Latest Updates
-
ಮುದ್ದೆ, ಗಂಜಿ ಬಿಡಿ.. ರಾಗಿ ಬಳಸಿ ಈ ರೆಸಿಪಿಗಳನ್ನು ಮಾಡಿ! ಆರೋಗ್ಯಕ್ಕೆ ಸೂಪರ್, ರುಚಿಯೂ ಮಿಸ್ ಆಗಲ್ಲ -
ಯುಗಾದಿ ಸ್ಪೆಷಲ್: ವಿಭಿನ್ನ ರುಚಿ ನೀಡುವ ತೊಗರಿ ಬೇಳೆ ಹೋಳಿಗೆ! -
ಗುರು ಮನೆಯಲ್ಲಿ ಸೂರ್ಯನ ಅಬ್ಬರ! ವೃಷಭ ಸೇರಿ ಈ ರಾಶಿಗಳಿಗೆ ಶುಭ ಫಲ.. ಯಾರಿಗೆ ಲಾಭ? ಯಾರಿಗೆ ನಷ್ಟ? -
ಯುಗಾದಿ ಯಾವಾಗ ಆಚರಿಸುತ್ತಾರೆ? ಇಲ್ಲಿದೆ ದಿನಾಂಕ, ಶುಭ ಮುಹೂರ್ತ, ಸಮಯದ ಕುರಿತ ಸಂಪೂರ್ಣ ಮಾಹಿತಿ -
10 ರೂಪಾಯಿಯಲ್ಲಿ ಬಾಯಿ ಚಪ್ಪರಿಸಿ ಸವಿಯು ಚಟ್ನಿ ಮಾಡಿ! ಇಲ್ಲಿದೆ ಹೊಸ ಬಗೆಯ ರೆಸಿಪಿ! -
ಈ ರೀತಿ ಟೊಮೆಟೊ ಸೆಟ್ ದೋಸೆ! ಹಿಟ್ಟು ರುಬ್ಬುವ ಅವಶ್ಯಕತೆಯಿಲ್ಲ.. ಬ್ಯಾಚುಲರ್ಗಳಿಗೆ ಬೆಸ್ಟ್, ತೂಕ ಇಳಿಕೆಗೆ ಸೂಪರ್! -
ಸಂಬಂಧಿಕರ ಮಾತುಗಳನ್ನು ನಿರ್ಲಕ್ಷಿಸಬೇಡಿ! ಸ್ನೇಹಿತರಿಂದ ಪೂರ್ಣ ಸಹಕಾರ -
March 16 Horoscope: ಹಣಕಾಸು ವಿಚಾರವಾಗಿ ಎಚ್ಚರದಿಂದ ವ್ಯವಹರಿಸಿ! -
ಯುಗಾದಿ ಹಬ್ಬದ ಸಿಹಿಗೆ ಮಾಡಿ ರವೆ ಉಂಡೆ: ಇಲ್ಲಿದೆ ಸುಲಭದ ವಿಧಾನ -
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ!
ದಾಂಪತ್ಯದಲ್ಲಿ ಬಿರುಕು ಉಂಟಾದರೆ ಏನಾಗುತ್ತದೆ?

ಯಾವುದೇ ಕಾರಣಕ್ಕೆ ಒಬ್ಬರ ಮೇಲೆ ಬಬ್ಬರು ನಂಬಿಕೆಯನ್ನು ಕಳೆದುಕೊಂಡರೆ, ನಂಬಿದ್ರೋಹ ವೆಸಗಿದರೆ ಆ ಸಂಬಂಧದಲ್ಲಿ ಬಿರುಕು ಮೂಡುವುದು ಖಂಡಿತ. ಈ ನಂಬಿಕೆಯನ್ನು ಕಳೆದುಕೊಳ್ಳುವಂತಹ ವಿಷಯಗಳು ಹಲವಾರು. ಒಬ್ಬರಿಗೊಬ್ಬರು ಸುಳ್ಳು ಹೇಳುವುದು, ಮೋಸಮಾಡುವುದು ಹೀಗೆ. ಅದರಲ್ಲೂ ಎಲ್ಲದಕ್ಕಿಂತ ಮುಖ್ಯವಾಗಿ ಅನೈತಿಕ ಸಂಬಂಧವನ್ನು ಹೊಂದಿರುವುದು. ಚೆನ್ನಾಗಿರುವ ಸಂಸಾರ ಈ ಒಂದು ಕಾರಣಕ್ಕೆ ಒಡೆದು ಹೋಗಿರುವುದಕ್ಕೆ ಸಾವಿರಾರು ಉದಾಹರಣೆಗಳಿವೆ. ಬೇರೆಯವರೊಂದಿಗೆ ತನ್ನ ಸಂಗಾತಿಗೆ ಗೊತ್ತಿಲ್ಲದಂತೆ ಅನೈತಿಕ ಸಂಬಂಧವನ್ನು ಇಟ್ಟುಕೊಳ್ಳುವುದರಿಂದ ಕೇವಲ ಗಂಡ ಹೆಂಡತಿಗೆ ಮಾತ್ರವಲ್ಲದೇ ಅವರಿಗೆ ಸಂಬಂಧಪಟ್ಟ ಎಲ್ಲಾ ಜನರ ಮೇಲೂ ಅಪಾರವಾದ ಕೆಟ್ಟ ಪರಿಣಾಮ ಬೀರುತ್ತದೆ.
