Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಇದೆಲ್ಲಾ ಮಾಮೂಲು! ಇದನ್ನೇ ದೊಡ್ಡದು ಮಾಡುವುದು ಸರಿಯೇ?
ಸಣ್ಣಪುಟ್ಟ ಜಗಳಗಳು ಗಂಡ ಹೆಂಡತಿಯರ ನಡುವೆ ಇದ್ದೇ ಇರುತ್ತದೆ. ಆದರೆ ಇದೇ ಜಗಳವನ್ನು ದೊಡ್ಡದಾಗಿ ಮಾಡಿದರೆ ಅದು ಮುಂದೆ ಜೀವನದ ಮೇಲೆ ಪರಿಣಾಮ ಬೀರಬಹುದು....
ಆಧುನಿಕತೆಯನ್ನು ಮೇಲೈಸಿಕೊಂಡಿರುವ ಇಂದಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆ ಕಡಿಮೆಯಾಗುತ್ತಾ ಇದೆ. ಮದುವೆಯಾದ ಕೆಲವೇ ತಿಂಗಳಲ್ಲಿ ವಿಚ್ಛೇದನ ನೀಡುವಂತಹ ಸಂಪ್ರದಾಯವು ಭಾರತದಲ್ಲಿ ಬೆಳೆದು ಬಂದಿದೆ. ಪರಸ್ಪರ ಹೊಂದಾಣಿಕೆ ಇರದೆ ಸಂಬಂಧದ ಬಗ್ಗೆ ತಪ್ಪು ಕಲ್ಪನೆಯನ್ನು ಮಾಡಿಕೊಂಡಿರುವುದೇ ಇದಕ್ಕೆ ಕಾರಣವಾಗಿದೆ.
ಪ್ರತಿಯೊಂದು ಸಂಬಂಧದಲ್ಲೂ ಸಣ್ಣಪುಟ್ಟ ಜಗಳಗಳು ನಡೆದೇ ನಡೆಯುತ್ತದೆ. ಇಂತಹ ಜಗಳಗಳು ಇಲ್ಲದೆ ಇದ್ದರೆ ಆ ಸಂಬಂಧದಲ್ಲಿ ನಿರಾಸಕ್ತಿ ಮೂಡುತ್ತದೆ. ಆದರೆ ಇಂದಿನ ಯುವ ಸಂಗಾತಿಗಳು ಸಂಬಂಧವೆನ್ನುವುದು ರಾತ್ರಿಯ ಸಂತೋಷವೆಂದು ಭಾವಿಸುತ್ತಾರೆ. ಸಂಬಂಧವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಮಾತ್ರ ಜೀವನ ಒಳ್ಳೆಯ ರೀತಿಯಿಂದ ಸಾಗಿಸಲು ಸಾಧ್ಯ. ನಿಮ್ಮ ಸಂಬಂಧದ ಗುಣಮಟ್ಟದ ಬಗ್ಗೆ ಯಾವತ್ತೂ ಸಂಶಯಪಡಬೇಡಿ ಎನ್ನುವ ಬಗ್ಗೆ ಬೋಲ್ಡ್ ಸ್ಕೈ ನಿಮಗಿಲ್ಲಿ ಹೇಳಿಕೊಡಲಿದೆ....

ಆಕರ್ಷಣೆ ತಾತ್ಕಾಲಿಕ ಮತ್ತು ಪ್ರೀತಿ ಶಾಶ್ವತ
ಮದುವೆಯಾದ ಆರಂಭದಲ್ಲಿ ಇದ್ದ ಆಕರ್ಷಣೆ ಮತ್ತು ಕುತೂಹಲವು ಜೀವಮಾನವಿಡಿ ಇರುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಕೆಲವು ಸಮಯದ ಬಳಿಕ ಅದು ಖಂಡಿತವಾಗಿಯೂ ಕಡಿಮೆಯಾಗುತ್ತದೆ. ನೀವು ಉತ್ತಮ ಸಂಗಾತಿಯಾಗಿದ್ದರೆ ಪ್ರೀತಿ ಮತ್ತು ಮಮತೆ ಖಂಡಿತವಾಗಿಯೂ ಇರುತ್ತದೆ. ಕುತೂಹಲದ ಹಂತವನ್ನು ಜತೆಯಾಗಿ ಅನುಭವಿಸುವುದರಿಂದ ಮುಂದಿನ ದಿನಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದನ್ನು ತಡೆಯಬಹುದು. ಆಕರ್ಷಣೆ ತಾತ್ಕಾಲಿಕ ಮತ್ತು ಪ್ರೀತಿ ಶಾಶ್ವತ ಎನ್ನುವುದನ್ನು ತಿಳಿಯಬೇಕು.

