Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಇಂತವರ ಜೊತೆ ಲಗ್ನವಾದರೆ ಸುಖವಾಗಿರಲು ಸಾಧ್ಯವೇ?
ನೂರು ಸುಳ್ಳು ಹೇಳಿ ಒಂದು ಮದುವೆಯನ್ನು ಮಾಡಬಹುದು ಎಂದು ಹೇಳುವುದನ್ನು ಕೇಳಿದ್ದೇನೆ. ಆದರೆ ನನ್ನ ಪ್ರಕಾರ ಮದುವೆಯಲ್ಲಿ ಒಂದು ಸುಳ್ಳೂ ಇರಬಾರದು. ಮದುವೆ ಅನ್ನುವ ಅನುಬಂಧ ಗಟ್ಟಿಯಾಗಿರಬೇಕೆಂದರೆ ದಂಪತಿಗಳ ನಡುವೆ ಪ್ರೀತಿ ಇರಬೇಕು. ಆ ಪ್ರೀತಿಗೆ ಬುನಾದಿ ನಂಬಿಕೆ.
ಮದುವೆ ಗೊತ್ತಾದಾಗ ಪ್ರತಿಯೊಬ್ಬರೂ ಸಂತೋಷ ಪಡುತ್ತಾರೆ. ಆದರೆ ಮದುವೆಗೆ ದಿನಾಂಕ ಗೊತ್ತಾದ ಮೇಲೆ ನಾವು ಬಾಳ ಸಂಗಾತಿ ಆಗಿ ಸ್ವೀಕರಿಸುತ್ತಿರುವವರ ಬಗ್ಗೆ ಏನಾದರೂ ಕೆಟ್ಟ ಸುದ್ಧಿ ಕೇಳಿ ಬಂದರೆ ಏನು ಮಾಡಬೇಕೆಂಬುದು ತೋಚುವುದೇ ಇಲ್ಲ. ಜಾತಕ, ಗೋತ್ರ ಎಲ್ಲಾ ನೋಡುತ್ತೇವೆ, ಆದರೆ ಒಬ್ಬರ ಗುಣದ ಬಗ್ಗೆ ತಿಳಿಯಲು ಯಾರಿಗೂ ಸಾಧ್ಯವಿಲ್ಲ.

ಕೆಲವರು ಮದುವೆಗೆ ಮೊದಲು "ಮಹಾ ಪೋಲಿ" ಎಂದು ಬಿರುದು ಗಳಿಸಿದ್ದು, ಮದುವೆಯ ನಂತರ ಶ್ರೀರಾಮ ಚಂದ್ರನಂತೆ ಬದಲಾದವರನ್ನೂ ನೋಡಿದ್ದೇನೆ, ತುಂಬಾ ಒಳ್ಳೆಯವನು/ಳು ಮುಂದೆ ಸಂಸಾರವನ್ನು ಚೆಂದವಾಗಿ ನಡೆಸುತ್ತಾರೆ ಎಂದು ಮನೆಯವರು ಭರವಸೆಯಿಟ್ಟು ಮದುವೆ ಮಾಡಿಸಿ, ಕೊನೆಗೆ ಕೆಟ್ಟ ಚಟಗಳಿಗೆ ದಾಸರಾಗಿ ಸಂಸಾರವನ್ನು ಬೀದಿಗೆ ತಂದಂತಹ ಎಷ್ಟೋ ಜನರು ನಮ್ಮ ನಡುವೆ ಇದ್ದರೆ. ಮನುಷ್ಯನ ಗುಣ ಯಾವಾಗ, ಹೇಗೆ ಬದಲಾಗುತ್ತದೆ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಆದರೆ ಮನುಷ್ಯನ ಕೆಲವೊಂದು ಗುಣಗಳಿಂದ ಅವನು/ಅವಳು ಹೀಗೆಯೇ ಇರುತ್ತಾಳೆ ಎಂದು ಹೇಳಬಹುದು!
ಮದುವೆ ಅನ್ನುವ ಶುಭ ಕಾರ್ಯಕ್ಕೆ ಅನೇಕ ವಿಘ್ನಗಳಿರುತ್ತದೆ. ನಮಗೆ ಆಗದವರು ಅಥವಾ ಅವರಿಗೆ ಆಗದವರು ಬಂದು ನಿಮ್ಮ ಬಾಳ ಸಂಗಾತಿ ಆಗುವವರ ಬಗ್ಗೆ ಇಲ್ಲ ಸಲ್ಲದ ಮಾತು ಹೇಳಬಹುದು. ಇದನ್ನು ಕೇಳಿ ಮದುವೆ ಮುರಿಯುವ ಸಾಹಸಕ್ಕೆ ಕೈ ಹಾಕಬಾರದು, ಆದರೆ ಸತ್ಯ ನಿಮ್ಮ ಟೇಬಲ್ ಮೇಲಿದ್ದರೆ ಅದನ್ನು ನೋಡಿ ಕಣ್ಣು ಮುಚ್ಚಿಕೊಂಡು ಇರಬಾರದು. ನಿಮ್ಮ ಬಾಳಸಂಗಾತಿಯಾಗಿ ಬರುವವರಲ್ಲಿ ಈ ಕೆಳಗಿನ ವರ್ತನೆಗಳು ಕಂಡು ಬಂದರೆ ಅಂತಹವರನ್ನು ಮದುವೆಯಾಗುವುದರ ಬಗ್ಗೆ ಎರಡನೇ ಬಾರಿ ಯೋಚಿಸುವುದು ಒಳ್ಳೆಯದು.