ಗಂಡ ಯಾ ಹೆಂಡತಿ ಯಾರೇ ಆಗಿರಲಿ ತಮ್ಮ ಸಂಗಾತಿಯ ಅರಿವಿಗೆ ಬಾರದಂತೆ ಅವರು ತಮ್ಮ ಮೇಲಿಟ್ಟ ನಂಬಿಕೆಯನ್ನು ಮುರಿದು ಬೇರೆಯವರೊಂದಿಗೆ ಕೆಟ್ಟ ಸಂಬಂಧವನ್ನು ಇಟ್ಟುಕೊಳ್ಳುವುದು ತರವಲ್ಲ. ಏಕೆಂದರೆ ಇದರಿಂದಾಗಿ ಅವನು/ ಅವಳ ತಂದೆ ತಾಯಿಯ ಮೇಲೆ ಪರಿಣಾಮ ಬೀರುತ್ತದೆ. ಮಗಳು ಅಥವಾ ಮಗನ ಮದುವೆ ಮಾಡಿದ ಮೇಲೆ ನಿಮ್ಮ ಮಕ್ಕಳು ಹೀಗೆ ಬೇರೆಯವರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬ ಮಾತು ಅವರ ಕಿವಿಗೆ ಬಿದ್ದರೆ ಅವರು ಹೇಗೆ ತಾನೇ ಸಹಿಸಿಯಾರು ? ಅಷ್ಟು ವರ್ಷದಿಂದ ಉಳಿಸಿಕೊಂಡ ಬಂದ ಮನೆಯ ಘನತೆ ಗೌರವ ಕೇವಲ ಇದೊಂದು ಕಾರಣಕ್ಕೆ ನೀರಿನಲ್ಲಿ ಕೊಚ್ಚಿಕೊಂಡು ಹೋದಂತಾಗುತ್ತದೆ.
ಇದುವರೆಗೆ ಸಮಾಜದಲ್ಲಿ ಒಳ್ಳೆಯ ಹೆಸರನ್ನು ಸಂಪಾದಿಸಿದ್ದ ತಂದೆ ತಾಯಿ ತನ್ನ ಮಕ್ಕಳ ಅನೈತಿಕ ಸಂಬಂಧದಿಂದಾಗಿ ತಲೆ ಎತ್ತಿ ನಡೆಯದಂತಹ ಪರಿಸ್ಥಿತಿ ನಿರ್ಮಾಣವಾಗಿಬಿಡುತ್ತದೆ. ಈ ಅಚಾತುರ್ಯಕ್ಕೆ ಎಡೆಮಾಡಿ ಕೊಡಬೇಕೆ ? ತಮ್ಮ ಅನೈತಿಕ ವರ್ತನೆಯಿಂದಾಗಿ ಹೆತ್ತು ಹೊತ್ತು ಸಾಕಿರುವ ಪಾಲಕರ ಮರ್ಯಾದೆಗೆ ಮಸಿ ಬಳಿಯುವುದು ಯಾವ ನ್ಯಾಯ ?
