Just In
- 34 min ago ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- 2 hrs ago ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- 3 hrs ago ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- 4 hrs ago ಶನಿಯ ನಕ್ಷತ್ರ ಬದಲಾವಣೆ: ಅಕ್ಟೋಬವರೆಗೆ ಈ 3 ರಾಶಿಯವರು ಇದರ ಉತ್ತಮ ಫಲ ಪಡೆಯುವಿರಿ
Don't Miss
- News ಬಿಎಸ್ವೈ ಹಾಗೂ "ಆ" ಮಹಾನ್ ನಾಯಕನಿಂದಲೇ ಮಗನಿಗೆ ಚಿತ್ರದುರ್ಗ ಬಿಜೆಪಿ ಟಿಕೆಟ್ ತಪ್ತು: ಹೊಳಲ್ಕೆರೆ ಶಾಸಕ
- Automobiles Honda: ಭಾರತದಲ್ಲಿ ಹೋಂಡಾ ಹೊಸ ಮೈಲಿಗಲ್ಲು: ಎಷ್ಟು ಮಂದಿಯ ಬಳಿ ಆಕ್ಟೀವಾ, ಶೈನ್ ಇದೆ ಹೇಳಿ?
- Movies ಗುರುಪ್ರಸಾದ್ಗೆ ತಿರುಗೇಟು ಕೊಟ್ಟ ಶ್ರುತಿ ಹರಿಹರನ್ ; ನನ್ನ ಮೀಟೂ ಕಥೆ ಇನ್ನೂ ಮುಗಿದಿಲ್ಲ ಎಂದ ನಟಿ..!
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇದೆಲ್ಲಾ ಮಾಮೂಲು! ಇದನ್ನೇ ದೊಡ್ಡದು ಮಾಡುವುದು ಸರಿಯೇ?
ಸಣ್ಣಪುಟ್ಟ ಜಗಳಗಳು ಗಂಡ ಹೆಂಡತಿಯರ ನಡುವೆ ಇದ್ದೇ ಇರುತ್ತದೆ. ಆದರೆ ಇದೇ ಜಗಳವನ್ನು ದೊಡ್ಡದಾಗಿ ಮಾಡಿದರೆ ಅದು ಮುಂದೆ ಜೀವನದ ಮೇಲೆ ಪರಿಣಾಮ ಬೀರಬಹುದು....
ಆಧುನಿಕತೆಯನ್ನು ಮೇಲೈಸಿಕೊಂಡಿರುವ ಇಂದಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆ ಕಡಿಮೆಯಾಗುತ್ತಾ ಇದೆ. ಮದುವೆಯಾದ ಕೆಲವೇ ತಿಂಗಳಲ್ಲಿ ವಿಚ್ಛೇದನ ನೀಡುವಂತಹ ಸಂಪ್ರದಾಯವು ಭಾರತದಲ್ಲಿ ಬೆಳೆದು ಬಂದಿದೆ. ಪರಸ್ಪರ ಹೊಂದಾಣಿಕೆ ಇರದೆ ಸಂಬಂಧದ ಬಗ್ಗೆ ತಪ್ಪು ಕಲ್ಪನೆಯನ್ನು ಮಾಡಿಕೊಂಡಿರುವುದೇ ಇದಕ್ಕೆ ಕಾರಣವಾಗಿದೆ.
ಪ್ರತಿಯೊಂದು ಸಂಬಂಧದಲ್ಲೂ ಸಣ್ಣಪುಟ್ಟ ಜಗಳಗಳು ನಡೆದೇ ನಡೆಯುತ್ತದೆ. ಇಂತಹ ಜಗಳಗಳು ಇಲ್ಲದೆ ಇದ್ದರೆ ಆ ಸಂಬಂಧದಲ್ಲಿ ನಿರಾಸಕ್ತಿ ಮೂಡುತ್ತದೆ. ಆದರೆ ಇಂದಿನ ಯುವ ಸಂಗಾತಿಗಳು ಸಂಬಂಧವೆನ್ನುವುದು ರಾತ್ರಿಯ ಸಂತೋಷವೆಂದು ಭಾವಿಸುತ್ತಾರೆ. ಸಂಬಂಧವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಮಾತ್ರ ಜೀವನ ಒಳ್ಳೆಯ ರೀತಿಯಿಂದ ಸಾಗಿಸಲು ಸಾಧ್ಯ. ನಿಮ್ಮ ಸಂಬಂಧದ ಗುಣಮಟ್ಟದ ಬಗ್ಗೆ ಯಾವತ್ತೂ ಸಂಶಯಪಡಬೇಡಿ ಎನ್ನುವ ಬಗ್ಗೆ ಬೋಲ್ಡ್ ಸ್ಕೈ ನಿಮಗಿಲ್ಲಿ ಹೇಳಿಕೊಡಲಿದೆ....
