Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೌದು ನಾನು ಕೆಟ್ಟವನೇ ಏನೀಗ? ಈ ಸ್ವಭಾವ ನಮ್ಮಲ್ಲಿ ಬಂದಿದ್ದೇ ಆದರೆ ಕಷ್ಟ ತಪ್ಪಿದ್ದಲ್ಲ
ನಟ ದರ್ಶನ್ ನಿಜ ಜೀವನದಲ್ಲಿ ಕೊಲೆ ಆರೋಪ ಹೊತ್ತು ಜೈಲ್ನಲ್ಲಿ ತನಿಖೆಯನ್ನು ಎದುರಿಸುತ್ತಿದ್ದಾರೆ, ಈ ಸಂದರ್ಭದಲ್ಲಿ ದರ್ಶನ್ರವರ ಹಳೆಯ ಇಂಟರ್ವ್ಯೂಗಳು ಮತ್ತೆ ವೈರಲ್ ಆಗುತ್ತಿದೆ ಒಂದು ಇಂಟರ್ವ್ಯೂ ನೋಡಿದೆ, ಅದರಲ್ಲಿ ಒಂದು ಇಂಟರ್ವ್ಯೂ ಗಮನ ಸೆಳೆದಿತ್ತು, ಅವರು ಅದರಲ್ಲಿ 'ಹೌದಮ್ಮಾ ನಾನು ಬ್ಯಾಡ್ ಬಾಯ್, ನಾನು ಇರುವುದೇ ಹೀಗೆ' ಎಂಬ ಮಾತು ಹೇಳುತ್ತಾರೆ.

ಮನುಷ್ಯರಲ್ಲಿ ಎಲ್ಲರೂ ಒಂದೇ ರೀತಿ ಇರಲ್ಲ ಕೆಲವರು ಒರಟು ಸ್ವಭಾವದವರು, ಕೆಲವರು ಮೃದು ಸ್ವಭಾವದವರು, ದರ್ಶನ್ ಅವರದ್ದು ಕೆಲವೊಮ್ಮೆ ಸ್ವಲ್ಪ ಒರಟು ಸ್ವಭಾವ ಹಾಗಾಗಿ ಅವರು ಆಗಾಗ ತಮ್ಮ ಒರಟು ಗುಣ, ಮಾತಿನ ಧಾಟಿಯಿಂದ ಗಮನ ಸೆಳೆಯುತ್ತಿದ್ದರು, ಇದನ್ನು ನೋಡಿದ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಉದಾಹರಣೆಗೆ ಇವತ್ತು ಇವಳು, ನಾಳೆ ಅವಳು ಎಂಬಂಥ ಮಾತುಗಳು, ದೇವರು ಲಕ್ಷ್ಮಿ ಬಗ್ಗೆ ದರ್ಶನ್ ನುಡಿದ ಮಾತುಗಳು , ಪ್ರೊಡ್ಯೂಸರ್ಗೆ ಬಳಸಿದ ಪದ ಇವೆಲ್ಲಾ ತುಂಬಾನೇ ಚರ್ಚೆಗೆ ಕಾರಣವಾಗಿತ್ತು,
ಈ ರೀತಿಯಾದಾಗ ದರ್ಶನ್ಗೆ ಬ್ಯಾಡ್ ಬಾಯ್ ಇಮೇಜ್ ತಂದುಕೊಡ್ತು, ಆದರೆ ದರ್ಶನ್ ಅವರು ಅಂಥ ಇಮೇಜ್ ಅನ್ನು ಸ್ವೀಕರಿಸಿದರು, ಹೌದು ನಾನು ಇರುವುದೇ ಹೀಗೆ ನಿಮಗೇನು ಎಂಬ ವರ್ತನೆ ಅವರಲ್ಲಿ ಇತ್ತು, ಇಂಥ ಒಂದು ವರ್ತನೆಯೇ ಅವರನ್ನು ಇಂದು ಸಂಕಷ್ಟಕ್ಕೆ ತಂದು ನಿಲ್ಲಿಸಿದೆ.
ನಾನು ಇರುವುದೇ ಹೀಗೆ ಎಂಬ ವರ್ತನೆ ತಪ್ಪಲ್ಲ, ಆದರೆ ತಿದ್ದಿಕೊಳ್ಳುವ ವಿಷಯದಲ್ಲಿ ತಿದ್ದಿಕೊಳ್ಳಬೇಕಾಗುತ್ತೆ
ಹೌದು ನಮ್ಮ ಸ್ವಭಾವವನ್ನು ಬೇರೆಯವರಿಗಾಗಿ ಬದಲಾಯಿಸಬೇಕಾಗಿಲ್ಲ, ಆದರೆ ನಾವು ಬದುಕುತ್ತಿರುವುದು ಒಂದು ಕುಟುಂಬದಲ್ಲಿ, ಒಂದು ಸಮಾಜದಲ್ಲಿ. ಕುಟುಂಬದಲ್ಲಿ ನಾವು ಹೇಗೆ ವರ್ತಿಸಬೇಕು, ಈ ಸಮಾಜದಲ್ಲಿ ಹೇಗೆ ವರ್ತಿಸಬೇಕು ಎಂಬ ಕೆಲ ಅಲಿಖಿತ ನಿಯಮಗಳಿವೆ, ಅದನ್ನು ನಾವೇ ಅರ್ಥ ಮಾಡಿಕೊಂಡು ನಡೆಯಬೇಕು. ಇಲ್ಲಾ ನಾನು ಹೀಗೆಯೇ ಎಂದು ವರ್ತಿಸಿದರೆ ಅದರಿಂದ ಮನೆಯಲ್ಲಿ ಸಮಸ್ಯೆ ಉಂಟಾಗುವುದು, ಸಮಾಜ ನಮ್ಮನ್ನು ಒಪ್ಪಿಕೊಳ್ಳುವುದು ಕಷ್ಟವಾಗುವುದು. ಆದ್ದರಿಂದ ನಮ್ಮದು ಒರಟು ಸ್ವಭಾವವಾದರೆ ಇರಲಿ, ಆದರೆ ನಮ್ಮಲ್ಲಿನ ಕೆಲವು ಗುಣಗಳನ್ನು ನಾವು ಬದಲಾಯಿಸಿದರೆ ನಮಗೇ ಒಳಿತಾಗುವುದು.
