Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪತ್ನಿಗೆ ಜೀವನಾಂಶ ನೀಡಲು 1, 2 ರುಪಾಯಿ ನಾಣ್ಯಗಳ ಮೂಟೆಗಳನ್ನು ಕೋರ್ಟ್ಗೆ ತಂದ ವ್ಯಕ್ತಿ! ಆತ ಯೋಚಿಸಿದ್ದೇ ಒಂದು ಆದದ್ದೇ ಮತ್ತೊಂದು
ಒಬ್ಬ ವ್ಯಕ್ತಿ ತನ್ನ ವಿಚ್ಛೇದಿತ ಪತ್ನಿಗೆ ಜೀವನಾಂಶವನ್ನು ನಾಣ್ಯಗಳ ರೂಪದಲ್ಲಿ ನೀಡಿದ್ದಾರೆ ಎಂದ ಮೇಲೆ ಆತ ಆಕೆಯಿಂದ ಎಷ್ಟು ರೋಸಿ ಹೋಗಿರಬೇಡ. ಆತ ಕೊಟ್ಟ ಜೀವನಾಂಶದ ಹಣವನ್ನು ಎಣಿಸಿಯೇ ಸಾಕಾಗಬೇಕು, ಅಷ್ಟೊಂದು ನಾಣ್ಯಗಳನ್ನು ಎಲ್ಲಿಂದ ಸಂಗ್ರಹಿಸಿದೆನೋ, ಆದರೆ ಮಾಜಿ ಹೆಂಡತಿ ಈತ ಕೊಡುವ ಜೀವನಾಂಶ ನೋಡಿಯೇ ಬೆಚ್ಚಿ ಬೀಳಬೇಕು ಆ ರೀತಿಯಾಗಿ ಜೀವನಾಂಶ ನೀಡಿದ್ದಾನೆ.

ಈ ಘಟನೆ ನಡೆದಿರುವುದು ತಮಿಳುನಾಡಿನಲ್ಲಿ. ತಮಿಳುನಾಡಿನ ಕುಟುಂಬ ನ್ಯಾಯಾಲಯ ಆ ವ್ಯಕ್ತಿ (ಆತ ತನ್ನ ಹೆಸರು ಬಹಿರಂಗ ಪಡಿಸಲು ಇಚ್ಚಿಸಿಲ್ಲ) ತನ್ನ ಪತ್ನಿಗೆ 2 ಲಕ್ಷ ಜೀವನಾಂಶ ನೀಡಬೇಕೆಂದು ತೀರ್ಪು ನೀಡಿತು, 37 ವರ್ಷದ ಆ ವ್ಯಕ್ತಿ ಕೊಯಂಬತ್ತೂರಿನ ನಿವಾಸಿ. ಈತ ಜೀವನಾಂಶ ನೀಡಲು ಕೋರ್ಟ್ಗೆ 1 ಹಾಗೂ 2 ರುಪಾಯಿ ನಾಣ್ಯಗಳ ಹಣದ ಚೀಲ ತಂದಿದ್ದಾನೆ.
ಈತನಿಗೆ ವಿಚ್ಛೇದನ ಕಳೆದ ವರ್ಷ ನಡೆದಿತ್ತು, ಹೆಂಡತಿಗೆ ಜೀವನಾಂಶ ನೀಡಲು ಕೋರ್ಟ್ ಆದೇಶ ನೀಡಿತ್ತು
ಈತ ವೃತ್ತಿಯಲ್ಲಿ ಆಟೋ ಡ್ರೈವರ್. ಈತನ ಡಿಸೆಂಬರ್ 18ರಂದು ಒಟ್ಟು ಹಣದ ನಾಣ್ಯಗಳ ಚೀಲವನ್ನು ಹಿಡಿದು ಕೋರ್ಟ್ಗೆ ಬರುತ್ತಾನೆ. ಈತ ನಾಣ್ಯಗಳನ್ನು ಈ ರೀತಿ ತಂದಾಗ ಜಡ್ಜ್ ಸೇರಿ ಅಲ್ಲಿದ್ದವರಿಗೆ ಆಶ್ಚರ್ಯ ಉಂಟಾಗಿದೆ, ಆ ಹಣದ ಚೀಲಗಳನ್ನು ನೋಡಿ ಏನು ಹೇಳಬೇಕು ಎಂದು ಯಾರಿಗೂ ತಿಳಿಯದಾಗಿದೆ.
ಬಹುಶಃ ಆತನ ಮಾಜಿ ಪತ್ನಿಗೆ ಆ ಹಣದ ಚೀಲಗಳನ್ನು ನೋಡಿ ತಲೆಸುತ್ತು ಬಂದಿರಬಹುದು, ಆತ ಎಷ್ಟು ಹಣ ತಂದಿದ್ದಾನೆ ಎಂದು ಎಣಿಸುವಷ್ಟರಲ್ಲಿ ಆಕೆಗೆ ಸುಸ್ತಾಗಿರಬಹುದು ಅಲ್ವಾ? ಆತ 80 ಸಾವಿರ ಹಣವನ್ನು ನಾಣ್ಯದ ರೂಪದಲ್ಲಿ ಸಂಗ್ರಹಿರಬೇಕೆಂದರೆ ಎಷ್ಟು ಶ್ರಮ ಹಾಕಿರಬೇಡ, ನಾನು ಕೊಡುವ ಹಣ ಕೂಡ ಅವಳು ಸುಲಭವಾಗಿ ಎಣಿಸಿ ಇಡುವಂತಾಗಬಾರದು ಎಂಬ ಲೆಕ್ಕಾಚಾರದಲ್ಲಿ ಆತ ಈ ರೀತಿ ತಂದಿರಬಹುದು, ವಿಚ್ಛೇದನ ಪಡೆದು ಬೇರೆಯಾಗಿದ್ದರೂ ಆತನಿಗೆ ಆಕೆಯ ಮೇಲಿರುವ ದ್ವೇಷ, ಬೇಸರ ಸ್ಪಷ್ಟವಾಗಿ ಕಾಣುತ್ತೆ ಅಲ್ವಾ?
