Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಪ್ರೀತಿ ಸೋತಾಗ ಕೊರಗಬೇಡಿ, ಇವರತ್ತ ಕಣ್ಣಾಯಿಸಿ
ಪರಸ್ಪರ ಒಬ್ಬರಿಗೊಬ್ಬರು ತುಂಬಾ ಇಷ್ಟಪಡುತ್ತಿರುತ್ತಾರೆ. ಯಾವುದೋ ಒಂದು ಕಾರಣಕ್ಕೆ ಇಬ್ಬರು ದೂರವಾಗಿ ಬಿಡುತ್ತಾರೆ. ಹೀಗೆ ದೂರವಾದ ಪ್ರೇಮಿಗಳಿಗೆ ದೂರವಾಗಲು ಯಾವುದೋ ಒಂದು ಕಾರಣವಿರುತ್ತದೆ, ಅವನ/ಅವಳ ಗುಣ ಇತ್ತೀಚಿಗೆ ಇಷ್ಟವಾಗುತ್ತಿಲ್ಲ, ಸಂಶಯ ಪಡುತ್ತಾಳೆ/ನೆ, ಮನೆಯವರಿಗೋಸ್ಕರ ದೂರವಾದೆವು, ಪ್ರೀತಿಯಲ್ಲಿ ಮೋಸ ಉಂಟಾಯಿತು ಹೀಗೆ ನೂರೆಂಟು ಕಾರಣಗಳಿರುತ್ತವೆ.
ದೂರವಾಗುವಾಗ ಈ ಸಂಬಂಧ ಬೇಡ ಎಂಬ ಮನಸ್ಥಿತಿ ಇರುತ್ತದೆ, ನಂತರ ಅದರ ಬಗ್ಗೆ ಯೋಚಿಸಿ ತುಂಬಾ ವೇದನೆ ಪಡುತ್ತಾರೆ. ಆ ಸಂದರ್ಭದಲ್ಲಿ ಜೀವನ ನರಕ ಅನಿಸಿಬಿಡುತ್ತದೆ. ಜನರನ್ನು ಫೇಸ್ ಮಾಡುವುದು ಕಷ್ಟವಾಗುತ್ತದೆ. ಯಾರಾದರೂ ಹಳೆಯ ಸಂಬಂಧದ ಬಗ್ಗೆ ಮಾತೆತ್ತಿದರೆ ತುಂಬಾ ನೋವಾಗುತ್ತದೆ. ಆ ಸಂದರ್ಭದಲ್ಲಿ ಮಾನಸಿಕ ಸಾಂತ್ವನ ಹೇಳಲು ಜನ ಬೇಕಾಗಿರುತ್ತದೆ.
ಪ್ರೀತಿಯಲ್ಲಿ ಸೋತು ಹೋದಾಗ ರೂಂನಲ್ಲಿ ಕುಳಿತು ಕೊರಗುವ ಬದಲು ಜನರ ಜೊತೆ ಬೆರೆಯಬೇಕು. ಅದರಲ್ಲೂ ಈ ಕೆಳಗಿನ ವ್ಯಕ್ತಿಗಳ ಜೊತೆ ಬೆರೆಯಿರಿ, ಮನಸ್ಸಿನ ನೋವು ಮರೆಯುವುದು, ನೆಮ್ಮದಿ ದೊರೆಯುವುದು.

ಸ್ನೇಹಿತರು:
ಈ ಸಂದರ್ಭದಲ್ಲಿ ಸ್ನೇಹಿತರ ಮಾರ್ಗದರ್ಶನ ಹಾಗೂ ಹಿತನುಡಿ ತುಂಬಾ ಬೇಕಾಗುತ್ತದೆ. ಸ್ನೇಹಿತರ ಜೊತೆ ಸಮಯ ಕಳೆದರೆ ಹಳೆಯ ಕಹಿ ನೆನಪುಗಳನ್ನು ಮರೆಯಲು ಸಾಧ್ಯವಾಗಿ, ಹೊಸ ಬದುಕಿನತ್ತು ಉತ್ಸಾಹದಿಂದ ಹೆಜ್ಜೆ ಹಾಕಬಹುದು.

ಅಪರಿಚಿತರು:
ಪ್ರೀತಿಸಿದ ವ್ಯಕ್ತಿಯಿಂದ ತುಂಬಾ ಬೇಜಾರಾದಾಗ ಅಪರಿಚಿತರ ಸ್ನೇಹ ತುಂಬಾ ಹಿತ ಅನಿಸುತ್ತದೆ. ಆದ್ದರಿಂದಲೇ ಕೆಲವರು ತಮ್ಮ ಬ್ರೇಕ್ ಅಪ್ ಸ್ಟೋರಿಗಳನ್ನು ರೇಡಿಯೋ ಜಾಕಿಗಳ ಜೊತೆ ಹೇಳಿಕೊಂಡು ಸಮಧಾನ ಪಟ್ಟುಕೊಳ್ಳುತ್ತಾರೆ.

ನಿಮ್ಮ ಮಾಜಿಯ ಶತ್ರು:
ಮಾಜಿ ಪ್ರೇಮಿಯನ್ನು ದ್ವೇಷಿಸುತ್ತಿರುವವರು ತುಂಬಾ ಆಪ್ತರಾಗಿ ಬಿಡುತ್ತಾರೆ. ಅವರು ನಿಮ್ಮ ಮಾಜಿಯನ್ನು ಬೈಯ್ಯುವಾಗ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಕ್ಕಂತೆ ಭಾಸವಾಗುವುದು.

ಕುಟುಂಬ:
ತನ್ನ ಬಾಳಸಂಗಾತಿಯಿಂದ ಅಥವಾ ಪ್ರೇಮಿಯಿಂದ ದೂರವಾಗಿ ಮಾನಸಿಕ ನೋವು ಅನುಭವಿಸುತ್ತಿರುವಾಗ ಕುಟುಂಬದವರು ಅವರಿಗೆ ಸಾಂತ್ವನ ಹೇಳಿದರೆ ಮನಸ್ಸಿಗೆ ಸ್ವಲ್ಪ ಧೈರ್ಯ ಬರುತ್ತದೆ.

ಹೊಸ ಬದುಕು:
ನಂಬಿದ ವ್ಯಕ್ತಿಯಿಂದ ನೋವಾಗಿ ದೂರವಾದರೆ ಮನಸ್ಸು ಹೊಸ ಸಂಗಾತಿಯನ್ನು ಬಯಸುತ್ತದೆ, ಹಾಗೂ ಅದು ನಿಮ್ಮ ಮನಸ್ಸಿಗ್ಎ ನೆಮ್ಮದಿ ಸಿಗುವ ವ್ಯಕ್ತಿಯ ಹುಡುಕಾಟದಲ್ಲಿರುತ್ತದೆ. ಆ ಸಂದರ್ಭದಲ್ಲಿ ಯಾರಾದರೂ ನಮ್ಮ ಬಗ್ಗೆ ಅಕ್ಕರೆ ತೋರಿಸಿದರೆ ನಮಗೆ ಅರಿವಿಲ್ಲದಂತೆಯೆ ಮನಸ್ಸು ಅವನನ್ನು/ ಅವಳನ್ನು ಪ್ರೀತಿಸಲಾರಂಭಿಸುತ್ತದೆ.



Click it and Unblock the Notifications