Latest Updates
-
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್!
ಅನೈತಿಕ ಸಂಬಂಧದಲ್ಲಿ ನಿಜವಾದ ಪ್ರೀತಿ, ನೆಮ್ಮದಿ ಸಿಗಲು ಸಾಧ್ಯನೇ ಇಲ್ಲ, ಏಕೆ?
ಒಂದು ಮುದ್ದಾದ ಸಂಸಾರವಿರುತ್ತದೆ, ಆದರೆ ಹೊರಗಡೆ ಅದೇನೋ ಸೆಳೆತ ಅಥವಾ ಮೋಡಿಗೆ ಒಳಗಾದಾಗ ಮನೆ, ಸಂಸಾರ ತುಂಬಾನೇ ಬೋರ್ ಅನಿಸಲಾರಂಭಿಸುವುದು, ಜೊತೆಗಿರುವ ಸಂಗಾತಿ ಬೇಡ ಅನಿಸುವುದು, ಈಗ ಪರಿಚಯವಾದ ವ್ಯಕ್ತಿ ತುಂಬಾನೇ ಇಷ್ಟವಾಗುವುದು, ಆ ವ್ಯಕ್ತಿ ಜೊತೆ ಸುತ್ತಾಡಬೇಕು, ಆ ವ್ಯಕ್ತಿ ಜೊತೆ ಇದ್ದರೆ ಮಾತ್ರ ನಾನು ಖುಷಿಯಾಗಿರಬಲ್ಲೇ ಎಂದಲ್ಲ ಅನಿಸಲಾರಂಭಿಸುವುದು. ಅನೈತಿಕ ಸಂಬಂಧ ಇಟ್ಟುಕೊಂಡಿರುವ ಪ್ರತಿಯೊಬ್ಬರಿಗೂ ಈ ರೀತಿ ಅನಿಸಲಾರಂಭಿಸುವುದು.

ಆದರೆ ಅನೈತಿಕ ಸಂಬಂಧದಲ್ಲಿ ಖುಷಿಯಾಗಿರಬಹುದು ಎಂಬುವುದೇ ಒಂದು ದೊಡ್ಡ ಭ್ರಮೆ..... ಬೆಳಕಿನೆಡೆಗೆ ಹಾರಿಬಂದು ಪತಂಗ ಪ್ರಾಣ ಕಳೆಯುವಂತೆ ಅನೈತಿಕ ಸಂಬಂಧದಲ್ಲಿ ಬಿದ್ದು ಇರುವ ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ ಎಂಬುವುದು ವಾಸ್ತವ. ಅನೈತಿಕ ಸಂಬಂಧದ ಬೆಳೆಸಿದ ವ್ಯಕ್ತಿ ಕೊನೆಯವರೆಗೆ ಆ ಸಂಬಂಧದಲ್ಲಿ ಖುಷಿಯಾಗಿರುವ ಉದಾಹರಣೆಗಳೇ ಇಲ್ಲ.
ಏಕೆ ಅನೈತಿಕ ಸಂಬಂಧ ಬೆಳೆಸಿದೆ ಎಂದು ಅನೈತಿಕ ಸಂಬಂಧದಲ್ಲಿರುವವರನ್ನು ಕೇಳಿದರೆ ಅವರಿಗೆ ಹೇಳಲು ನೂರೆಂಟು ನ್ಯಾಯಗಳಿರುತ್ತದೆ, ನನ್ನ ಸಂಗಾತಿಯಿಂದ ನನಗೆ ಖುಷಿ ಸಿಗುತ್ತಿಲ್ಲ, ವೈವಾಹಿಕ ಜೀವನದಲ್ಲಿ ನಾನು ಬಯಸಿದ ಪ್ರೀತಿ ಸಿಗುತ್ತಿಲ್ಲ ಹೀಗೆ ಕಾರಣಗಳನ್ನು ಕೊಡುತ್ತಾ ಇನ್ನೊಂದು ಸಂಬಂಧದ ಕಡೆಗೆ ಆಕರ್ಷಣೆ ಬೆಳೆಸಿಕೊಳ್ಳುತ್ತಾರೆ, ಆದರೆ ಅದರಿಮದ ಅವರಿಗೆ ನಿಜವಾದ ಪ್ರೀತಿ ಸಿಗುವುದೇ ಇಲ್ಲ ಏಕೆ ಗೊತ್ತೇ?
ಅನೈತಿಕ ಸಂಬಂಧ ಎಂಬುವುದು ಬರೀ ಆಕರ್ಷಣೆ
ಬರೀ ಆಕರ್ಷಣೆಯ ಕಾರಣದಿಂದಾಗಿ ಅನೈತಿಕ ಸಂಬಂಧ ಹುಟ್ಟಿಕೊಳ್ಳುತ್ತದೆ. ಒಬ್ಬರು ಮತ್ತೊಬ್ಬರ ಆಸ್ತಿ, ರೂಪ, ಪದವಿ ಮತ್ಯಾವುದೋ ಕಾರಣ ನೋಡಿ ಬೆಳೆದುಕೊಳ್ಳುವ ಸಂಬಂಧ ಅದಾಗಿರುತ್ತದೆ. ಇಬ್ಬರು ಸ್ವಲ್ಪ ಸಮಯದವರೆಗೆ ತುಂಬಾನೇ ಖುಷಿಯಾಗಿರುತ್ತಾರೆ, ವಾವ್ ನಮ್ಮ ಜೀವನದ ಸ್ವರ್ಗ ಎಂದೇ ಭಾವಿಸುತ್ತಾರೆ, ಆದರೆ ಕ್ರಮೇಣ ಆಕರ್ಷಣೆ ಕಡಿಮೆಯಾಗುವುದು. ಇಬ್ಬರಿಗೆ ಒಬ್ಬರಿಗೊಬ್ಬರು ಹೊಂದಿಕೊಳ್ಳುವುದು ತುಂಬಾನೇ ಕಷ್ಟವಾಗುವುದು.
