Latest Updates
-
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ!
ಗೃಹಪ್ರವೇಶಕ್ಕೆ ಪತ್ನಿಯ ಪುತ್ಥಳಿ: ಅಮರ ಪ್ರೇಮಕ್ಕೆ ಸಾಕ್ಷಿಯಾಯ್ತು ಕೊಪ್ಪಳದ ಈ ಮನೆ
ಅದೊಂದು ಭವ್ಯ ಮನೆ, ಮನೆ ಹಾಲ್ನೊಳಗೆ ಪ್ರವೇಶಿಸುತ್ತಿದ್ದಂತೆ ಮೊದಲು ಕಣ್ಣಿಗೆ ಬೀಳುವುದು ಸೋಫಾದಲ್ಲಿ ಲಕ್ಷಣವಾಹಗಿ ಕುಳಿತಿರುವ ಮನೆಯ ಯಜಮಾನಿ. ಅರೇ ಅದರಲ್ಲಿ ಏನು ವಿಶೇಷ ಅಂತೀರಾ, ಆ ಯಜಮಾನಿ ಇಂದು ಜೀವಂತವಾಗಿಲ್ಲ. ಆಕೆಯಿಲ್ಲದ ಮನೆ ಪ್ರವೇಶಿಸಲಾರೆ ಆಕೆ ನಮ್ಮೊಂದಿಗೇ ಇರಬೇಕೆಂದು ಆಕೆಯ ಪತಿ ಸ್ಥಾಪಿಸಿರುವ ಪುತ್ಥಳಿಯದು.
ನಮ್ಮ ಕರ್ನಾಟಕದ ಕೊಪ್ಪಳ ಜಿಲ್ಲೆ ಒಂದು ಸುಂದರವಾದ ಪ್ರೇಮ ಕತೆಗೆ ಸಾಕ್ಷಿಯಾಗಿದೆ. ನಾವೆಲ್ಲಾ ಷಹಜಾನ್ ತನ್ನ ಪತ್ನಿ ಮುಮ್ತಾಜ್ ನೆನಪಿಗೋಸ್ಕರ ತಾಜ್ಮಹಲ್ ಕಟ್ಟಿದ ಕತೆ ಕೇಳಿದ್ದೇವೆ. ಕೊಪ್ಪಳ ಭಾಗ್ಯ ನಗರದಲ್ಲಿನ ಉದ್ಯಮಿ ಶ್ತೀನಿವಾಸ್ ಗುಪ್ತಾರವರ ಪ್ರೇಮ ಯಾವ ತಾಜ್ಮಹಲ್ ಪ್ರೇಮ ಕತೆಗಿಂತ ಕಡಿಮೆಯಿಲ್ಲ.

ನೂತನ ಮನೆಯಲ್ಲಿ ಪತ್ನಿಯ ಪುತ್ಥಳಿ ನಿರ್ಮಿಸಿದ ಉದ್ಯಮಿ
ತಮ್ಮ ನೂತನ ಮನೆಯಲ್ಲಿ ಪತ್ನಿ ಕೆವಿಎನ್ ಮಾಧವಿ ಇರಬೇಕೆಂದು ಆಕೆಯಂತೆಯೇ ಕಾಣುವ ಸಿಲಿಕಾನ್ ಪ್ರತಿಮೆ ನಿರ್ಮಿಸಿದ್ದಾರೆ. ಇದನ್ನು ನಿರ್ಮಾಣ ಮಾಡಲು ಸಲಹೆ ಕೊಟ್ಟವರು ಆರ್ಕಿಟೆಕ್ಟ್ ರಂಘಣ್ಣನವರ್. ಬೆಂಗಳೂರಿನ ಬೊಂಬೆ ಮನೆ ಈ ಪುತ್ಥಳಿ ನಿರ್ಮಿಸಿದೆ. ಆಗಸ್ಟ್ 8ಕ್ಕೆ ಈ ಮನೆಯ ಗೃಹಪ್ರವೇಶವಾಗಿದ್ದು ಇದೀಗ ಈ ಮನೆ ಎಲ್ಲರ ಗಮನ ಸೆಳೆದಿದೆ. ಉದ್ಯಮಿ ಗುಪ್ತಾರವರು ಪತ್ನಿ ಮೇಲಿಟ್ಟ ಪ್ರೇಮವನ್ನು ನೋಡಿ, ನಿಜವಾದ ಪ್ರೀತಿಯೆಂದರೆ ಹೀಗಿರಬೇಕು ಎಂದು ಹೇಳುತ್ತಿದ್ದಾರೆ.

