Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ವ್ಯಕ್ತಿ ಅನೈತಿಕ ಸಂಬಂಧದಲ್ಲಿ ಬೀಳಲು ಕಾರಣವೇನು?
ಅನೈತಿಕ ಸಂಬಂಧದಿಮದ ನಮ್ಮ ಮಾನ ಮರ್ಯಾದೆ ನಷ್ಟವಾಗುತ್ತದೆ, ನಮ್ಮನ್ನು ಸಮಾಜ ನೋಡುವ ದೃಷ್ಟಿಕೋನ ಬೇರೆ ರೀತಿಯಾಗುತ್ತದೆ, ಮನೆಯವರಿಂದ ಗೌರವ ಸಿಗುವುದಿಲ್ಲ ಈ ಎಲ್ಲಾ ಅಂಶಗಳು ಗೊತ್ತಿದ್ದೂ ಅನೈತಿಕ ಸಂಬಂಧದಲ್ಲಿ ಬೀಳುತ್ತಾರೆ.
ಅನೈತಿಕ ಸಂಬಂಧದಲ್ಲಿರುವವರು ಯಾರೂ ಹದಿ ಹರೆಯದವರಾಗಿರುವುದಿಲ್ಲ. ಹುಚ್ಚು ಪ್ರೇಮದ ವಯಸ್ಸೂ ಆಗಿರುವುದಿಲ್ಲ. ಹದಿಹರೆಯದವರಿಗಾದರೆ ಸರಿ, ತಪ್ಪುಗಳ ಬಗ್ಗೆ ತಿಳಿವಳಿಕೆ ಕಮ್ಮಿ ಇರುತ್ತವೆ. ಆದರೆ ಅನೈತಿಕ ಸಂಬಂಧದಲ್ಲಿ ಬೀಳುವವರು ಮದುವೆಯಾಗಿರುತ್ತಾರೆ, ಕೆಲವರಿಗಂತೂ ಮಕ್ಕಳು ದೊಡ್ಡವರಾಗಿರುತ್ತಾರೆ. ಆದರೂ ತಪ್ಪಾದ ದಾರಿ ಹಿಡಿದಿರುತ್ತಾರೆ. ಅದು ಗೊತ್ತಾದ ತಕ್ಷಣ ಮನೆಯವರಿಗೆ ಅವರ ಮೇಲೆ ಇದ್ದ ಮರ್ಯಾದೆ ಕಡಿಮೆಯಾಗುತ್ತದೆ. ಕೆಲವರು ಮನೆಯಿಂದ ದೂರವಾಗುತ್ತಾರೆ ಮತ್ತೆ ಕೆಲವರನ್ನು ಮನೆಯವರು ದೂರ ಮಾಡುತ್ತಾರೆ.

ಮನೆ ಪರಿಸರ ಚೆನ್ನಾಗಿ ಇದ್ದರೆ ಯಾವ ವ್ಯಕ್ತಿಯೂ ಅಡ್ಡ ಹಾದಿ ತುಳಿಯುವುದಿಲ್ಲ ಅನ್ನುವುದು ನನ್ನ ಬಲವಾದ ನಂಬಿಕೆ. ಏಕೆಂದರೆ ಎಷ್ಟೋ ಜನರು ಮನೆಯಲ್ಲಿ ಪ್ರೀತಿ, ನೆಮ್ಮದಿ ಸಿಗದೆ ಈ ರೀತಿ ಅಡ್ಡ ಹಾದಿ ಹಿಡಿಯುತ್ತಾರೆ. ಒಂಟಿತನ, ವಿರಹ, ಕಳೆದುಕೊಳ್ಳುತ್ತೇನೆ ಎಂಬ ಭಯ, ಮನೆಯವರ ಮೇಲೆ ಸೇಡು, ಪ್ರೀತಿಯ ವ್ಯಕ್ತಿ ಮೋಸ ಮಾಡಿದಾಗ, ಬಯಸಿದ ಪ್ರೀತಿ ಸಿಕ್ಕದೇ ಹೋದಾಗ, ಸಂಗಾತಿಯ ಸಂಶಯ ಪ್ರವೃತ್ತಿ ಈ ಕಾರಣಗಳಿಂದ ವ್ಯಕ್ತಿ ಅನೈತಿಕ ಸಂಬಂಧದಲ್ಲಿ ಬೀಳುತ್ತಾನೆ/ಳೆ.
ಅವರಿಗೂ ಅವರು ಮಾಡುತ್ತಿರುವುದು ತಪ್ಪು ಎಂಬ ಅರಿವು ಇರುತ್ತದೆ. ಆದರೆ ಆ ಸಂಬಂಧದಿಂದ ಹೊರಬರಲು ಸಿದ್ಧವಿರುವುದಿಲ್ಲ. ಆದ್ದರಿಂದಲೇ ಹೇಳುವುದು ದಂತಿಗಳು ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಬಾಳಿದರೆ ಕೊನೆಯವರಿಗೂ ಇಬ್ಬರ ಸಂಬಂಧ ಚೆನ್ನಾಗಿ ಇರುತ್ತದೆ. ಯಾರೂ ತಪ್ಪು ಹಾದಿ ಹಿಡಿಯುವುದಿಲ್ಲ.
ಮತ್ತೆ ಒಂದು ಮುಖ್ಯವಾದ ವಿಷಯ. ನಿಮ್ಮ ಸಂಗಾತಿ ಮೇಲೆ ವಿನಾ ಕಾರಣ ಸಂಶಯ ಪಡಬೇಡಿ. ನಿಮ್ಮ ಸಂಶಯ ಬುದ್ಧಿ ಅವರನ್ನು ನಿಮ್ಮಿಂದ ದೂರ ಮಾಡಬಹುದು.



Click it and Unblock the Notifications
