Latest Updates
-
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು
ರವಿಯ ಆಗಮನಕ್ಕಾಗಿ ಕಾದಿಹ ನೀರಜೆ

ಆದರೆ ಈ ಪ್ರೀತಿಯ ಅಲೆಗೆ ನಾ ಸಿಲುಕುವೇ ಎಂಬ ಪರಿವೇ ಇರಲಿಲ್ಲ. ನನ್ನ ಗಮನಕ್ಕೆ ಬರದೇ ನಾ ಅವನ ಪ್ರೀತಿಯ ಬಲೆಗೆ ಸಿಕ್ಕಿ ಅವನ ಅತಿಥಿಯಾದೆ. ಅವನ ಸಿಹಿ-ಮಾತು, ನನಗೇ ತೋರಿಸುವ ಅಕ್ಕರೆ, ನನ್ನ ಕಣ್ಣುಗಳಲ್ಲಿ ನೀರು ಬಂದರೆ ಅವನ ಕಣ್ಣುಗಳಲ್ಲಿ ರಕ್ತ ಬರುವ ಹಾಗೇ ದುಃಖ ಪಡುವ ಅವನ ಪುಟ್ಟ ಹೃದಯ. ಮನಸ್ಸು ಶೂನ್ಯವಾಗಿದೆ, ರವಿಯ ಆಗಮನಕ್ಕಾಗಿ ಕಾದಿಹ ನೀರಜೆಯಂತೆ, ಮೃದುನುಡಿಗಳಿಂದ ಹೃದಯದ ತಾಳ ತಪ್ಪಿಸಿದ, ಕಣ್ಣೋಟದ ಹೊಬಾಣದಿಂದ ತನುಮನ ಅರಳಿಸಿದ. ನಿನ್ನ ಕಾಣಲು ನನ್ನ ನಯನಗಳು ಅರಳಿವೆ.
ಒಂದು ದಿನ ನಿನ್ನ ದರ್ಶನವಾಗದಿದ್ದಾರೆ ದೇವರಿಗೆ ನೂರಾರು ನಮನ. ಒಮ್ಮೆ ಬಾರೋ ನನ್ನ ಮುಂದೆ . ನಾ ಏಕೆ ನಿನ್ನ ಹುಚ್ಚಿಯಂತೆ ಪ್ರೀತಿಸಿದೆ? ನಾ ಏನು ಬರೆಯಲು ಹೋದರು ನನ್ನ ಕೈಗಳು ನನ್ನ ಗಮನಕ್ಕೆ ಬರದೇ ನಿನ್ನ ಹೆಸರನ್ನೇ ಬರೆಸುತ್ತಿತ್ತು. ನಿನ್ನ ಹೆಜ್ಜೆಯ ಮೇಲೆಯ ಮೇಲೆ ಹೆಜ್ಜೆ ಇಡುವಾಗ ಬದುಕಿನ ಆಸೆಯನ್ನು ಹೆಚ್ಚಿಸುತ್ತಿತ್ತು. ಕನಸುಗಳು ನನಸಾದ ಕನಸು ಕಾಣುತ್ತಿದೆ, ಒಮ್ಮೊಮ್ಮೆ ಕೋಳಿ ಜಗಳಗಳು ನಡೆದರು ಅದರಲ್ಲಿ ಏನೋ ಒಂಥರಾ ಪ್ರೀತಿ. ಆದರೆ ನನ್ನ ಕೋಪ ನಿನಗೆ ನೋವಿಸದಿರಲಿ .
ಆದರೆ ಈಗ ನಗುವಿಲ್ಲ , ನಲಿವಿಲ್ಲ ಬರೀ ನೋವು, ಬರೀ ಸೋಲಿನ ಕಾವು. ಕಂಬನಿ ಧಾರೆಯ ಮುತ್ತು. ನಾ ಮಾಡಿದ ಯಾವ ತಪ್ಪಿಗಾಗಿ ಈ ಕಠಿಣ ಶಿಕ್ಷೆ ನಾ ಕಾಣೇ , ನನ್ನಿಂದ ಮೌನವಾಗಿ ದೂರವಾದೆ . ಆದರೆ ಈ ಹೃದಯ ನಿನಗಾಗಿ ಬಿಕ್ಕಿ-ಬಿಕ್ಕಿ ಆಳುವುದು ಕಾಣದೇ ಹೋಯಿತೇ? ನಿನ್ನ ಮನಸ್ಸು ಕಲ್ಲಾಗಿ ಹೋಯಿತೇ? ನಿನ್ನ ನೆನಪೇ ಕಾಡುತ್ತಿರುವುದು ನನಗೆ. ನೀ ಸುಮ್ಮನೆ ಕುಳಿತರೇ ನಾ ಅಳುವೆ ಇಲ್ಲಿ. ಜೀವದ ಆಸೆಯೇ ಇಲ್ಲ. ನಿನ್ನ ಹುಡುಕಿದೆ ಎಲ್ಲ ಕಡೇ . ನಿನ್ನ ಸುಳಿವೇ ಇಲ್ಲ.
ನೆನಪಿನಾಳದಲ್ಲಿ ಪ್ರೀತಿಯ ನೆಲೆ, ಹಾತೊರೆಯಿತು ಕನಸು , ನೆನೆದು ಬತ್ತಿ ಸೊರಗಿತು ಮನ. ಬೆಳಕು ಕೂಡ ಕತ್ತಲಾಯಿತೆಂದು ತಿಳಿದೇ . ನನ್ನ ಪ್ರೀತಿಯು ಈ ಬೆಳಕಿನ ಹಾಗೇ ಮಾಯವಾಯಿತೆಂದು ತಿಳಿದು . ಪ್ರೀತಿ ಇಲ್ಲದ ಮೇಲೆ ಬೇಡದ ಜೀವ...



Click it and Unblock the Notifications











