Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಮತ್ತೊಮ್ಮೆ ಪ್ರೀತಿಯಲ್ಲಿ ಮೋಸ ಹೋಗದಿರಲು ಇಂಥರನ್ನೇ ನಿಮ್ಮ ಸಂಗಾತಿಯನ್ನಾಗಿಸಿ
ನಾವು ಆ ವ್ಯಕ್ತಿಯನ್ನು ಎಷ್ಟು ಪ್ರೀತಿಸುತ್ತಿರುತ್ತೇವೆ ಎಂದರೆ ಆ ವ್ಯಕ್ತಿಯೇ ನನ್ನ ಬದುಕಿನ ಸರ್ವಸ್ವ ಎಂದು ಅಷ್ಟಾಗಿ ನಂಬಿರುತ್ತೇವೆ. ಅವರು ಮುಂದೊಂದು ದಿನ ನನ್ನ ಪ್ರೀತಿಗೆ ದ್ರೋಹ ಬಗೆಯುತ್ತಾನೆ/ಳೆ ಎಂಬ ಕಲ್ಪನೆಯೂ ನಮ್ಮಲ್ಲಿ ಇರಲ್ಲ. ಆದರೆ ಒಂದು ದಿನ ಆ ವ್ಯಕ್ತಿ ನಮ್ಮನ್ನು ಬಿಟ್ಟು ಹೋದಾಗ ಪ್ರೀತಿಯೆಂದರೆ ಅಸಹ್ಯ, ಜಿಗುಪ್ಸೆ ಎಲ್ಲಾ ಉಂಟಾಗುವುದು. ಅಲ್ಲಿಗೆ ಪ್ರೀತಿಯ ವಿಷಯದಲ್ಲಿ ಯಾರನ್ನೂ ನಂಬಲು ಮನಸ್ಸು ಸಿದ್ಧವಿರಲ್ಲ.

ಅದೇ ಕೆಲವರಿಗೆ ಒಂದು ಬಾರಿ ಮೋಸವಾದರೆ ಸರಿ ಆದರೆ ಆ ವ್ಯಕ್ತಿಯಂತೆ ಈ ವ್ಯಕ್ತಿ ಮೋಸ ಮಾಡಲ್ಲ ಎಂದು ಮತ್ತೆ ಪ್ರೀತಿಯಲ್ಲಿ ಬೀಳುತ್ತಾರೆ, ಮತ್ತೆ ಅವರನ್ನು ಕುರುಡಾಗಿ ನಂಬುತ್ತಾರೆ, ಆದರೆ ಮತ್ತೆ ಮೋಸ ಆಗ ಮಾತ್ರ ಮನಸ್ಸು ಛಿದ್ರವಾಗುತ್ತೆ, ಆ ಮನಸ್ಸು ಮತ್ತೆ ಯಾರನ್ನೂ ನಂಬಲು ಸಿದ್ಧವಾಗಲ್ಲ. ಅದಾದ ಮೇಲೆ ಯಾರನ್ನೂ ನೋಡಿದರೂ ಎಲ್ಲಿ ಮೋಸ ಮಾಡುತ್ತಾರೋ ಎಂಬ ಸಂಶಯ ಕಾಡುತ್ತಲೇ ಇರುತ್ತದೆ. ಇದರಿಂದಾಗಿ ಪ್ರೀತಿಯಲ್ಲಿ ಮತ್ತೆ ಬೀಳಲು , ಆ ನೋವನ್ನು ಮತ್ತೆ ಅನುಭವಿಸಲು ಮನಸ್ಸು ಸಿದ್ಧವಾಗಲ್ಲ.