ನಾನು ಇರುವುದೇ ಹೀಗೆ ಎಂದು ನಮಗೆ ನಾವೇ ಬ್ರ್ಯಾಂಡ್ ಮಾಡಿದರೆ ಬೇರೆಯವರು ನಮ್ಮ ತಪ್ಪು ತಿದ್ದುವುದಕ್ಕೆ ಬರುವುದಿಲ್ಲ
ನಾನು ಇರುವುದೇ ಹೀಗೆ ನೀವೇನೂ ನನಗೆ ಹೇಳಬೇಕಾಗಿಲ್ಲ, ನಾನು ಏನು ಮಾಡಬೇಕೋ ಅದು ನನಗೆ ಗೊತ್ತಿದೆ ಎಂಬ ಭಾವನೆ ನಿಮ್ಮಲ್ಲಿ ಬಂತೆಂದರೆ ಮತ್ಯಾರು ನಿಮಗೆ ಸರಿ ತಪ್ಪುಗಳ ಪಾಠ ಹೇಳಲ್ಲ, ಅಲ್ಲದೆ ನಮಗೆ ಸ್ವಲ್ಪ ಹಣ ಬಲ, ಹೆಸರು ಇದ್ದರೆ ನಮ್ಮ ಸುತ್ತ ನೀನೇ ಸರಿ ಎಂದು ಹುರಿದುಂಬಿಸಿ ನಮ್ಮನ್ನು ಬಾವಿಗೆ ದೂಡುವವರೇ ಸೇರಿಕೊಂಡಿರುತ್ತಾರೆ. ಆದ್ದರಿಂದ ನಾನು ಸರಿ ಎಂಬ ಆಲೋಚನೆ ಒಳ್ಳೆಯದು, ಆದರೆ ನಾನೇ ಸರಿ ಎಂಬ ಕಲ್ಪನೆ ಇದೆಯೆಲ್ಲಾ ಅದು ಖಂಡಿತ ತಪ್ಪು.
ಬರೀ ಹೊಗಳುವವರನ್ನು ಮಾತ್ರ ನಂಬಬಾರದು
ಹೌದು ನಮ್ಮ ಸುತ್ತ ಬರೀ ಹೊಗಳುವವರನ್ನು ಮಾತ್ರ ನಂಬಬಾರದು, ನಾವು ತಪ್ಪು ಮಾಡಿದಾಗ ನೀನು ತಪ್ಪು ದಾರಿಯಲ್ಲಿ ಹೋಗುತ್ತಿದ್ದೀಯಾ ಎಂದು ಹೇಳಿದಾಗ ಅದನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡಬೇಕು. ಅವರು ನನ್ನ ಬಗ್ಗೆ ಬೊಟ್ಟು ತೋರಿಸುತ್ತಿದ್ದಾರೆ ಎಂದು ಅವರನ್ನು ದೂರುವ ಪ್ರಯತ್ನ ಮಾಡಬಾರದು. ಇತರರ ಮಾತನ್ನು ಕಿವಿಗೆ ಹಾಕಿಕೊಳ್ಳುವ ಪ್ರಯತ್ನ ಮಾಡಬೇಕು. ಒಬ್ಬರು ಹೇಳಿದರೆ ನಮ್ಮ ಬಗ್ಗೆ ಹೊಟ್ಟೆಕಿಚ್ಚು ಆದರೆ ನಮ್ಮ ಕುಟುಂಬದವರು ಹೇಳುವಾಗ ನನ್ನಿಂದ ಏನಾದರೂ ತಪ್ಪಾಗುತ್ತಿದೆ ಎಂದು ಅವಲೋಕಿಸಿದರೆ ಬದುಕು ತುಂಬಾ ಚೆನ್ನಾಗಿರುತ್ತದೆ.
ಇಲ್ಲಾ ನಾನು ಮಾಡಿದ್ದೇ ಸರಿ ಎನ್ನುವವರ ಬದುಕಿನಲ್ಲಿ ನೆಮ್ಮದಿ ಇರಲ್ಲ
ನೀವು ನಿಮ್ಮ ಸುತ್ತ ಮುತ್ತ ಯಾರನ್ನೂ ಬೇಕಾದರೂ ಉದಾಹರಣೆಯಾಗಿ ತೆಗೆದುಕೊಳ್ಳಿ ಅವರು ಯಾರ ಮಾತೂ ಕೇಳಲ್ಲ, ನಾನೇ ಸರಿ ಎಂಬ ಧೋರಣೆಯಲ್ಲಿದ್ದರೆ ಅವರು ಹಲವು ಸಮಸ್ಯೆಗಳ ನಡುವೆ ಬಾಳುತ್ತಿರುತ್ತಾರೆ.



Click it and Unblock the Notifications