ಸುಳ್ಳು ಹೇಳುವುದು
ನೀವು ಮದುವೆಯಾಗುವವರೆಗೆ ಈಗಾಲೇ ಒಂದು ಸಂಬಂಧವಿದ್ದು, ಅದು ನಿಮಗೆ ತಿಳಿದು ಬಂದು ಅವರು ಈ ವಿಷಯವನ್ನು ನಿಮ್ಮಿಂದ ಮುಚ್ಚಿಟ್ಟು ಮದುವೆಯಾಗ ಹೊರಟ್ಟಿದ್ದರೆ ಅಂತವರನ್ನು ಮದುವೆಯಾಗದಿರುವುದೇ ಒಳ್ಳೆಯದು. ಬರೀ ಸಂಬಂಧ ಮಾತ್ರವಲ್ಲ ಬೇರೆ ಯಾವುದೇ ವಿಷಯದಲ್ಲಿ ಸುಳ್ಳು ಹೇಳಿದ್ದು ಅದು ನಿಮ್ಮ ಭವಿಷ್ಯಕ್ಕೆ ಬಾಧಿಸುವಂತೆ ಇದ್ದರೆ ನಿಮ್ಮ ಭವಿಷ್ಯವನ್ನು ಹಾಳು ಮಾಡದಿರುವುದು ಒಳ್ಳೆಯದು.
ಮನೆ ಸಮಸ್ಯೆ
ಮದುವೆಯಾಗುವಾಗ ಅವನ/ಅವಳ ಮನೆಯವರ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಮದುವೆಯಾಗಿ ಬಾಳುವುದು ನೀವಿಬ್ಬರು ಆದರೂ ಮನೆಯವರ ಪ್ರಭಾವ ನಿಮ್ಮ ಸಂಸಾರದ ಮೇಲೆ ಪರಿಣಾಮ ಬಿದ್ದೇ ಬೀಳುತ್ತದೆ. ಆ ಮನೆಯವರ ನಡುವಳಿಕೆಗಳು ನಿಮಗೆ ಹೊಂದುವಂತೆ ಇದೆಯೇ ಎಂದು ನೋಡಿ ಇಲ್ಲ ಅಂದರೆ ಅಂತವರ ಜೊತೆ ಬಾಳ್ವೆ ಮಾಡುವುದು ನಿಮಗೆ ಕಷ್ಟವಾಗಬಹುದು.
ವರ್ತನೆಯಲ್ಲಿ ಬದಲಾವಣೆ
ನಿಮ್ಮ ಬಾಳ ಸಂಗಾತಿಯನ್ನು ಮೆಚ್ಚಿ ಮದುವೆಗೆ ಓಕೆ ಎಂದಿರುತ್ತೀರಿ. ಆದರೆ ಅವನು/ ಅವಳಲ್ಲಿ ಇದ್ದಕ್ಕಿದ್ದಂತೆ ಬದಲಾವಣೆ ಕಂಡು ಬಂದರೆ ಅದರ ಕಾರಣ ತಿಳಿದುಕೊಳ್ಳುವುದು ಒಳ್ಳೆಯದು.
ಮನದ ಮಾತು ಕೇಳಿ
ಮದುವೆ ಅನ್ನುವ ವಿಷಯದಲ್ಲಿ ಇತರರ ಮಾತು ಕೇಳುವ ಬದಲು ನಿಮ್ಮ ಮನದ ಮಾತು ಕೇಳಿ. ತಪ್ಪಾದ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಜೀವನ ಪೂರ್ತಿ ನೀವೇ ಕಷ್ಟ ಪಡಬೇಕು. ಆದ್ದರಿಂದ ನಿಮ್ಮ ಬಾಳ ಸಂಗಾತಿಯ ಆಯ್ಕೆ ವಿಷಯದಲ್ಲಿ ಎಚ್ಚರವಾಗಿರಿ.



Click it and Unblock the Notifications











