Latest Updates
-
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ!
ಪ್ರೀತಿ ಸೋತಾಗ ಕೊರಗಬೇಡಿ, ಇವರತ್ತ ಕಣ್ಣಾಯಿಸಿ
ಪರಸ್ಪರ ಒಬ್ಬರಿಗೊಬ್ಬರು ತುಂಬಾ ಇಷ್ಟಪಡುತ್ತಿರುತ್ತಾರೆ. ಯಾವುದೋ ಒಂದು ಕಾರಣಕ್ಕೆ ಇಬ್ಬರು ದೂರವಾಗಿ ಬಿಡುತ್ತಾರೆ. ಹೀಗೆ ದೂರವಾದ ಪ್ರೇಮಿಗಳಿಗೆ ದೂರವಾಗಲು ಯಾವುದೋ ಒಂದು ಕಾರಣವಿರುತ್ತದೆ, ಅವನ/ಅವಳ ಗುಣ ಇತ್ತೀಚಿಗೆ ಇಷ್ಟವಾಗುತ್ತಿಲ್ಲ, ಸಂಶಯ ಪಡುತ್ತಾಳೆ/ನೆ, ಮನೆಯವರಿಗೋಸ್ಕರ ದೂರವಾದೆವು, ಪ್ರೀತಿಯಲ್ಲಿ ಮೋಸ ಉಂಟಾಯಿತು ಹೀಗೆ ನೂರೆಂಟು ಕಾರಣಗಳಿರುತ್ತವೆ.
ದೂರವಾಗುವಾಗ ಈ ಸಂಬಂಧ ಬೇಡ ಎಂಬ ಮನಸ್ಥಿತಿ ಇರುತ್ತದೆ, ನಂತರ ಅದರ ಬಗ್ಗೆ ಯೋಚಿಸಿ ತುಂಬಾ ವೇದನೆ ಪಡುತ್ತಾರೆ. ಆ ಸಂದರ್ಭದಲ್ಲಿ ಜೀವನ ನರಕ ಅನಿಸಿಬಿಡುತ್ತದೆ. ಜನರನ್ನು ಫೇಸ್ ಮಾಡುವುದು ಕಷ್ಟವಾಗುತ್ತದೆ. ಯಾರಾದರೂ ಹಳೆಯ ಸಂಬಂಧದ ಬಗ್ಗೆ ಮಾತೆತ್ತಿದರೆ ತುಂಬಾ ನೋವಾಗುತ್ತದೆ. ಆ ಸಂದರ್ಭದಲ್ಲಿ ಮಾನಸಿಕ ಸಾಂತ್ವನ ಹೇಳಲು ಜನ ಬೇಕಾಗಿರುತ್ತದೆ.
ಪ್ರೀತಿಯಲ್ಲಿ ಸೋತು ಹೋದಾಗ ರೂಂನಲ್ಲಿ ಕುಳಿತು ಕೊರಗುವ ಬದಲು ಜನರ ಜೊತೆ ಬೆರೆಯಬೇಕು. ಅದರಲ್ಲೂ ಈ ಕೆಳಗಿನ ವ್ಯಕ್ತಿಗಳ ಜೊತೆ ಬೆರೆಯಿರಿ, ಮನಸ್ಸಿನ ನೋವು ಮರೆಯುವುದು, ನೆಮ್ಮದಿ ದೊರೆಯುವುದು.

ಸ್ನೇಹಿತರು:
ಈ ಸಂದರ್ಭದಲ್ಲಿ ಸ್ನೇಹಿತರ ಮಾರ್ಗದರ್ಶನ ಹಾಗೂ ಹಿತನುಡಿ ತುಂಬಾ ಬೇಕಾಗುತ್ತದೆ. ಸ್ನೇಹಿತರ ಜೊತೆ ಸಮಯ ಕಳೆದರೆ ಹಳೆಯ ಕಹಿ ನೆನಪುಗಳನ್ನು ಮರೆಯಲು ಸಾಧ್ಯವಾಗಿ, ಹೊಸ ಬದುಕಿನತ್ತು ಉತ್ಸಾಹದಿಂದ ಹೆಜ್ಜೆ ಹಾಕಬಹುದು.

ಅಪರಿಚಿತರು:
ಪ್ರೀತಿಸಿದ ವ್ಯಕ್ತಿಯಿಂದ ತುಂಬಾ ಬೇಜಾರಾದಾಗ ಅಪರಿಚಿತರ ಸ್ನೇಹ ತುಂಬಾ ಹಿತ ಅನಿಸುತ್ತದೆ. ಆದ್ದರಿಂದಲೇ ಕೆಲವರು ತಮ್ಮ ಬ್ರೇಕ್ ಅಪ್ ಸ್ಟೋರಿಗಳನ್ನು ರೇಡಿಯೋ ಜಾಕಿಗಳ ಜೊತೆ ಹೇಳಿಕೊಂಡು ಸಮಧಾನ ಪಟ್ಟುಕೊಳ್ಳುತ್ತಾರೆ.

ನಿಮ್ಮ ಮಾಜಿಯ ಶತ್ರು:
ಮಾಜಿ ಪ್ರೇಮಿಯನ್ನು ದ್ವೇಷಿಸುತ್ತಿರುವವರು ತುಂಬಾ ಆಪ್ತರಾಗಿ ಬಿಡುತ್ತಾರೆ. ಅವರು ನಿಮ್ಮ ಮಾಜಿಯನ್ನು ಬೈಯ್ಯುವಾಗ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಕ್ಕಂತೆ ಭಾಸವಾಗುವುದು.

ಕುಟುಂಬ:
ತನ್ನ ಬಾಳಸಂಗಾತಿಯಿಂದ ಅಥವಾ ಪ್ರೇಮಿಯಿಂದ ದೂರವಾಗಿ ಮಾನಸಿಕ ನೋವು ಅನುಭವಿಸುತ್ತಿರುವಾಗ ಕುಟುಂಬದವರು ಅವರಿಗೆ ಸಾಂತ್ವನ ಹೇಳಿದರೆ ಮನಸ್ಸಿಗೆ ಸ್ವಲ್ಪ ಧೈರ್ಯ ಬರುತ್ತದೆ.

ಹೊಸ ಬದುಕು:
ನಂಬಿದ ವ್ಯಕ್ತಿಯಿಂದ ನೋವಾಗಿ ದೂರವಾದರೆ ಮನಸ್ಸು ಹೊಸ ಸಂಗಾತಿಯನ್ನು ಬಯಸುತ್ತದೆ, ಹಾಗೂ ಅದು ನಿಮ್ಮ ಮನಸ್ಸಿಗ್ಎ ನೆಮ್ಮದಿ ಸಿಗುವ ವ್ಯಕ್ತಿಯ ಹುಡುಕಾಟದಲ್ಲಿರುತ್ತದೆ. ಆ ಸಂದರ್ಭದಲ್ಲಿ ಯಾರಾದರೂ ನಮ್ಮ ಬಗ್ಗೆ ಅಕ್ಕರೆ ತೋರಿಸಿದರೆ ನಮಗೆ ಅರಿವಿಲ್ಲದಂತೆಯೆ ಮನಸ್ಸು ಅವನನ್ನು/ ಅವಳನ್ನು ಪ್ರೀತಿಸಲಾರಂಭಿಸುತ್ತದೆ.



Click it and Unblock the Notifications