Latest Updates
-
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ!
ಆ ಒಂದು ಮಾತು ನಿಮ್ಮ ಸಂಸಾರವನ್ನೇ ಬೆಳಗಿಸಿಬಿಡಬಹುದು !
ಸುಖಿ ದಾಂಪತ್ಯದ ಸೂತ್ರ ಏನು ಎಂದು ಕೇಳಿದರೆ ಅನೇಕರು, ಪ್ರೀತಿ, ಪ್ರಾಮಾಣಿಕತೆ, ನಂಬಿಕೆ ಎಂದೆಲ್ಲಾ ಹೇಳುತ್ತಾರೆ. ಆದರೆ ಅದಕ್ಕಿಂತ ಮುಖ್ಯವಾದುದು ಗಂಡ-ಹೆಂಡತಿ ನಡುವಿನ ಸಂವಹನ. ದಂಪತಿಗಳಿಬ್ಬರ ನಡುವೆ ಪ್ರಬಲವಾದ ಸಂವಹನ ಇದ್ದಾಗ ಮಾತ್ರ ದಾಂಪತ್ಯದಲ್ಲಿ ಸುಖವಾಗಿರೋದಕ್ಕೆ ಸಾಧ್ಯ. ಇಬ್ಬರ ನಡುವಿನ ಕಷ್ಟ-ಸುಖಗಳ ಬಗ್ಗೆ ತಿಳಿದುಕೊಳ್ಳಬೇಕಾದರೆ, ಬೇಕು ಬೇಡಗಳ ಬಗ್ಗೆ ವಿಚಾರಿಸಬೇಕಾದರೆ ಸಂವಹನ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಅಷ್ಟಕ್ಕು ಸಂವಹನ ಯಾವ ರೀತಿ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಅನ್ನೋದ್ರ ಬಗ್ಗೆ ತಿಳಿಯೋಣ.

ಸಂಬಂಧದಲ್ಲಿ ಸಂವಹನ ಯಾಕೆ ಮುಖ್ಯ?
1. ಸಂಗಾತಿಯ ಸಮಸ್ಯೆಯ ಬಗ್ಗೆ ಅರಿತುಕೊಳ್ಳಬಹುದು
ಕೆಲವೊಂದು ಸಲ ಮನೆಯಲ್ಲಿ ನೋಡಿದ ಹುಡುಗ/ಹುಡುಗಿಯನ್ನು ಮದುವೆಯಾಗಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಇಂತಹ ಸಮಯದಲ್ಲಿ ಇಬ್ಬರ ನಡುವಿನ ಸಂವಹನ ಕಡಿಮೆ ಇರುತ್ತದೆ. ಕೆಲವೊಂದು ಜೋಡಿಗಳಿಗೆ ಮಾತ್ರ ಇದು ಅನ್ವಯ ಆಗುತ್ತದೆ. ಹೀಗಾಗಿ ನಿಮ್ಮ ಸಂಗಾತಿಯ ಜೀವನದಲ್ಲಿ ಏನಾಗುತ್ತಿದೆ. ಅನ್ನೋದ್ರ ಸಣ್ಣ ಸುಳಿವು ಕೂಡ ನಿಮಗೆ ಇರೋದಿಲ್ಲ. ಯಾವಾಗ ಮನಬಿಚ್ಚಿ ಮಾತನಾಡುತ್ತಿರೋ ಆಗ ಮಾತ್ರ ಅವರ ಕಷ್ಟ-ನಷ್ಟ, ನೋವು-ನಲಿವುಗಳ ಬಗ್ಗೆ ನಮಗೆ ತಿಳಿಯುತ್ತದೆ.
2. ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ
ಕೆಲವೊಂದು ಮನೆಗಳಲ್ಲಿ ಗಂಡ-ಹೆಂಡತಿಯ ನಡುವೆ ಮಾತುಕತೆಯೇ ಇರೋದಿಲ್ಲ. ಅಗತ್ಯಕ್ಕೆ ತಕ್ಕಷ್ಟು ಮಾತ್ರ ಮಾತನಾಡುತ್ತಾರೆ. ಆದರೆ ಇದು ಸರಿಯಾದ ವಿಧಾನವಲ್ಲ. ದಂಪತಿಗಳ ನಡುವೆ ಸಂವಹನ ಮುಖ್ಯ. ಸಂವಹನ ಹೆಚ್ಚಾದಷ್ಟು ಇಬ್ಬರ ನಡುವಿನ ಅನುಬಂಧ ಹೆಚ್ಚಾಗುತ್ತದೆ. ದಿನದಿಂದ ದಿನಕ್ಕೆ ಇಬ್ಬರ ನಡುವಿನ ಪ್ರೀತಿ ಕೂಡ ಹೆಚ್ಚಾಗುತ್ತದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಂವಹನ ನೆರವಾಗುತ್ತದೆ.
3. ಸಂಸಾರಿಕ ತೃಪ್ತಿ ಇರಬೇಕು
ಮದುವೆಯಾಗುವ ಉದ್ದೇಶವೇ ಕೊನೆವರೆಗೂ ಸಂತೋಷದಿಂದ ಕೂಡ ಬಾಳಬೇಕು ಎನ್ನವ ಕಾರಣಕ್ಕಾಗಿ. ಆದರೆ ದಂಪತಿಗಳ ನಡುವೆ ಮಾತುಕತೆ ಇಲ್ಲದೇ ಹೋದರೆ ದಾಂಪತ್ಯ ಸುಖವನ್ನು ಅನುಭವಿಸೋದಾದರೂ ಹೇಗೆ? ಲೈಂಗಿಕ ಕ್ರಿಯೆಯು ಹಾಗೆಯೇ ಒತ್ತಾಯ ಪೂರ್ವಕವಾಗಿ ನಡೆಸಬಾರದು. ಇಬ್ಬರು ಒಪ್ಪಿದ ನಂತರವಷ್ಟೇ ಲೈಂಗಿಕ ಕ್ರಿಯೆ ನಡೆಸಬೇಕು. ಇಲ್ಲದಿದ್ದರೆ ಏನು ಪ್ರಯೋಜನ? ಒಬ್ಬರ ಸಂತೋಷಕ್ಕಾಗಿ ಮತ್ತೊಬ್ಬರ ಸಂತೋಷವನ್ನು ಬಲಿ ಕೊಡಲೇಬಾರದು. ಸಂವಹನ ಪ್ರಬಲವಾಗಿದ್ದಾಗ ಈ ಸಮಸ್ಯೆಗಳು ಬರೋದೇ ಇಲ್ಲ.
4. ನಂಬಿಕೆ, ಪ್ರಾಮಾಣಿಕತೆ ಮತ್ತು ಗೌರವ ಹೆಚ್ಚಾಗುತ್ತದೆ
ದಾಂಪತ್ಯದಲ್ಲಿ ಸಂವಹನ ಯಾಕೆ ಮುಖ್ಯವೆಂದರೆ ಇದು ನಿಮ್ಮಿಬ್ಬರ ನಡುವಿನ ನಂಬಿಕೆ, ಪ್ರಾಮಾಣಿಕತೆ ಮತ್ತು ಗೌರವವನ್ನು ಹೆಚ್ಚು ಮಾಡುತ್ತದೆ. ದಂಪತಿಗಳ ನಡುವೆ ಮಾತುಕತೆ ಇರದಿದ್ದರೆ ಒಬ್ಬರ ಬಾಳಲ್ಲಿ ಏನಾಗುತ್ತಿದೆ ಅನ್ನೋದು ಇನ್ನೊಬ್ಬರಿಗೆ ಗೊತ್ತಾಗೋದಿಲ್ಲ. ಇಬ್ಬರೂ ಒಂದೇ ಮನೆಯಲ್ಲಿದ್ದರೂ ಕೂಡ ವೈಯಕ್ತಿಕವಾಗಿ ಬದುಕುತ್ತಿರುತ್ತಾರೆ. ನಮ್ಮವರು ಅನ್ನೋ ಭಾವನೆಯೇ ಬರೋದಿಲ್ಲ. ಸಂವಹನ ಇದ್ದಾಗ ಮಾತ್ರ ಒಬ್ಬರ ಮೇಲೊಬ್ಬರಿಗೆ ನಂಬಿಕೆ, ವಿಶ್ವಾಸ, ಗೌರವ ಹೆಚ್ಚಾಗೋದು.
