Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಗೃಹಪ್ರವೇಶಕ್ಕೆ ಪತ್ನಿಯ ಪುತ್ಥಳಿ: ಅಮರ ಪ್ರೇಮಕ್ಕೆ ಸಾಕ್ಷಿಯಾಯ್ತು ಕೊಪ್ಪಳದ ಈ ಮನೆ
ಅದೊಂದು ಭವ್ಯ ಮನೆ, ಮನೆ ಹಾಲ್ನೊಳಗೆ ಪ್ರವೇಶಿಸುತ್ತಿದ್ದಂತೆ ಮೊದಲು ಕಣ್ಣಿಗೆ ಬೀಳುವುದು ಸೋಫಾದಲ್ಲಿ ಲಕ್ಷಣವಾಹಗಿ ಕುಳಿತಿರುವ ಮನೆಯ ಯಜಮಾನಿ. ಅರೇ ಅದರಲ್ಲಿ ಏನು ವಿಶೇಷ ಅಂತೀರಾ, ಆ ಯಜಮಾನಿ ಇಂದು ಜೀವಂತವಾಗಿಲ್ಲ. ಆಕೆಯಿಲ್ಲದ ಮನೆ ಪ್ರವೇಶಿಸಲಾರೆ ಆಕೆ ನಮ್ಮೊಂದಿಗೇ ಇರಬೇಕೆಂದು ಆಕೆಯ ಪತಿ ಸ್ಥಾಪಿಸಿರುವ ಪುತ್ಥಳಿಯದು.
ನಮ್ಮ ಕರ್ನಾಟಕದ ಕೊಪ್ಪಳ ಜಿಲ್ಲೆ ಒಂದು ಸುಂದರವಾದ ಪ್ರೇಮ ಕತೆಗೆ ಸಾಕ್ಷಿಯಾಗಿದೆ. ನಾವೆಲ್ಲಾ ಷಹಜಾನ್ ತನ್ನ ಪತ್ನಿ ಮುಮ್ತಾಜ್ ನೆನಪಿಗೋಸ್ಕರ ತಾಜ್ಮಹಲ್ ಕಟ್ಟಿದ ಕತೆ ಕೇಳಿದ್ದೇವೆ. ಕೊಪ್ಪಳ ಭಾಗ್ಯ ನಗರದಲ್ಲಿನ ಉದ್ಯಮಿ ಶ್ತೀನಿವಾಸ್ ಗುಪ್ತಾರವರ ಪ್ರೇಮ ಯಾವ ತಾಜ್ಮಹಲ್ ಪ್ರೇಮ ಕತೆಗಿಂತ ಕಡಿಮೆಯಿಲ್ಲ.

ನೂತನ ಮನೆಯಲ್ಲಿ ಪತ್ನಿಯ ಪುತ್ಥಳಿ ನಿರ್ಮಿಸಿದ ಉದ್ಯಮಿ
ತಮ್ಮ ನೂತನ ಮನೆಯಲ್ಲಿ ಪತ್ನಿ ಕೆವಿಎನ್ ಮಾಧವಿ ಇರಬೇಕೆಂದು ಆಕೆಯಂತೆಯೇ ಕಾಣುವ ಸಿಲಿಕಾನ್ ಪ್ರತಿಮೆ ನಿರ್ಮಿಸಿದ್ದಾರೆ. ಇದನ್ನು ನಿರ್ಮಾಣ ಮಾಡಲು ಸಲಹೆ ಕೊಟ್ಟವರು ಆರ್ಕಿಟೆಕ್ಟ್ ರಂಘಣ್ಣನವರ್. ಬೆಂಗಳೂರಿನ ಬೊಂಬೆ ಮನೆ ಈ ಪುತ್ಥಳಿ ನಿರ್ಮಿಸಿದೆ. ಆಗಸ್ಟ್ 8ಕ್ಕೆ ಈ ಮನೆಯ ಗೃಹಪ್ರವೇಶವಾಗಿದ್ದು ಇದೀಗ ಈ ಮನೆ ಎಲ್ಲರ ಗಮನ ಸೆಳೆದಿದೆ. ಉದ್ಯಮಿ ಗುಪ್ತಾರವರು ಪತ್ನಿ ಮೇಲಿಟ್ಟ ಪ್ರೇಮವನ್ನು ನೋಡಿ, ನಿಜವಾದ ಪ್ರೀತಿಯೆಂದರೆ ಹೀಗಿರಬೇಕು ಎಂದು ಹೇಳುತ್ತಿದ್ದಾರೆ.

