Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಒಬ್ಬ ವ್ಯಕ್ತಿ ಬದುಕಿನಲ್ಲಿ ಈ ಮೂವರಿದ್ದರೆ ಅವರು ಅದೃಷ್ಟವಂತರು ಅಂತಾರೆ ಚಾಣಕ್ಯ
ಒಬ್ಬ ವ್ಯಕ್ತಿ ಯಶಸ್ಸು ಗಳಿಸುತ್ತಾನೋ ಅಥವಾ ಸೋತು ಸುಣ್ಣವಾಗುತ್ತಾನೋ ಎಂಬುವುದು ಅವನ ಬದುಕಿನಲ್ಲಿ ಬರುವ ಕೆಲ ವ್ಯಕ್ತಿಗಳನ್ನು ಅವಲಂಬಿಸಿರುತ್ತದೆ. ಎಷ್ಟೇ ಹಣ, ಆಸ್ತಿ ಎಲ್ಲಾ ಮಾಡಬಹುದು, ಆದರೆ ನಮ್ಮ ಬದುಕಿನಲ್ಲಿ ಬರುವ ಈ ವ್ಯಕ್ತಿಗಳು ನಮ್ಮ ಸಂತೋಷ ಹಾಗೂ ನೆಮ್ಮದಿ ಮೇಲೆ ತುಂಬಾನೇ ಪ್ರಭಾವ ಬೀರುತ್ತದೆ.

ಹಾಗಾಗಿ ಯಾರ ಜೀವನದಲ್ಲಿ ಈ ಮೂವರು ಸರಿಯಾಗಿ ಸಿಗುತ್ತಾರೋ ಅವರು ಬದುಕಿನಲ್ಲಿ ಯಶಸ್ಸು ಪಡೆಯುತ್ತಾರೆ, ಅವರೇ ನಿಜವಾದ ಸಂಪತ್ತಿನ ಒಡೆಯರು, ಇಲ್ಲದಿದ್ದರೆ ಬದುಕಿನಲ್ಲಿ ನೆಮ್ಮದಿ ಇಲ್ಲದಂತಾಗುವುದು, ಹಾಗಾಗಿ ಚಾಣಕ್ಯ ಸಂಬಂಧದ ಬಗ್ಗೆ ತುಂಬಾನೇ ಅದ್ಭುತವಾಗು ಹೇಳಿದ್ದಾರೆ, ಯಾರ ಬದುಕಿನಲ್ಲಿ ಈ ಮೂಝವರು ಸಿಗುತ್ತಾರೋ ಅವನೇ ನಿಜವಾದ ಶ್ರೀಮಂತ, ಏಕೆಂದರೆ ಇವರು ಇರುವಾಗ ಅದೃಷ್ಟಕ್ಕೆ ಯಾವ ಕೊರತೆಯೂ ಇರಲ್ಲ ಎಂದು ಹೇಳಿದ್ದಾರೆ, ಆ ವ್ಯಕ್ತಿಗಳೆಂದರೆ...
ಸನ್ನಡತೆಯ ಸಂಗಾತಿ
ನಮ್ಮ ಬಾಳಿನಲ್ಲಿ ನಾವು ಬಹುಪಾಲು ಕಳೆಯುವುದು ನಮ್ಮ ಸಂಗಾತಿಯ ಜೊತೆಗೆ. ಒಳ್ಳೆಯ ಗುಣದ ವ್ಯಕ್ತಿ ಸಂಗಾತಿಯಾಗಿ ಸಿಕ್ಕರೆ ಆ ವ್ಯಕ್ತಿ ಬಾಳಲ್ಲಿ ಸಂತೋಷಕ್ಕೆ ಯಾವ ಕೊರತೆಯೂ ಇರಲ್ಲ. ಸಂಗಾತಿ ಕಷ್ಟದಲ್ಲಿ, ಸುಖದಲ್ಲಿ ನಿಮ್ಮ ಜೊತೆ ನಿಲ್ಲುವವರಾಗಿರಬೇಕು, ಬುದ್ಧಿವಂತರಾಗಿರಬೇಕು, ನಿಮ್ಮನ್ನು ಅತೀವ ಪ್ರೀತಿಸುವವರು ಆಗಿರಬೇಕು, ಇಂಥ ಸಂಗಾತಿ ನಿಮ್ಮ ಜೊತೆ ಯಾವುದೇ ಕಾರಣಕ್ಕೆ ಕೊರತೆ ಉಂಟಾಗುವುದಿಲ್ಲ.
ಸಂಗಾತಿ ಸರಿಯಿಲ್ಲದಿದ್ದರೆ ಆ ವ್ಯಕ್ತಿ ಬದುಕಿನಲ್ಲಿ ಏನೇ ಮಾಡಲಿ ಬದುಕಿನಲ್ಲಿ ನೆಮ್ಮದಿ ಎಂಬುವುದು ಇರುವುದಿಲ್ಲ. ಕೆಟ್ಟ ಹೆಸರು ಬರಬಹುದು, ಸಂತೋಷ ಎಂಬುವುದು ತುಂಬಾನೇ ದೂರ ಹೋಗಬಹುದು, ಹಾಗಾಗಿ ಒಳ್ಳೆಯ ಗುಣದ ಸಂಗಾತಿ ನಮ್ಮ ಬದುಕಿಗೆ ನಿಜವಾಗಲೂ ಒಳ್ಳೆಯ ಸ್ನೇಹಿತರು ಎಂದು ಹೇಳಿದ್ದಾರೆ.
