Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಪ್ರೀತಿ ಸೋತಾಗ ಕೊರಗಬೇಡಿ, ಇವರತ್ತ ಕಣ್ಣಾಯಿಸಿ
ಪರಸ್ಪರ ಒಬ್ಬರಿಗೊಬ್ಬರು ತುಂಬಾ ಇಷ್ಟಪಡುತ್ತಿರುತ್ತಾರೆ. ಯಾವುದೋ ಒಂದು ಕಾರಣಕ್ಕೆ ಇಬ್ಬರು ದೂರವಾಗಿ ಬಿಡುತ್ತಾರೆ. ಹೀಗೆ ದೂರವಾದ ಪ್ರೇಮಿಗಳಿಗೆ ದೂರವಾಗಲು ಯಾವುದೋ ಒಂದು ಕಾರಣವಿರುತ್ತದೆ, ಅವನ/ಅವಳ ಗುಣ ಇತ್ತೀಚಿಗೆ ಇಷ್ಟವಾಗುತ್ತಿಲ್ಲ, ಸಂಶಯ ಪಡುತ್ತಾಳೆ/ನೆ, ಮನೆಯವರಿಗೋಸ್ಕರ ದೂರವಾದೆವು, ಪ್ರೀತಿಯಲ್ಲಿ ಮೋಸ ಉಂಟಾಯಿತು ಹೀಗೆ ನೂರೆಂಟು ಕಾರಣಗಳಿರುತ್ತವೆ.
ದೂರವಾಗುವಾಗ ಈ ಸಂಬಂಧ ಬೇಡ ಎಂಬ ಮನಸ್ಥಿತಿ ಇರುತ್ತದೆ, ನಂತರ ಅದರ ಬಗ್ಗೆ ಯೋಚಿಸಿ ತುಂಬಾ ವೇದನೆ ಪಡುತ್ತಾರೆ. ಆ ಸಂದರ್ಭದಲ್ಲಿ ಜೀವನ ನರಕ ಅನಿಸಿಬಿಡುತ್ತದೆ. ಜನರನ್ನು ಫೇಸ್ ಮಾಡುವುದು ಕಷ್ಟವಾಗುತ್ತದೆ. ಯಾರಾದರೂ ಹಳೆಯ ಸಂಬಂಧದ ಬಗ್ಗೆ ಮಾತೆತ್ತಿದರೆ ತುಂಬಾ ನೋವಾಗುತ್ತದೆ. ಆ ಸಂದರ್ಭದಲ್ಲಿ ಮಾನಸಿಕ ಸಾಂತ್ವನ ಹೇಳಲು ಜನ ಬೇಕಾಗಿರುತ್ತದೆ.
ಪ್ರೀತಿಯಲ್ಲಿ ಸೋತು ಹೋದಾಗ ರೂಂನಲ್ಲಿ ಕುಳಿತು ಕೊರಗುವ ಬದಲು ಜನರ ಜೊತೆ ಬೆರೆಯಬೇಕು. ಅದರಲ್ಲೂ ಈ ಕೆಳಗಿನ ವ್ಯಕ್ತಿಗಳ ಜೊತೆ ಬೆರೆಯಿರಿ, ಮನಸ್ಸಿನ ನೋವು ಮರೆಯುವುದು, ನೆಮ್ಮದಿ ದೊರೆಯುವುದು.

ಸ್ನೇಹಿತರು:
ಈ ಸಂದರ್ಭದಲ್ಲಿ ಸ್ನೇಹಿತರ ಮಾರ್ಗದರ್ಶನ ಹಾಗೂ ಹಿತನುಡಿ ತುಂಬಾ ಬೇಕಾಗುತ್ತದೆ. ಸ್ನೇಹಿತರ ಜೊತೆ ಸಮಯ ಕಳೆದರೆ ಹಳೆಯ ಕಹಿ ನೆನಪುಗಳನ್ನು ಮರೆಯಲು ಸಾಧ್ಯವಾಗಿ, ಹೊಸ ಬದುಕಿನತ್ತು ಉತ್ಸಾಹದಿಂದ ಹೆಜ್ಜೆ ಹಾಕಬಹುದು.

ಅಪರಿಚಿತರು:
ಪ್ರೀತಿಸಿದ ವ್ಯಕ್ತಿಯಿಂದ ತುಂಬಾ ಬೇಜಾರಾದಾಗ ಅಪರಿಚಿತರ ಸ್ನೇಹ ತುಂಬಾ ಹಿತ ಅನಿಸುತ್ತದೆ. ಆದ್ದರಿಂದಲೇ ಕೆಲವರು ತಮ್ಮ ಬ್ರೇಕ್ ಅಪ್ ಸ್ಟೋರಿಗಳನ್ನು ರೇಡಿಯೋ ಜಾಕಿಗಳ ಜೊತೆ ಹೇಳಿಕೊಂಡು ಸಮಧಾನ ಪಟ್ಟುಕೊಳ್ಳುತ್ತಾರೆ.

ನಿಮ್ಮ ಮಾಜಿಯ ಶತ್ರು:
ಮಾಜಿ ಪ್ರೇಮಿಯನ್ನು ದ್ವೇಷಿಸುತ್ತಿರುವವರು ತುಂಬಾ ಆಪ್ತರಾಗಿ ಬಿಡುತ್ತಾರೆ. ಅವರು ನಿಮ್ಮ ಮಾಜಿಯನ್ನು ಬೈಯ್ಯುವಾಗ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಕ್ಕಂತೆ ಭಾಸವಾಗುವುದು.

ಕುಟುಂಬ:
ತನ್ನ ಬಾಳಸಂಗಾತಿಯಿಂದ ಅಥವಾ ಪ್ರೇಮಿಯಿಂದ ದೂರವಾಗಿ ಮಾನಸಿಕ ನೋವು ಅನುಭವಿಸುತ್ತಿರುವಾಗ ಕುಟುಂಬದವರು ಅವರಿಗೆ ಸಾಂತ್ವನ ಹೇಳಿದರೆ ಮನಸ್ಸಿಗೆ ಸ್ವಲ್ಪ ಧೈರ್ಯ ಬರುತ್ತದೆ.

ಹೊಸ ಬದುಕು:
ನಂಬಿದ ವ್ಯಕ್ತಿಯಿಂದ ನೋವಾಗಿ ದೂರವಾದರೆ ಮನಸ್ಸು ಹೊಸ ಸಂಗಾತಿಯನ್ನು ಬಯಸುತ್ತದೆ, ಹಾಗೂ ಅದು ನಿಮ್ಮ ಮನಸ್ಸಿಗ್ಎ ನೆಮ್ಮದಿ ಸಿಗುವ ವ್ಯಕ್ತಿಯ ಹುಡುಕಾಟದಲ್ಲಿರುತ್ತದೆ. ಆ ಸಂದರ್ಭದಲ್ಲಿ ಯಾರಾದರೂ ನಮ್ಮ ಬಗ್ಗೆ ಅಕ್ಕರೆ ತೋರಿಸಿದರೆ ನಮಗೆ ಅರಿವಿಲ್ಲದಂತೆಯೆ ಮನಸ್ಸು ಅವನನ್ನು/ ಅವಳನ್ನು ಪ್ರೀತಿಸಲಾರಂಭಿಸುತ್ತದೆ.



Click it and Unblock the Notifications