ಪರಿಚಿತರು ಎಂಬುವುದು ಇವರು ಶೇರ್ ಮಾಡಿರುವ ಫೋಟೋಗಳೇ ಹೇಳುತ್ತಿವೆ, ಇವರ ಸ್ನೇಹಿತರ ಬಳಗವಿತ್ತು ಎಲ್ಲರೂ ರಂಗಭೂಮಿಯಲ್ಲಿ ಆಸಕ್ತಿ ಹೊಂದಿವರು. ರಂಗಭೂಮಿ ದಿನದಂದು ಬೆಂಗಳೂರಿನ ರೋಡ್ಗಳಲ್ಲಿ ನಾಟಕ ಮಾಡಿ ಗಮನ ಸೆಳೆದ ಕೀರ್ತಿ ಇವರ ಟೀಂಗೆ ಸಲ್ಲುತ್ತದೆ, ವಾಸುಕಿ ಸಂಗೀತ ನಿರ್ದೇಶಕನಾಗಿಯೂ ಗುರುತಿಸಿಕೊಳ್ಳಲಾರಂಭಿಸಿದರು, ಆವಾಗ ಅವರಿಗೆ ಬಿಗ್ಬಾಸ್ ಅವಕಾಶ ಸಿಕ್ಕಿತ್ತು, ಅದು ಅವರ ಕೆರಿಯರ್ಗೆ ಮತ್ತಷ್ಟು ಪ್ಲಸ್ ಆಯ್ತು. ಅಲ್ಲಿಂದ ವಾಸುಕಿ ಸ್ಯಾಂಡಲ್ವುಡ್ನಲ್ಲಿ ಮತ್ತಷ್ಟು ಬೆಳೆಯಲಾರಂಭಿಸಿದರು.
ಚಂದನಾ ಜೊತೆಗೆ ಫ್ರೆಂಡ್ಶಿಪ್ ಗಮನ ಸೆಳೆಯಿತು
ಬಿಗ್ಬಾಸ್ನಿಂದಾಗಿ ವಾಸುಕಿ ವೈಭವ್, ಚಂದನಾ ಒಳ್ಳೆಯ ಸ್ನೇಹಿತರಾದರು. ಕಳೆದ ದೀಪಾವಳಿಗೆ ಇವರಿಬ್ಬರು ಫೋಟೋಶೂಟ್ ಮಾಡಿಸಿದ್ದರು, ಅದನ್ನು ನೋಡಿದವರು ಇವರಿಬ್ಬರು ಪ್ರೀತಿಸುತ್ತಿರಬಹುದು ಎಂದು ಗಾಸಿಪ್ ಹರಡಿದರು, ಆದರೆ ಅವರಿಬ್ಬರು ಒಳ್ಳೆಯ ಸ್ನೇಹಿತರಷ್ಟೇ.
ಬೃಂದಾರನ್ನು ವಾಸುಕಿಯ ಬ್ಯಾಕ್ಬೋನ್ ಸ್ಟ್ರೆಂತ್ ಅನ್ನುತ್ತಾರೆ ಅವರ ಸ್ನೇಹಿತರು
ಬೃಂದಾರವರು ವಾಸುಕಿಯ ಬದುಕಿನಲ್ಲಿ ತುಂಬಾನೇ ದೊಡ್ಡ ಪಾತ್ರವಹಿಸಿದವರು. ಒಬ್ಬ ಗೆಳತಿಯಾಗಿ, ಪ್ರೇಮಿಯಾಗಿ ವಾಸುಕಿಗೆ ಶಕ್ತಿ ತುಂಬಿದವರು, ವಾಸುಕಿ ಇಂದು ಏನಾಗಿದ್ದಾರೂ ಅದಕ್ಕೆ ಬೃಂದಾರವರು ಕಾರಣ ಎನ್ನುತ್ತಾರೆ ಅವರ ಸ್ನೇಹಿತರು. ಬೃಂದಾ ತುಂಬಾನೇ ಲವಲವಿಕೆಯ ಹುಡುಗಿ, ಇವರಿಬ್ಬರ ಬದುಕು ಮತ್ತಷ್ಟು ಸುಂದರವಾಗಲಿ ಎಂಬುವುದೇ ನಮ್ಮ ಹಾರೈಕೆ.



Click it and Unblock the Notifications