ಅನೈತಿಕ ಸಂಬಂಧದಲ್ಲಿ ನೆಮ್ಮದಿ ಎಂಬುವುದೇ ದೂರಾಗುವುದು
ಅನೈತಿಕ ಸಂಬಂಧದಲ್ಲಿ ಇರುವವರಿಗೆ ಎಲ್ಲಿ ನಮ್ಮಿಬ್ಬರ ಸಂಬಂಧ ನಮ್ಮ ಕುಟುಂಬದಲ್ಲಿ ತಿಳಿಯುತ್ತದೋ ಎಂಬ ಆತಂಕವಿದ್ದೇ ಇರುತ್ತದೆ ಆ ಭಯದಿಂದಾಗಿ ನೆಮ್ಮದಿಯಾಗಿ ಬದುಕಲು ಸಾಧ್ಯವಾಗುವುದಿಲ್ಲ, ಅಲ್ಲದೆ ಇಂಥ ಸಂಬಂಧದಲ್ಲಿ ಅಭದ್ರತೆ ಎಂಬುವುದು ತುಂಬಾನೇ ಕಾಡುವುದು. ನಾನು ಇಷ್ಟಪಡುತ್ತಿರುವ ವ್ಯಕ್ತಿ ನನಗೆ ಸಿಗುತ್ತಾರೆಯೇ? ನನ್ನ ಮನೆಯಲ್ಲಿ ಗೊತ್ತಾದರೆ ಏನು ಗತಿ? ಹೀಗೆ ನೂರೆಂಟು ಆತಂಕಗಳಿರುತ್ತದೆ, ಆದರೂ ಅದೇನೋ ಕೆಟ್ಟ ಸೆಳೆತದಿಂದ ಅನೈತಿಕ ಸಂಬಂಧ ಮುಂದುವರೆಸುತ್ತಾರೆ, ಆದರೆ ಅವರನ್ನು ಪ್ರತಿ ಹೆಜ್ಜೆಗೆ ಕಾಡುವ ಅಭದ್ರತೆ ಅವರ ನೆಮ್ಮದಿಯನ್ನು ನಿಧಾನಕ್ಕೆ ಕಿತ್ತುಕೊಳ್ಳಲಾರಂಭಿಸುವುದು.
ಸಮಾಜದ ದೃಷ್ಟಿಯಿಂದ ಕೆಟ್ಟವರು
ವೈವಾಹಿಕ ಜೀವನ ನಡೆಸುವವರಿಗೆ ಸಿಗುವ ಬೆಲೆ ಅನೈತಿಕ ಸಂಬಂಧದಲ್ಲಿರುವವರಿಗೆ ಸಿಗುವುದಿಲ್ಲ. ಕೆಲವರು ಅವರ ಎದುರಿಗೆ ಏನೇ ಹೇಳದೇ ಇದ್ದರೂ ಜನರ ಕಣ್ಣಿನಲ್ಲಿ ನಡತೆ ಕೆಟ್ಟವರಾಗಿರುತ್ತಾರೆ. ಅನೈತಿಕ ಸಂಬಂಧಕ್ಕೆ ಈ ಸಮಾಜದಲ್ಲಿ ಬೆಲೆ ಸಿಗುವುದಿಲ್ಲ, ಈ ಕಾರಣಕ್ಕೆ ಸಾಕಷ್ಟು ಬಾರಿ ಅವಮಾನ ಎದುರಿಸಬೇಕಾಗುವುದು. ಕೇವಲ ಕ್ಷಣಿಕ ಆಸೆಗಾಗಿ ತಮ್ಮ ಗೌರವ, ಮಾನ ಕಳೆದುಕೊಂಡು ಬದುಕಬೇಕಾದ ಪರಿಸ್ಥಿತಿ ಉಂಟಾಗುವುದು.
ಕೇವಲ ಕ್ಷಣಿಕ ಸುಖಕ್ಕೆ ಆಸೆಪಟ್ಟು ಇರುವ ನೆಮ್ಮದಿ ಕಳೆದುಕೊಂಡು ಬದುಕಬೇಕಾಗುವುದು, ನಮ್ಮವರು ಎನ್ನುವವರು ಈ ಕಾರಣಕ್ಕೆ ನಮ್ಮಿಂದ ದೂರಾಗುತ್ತಾರೆ, ಯಾರ ಜೊತೆ ಅನೈತಿಕ ಸಂಬಂಧ ಬೆಳೆದಿರುತ್ತದೋ ಆ ವ್ಯಕ್ತಿಯ ಕೊನೆಯವರೆಗೆ ಮೊದಲಿನಂತೆ ಇರುವುದೂ ಇಲ್ಲ.. ಕೊನೆಗೆ ಎಲ್ಲವನ್ನು ಕಳೆದುಕೊಂಡು ಪಶ್ಚಾತಾಪದ ಬಾಳು ಬಾಳಬೇಕಾಗುವುದು. ಈ ಕಾರಣಕ್ಕೆ ಬೇರೆ ಕಡೆ ಆಕರ್ಷಣೆಯಾದರೆ ನಿಮ್ಮ ಮನಸ್ಸಿಗೆ ಕಡಿವಾಣ ಹಾಕಿ ನಿಮ್ಮ ಸಂಸಾರದಲ್ಲಿಯೇ ಸಂತೋಷವನ್ನು ಕಾಣಲು ಪ್ರಯತ್ನಿಸಿ.



Click it and Unblock the Notifications