ಸನ್ನಡತೆಯ ಮಕ್ಕಳು
ಮಕ್ಕಳ ಸ್ವಭಾವ ಚೆನ್ನಾಗಿರಬೇಕು, ಮಕ್ಕಳು ನಮಗೆ ಕೀರ್ತಿಯನ್ನು ತರಬೇಕು, ನಮ್ಮ ಹೆಸರಿಗೆ, ನಂಬಿಕೆಗೆ ದ್ರೋಹ ಮಾಡಬಾರದು, ಸದಾ ಪೋಷಕರನ್ನು ನೋಡಿಕೊಳ್ಳಬೇಕು, ಅವರನ್ನು ಗೌರವಿಸಬೇಕು, ದೊಡ್ಡದಾದ ಮೇಲೆ ತಂದೆ-ತಾಯಿ ಜವಾನ್ದಾರಿ ನಮ್ಮದೆಂದು ತೆಗೆದುಕೊಳ್ಳುವ ಮಕ್ಕಳಿದ್ದರೆ ಪೋಷಕರಿಗೆ ಇನ್ನೇನು ಬೇಕು, ಅವರ ಸದಾ ಖುಷಿಯಾಗಿರುತ್ತಾರೆ.
ಮಕ್ಕಳು ಒಳ್ಳೆಯ ದಾರಿಯಲ್ಲಿ ಸಾಗಿ ಬಹು ಎತ್ತರಕ್ಕೆ ಬೆಳೆಯಬೇಕೆಂದು ಪ್ರತಿಯೊಂದು ಪೋಷಕರೂ ಬಯಸುತ್ತಾರೆ, ಅದೇ ತಮ್ಮ ಮಗ ಅಥವಾ ಮಳ ಕೆಟ್ಟ ಹಾದಿಯನ್ನು ಹಿಡಿದಿದ್ದಾರೆ ಎಂದು ಗೊತ್ತಾದರೆ ನೆಮ್ಮದಿ ದೂರಾಗುವುದು, ಆ ಪೋಷಕರು ಕಣ್ಣೀರಿನಲ್ಲಿ, ಅವಮಾನ ಎದುರಿಸಿ ಬದುಕಬೇಕಾಗುತ್ತದೆ.
ಒಳ್ಳೆಯ ಸಂಗ
ಇನ್ನು ನಮ್ಮ ಬದುಕಿನಲ್ಲಿ ಹೆಚ್ಚು ಪ್ರಭಾವ ಬೀರುವವರೆಂದರೆ ಸ್ನೇಹಿತರು.ಒಳ್ಳೆಯ ಸ್ನೇಹಿತರಿದ್ದರೆ ನಾವು ಬೆಳೆಯುತ್ತೇವೆ, ಅದೇ ಕೆಟ್ಟ ಸ್ನೇಹಿತರಿದ್ದರೆ ಅವರು ನಮ್ಮನ್ನು ಕೂಡ ತಪ್ಪು ದಾರಿಗೆ ಪ್ರೇರೇಪಿಸುತ್ತಾರೆ. ಕೆಟ್ಟ ಸ್ನೇಹಿತರಿಂದ ಕೆಟ್ಟದು ಉಂಟಾಗುವುದು, ಅದೇ ಒಳ್ಳೆಯ ಸ್ನೇಹಿತರಿದ್ದರೆ ನಿಮಗೆ ಒಳಿತಾಗುವುದು, ಹಾಗಾಗಿ ಯಾರು ನಮ್ಮ ಸ್ನೇಹಿತರು ಎಂಬುವುದು ಕೂಡ ಮುಖ್ಯವಾಗುತ್ತದೆ, ಕೆಲವೊಂದು ಸ್ನೇಹಿತರು ಬದುಕಿನಲ್ಲಿ ಬಂದರೆ ಅವರು ನಮ್ಮ ಬದುಕಿನಲ್ಲಿ ಬಹುದೊಡ್ಡ ಬದಲಾವಣೆ ತರುತ್ತಾರೆ, ನಮ್ಮಲ್ಲಿ ಸಾಧ್ಯವಿಲ್ಲ ಎಂದು ಭಾವಿಸಿದ್ದನ್ನು ಇಲ್ಲಿ ನಿನ್ನಿಂದ ಸಾಧ್ಯ ಎಂಬುವುದಾಗಿ ಹ ಹುರಿದುಂಬುತ್ತಾರೆ, ವ್ಯಕ್ತಿಯ ವ್ಯಕ್ತಿತ್ವ ಅಳೆಯಬೇಕೆಂದರೆ ಅವರ ಸ್ನೇಹಿತರನ್ನು ಗಮನಿಸಿದರೆ ಸಾಕು ತಿಳಿಯುತ್ತದೆ.



Click it and Unblock the Notifications