ಈತ ನಾಣ್ಯಗಳನ್ನು ತಂದಾಗ ಹಣವನ್ನು ಕ್ಯಾಶ್ ಮೂಲಕ ನೀಡಬೇಕೆಂದ ನ್ಯಾಯಾಧೀಶರು ಸೂಚಿಸಿದರು, ಆತ ಹಣದ ಚೀಲದ ಮೂಲಕ ಹೊರ ಹೋಗಿ ನಂತರ ಕ್ಯಾಶ್ ತಂದು ಕೊಟ್ಟಿದ್ದಾನೆ.
ಕಳೆದ ವರ್ಷವು ಇಂಥದ್ದೇ ಘಟನೆ ಸಂಭವಿಸಿತು
ರಾಜಾಸ್ಥಾನದ ವ್ಯಕ್ತಿಯೊಬ್ಬರಿಗೆ ವಿಚ್ಛೇದಿತ ಪತ್ನಿಗೆ 55, 000 ಜೀವನಾಂಶ ಹಣವನ್ನು ನಾಣ್ಯದ ರೂಪದಲ್ಲಿ ನೀಡಿದ್ದಾನೆ. ಆತ 11 ತಿಂಗಳ ಕಾಲ ಪತ್ನಿಗೆ ಜೀವನಾಂಶ ನೀಡದೆ ಓಡಾಡುತ್ತಿದ್ದ, ಈ ಕಾರಣಕ್ಕೆ ಆತನನ್ನು ಅರೆಸ್ಟ್ ಮಾಡಲಾಯ್ತು, ಆವಾಗ ಆತನ ಒಂದು ಹಾಗೂ ಎರಡು ರುಪಾಯಿ ನಾಣ್ಯಗಳನ್ನು ತಂದು ಕೊಟ್ಟಿದ್ದ. ಆವಾಗ ಪತ್ನಿ ಈತ ಈ ರೀತಿ ನಾಣ್ಯಗಳನ್ನು ತಂದು ಎಣಿಸುವಂತೆ ಮಾಡಲು ಯತ್ನಿಸಿರುವುದು ಮಾನಸಿಕ ಕಿರುಕುಳ ಎಂದು ಹೇಳಿದಾಗ ನ್ಯಾಯಧೀಶರು ಈತನ ಬಳಿಯೇ ಎಣಿಸಿ ಕೊಡುವಂತೆ ಸೂಚಿಸಿದ್ದರು. ಆತನಿಗೆ 1000 ರುಪಾಯಿಯಂತೆ ಸೆಟ್ ಮಾಡಿ ನೀಡುವಂತೆ ಸೂಚಿಸಿದ್ದರು.
ವಿಚ್ಚೇನದಲ್ಲಿ ಜೀವನಾಂಶ ಬಹುತೇಕ ಪುರುಷರಿಗೂ ಶಾಪವೂ ಆಗಿದೆ
ವಿಚ್ಚೇದನ ಬಳಿಕ ಸಾಕಷ್ಟು ಹಣಕ್ಕೆ ಡಿಮ್ಯಾಂಡ್ ಮಾಡುವ ಹಲವಾರು ಪ್ರಕರಣಗಳಿವೆ. ಇತ್ತೀಚೆಗೆ ಪತ್ನಿ ಗಂಡನಿಂದ ತಿಂಗಳಿಗೆ ಪ್ರತಿ ತಿಂಗಳು ಲಕ್ಷಗಟ್ಟಲೆ ಹಣವನ್ನು ಜೀವನಾಂಶವಾಗಿ ಕೇಳಿದಾಗ ಕೋರ್ಟ್ ಆಕೆಗೆ ನಿಮ್ಮ ಲಕ್ಷುರಿಗೆ ನೀವು ದುಡಿದು ಮಾಡಿಕೊಳ್ಳಿ, ನಿಜವಾಗಿ ಎಷ್ಟು ಜೀವನಾಂಶದ ಅವಶ್ಯಕತೆಯಿದೆ ಎಂಬುವುದಷ್ಟೇ ಹೇಳಿ ಎಂಬಂತೆ ಎಚ್ಚರಿಕೆ ನೀಡಿತ್ತು. ಅತುಲ್ ಸುಭಾಷ್ ಎಂಬ ವ್ಯಕ್ತಿಯ ಆತ್ಮಹತ್ಯೆ ರಾಷ್ಟ್ರಮಟ್ಟದಲ್ಲಿ ಸಿದ್ದಿ ಮಾಡಿತು. ಪತ್ನಿ ಜೀವನಾಂಶವಾಗಿ 3 ಕೋಟಿ ಹಣ ಕೇಳಿ ಹಿಂಸೆಡ ನೀಡುತ್ತಿದ್ದಾಳೆ ಎಂಬ ಕಾರಣ ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಹಿಳೆಯರ ರಕ್ಷಣೆಗೆ ಇರುವ ಕಾನೂನುಗಳನ್ನು ಕೆಲ ಮಹಿಳೆಯರು ದುರ್ಬಳಿಕೆ ಮಾಡುತ್ತಿದ್ದಾರೆ, ಇಂಥವರಿಗೂ ಕಠಿಣ ಶಿಕ್ಷೆಯ ಅಗ್ಯತವಿದೆ.



Click it and Unblock the Notifications