ಆಕರ್ಷಣೆ ತಾತ್ಕಾಲಿಕ ಮತ್ತು ಪ್ರೀತಿ ಶಾಶ್ವತ
ಮದುವೆಯಾದ ಆರಂಭದಲ್ಲಿ ಇದ್ದ ಆಕರ್ಷಣೆ ಮತ್ತು ಕುತೂಹಲವು ಜೀವಮಾನವಿಡಿ ಇರುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಕೆಲವು ಸಮಯದ ಬಳಿಕ ಅದು ಖಂಡಿತವಾಗಿಯೂ ಕಡಿಮೆಯಾಗುತ್ತದೆ. ನೀವು ಉತ್ತಮ ಸಂಗಾತಿಯಾಗಿದ್ದರೆ ಪ್ರೀತಿ ಮತ್ತು ಮಮತೆ ಖಂಡಿತವಾಗಿಯೂ ಇರುತ್ತದೆ. ಕುತೂಹಲದ ಹಂತವನ್ನು ಜತೆಯಾಗಿ ಅನುಭವಿಸುವುದರಿಂದ ಮುಂದಿನ ದಿನಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದನ್ನು ತಡೆಯಬಹುದು. ಆಕರ್ಷಣೆ ತಾತ್ಕಾಲಿಕ ಮತ್ತು ಪ್ರೀತಿ ಶಾಶ್ವತ ಎನ್ನುವುದನ್ನು ತಿಳಿಯಬೇಕು.
ಕಿರಿಕಿರಿಯಂತಹ ಸಮಸ್ಯೆ ಮಾಮೂಲಿ!
ಯಾವುದೇ ಸಂಗಾತಿಯ ಜೀವನದಲ್ಲಿ ಈ ಹಂತವು ಸಾಮಾನ್ಯವಾಗಿರುತ್ತದೆ. ಎಲ್ಲಾ ದಿನಗಳು ಒಂದೇ ರೀತಿಯಾಗಿ ಇರುವುದಿಲ್ಲ. ಸಂಗಾತಿಯು ಪ್ರತೀ ಸಲ ಸಿಹಿಯಾದ ಮಾತುಗಳನ್ನೇ ಆಡಬೇಕೆಂದಿಲ್ಲ. ಕೆಲವೊಂದು ಸಲ ಭಾವನೆಗಳು ಬದಲಾಗಬಹುದು ಮತ್ತು ಕಿರಿಕಿರಿಯಾಗಬಹುದು.
ಸಂಗಾತಿಯಿಂದ ಕಡೆಗಣನೆ
ಜೀವನದ ಪ್ರತಿಯೊಂದು ಕ್ಷಣವು ನಿಮಗೆ ಆದ್ಯತೆಯನ್ನು ನೀಡಲು ಅಸಾಧ್ಯವಾಗಿರುತ್ತದೆ. ವೃತ್ತಿ ಅಥವಾ ಮಕ್ಕಳಿಂದಾಗಿ ಸಂಗಾತಿಯು ನಿಮಗೆ ಸಂಪೂರ್ಣ ಸಮಯವನ್ನು ನೀಡಲು ಸಾಧ್ಯವಾಗದೆ ಇರಬಹುದು. ಇದು ಸಾಮಾನ್ಯ ಮತ್ತು ಇದನ್ನು ಪರಿಹರಿಸಿಕೊಳ್ಳಿ.
ಪ್ರೀತಿಯನ್ನು ವ್ಯಕ್ತಪಡಿಸುವುದರಲ್ಲಿ...
ಜೀವನದ ಪ್ರತೀ ದಿನವೂ ಸಂಗಾತಿಯು ಆಸಕ್ತಿಯಿಂದ ಹಾಸಿಗೆಯಲ್ಲಿ ವರ್ತಿಸಬೇಕೆಂದಿಲ್ಲ. ಕೆಲವು ಕಾರಣಗಳಿಂದ ಆಸಕ್ತಿ ಕಡಿಮೆ ಇರಬಹುದು. ಪ್ರೀತಿ ವ್ಯಕ್ತಪಡಿಸುವುದರಲ್ಲಿ ಏಳುಬೀಳುಗಳು ಇರಬಹುದು. ಇದು ಸಾಮಾನ್ಯ. ಇಂತಹ ಸಮಸ್ಯೆಗೆ ಸಂಗಾತಿಯಿಂದ ದೂರವಾಗಬೇಕಿಲ್ಲ. ಮಾತಿನ ಮೂಲಕ ಇದನ್ನು ಬಗೆಹರಿಸಿ.
ಲಘುವಾಗಿ ಪರಿಗಣಿಸುವುದು
ಕೆಲವು ಸಮಯ ಜತೆಯಾಗಿ ಕಳೆದ ಬಳಿಕ ಸಂಗಾತಿಗಳು ಪರಸ್ಪರರನ್ನು ಲಘುವಾಗಿ ಪರಿಗಣಿಸುವುದು ಸಾಮಾನ್ಯ. ಪರಸ್ಪರ ಮಾತನಾಡಿಕೊಂಡು ಈ ಸಮಸ್ಯೆ ನಿವಾರಿಸಬಹುದು.