Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಸಂಗಾತಿ ಜೊತೆ ಜಗಳವಾಡಿದರೆ ಹೀಗೆ ಮಾಡಬಹುದೇ?
ಜಗಳ ಮಾಡದೆ ಬಾಳ್ವೆ ಮಾಡುತ್ತಿರುವ ಗಂಡ-ಹೆಂಡತಿ ಈ ಪ್ರಪಂಚದಲ್ಲಿ ಯಾರೂ ಇರಲ್ಲ, ಸಣ್ಣ-ಪುಟ್ಟ ಕಾರಣಕ್ಕೆ ಜಗಳ ಬಂದೇ ಬರುತ್ತದೆ. ಆದರೆ ಆ ಜಗಳ, ಆ ಮನಸ್ತಾಪವನ್ನು ಬೆಳೆಯಲು ಬಿಡದಂತೆ ಗಂಡ-ಹೆಂಡತಿ ಇಬ್ಬರೂ ಪ್ರಯತ್ನಿಸಿದರೆ ಮಾತ್ರ ಸುಂದರವಾದ ಸಂಸಾರ ಜೀವನ ನಡೆಸಲು ಸಾಧ್ಯ. ಆದರೆ ಈ ರೀತಿ ಮಾಡುವಲ್ಲಿ ಸಾಕಷ್ಟು ದಂಪತಿಗಳು ಎಡವುತ್ತಿದ್ದಾರೆ ...ಅದಕ್ಕೆ ಕಾರಣ ಏನೆಂದು ಗೊತ್ತೇ? ಒಣ ಪ್ರತಿಷ್ಠೆ ಮತ್ತು ಹಠ.
ದಂಪತಿಗಳಲ್ಲಿ ಬಿಟ್ಟುಕೊಡುವ ಗುಣ ಇರಬೇಕು ಗಂಡ ನಾನು ಹೇಳಿದ್ದೇ ಸರಿ ಎಂದು ವಾದಿಸಿದಾಗ ಹೆಂಡತಿ ನಾನು ಹೇಳಿದ್ದೇ ಸರಿ ಎಂದು ಪ್ರತಿವಾದಕ್ಕೆ ನಿಂತರೆ ಮನಸ್ಸಿನ ನೆಮ್ಮದಿ ಚಿಂದಿ ಚಿತ್ರಾನ್ನವಾಗುವುದು. ಹಾಗಂತ ಎಲ್ಲಾ ಸಮಯದಲ್ಲೂ ಅವನ/ಅವಳ ವಾದವನ್ನು ಒಪ್ಪಿಕೊಳ್ಳಬೇಕಾಗಿಲ್ಲ, ಆದರೆ ಜಗಳ ಮುಂದುವರೆಯದಂತೆ ಜಾಗ್ರತೆವಹಿಸಬೇಕಷ್ಟೇ.

ಇವೆಲ್ಲಕ್ಕಿಂತ ಮುಖ್ಯವಾದ ವಿಷಯವೆಂದರೆ ನಿಮ್ಮ ನಡುವೆ ನಡೆದಂತಹ ಸಣ್ಣ ಪುಟ್ಟ ಜಗಳವನ್ನು ನಿಮ್ಮ ಮನೆಯವರಿಗೆ ಅಥವಾ ಸ್ನೇಹಿತರಿಗೆ ಹೇಳದಿದ್ದರೆ ಒಳ್ಳೆಯದು.ನಿಮ್ಮ ಸಂಗಾತಿಯ ಜೊತೆ ಜಗಳವಾಡಿದಾಗ ನಿಮ್ಮ ಫ್ರೆಂಡ್ಸ್ ಅಥವಾ ಮನೆಯವರ ಜೊತೆ ಹೇಳಿದ್ದೀರಿ ಅಂದರೆ ಹೇಗಾದರೂ ಆ ಸುದ್ಧಿ ಅವರ ಕಿವಿ ಮುಟ್ಟುತ್ತದೆ, ಇದರಿಂದ ನಿಮ್ಮ ಮೇಲೆ ಇರುವ ಕೋಪ ಅಧಿಕವಾಗಿ ಸಂಬಂಧ ಮತ್ತಷ್ಟು ಕೆಟ್ಟದಾಗುತ್ತದೆ.