ಇನ್ನು ಇಂತಹ ತಪ್ಪನ್ನು ಮಾಡುವ ಗಂಡ / ಹೆಂಡತಿಯ ಮಕ್ಕಳ ಬಗ್ಗೆ ಒಮ್ಮೆ ಯೋಚಿಸಿ. ತನ್ನ ತಂದೆ ಅಥವಾ ತಾಯಿ ಬೇರೆಯವರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬ ವಿಷಯ ಅವರ ಗಮನಕ್ಕೆ ಬಂದರೆ ಅವರ ಬಗ್ಗೆ ಸಹಪಾಠಿಗಳಲ್ಲಿ, ಗುರುಗಳಲ್ಲಿ ಒಳ್ಳೆಯ ಭಾವನೆ ಮೂಡಲು ಸಾಧ್ಯವೇ ? ಸಮಾಜ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಲು ಪ್ರಾರಂಭಿಸುತ್ತದೆ. ಇದರಿಂದ ಅವರ ಮನಸ್ಸಿನ ಮೇಲೆ ಆಫಾತಕಾರಿ ಪರಿಣಾಮ ಬೀರುತ್ತದೆ. ಅವರ ಓದಿನ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ತಂದೆ ತಾಯಿಯನ್ನು ಅತ್ಯಂತ ಹೆಚ್ಚಾಗಿ ಪ್ರೀತಿಸುವ ಗೌರವಿಸುವ ಮಗು ಇವೆಲ್ಲವನ್ನೂ ಕಳೆದುಕೊಂಡು ಮಾತನಾಡುವುದನ್ನೇ ನಿಲ್ಲಿಸಬಹುದು. ಅದಕ್ಕಿಂತ ಹೆಚ್ಚಾಗಿ ಆ ಮಗುವಿಗೆ ಸೂಕ್ತ ತಂದೆ ಯಾ ತಾಯಿ ಎನಿಸಿಕೊಳ್ಳುವ ಅರ್ಹತೆಯನ್ನೇ ಕಳೆದುಕೊಳ್ಳಬೇಕಾಗಬಹುದು !
ಈ ಎಲ್ಲಾ ಪರಿಣಾಮಗಳನ್ನು ಹೊರತು ಪಡಿಸಿ ಅನೈತಿಕ ಸಂಬಂಧಗಳನ್ನು ಇಟ್ಟುಕೊಂಡ ವ್ಯಕ್ತಿ ತನ್ನೆಲ್ಲ ಗೌರವಗಳನ್ನೂ ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ. ತನ್ನ ಸಂಗಾತಿಯ ದೃಷ್ಟಿಯಲ್ಲಿ ಅತ್ಯಂತ ಚಿಕ್ಕವರಾಗಬೇಕಾಗುತ್ತದೆ. ಅವರ ಪ್ರೀತಿ ವಿಶ್ವಾಸದಿಂದ ವಂಚಿತರಾಗಬೇಕಾಗುತ್ತದೆ. ಅಲ್ಲದೇ ನಾಲ್ಕು ಜನರ ಎದುರಿಗೆ ಬಂದು ಮಾತನಾಡುವ ಅವರನ್ನು ಎದುರಿಸುವ ಅವಕಾಶವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಉತ್ತಮ ದಾಂಪತ್ಯ ಜೀವನವೂ ಅವರ ಪಾಲಿಗೆ ಕಹಿ ಸತ್ಯವಾಗುವುದರಲ್ಲಿ ಎರಡು ಮಾತಿಲ್ಲ !
ದಂಪತಿಗಳಲ್ಲಿ ಯಾರೇ ಆಗಿರಲಿ, ತನ್ನ ಸಂಬಂಧವನ್ನು ಜೀವನದೂದ್ದಕ್ಕೂ ಯಾವುದೇ ಕಳಂಕಗಳಿಲ್ಲದೇ, ದೋಷಗಳಿಲ್ಲಲ್ಲದಂತೆ ನೋಡಿಕೊಂಡರೆ ಮಾತ್ರ ದಾಂಪತ್ಯ ಜೀವನವೂ ಅತ್ಯಂತ ವರ್ಣಮಯವಾಗಿರುತ್ತದೆ. ಇಲ್ಲವಾದಲ್ಲಿ ಕೇವಲ ಅನೈತಿಕ ಸಂಬಂಧಗಳನ್ನು ನೆಚ್ಚಿಕೊಂಡಿರಬೇಕೆ ಹೊರತು ಬೇರೆ ಯಾವುದೇ ಗೌರವ ಪ್ರೀತಿಯೂ ಅವರಿಗೆ ದೊರೆಯುವುದಿಲ್ಲ. ಆದ್ದರಿಂದ ಯಾವುದೇ ಬೇರೆ ಸಂಬಂಧಗಳಲ್ಲಿ ಆಸಕ್ತಿ ತೋರಿಸದೆ ತನ್ನ ಸಂಗಾತಿಗಳೊಂದಿಗೆ ಸರಿಯಾದ ದಾಂಪತ್ಯವನ್ನು ಮಾಡುವುದೇ ಶ್ರೇಷ್ಠ !



Click it and Unblock the Notifications











