Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೀವು ಪ್ರೇಮವಿವಾಹವಾಗಲು ಬಯಸಿದರೆ ಈ ಸಿಂಪಲ್ ವಾಸ್ತು ಟಿಪ್ಸ್ ಪ್ರಯತ್ನಿಸಿ!
ಇತ್ತೀಚೆಗೆ ಪ್ರೇಮ ವಿವಾಹ ಸಾಮಾನ್ಯವಾಗಿಬಿಟ್ಟಿದೆ. ಮೊದಲೆಲ್ಲಾ ಪ್ರೇಮ ವಿವಾಹ ಎಂದರೆ ಮನೆಯವರ ವಿರೋಧ ಹೆಚ್ಚಿರುತ್ತಿತ್ತು, ಆದರೆ ಈಗಿನ ಪೋಷಕರು ಪ್ರೇಮ ವಿವಾಹಕ್ಕೆ ಸಂಪೂರ್ಣ ಸಮ್ಮತಿಸಿ ಕುಟುಂಬಸ್ಥರ ಸಮ್ಮುಖದಲ್ಲೇ ಅರೇಂಜ್ಡ್ ಲವ್ ಮ್ಯಾರೇಜ್ ಆಗುತ್ತಿದೆ. ಆದರೂ ಇಂದಿಗೂ ಬಹುತೇಕ ಪ್ರೇಮಿಗಳು ತಮ್ಮ ಪ್ರೇಮವನ್ನು ಮನೆಯಲ್ಲಿ ಹೇಳಿಕೊಂಡು ಯಶಸ್ವಿಯಾಗಿ ವಿವಾಹವಾಗುವಲ್ಲಿ ವಿಫಲವಾಗುತ್ತಾರೆ.
ನಿಮಗೆ ಗೊತ್ತೆ ನಿಮ್ಮ ಪ್ರೇಮ ಯಶಸ್ವಿಯಾಗಲು ಸಹ ವಾಸ್ತು ಪರಿಹಾರವಿದೆ. ಹೌದು ವಾಸ್ತುಶಾಸ್ತ್ರಜ್ಞರ ಪ್ರಕಾರ ನೀವು ಸಹ ಈ ಸಲಹೆಗಳನ್ನು ಪಾಲಿಸಿದರೆ ನಿಮ್ಮ ಪ್ರೇಮ ವಿವಾಹವಾಗುವ ಮೂಲಕ ಕನಸು ನನಸಾಗುತ್ತದೆ. ಏನಿದು ವಾಸ್ತು ಸಲಹೆ ನೋಡೋಣ:

ಲಕ್ಷ್ಮಿ ದೇವತೆ ಮತ್ತು ವಿಷ್ಣು ದೇವರ ಚಿತ್ರ
ಲಕ್ಷ್ಮಿ ದೇವಿ ಮತ್ತು ವಿಷ್ಣು ದೇವರ ಸ್ವಯಂವರ ಚಿತ್ರವನ್ನು ನಿತ್ಯ ನೋಡಿ ಮತ್ತು ದೇವರ ಈ ಚಿತ್ರವನ್ನು ನಿಮ್ಮ ಮನೆಯ ಪೂರ್ವ ಭಾಗದಲ್ಲಿ ಇರಿಸಿ. ಪ್ರೇಮ ವಿವಾಹಕ್ಕಾಗಿ ಹುಡುಗ ಹಾಗೂ ಹುಡುಗಿ ಇಬ್ಬರೂ ಈ ವಾಸ್ತು ಸಲಹೆಯನ್ನು ಪಾಲಿಸಬೇಕು.

ಲಕ್ಷ್ಮಿ ಮತ್ತು ವಿಷ್ಣು ದೇವರ ವಿಗ್ರಹಗಳು
ಪ್ರೇಮ ವಿವಾಹದ ಯಶಸ್ಸನ್ನು ಆಕರ್ಷಿಸಲು, ನಿಮ್ಮ ಮನೆಯಲ್ಲಿ ಲಕ್ಷ್ಮಿ ಮತ್ತು ವಿಷ್ಣು ದೇವರ ಫೋಟೋ ಅಥವಾ ವಿಗ್ರಹವನ್ನು ಇಟ್ಟು ಪೂಜೆ ಮಾಡಿ. ಶುಕ್ಲ ಪಕ್ಷದ ಗುರುವಾರದಂದು ಪ್ರಾರಂಭಿಸಿ ಪೂಜೆಯನ್ನು ಪ್ರಾರಂಭಿಸಿ. ನಿತ್ಯ ‘ಶ್ರೀ ಲಕ್ಷ್ಮೀ ನಾರಾಯಣ ನಮಃ' ಎಂಬ ಮಂತ್ರವನ್ನು ಪಠಿಸಿ. ನೀವು ಬಿಳಿ ಹರಳುಗಳ ಜಪ ಮಣಿಯನ್ನು ಬಳಸಿ 3 ತಿಂಗಳ ಕಾಲ ನಿಯಮಿತವಾಗಿ ಧ್ಯಾನ ಮಾಡಿ.

ದೇವಸ್ಥಾನದಲ್ಲಿ ಕಾಣಿಕೆ
ಪ್ರತಿ ಗುರುವಾರ ದೇವಸ್ಥಾನಕ್ಕೆ ಭೇಟಿ ದೇವತೆಗಳಿಗೆ ಸಿಹಿತಿಂಡಿ ಅರ್ಪಿಸಿ. ಪ್ರೇಮ ವಿವಾಹಕ್ಕಾಗಿ ಗುರುವಾರದಂದು ದೇವಸ್ಥಾನಕ್ಕೆ ಹೋಗುವುದನ್ನು ತಪ್ಪಿಸಬೇಡಿ. ನಿಮ್ಮ ಸಕಾರಾತ್ಮಕ ಮನೋಭಾವವನ್ನು ಹೆಚ್ಚಿಸಿ ಮತ್ತು ಯಾವಾಗಲೂ ನಿಮ್ಮನ್ನು ನಂಬಿರಿ.



Click it and Unblock the Notifications