ಕೆಲವರು ಪ್ರೀತಿಯಲ್ಲಿ ಮೋಸ ಹೋಗಿ ಪ್ರೀತಿಯಲ್ಲಿರುವ ನಂಬಿಕೆಯೇ ಕಳೆದುಕೊಂಡು ಒಂಟಿಯಾಗಿರಲು ತೀರ್ಮಾನಿಸುತ್ತಾರೆ. ಇನ್ನು ಕೆಲವರು ಮೊದಲಿನಂತೆ ಮನಸಾರೆ ಪ್ರೀತಿಸುವ ಸಾಹಸ ಮಾಡಲ್ಲ. ನೀವು ಪ್ರೀತಿ ಮಾಡಿದ್ದು ಸುಳ್ಳಲ್ಲ, ಆದರೆ ನೀವು ಸರಿಯಾದ ವ್ಯಕ್ತಿಯ ಆಯ್ಕೆಯಲ್ಲಿ ಎಡವಿರುತ್ತೀರಿ, ಈ ಕಾರಣಕ್ಕೆ ನಿಮಗೆ ಮೋಸವಾಗಿರುತ್ತದೆ. ಪ್ರೀತಿಯಲ್ಲಿ ಮೋಸ ಹೋದೆ ಎಂದು ಹೇಳುವವರು ಒಂದು ವಿಷಯ ನೆನಪಿಟ್ಟುಕೊಳ್ಳಿ, ನೀವು ಪ್ರೀತಿಯಲ್ಲಿ ಸೋಲಲಿಲ್ಲ, ಆದರೆ ನಿಮ್ಮ ಪ್ರೀತಿಗೆ ಅರ್ಹ ವ್ಯಕ್ತಿ ಅವರಲ್ಲಅಷ್ಟೇ.
ನಿಮ್ಮ ಪ್ರೀತಿಗೆ ಅರ್ಹವಾದ ವ್ಯಕ್ತಿ ಖಂಡಿತ ಸಿಕ್ಕೇ ಸಿಗುತ್ತಾರೆ. ನೀವು ನಿಮ್ಮ ಬಾಳ ಸಂಗಾತಿಯಾಗುವವರಲ್ಲಿ ಈ ಗುಣಗಳಿವೆಯೇ ಎಂದು ನೋಡಿ, ಇದ್ದರೆ ಖಂಡಿತ ಅಂಥ ವ್ಯಕ್ತಿ ನಿಮಗೆ ಮೋಸ ಮಾಡಲ್ಲ, ನಿಮ್ಮ ಬದುಕಿನಲ್ಲಿ ಹೊಸ ಅರ್ಥ ಸಿಗುವುದು. ನಿಮ್ಮನ್ನು ತುಂಬಾ ಪ್ರೀತಿಸುವ, ನಿಮ್ಮ ಏಳು-ಬೀಳುಗಳಲ್ಲಿ ಸದಾ ಜೊತೆಗಿರುತ್ತಾರೆ. ಆದ್ದರಿಂದ ಪ್ರೀತಿಯಲ್ಲಿ ಮೋಸ ಹೋಗದಿರಲು ನಮ್ಮ ಸಂಗಾತಿಯಲ್ಲಿ ಈ ಗುಣಗಳಿದ್ದರೆ ಸಾಕು....
ನೀವು ಹೇಗೆ ಇದ್ದೀರೋ ಹಾಗೆ ಸ್ವೀಕರಿಸುವ ವ್ಯಕ್ತಿಯಾಗಿರಬೇಕು: ನಿಮ್ಮ ಸಂಗಾತಿಯಾಗುವ ವ್ಯಕ್ತಿ ನಿಮ್ಮನ್ನು ನಿಮ್ಮಂತೆಯೇ ಸ್ವೀಕರಿಸುವ ಗುಣದವರಾಗಿದ್ದರೆ ಅವರು ಎಂದಿಗೂ ನಿಮ್ಮನ್ನು ಬಿಟ್ಟು ದೂರ ಹೋಗಲ್ಲ. ಅದೇ ನಿಮ್ಮ ಹಣ ನೋಡಿ ಅಥವಾ ಅಂತಸ್ತು ನೋಡಿ ಪ್ರೀತಿಸುತ್ತಿದ್ದಾನೆ/ಳೆ ಎಂದಾದರೆ ಅವರಿಂದ ದೂರವಿಡಿ. ಬದಲಾಗುತ್ತಾರೆ ಎಂಬ ಭ್ರಮೆಯಲ್ಲಿ ಪ್ರೀತಿಸಲು ಹೋಗಬೇಡಿ.