5. ಬಾಂಧವ್ಯ ಗಟ್ಟಿಯಾಗುತ್ತದೆ
ಸಂವಹನ ಮಾತಿನ ಮೂಲಕ ಇರಬಹುದು. ಅಥವಾ ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಗೆ ವ್ಯಕ್ತ ಪಡಿಸುವುದನ್ನು ಕೂಡ ನಾವು ಸಂವಹನ ಎಂದು ಕರೆಯುತ್ತೇವೆ. ದಂಪತಿಗಳ ನಡುವೆ ಯಾವುದೇ ವಿಚಾರದಲ್ಲೂ ಮುಚ್ಚು ಮರೆ ಅನ್ನೋದು ಇರಬಾರದು. ಎಲ್ಲವನ್ನೂ ಮುಕ್ತವಾಗಿ ಹಂಚಿಕೊಳ್ಳಬೇಕು. ಇದಕ್ಕೆ ಸಂವಹನ ತುಂಬಾನೇ ಮುಖ್ಯ. ಆಗ ಮಾತ್ರ ದಂಪತಿಗಳ ನಡುವಿನ ಭಾಂದವ್ಯ ಗಟ್ಟಿಯಾಗೋದಕ್ಕೆ ಸಾಧ್ಯ.
6. ಜಗಳ, ಮನಸ್ಥಾಪ ದೂರವಾಗುತ್ತದೆ
ದಾಂಪತ್ಯ ಅಂದ ಮೇಲೆ ಅಲ್ಲಿ ಸರಸ-ವಿರಸ, ಜಗಳ, ಮನಸ್ಥಾಪ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಹಾಗಂತ ಜಗಳವಾಯಿತು ಎಂದು ಪತಿಯ ಜೊತೆಗೆ ಮಾತನಾಡದೇ ಇರೋದು ಸರಿಯಲ್ಲ. ಇದು ನಿಮ್ಮಿಬ್ಬರನ್ನು ಮತ್ತಷ್ಟು ದೂರವಾಗಿಸುತ್ತದೆ. ಹೀಗಾಗಿ ಸಂಗಾತಿಯ ಜೊತೆಗೆ ಮುಕ್ತವಾಗಿ ಮಾತನಾಡಿ. ಹಾಗೂ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಒಂದೇ ಒಂದು ಮಾತು ನಿಮ್ಮಿಬ್ಬರನ್ನು ಒಂದು ಮಾಡುತ್ತೆ ಎಂದಾದರೆ ಮಾತನಾಡೋದ್ರಲ್ಲಿ ತಪ್ಪಿದ್ಯಾ? ಖಂಡಿತ ಇಲ್ಲ.
ಪ್ರೀತಿಯ ಬಂಧ ಗಟ್ಟಿಯಾಗಬೇಕೆಂದರೆ ಸಂವಹನ ತುಂಬಾನೇ ಮುಖ್ಯ. ಯಾವುದೇ ಕಾರಣಕ್ಕೆ ನಿಮ್ಮ ಸಂಗಾತಿಯೊಂದಿಗೆ ಮಾತನಾಡದೇ ಇರಲೇ ಬೇಡಿ. ಏನಿದ್ದರೂ ಮುಕ್ತವಾಗಿ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ.



Click it and Unblock the Notifications













