Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ವೈವಾಹಿಕ ಸಂಬಂಧದಲ್ಲಿ ಇಂಥಾ ಲಕ್ಷಣಗಳಿದ್ದರೆ ಕೂಡಲೇ ದಾಂಪತ್ಯ ತಜ್ಞರನ್ನು ಭೇಟಿ ಮಾಡಿ
ದಂಪತಿ, ದಾಂಪತ್ಯ ಎಂದ ಮೇಲೆ ಕಷ್ಟ-ಸುಖ, ನೋವು-ನಲಿವು, ಮೌನ-ಮಾತು ಇದ್ದೇ ಇರುತ್ತದೆ. ಹಿರಿಯರು ಹೇಳುವಂತೆ ಸರಸ-ವಿರಸವೇ ದಾಂಪತ್ಯ. ಅದರೆ ಮದುವೆಯ ಜೀವನದಲ್ಲಿ ದಂಪತಿಗಳ ನಡುವೆ ವಿರಸವೇ ಹೆಚ್ಚಾದರೆ, ಮಾತಿಗಿಂತ ಮೌನವೇ ಅಧಿಕವಾದರೆ, ಕಷ್ಟಗಳೇ ಬದುಕಾದರೆ ಯಾರೂ ಸಹಿಸುವುದಿಲ್ಲ.

ಕೆಲವು ಸಂಸಾರದಲ್ಲಿ ಇಂಥಾ ಕಷ್ಟವೇ ದಾಂಪತ್ಯ ಎಂದು ಸಹಿಸಿಕೊಂಡು ಬದಕುವವರೂ ಇದ್ದಾರೆ. ಆದರೆ ಇದಕ್ಕೆ ಇರುವ ಸರಳ ಪರಿಹಾರ ವೈವಾಹಿಕ ತಜ್ಞರನ್ನು ಭೇಟಿ ಮಾಡುವುದು.
ಹೌದು ಸಂಸಾರದಲ್ಲಿ ಹಲವು ಸಮಸ್ಯೆಗಳಿಗೆ ದಾಂಪತ್ಯ ತಜ್ಞರು ಉತ್ತಮ ಸಲಹ ನೀಡಿ ಬದುಕಿನ ಸಿಹಿಯನ್ನು ಹೆಚ್ಚಿಸುತ್ತಾರೆ. ನಾವು ದಾಂಪತ್ಯ ತಜ್ಞರನ್ನು ಯಾವಾಗ ಭೇಟಿ ಮಾಡಬೇಕು, ದಾಂಪತ್ಯದಲ್ಲಿನ ಯಾವೆಲ್ಲಾ ಬಿರುಕು ಸಂಬಂಧವನ್ನು ಹಾಳು ಮಾಡುತ್ತದೆ ಮುಂದೆ ನೋಡೊಣ:

ಮೌನ ಬಂಗಾರವಾಗದಿದ್ದಾಗ
ಸಂವಹನವು ಯಾವುದೇ ಸಂಬಂಧದ ಮೂಲಾಧಾರವಾಗಿದೆ. ಇದು ಸಂಬಂಧ ಗಟ್ಟಿಯಾಗಲು, ಸಂಬಂಧದಲ್ಲಿ ಮದುರತೆ ಬರಲು ಇರುವ ಏಕೈಕ ಅಸ್ತ್ರವಾಗಿದೆ. ಅದರೆ ಹೆಚ್ಚಿನ ವೈವಾಹಿಕ ಅಪಶ್ರುತಿಗಳು ಸಂವಹನದಲ್ಲಿನ ಸ್ಥಗಿತದಿಂದ ಉಂಟಾಗುತ್ತದೆ. ಮೌನ ಮಲ್ಲಿಗೆ ಸತ್ಯ, ಆದರೆ ಅತಿಯಾದ ಮೌನ ಸಹ ಅಪಾಯಕಾರಿ. ಇಂಥಾ ದಂಪತಿಗಳಿಗೆ ಖಂಡಿತವಾಗಿ ವಿವಾಹ ಸಲಹೆಗಾರರ ಅಗತ್ಯವಿದೆ ಎಂದರ್ಥ.