ಕಿರಿಕಿರಿಯಂತಹ ಸಮಸ್ಯೆ ಮಾಮೂಲಿ!
ಯಾವುದೇ ಸಂಗಾತಿಯ ಜೀವನದಲ್ಲಿ ಈ ಹಂತವು ಸಾಮಾನ್ಯವಾಗಿರುತ್ತದೆ. ಎಲ್ಲಾ ದಿನಗಳು ಒಂದೇ ರೀತಿಯಾಗಿ ಇರುವುದಿಲ್ಲ. ಸಂಗಾತಿಯು ಪ್ರತೀ ಸಲ ಸಿಹಿಯಾದ ಮಾತುಗಳನ್ನೇ ಆಡಬೇಕೆಂದಿಲ್ಲ. ಕೆಲವೊಂದು ಸಲ ಭಾವನೆಗಳು ಬದಲಾಗಬಹುದು ಮತ್ತು ಕಿರಿಕಿರಿಯಾಗಬಹುದು.

ಸಂಗಾತಿಯಿಂದ ಕಡೆಗಣನೆ
ಜೀವನದ ಪ್ರತಿಯೊಂದು ಕ್ಷಣವು ನಿಮಗೆ ಆದ್ಯತೆಯನ್ನು ನೀಡಲು ಅಸಾಧ್ಯವಾಗಿರುತ್ತದೆ. ವೃತ್ತಿ ಅಥವಾ ಮಕ್ಕಳಿಂದಾಗಿ ಸಂಗಾತಿಯು ನಿಮಗೆ ಸಂಪೂರ್ಣ ಸಮಯವನ್ನು ನೀಡಲು ಸಾಧ್ಯವಾಗದೆ ಇರಬಹುದು. ಇದು ಸಾಮಾನ್ಯ ಮತ್ತು ಇದನ್ನು ಪರಿಹರಿಸಿಕೊಳ್ಳಿ.

ಪ್ರೀತಿಯನ್ನು ವ್ಯಕ್ತಪಡಿಸುವುದರಲ್ಲಿ...
ಜೀವನದ ಪ್ರತೀ ದಿನವೂ ಸಂಗಾತಿಯು ಆಸಕ್ತಿಯಿಂದ ಹಾಸಿಗೆಯಲ್ಲಿ ವರ್ತಿಸಬೇಕೆಂದಿಲ್ಲ. ಕೆಲವು ಕಾರಣಗಳಿಂದ ಆಸಕ್ತಿ ಕಡಿಮೆ ಇರಬಹುದು. ಪ್ರೀತಿ ವ್ಯಕ್ತಪಡಿಸುವುದರಲ್ಲಿ ಏಳುಬೀಳುಗಳು ಇರಬಹುದು. ಇದು ಸಾಮಾನ್ಯ. ಇಂತಹ ಸಮಸ್ಯೆಗೆ ಸಂಗಾತಿಯಿಂದ ದೂರವಾಗಬೇಕಿಲ್ಲ. ಮಾತಿನ ಮೂಲಕ ಇದನ್ನು ಬಗೆಹರಿಸಿ.

ಲಘುವಾಗಿ ಪರಿಗಣಿಸುವುದು
ಕೆಲವು ಸಮಯ ಜತೆಯಾಗಿ ಕಳೆದ ಬಳಿಕ ಸಂಗಾತಿಗಳು ಪರಸ್ಪರರನ್ನು ಲಘುವಾಗಿ ಪರಿಗಣಿಸುವುದು ಸಾಮಾನ್ಯ. ಪರಸ್ಪರ ಮಾತನಾಡಿಕೊಂಡು ಈ ಸಮಸ್ಯೆ ನಿವಾರಿಸಬಹುದು.



Click it and Unblock the Notifications