ಮಾಧವಿಯವರ ಕನಸ್ಸಿನ ಮನೆ
ಮಾಧವಿಯವರಿಗೆ ಒಂದು ಭವ್ಯವಾದ ಮನೆಯನ್ನು ಕಟ್ಟಬೇಕೆಂಬ ಕನಸ್ಸಿತ್ತು. ಹಾಗಾಗಿ ಮನೆ ಕಟ್ಟಲು ಸಿದ್ಧತೆ ಕೂಡ ನಡೆಸಿದ್ದರು. ಆದರೆ ವಿಧಿಯಾಟವೇ ಬೇರೆ ಇತ್ತು. 2017 ಜುಲೈ 5ರಂದು ತಿರುಪತಿಗೆ ಹೋಗುವಾಗ ಕೋಲಾರದ ಬಳಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದರು. ಪತ್ನಿಯ ಅಗಲಿಕೆಯಿಂದ ದುಃಖಿತರಾದ ಶ್ರೀನಿವಾಸ್ ಮನೆ ನಿರ್ಮಾಣವನ್ನು ನಿಲ್ಲಿಸಿದ್ದರು. ಆದರೆ ಪುತ್ರಿಯರು ಹಾಗೂ ಹಿತೈಷಿಗಳು ಸಮಧಾನ ಹೇಳಿ ಮನೆ ಪೂರ್ಣ ಮಾಡುವಂತೆ ಸಲಹೆ ನೀಡಿದರು. ಆಗ ಪತ್ನಿ ಮನೆಯಲ್ಲಿಯೇ ನಮ್ಮ ಜೊತೆ ಇರಬೇಕೆಂದು ಬಯಸಿದ ಶ್ರೀನಿವಾಸ್ ಪತ್ನಿಯ ಪುತ್ಥಳಿ ನಿರ್ಮಿಸಿದ್ದಾರೆ.

ಥೇಟ್ ಮಾಧವಿಯವರಂತೆ ಕಾಣುವ ಪುತ್ಥಳಿ
ಥೇಟ್ ಮಾಧವಿಯವರಂತೆ ಕಾಣುವ ಪುತ್ಥಳಿಗೆ ಮಾಧವಿಯವರ ಸೀರೆಯನ್ನು ಉಡಿಸಲಾಗಿದೆ. ಅವರು ತೊಡುತ್ತಿದ್ದ ಬಂಗಾರದ ಆಭರಣಗಳನ್ನು ತೊಡಿಸಿದ್ದಾರೆ. ಅವರಂತೆಯೇ ತೋರುವ ರೀತಿಯಲ್ಲಿ ಹೇರ್ಸ್ಟೈಲ್ ಹಾಗೂ ಅಲಂಕಾರ ಮಾಡಾಗಿದೆ. ಈ ಪುತ್ಥಳಿಯ ಭಾಗಗಳು ಫ್ಲೆಕ್ಸಿಬಲ್ ಆಗಿದ್ದು ಎಲ್ಲಿಗೂ ಬೇಕಾದರೂ ಕೊಂಡೊಯ್ಯಬಹುದಾಗಿದೆ.

ತಾಯಿ ನಮ್ಮೊಂದಿಗೆ ಇದ್ದಾರೆ ಎಂಬ ಖುಷಿಯಲ್ಲಿ ಪುತ್ರಿಯರು
ಶ್ರೀನಿವಾಸ್ ಅವರ ಪುತ್ರಿಯರಿಗೂ ಕೂಡ ಮನೆಯಲ್ಲಿ ತಾಯಿ ಇರುವುದು ತುಂಬಾ ಖುಷಿಯ ವಿಚಾರವಾಗಿದೆ. ದೈಹಿಕವಾಗಿ ಅಮ್ಮ ಇಲ್ಲದಿದ್ದರೂ ಈ ರೂಪದಲ್ಲಾದರೂ ಹೊಸ ಮನೆಯಲ್ಲಿ ನಮ್ಮ ಜೊತೆ ಇದ್ದಾರಲ್ಲಾ ಎಂಬ ಸಮಧಾನ, ಖುಷಿ ಇದೆ. ಗೃಹ ಪ್ರವೇಶ ದಿನ ತಾಯಿ ಪ್ರತಿಮೆ ಜೊತೆ ಈ ಕುಟುಂಬ ಫ್ಯಾಮಲಿ ಫೋಟೋ ತೆಗೆಸಿಕೊಂಡಿದ್ದಾರೆ.
ಇದೀಗ ಈ ಪುತ್ಥಳಿ ವಿಚಾರ ಕರ್ನಾಟಕದಲ್ಲಿ ಮಾತ್ರವಲ್ಲ ದೇಶದಲ್ಲಿಯೇ ಸುದ್ದಿಯಾಗಿದ್ದು ಎಲ್ಲರು ಶ್ರೀನಿವಾಸ್ ಅವರು ಪತ್ನಿಯ ಮೇಲಿಟ್ಟಿರುವ ಪ್ರೀತಿ ಕಂಡು ಆದರ್ಶ ಪ್ರೇಮವೆಂದರೆ ಹೀಗಿರಬೇಕು ಎಂದು ಹೊಗಳುತ್ತಿದ್ದಾರೆ.



Click it and Unblock the Notifications