ಒಬ್ಬರನ್ನೊಬ್ಬರು ಗೌರವಿಸುವಂತಿರಬೇಕು: ನಿಜವಾದ ಪ್ರೀತಿಯೆಂದರೆ ಒಬ್ಬರನ್ನೊಬ್ಬರು ಗೌರವಿಸಬೇಕು. ಎಲ್ಲಿ ಗೌರವಿರುತ್ತದೋ ಅಲ್ಲಿ ಹೊಂದಾಣಿಕೆ ಕೂಡ ಇರುತ್ತದೆ. ನಮ್ಮನ್ನು ಗೌರವಿಸುವ ವ್ಯಕ್ತಿ ಖಂಡಿತ ನಮಗೆ ನೋವುಂಟು ಮಾಡುವುದಿಲ್ಲ, ನಮಗೆ ಮೋಸ ಮಾಡುವುದಿಲ್ಲ. ಅದು ಅವರ ನಡವಳಿಕೆಯಲ್ಲಿ , ಮಾತುಗಳಲ್ಲಿ ಕಂಡು ಬರುತ್ತದೆ, ಇಂಥ ವ್ಯಕ್ತಿಗಳನ್ನು ಬಾಳಸಂಗಾತಿಯನ್ನಾಗಿ ಆಯ್ಕೆ ಮಾಡಿ ಖಂಡಿತ ಮತ್ತೆ ಪ್ರೀತಿಯಲ್ಲಿ ನೋವುಂಟಾಗಲ್ಲ. ನಿಮ್ಮಿಬ್ಬರ ಅಂತಸ್ತು, ಜಾತಿ ಯಾವುದರಲ್ಲೂ ವ್ಯತ್ಯಾಸವಿದ್ದರೂ ಸರಿ ಆದರೆ ಪರಸ್ಪರ ಗೌರವದಿಂದ ನೋಡುವುದರಲ್ಲಿ ವ್ಯತ್ಯಾಸವಿರಬಹುದು.
ಅವರ ಜೊತೆ ಇದ್ದಾಗ ಅಭದ್ರತೆ ಕಾಡಬಾರದು: ಆ ವ್ಯಕ್ತಿ ಜೊತೆ ಇದ್ದಾಗ ಖುಷಿಯಾಗಿದ್ದೇನೆ ಎಂದು ಅನಿಸಬೇಕು. ಒಂದಿಷ್ಟೂ ಅಭದ್ರತೆ ಕಾಡಬಾರದು ಅಂದರೆ ಎಲ್ಲಿ ಆ ವ್ಯಕ್ತಿಯಿಂದ ಮೋಸ ಆಗುತ್ತದೋ ಅಥವಾ ನನ್ನ ಬಿಟ್ಟು ಹೋಗಬಹುದಾ ಈ ರೀತಿಯ ಸಂಶಯ ನಿಮ್ಮ ಮನಸ್ಸಿನಲ್ಲಿ ಮೂಡುತ್ತಿದೆ ಎಂದರೆ ನಿಮ್ಮಿಬ್ಬರ ಬಂಧ ಗಟ್ಟಿಯಾಗಿಲ್ಲ ಎಂದರ್ಥ. ನಮಗೆ ಅವರ ಜೊತೆಗೆ ಇದ್ದಾಗ ಯಾವ ಕಾರಣಕ್ಕೂ ಈ ವ್ಯಕ್ತಿಯಿಂದ ಮೋಸ ಆಗಲ್ಲ ಎಂಬ ಭಾವನೆ ನಮ್ಮ ಮನಸ್ಸಿನಲ್ಲಿ ಮೂಡಬೇಕು. ಆಗ ಮಾತ್ರ ಆ ಬಂಧ ಗಟ್ಟಿಯಾಗಿರುತ್ತದೆ.
ಒಬ್ಬ ವ್ಯಕ್ತಿಯನ್ನು ಬೇಟಿ ಮಾಡಿದಾಗ ಅವರು ನಿಮಗೆ ಇಷ್ಟವಾದಾಗ ಈ ಮೇಲಿನ ಎಲ್ಲಾ ಅಂಶಗಳು ನಿಮ್ಮಿಬ್ಬರ ಸಂಬಂಧದಲ್ಲಿ ಇದೆ ಎಂದಾದರೆ ಅಂಥ ಸಂಬಂಧದಲ್ಲಿ ಮುಂದುವರೆಯಿರಿ, ಖಂಡಿತ ಈ ಬಾರಿ ಮೋಸ ಹೋಗಲ್ಲ...



Click it and Unblock the Notifications