ಮಾಧವಿಯವರ ಕನಸ್ಸಿನ ಮನೆ
ಮಾಧವಿಯವರಿಗೆ ಒಂದು ಭವ್ಯವಾದ ಮನೆಯನ್ನು ಕಟ್ಟಬೇಕೆಂಬ ಕನಸ್ಸಿತ್ತು. ಹಾಗಾಗಿ ಮನೆ ಕಟ್ಟಲು ಸಿದ್ಧತೆ ಕೂಡ ನಡೆಸಿದ್ದರು. ಆದರೆ ವಿಧಿಯಾಟವೇ ಬೇರೆ ಇತ್ತು. 2017 ಜುಲೈ 5ರಂದು ತಿರುಪತಿಗೆ ಹೋಗುವಾಗ ಕೋಲಾರದ ಬಳಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದರು. ಪತ್ನಿಯ ಅಗಲಿಕೆಯಿಂದ ದುಃಖಿತರಾದ ಶ್ರೀನಿವಾಸ್ ಮನೆ ನಿರ್ಮಾಣವನ್ನು ನಿಲ್ಲಿಸಿದ್ದರು. ಆದರೆ ಪುತ್ರಿಯರು ಹಾಗೂ ಹಿತೈಷಿಗಳು ಸಮಧಾನ ಹೇಳಿ ಮನೆ ಪೂರ್ಣ ಮಾಡುವಂತೆ ಸಲಹೆ ನೀಡಿದರು. ಆಗ ಪತ್ನಿ ಮನೆಯಲ್ಲಿಯೇ ನಮ್ಮ ಜೊತೆ ಇರಬೇಕೆಂದು ಬಯಸಿದ ಶ್ರೀನಿವಾಸ್ ಪತ್ನಿಯ ಪುತ್ಥಳಿ ನಿರ್ಮಿಸಿದ್ದಾರೆ.

ಥೇಟ್ ಮಾಧವಿಯವರಂತೆ ಕಾಣುವ ಪುತ್ಥಳಿ
ಥೇಟ್ ಮಾಧವಿಯವರಂತೆ ಕಾಣುವ ಪುತ್ಥಳಿಗೆ ಮಾಧವಿಯವರ ಸೀರೆಯನ್ನು ಉಡಿಸಲಾಗಿದೆ. ಅವರು ತೊಡುತ್ತಿದ್ದ ಬಂಗಾರದ ಆಭರಣಗಳನ್ನು ತೊಡಿಸಿದ್ದಾರೆ. ಅವರಂತೆಯೇ ತೋರುವ ರೀತಿಯಲ್ಲಿ ಹೇರ್ಸ್ಟೈಲ್ ಹಾಗೂ ಅಲಂಕಾರ ಮಾಡಾಗಿದೆ. ಈ ಪುತ್ಥಳಿಯ ಭಾಗಗಳು ಫ್ಲೆಕ್ಸಿಬಲ್ ಆಗಿದ್ದು ಎಲ್ಲಿಗೂ ಬೇಕಾದರೂ ಕೊಂಡೊಯ್ಯಬಹುದಾಗಿದೆ.

ತಾಯಿ ನಮ್ಮೊಂದಿಗೆ ಇದ್ದಾರೆ ಎಂಬ ಖುಷಿಯಲ್ಲಿ ಪುತ್ರಿಯರು
ಶ್ರೀನಿವಾಸ್ ಅವರ ಪುತ್ರಿಯರಿಗೂ ಕೂಡ ಮನೆಯಲ್ಲಿ ತಾಯಿ ಇರುವುದು ತುಂಬಾ ಖುಷಿಯ ವಿಚಾರವಾಗಿದೆ. ದೈಹಿಕವಾಗಿ ಅಮ್ಮ ಇಲ್ಲದಿದ್ದರೂ ಈ ರೂಪದಲ್ಲಾದರೂ ಹೊಸ ಮನೆಯಲ್ಲಿ ನಮ್ಮ ಜೊತೆ ಇದ್ದಾರಲ್ಲಾ ಎಂಬ ಸಮಧಾನ, ಖುಷಿ ಇದೆ. ಗೃಹ ಪ್ರವೇಶ ದಿನ ತಾಯಿ ಪ್ರತಿಮೆ ಜೊತೆ ಈ ಕುಟುಂಬ ಫ್ಯಾಮಲಿ ಫೋಟೋ ತೆಗೆಸಿಕೊಂಡಿದ್ದಾರೆ.
ಇದೀಗ ಈ ಪುತ್ಥಳಿ ವಿಚಾರ ಕರ್ನಾಟಕದಲ್ಲಿ ಮಾತ್ರವಲ್ಲ ದೇಶದಲ್ಲಿಯೇ ಸುದ್ದಿಯಾಗಿದ್ದು ಎಲ್ಲರು ಶ್ರೀನಿವಾಸ್ ಅವರು ಪತ್ನಿಯ ಮೇಲಿಟ್ಟಿರುವ ಪ್ರೀತಿ ಕಂಡು ಆದರ್ಶ ಪ್ರೇಮವೆಂದರೆ ಹೀಗಿರಬೇಕು ಎಂದು ಹೊಗಳುತ್ತಿದ್ದಾರೆ.



Click it and Unblock the Notifications