ಮಾತುಕತೆ ನಕಾರಾತ್ಮಕವಾಗಿದ್ದರೆ
ಮಿತಿ ಮೀರಿದ ಪದಗಳು ಸಂಬಂಧದಲ್ಲಿ ಬಹಳಷ್ಟು ಹಾನಿ ಮಾಡಿಬಿಡುತ್ತದೆ. ದಾಂಪತ್ಯದಲ್ಲಿ ಟೀಕೆ, ತಿರಸ್ಕಾರ, ನಿತ್ಯವೂ ಉದ್ವೆಗದ ಮಾತುಗಳೇ ಇದ್ದರೆ ಇದು ಉತ್ತಮ ಸಂಬಂಧದ ಮುನ್ಸೂಚನೆಯಲ್ಲ, ಇವರಿಗೆ ವಿವಾಹ ಸಲಹೆಗಾರರ ಅಗತ್ಯವಿದೆ. ಮತ್ತೊಂದು ವಿಚಾರದಲ್ಲಿ ಹೇಳುವುದಾದರೆ, ನೀವು ಏನು ಹೇಳುತ್ತೀರಿ ಎಂಬುದು ಮಾತ್ರವಲ್ಲ, ನೀವು ಅದನ್ನು ಹೇಗೆ ಹೇಳುತ್ತೀರಿ ಎಂಬುದು ಮುಖ್ಯವಾಗುತ್ತದೆ ಎಂಬುದು ಮುಖ್ಯ ಎನ್ನುತ್ತಾರೆ ಸಂಬಂಧ ಸಲಹೆಗಾರರು.

ಒಂದೇ ಮನೆಯಲ್ಲಿ ಪ್ರತ್ಯೇಕ ಜೀವನ ನಡೆಸುತ್ತಿದ್ದರೆ
ದಂಪತಿಗಳಿಬ್ಬರು ಒಂದೇ ಮನೆಯೊಳಗೆ ಜೀವನ ನಡೆಸುತ್ತಿದ್ದರೂ, ಮದುವೆಯು ಅನ್ಯೋನ್ಯತೆ ಮತ್ತು ಮದುರ ಮಾತು, ಸಂಪರ್ಕದ ಲಕ್ಷಣಗಳನ್ನು ಕಳೆದುಕೊಂಡಿದ್ದರೆ ಅವರಿಗೆ ವಿವಾಹ ಸಲಹೆಗಾರರ ಅಗತ್ಯವಿದೆ ಎಂದರ್ಥ. ಕೆಲವು ದಂಪತಿಗಳು ಹೀಗೆಯೇ ಉತ್ತಮವಾಗಿದೆ ಎಂದುಕೊಂಡಿದ್ದರೂ, ಇದು ಮುಂದಿನ ಬದುಕು, ಮಕ್ಕಳ ಭವಿಷ್ಯದ ಮೇಲೆ ಬಹಳ ನಕಾರಾತ್ಮಕ ಪರಿಣಾಮ ಬೀರಲಿದೆ.

ರಹಸ್ಯಗಳನ್ನು ಇಟ್ಟುಕೊಳ್ಳಬಾರದು
ಪ್ರತಿಯೊಬ್ಬರಿಗೂ ಖಾಸಗಿತನದ ಹಕ್ಕಿದೆ, ಸಂಬಂಧದಲ್ಲಿ ದೊಡ್ಡ ಸಮಸ್ಯೆಗಳನ್ನು ಪರಸ್ಪರ ಮರೆಮಾಡುವುದು ಆರೋಗ್ಯಕರವಲ್ಲ. ನಿಮ್ಮ ಸಂಗಾತಿಯ ಮೇಲೆ ಪರಿಣಾಮ ಬೀರಬಹುದಾದ ಹಣದ ವಿಷಯಗಳು, ಪೋಷಕರ ನಿರ್ಧಾರಗಳು ಅಥವಾ ಕೆಲಸದ ಬದ್ಧತೆಗಳನ್ನು ಮುಚ್ಚಿಡಬಾರದು ಬಹಿರಂಗವಾಗಿ ಚರ್ಚಿಸಬೇಕು. ಸಂಬಂಧದಲ್ಲಿ ಇಂಥಾ ವಿಚಾರಗಳು ಅನುಮಾನಕ್ಕೆ ಕಾರಣವಾಗುತ್ತದೆ.



Click it and Unblock the Notifications