Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ವ್ಯಕ್ತಿ ಅನೈತಿಕ ಸಂಬಂಧದಲ್ಲಿ ಬೀಳಲು ಕಾರಣವೇನು?
ಅನೈತಿಕ ಸಂಬಂಧದಿಮದ ನಮ್ಮ ಮಾನ ಮರ್ಯಾದೆ ನಷ್ಟವಾಗುತ್ತದೆ, ನಮ್ಮನ್ನು ಸಮಾಜ ನೋಡುವ ದೃಷ್ಟಿಕೋನ ಬೇರೆ ರೀತಿಯಾಗುತ್ತದೆ, ಮನೆಯವರಿಂದ ಗೌರವ ಸಿಗುವುದಿಲ್ಲ ಈ ಎಲ್ಲಾ ಅಂಶಗಳು ಗೊತ್ತಿದ್ದೂ ಅನೈತಿಕ ಸಂಬಂಧದಲ್ಲಿ ಬೀಳುತ್ತಾರೆ.
ಅನೈತಿಕ ಸಂಬಂಧದಲ್ಲಿರುವವರು ಯಾರೂ ಹದಿ ಹರೆಯದವರಾಗಿರುವುದಿಲ್ಲ. ಹುಚ್ಚು ಪ್ರೇಮದ ವಯಸ್ಸೂ ಆಗಿರುವುದಿಲ್ಲ. ಹದಿಹರೆಯದವರಿಗಾದರೆ ಸರಿ, ತಪ್ಪುಗಳ ಬಗ್ಗೆ ತಿಳಿವಳಿಕೆ ಕಮ್ಮಿ ಇರುತ್ತವೆ. ಆದರೆ ಅನೈತಿಕ ಸಂಬಂಧದಲ್ಲಿ ಬೀಳುವವರು ಮದುವೆಯಾಗಿರುತ್ತಾರೆ, ಕೆಲವರಿಗಂತೂ ಮಕ್ಕಳು ದೊಡ್ಡವರಾಗಿರುತ್ತಾರೆ. ಆದರೂ ತಪ್ಪಾದ ದಾರಿ ಹಿಡಿದಿರುತ್ತಾರೆ. ಅದು ಗೊತ್ತಾದ ತಕ್ಷಣ ಮನೆಯವರಿಗೆ ಅವರ ಮೇಲೆ ಇದ್ದ ಮರ್ಯಾದೆ ಕಡಿಮೆಯಾಗುತ್ತದೆ. ಕೆಲವರು ಮನೆಯಿಂದ ದೂರವಾಗುತ್ತಾರೆ ಮತ್ತೆ ಕೆಲವರನ್ನು ಮನೆಯವರು ದೂರ ಮಾಡುತ್ತಾರೆ.

ಮನೆ ಪರಿಸರ ಚೆನ್ನಾಗಿ ಇದ್ದರೆ ಯಾವ ವ್ಯಕ್ತಿಯೂ ಅಡ್ಡ ಹಾದಿ ತುಳಿಯುವುದಿಲ್ಲ ಅನ್ನುವುದು ನನ್ನ ಬಲವಾದ ನಂಬಿಕೆ. ಏಕೆಂದರೆ ಎಷ್ಟೋ ಜನರು ಮನೆಯಲ್ಲಿ ಪ್ರೀತಿ, ನೆಮ್ಮದಿ ಸಿಗದೆ ಈ ರೀತಿ ಅಡ್ಡ ಹಾದಿ ಹಿಡಿಯುತ್ತಾರೆ. ಒಂಟಿತನ, ವಿರಹ, ಕಳೆದುಕೊಳ್ಳುತ್ತೇನೆ ಎಂಬ ಭಯ, ಮನೆಯವರ ಮೇಲೆ ಸೇಡು, ಪ್ರೀತಿಯ ವ್ಯಕ್ತಿ ಮೋಸ ಮಾಡಿದಾಗ, ಬಯಸಿದ ಪ್ರೀತಿ ಸಿಕ್ಕದೇ ಹೋದಾಗ, ಸಂಗಾತಿಯ ಸಂಶಯ ಪ್ರವೃತ್ತಿ ಈ ಕಾರಣಗಳಿಂದ ವ್ಯಕ್ತಿ ಅನೈತಿಕ ಸಂಬಂಧದಲ್ಲಿ ಬೀಳುತ್ತಾನೆ/ಳೆ.
ಅವರಿಗೂ ಅವರು ಮಾಡುತ್ತಿರುವುದು ತಪ್ಪು ಎಂಬ ಅರಿವು ಇರುತ್ತದೆ. ಆದರೆ ಆ ಸಂಬಂಧದಿಂದ ಹೊರಬರಲು ಸಿದ್ಧವಿರುವುದಿಲ್ಲ. ಆದ್ದರಿಂದಲೇ ಹೇಳುವುದು ದಂತಿಗಳು ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಬಾಳಿದರೆ ಕೊನೆಯವರಿಗೂ ಇಬ್ಬರ ಸಂಬಂಧ ಚೆನ್ನಾಗಿ ಇರುತ್ತದೆ. ಯಾರೂ ತಪ್ಪು ಹಾದಿ ಹಿಡಿಯುವುದಿಲ್ಲ.
ಮತ್ತೆ ಒಂದು ಮುಖ್ಯವಾದ ವಿಷಯ. ನಿಮ್ಮ ಸಂಗಾತಿ ಮೇಲೆ ವಿನಾ ಕಾರಣ ಸಂಶಯ ಪಡಬೇಡಿ. ನಿಮ್ಮ ಸಂಶಯ ಬುದ್ಧಿ ಅವರನ್ನು ನಿಮ್ಮಿಂದ ದೂರ ಮಾಡಬಹುದು.



Click it and Unblock the Notifications