ಆದರೆ ನಿಮ್ಮ ಸಂಗಾತಿ ನಿಮ್ಮ ಜೊತೆ ತುಂಬಾ ಕೆಟ್ಟದಾಗಿ ವರ್ತಿಸುತ್ತಿದ್ದರೆ ಮಾತ್ರ ಸಹಿಸಿಕೊಂಡು ಸುಮ್ಮನೆ ಇರಬಾರದು, ಸಾಕಷ್ಟು ಹೆಣ್ಣು ಮಕ್ಕಳು ಗಂಡನ ಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡುತ್ತೇವೆ. ಗಂಡ ಹಿಂಸೆ ಕೊಡುತ್ತಿದ್ದರೆ ಮಾತ್ರ ಮನೆಯವರ ಜೊತೆ ಹೇಳಿಕೊಳ್ಳಬೇಕು, ಭಯದಿಂದ ಅವನು ಹಿಂಸೆ ಕಮ್ಮಿ ಮಾಡುತ್ತಾನೆ, ಇಲ್ಲದಿದ್ದರೆ ಮತ್ತಷ್ಟು ಹಿಂಸೆ ನೀಡಲಾರಂಭಿಸುತ್ತಾನೆ.
ಹಿಂಸೆ ನೀಡುವುದರಲ್ಲಿ ಕೆಲ ಹೆಂಡತಿಯರೇನು ಕಮ್ಮಿ ಇರುವುದಿಲ್ಲ, ಸಾಕಷ್ಟು ಗಂಡಂದಿರು ತಮ್ಮ ಹೆಂಡತಿ ಕೊಡುತ್ತಿರುವ ಮಾನಸಿಕ ಹಿಂಸೆ ತಾಳಲಾರದೆ ತುಂಬಾ ನೋವು ಅನುಭವಿಸುತ್ತಿರುತ್ತಾರೆ. ಹೊರಗೆ ಹೇಳಿಕೊಳ್ಳುವಂತೆಯೂ ಇಲ್ಲ, ಅನುಭವಿಸಲು ಸಾಧ್ಯವಿಲ್ಲ, ವರದಕ್ಷಿಣೆ ಕಾಯ್ದೆ ಹೆಣ್ಣಿನ ರಕ್ಷಣೆಗಾಗಿ ಬಂದದ್ದು, ಆದರೆ ಕೆಲ ಹೆಣ್ಣು ಮಕ್ಕಳು ಇದನ್ನು ತಪ್ಪಾಗಿ ಬಳಸುತ್ತಿದ್ದಾರೆ. ಇದುವರೆಗೆ ಇದಕ್ಕೆ ಸೂಕ್ತ ಪರಿಹಾರವನ್ನೂ ಕಂಡು ಹಿಡಿದಿಲ್ಲ ಅನ್ನುವುದು ವಿಷಾದವೇ ಸರಿ.
ನಿಮ್ಮ ನಡುವೆ ಚಿಕ್ಕ ಪುಟ್ಟ ವಿಷಯಕ್ಕೆ ಮನಸ್ತಾಪ ಬಂದರೆ ಅದನ್ನು ಆಗಲೇ ಮರೆತು ಬಿಡಿ, ಸಂಗಾತಿಯಲ್ಲಿ ಸೈಕೋ ಗುಣವಿದ್ದರೆ ಮಾತ್ರ ಸಹಿಸಲು ಹೋಗಬೇಡಿ, ಹೊಂದಾಣಿಕೆ ಮಾಡುತ್ತೇನೆಂದು ನೀವು ಪ್ರಯತ್ನಿಸಿದಷ್ಟು ಅಪಾಯವೇ ಹೆಚ್ಚು.



Click it and Unblock the Notifications











