Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
ರವಿಯ ಆಗಮನಕ್ಕಾಗಿ ಕಾದಿಹ ನೀರಜೆ

ಆದರೆ ಈ ಪ್ರೀತಿಯ ಅಲೆಗೆ ನಾ ಸಿಲುಕುವೇ ಎಂಬ ಪರಿವೇ ಇರಲಿಲ್ಲ. ನನ್ನ ಗಮನಕ್ಕೆ ಬರದೇ ನಾ ಅವನ ಪ್ರೀತಿಯ ಬಲೆಗೆ ಸಿಕ್ಕಿ ಅವನ ಅತಿಥಿಯಾದೆ. ಅವನ ಸಿಹಿ-ಮಾತು, ನನಗೇ ತೋರಿಸುವ ಅಕ್ಕರೆ, ನನ್ನ ಕಣ್ಣುಗಳಲ್ಲಿ ನೀರು ಬಂದರೆ ಅವನ ಕಣ್ಣುಗಳಲ್ಲಿ ರಕ್ತ ಬರುವ ಹಾಗೇ ದುಃಖ ಪಡುವ ಅವನ ಪುಟ್ಟ ಹೃದಯ. ಮನಸ್ಸು ಶೂನ್ಯವಾಗಿದೆ, ರವಿಯ ಆಗಮನಕ್ಕಾಗಿ ಕಾದಿಹ ನೀರಜೆಯಂತೆ, ಮೃದುನುಡಿಗಳಿಂದ ಹೃದಯದ ತಾಳ ತಪ್ಪಿಸಿದ, ಕಣ್ಣೋಟದ ಹೊಬಾಣದಿಂದ ತನುಮನ ಅರಳಿಸಿದ. ನಿನ್ನ ಕಾಣಲು ನನ್ನ ನಯನಗಳು ಅರಳಿವೆ.
ಒಂದು ದಿನ ನಿನ್ನ ದರ್ಶನವಾಗದಿದ್ದಾರೆ ದೇವರಿಗೆ ನೂರಾರು ನಮನ. ಒಮ್ಮೆ ಬಾರೋ ನನ್ನ ಮುಂದೆ . ನಾ ಏಕೆ ನಿನ್ನ ಹುಚ್ಚಿಯಂತೆ ಪ್ರೀತಿಸಿದೆ? ನಾ ಏನು ಬರೆಯಲು ಹೋದರು ನನ್ನ ಕೈಗಳು ನನ್ನ ಗಮನಕ್ಕೆ ಬರದೇ ನಿನ್ನ ಹೆಸರನ್ನೇ ಬರೆಸುತ್ತಿತ್ತು. ನಿನ್ನ ಹೆಜ್ಜೆಯ ಮೇಲೆಯ ಮೇಲೆ ಹೆಜ್ಜೆ ಇಡುವಾಗ ಬದುಕಿನ ಆಸೆಯನ್ನು ಹೆಚ್ಚಿಸುತ್ತಿತ್ತು. ಕನಸುಗಳು ನನಸಾದ ಕನಸು ಕಾಣುತ್ತಿದೆ, ಒಮ್ಮೊಮ್ಮೆ ಕೋಳಿ ಜಗಳಗಳು ನಡೆದರು ಅದರಲ್ಲಿ ಏನೋ ಒಂಥರಾ ಪ್ರೀತಿ. ಆದರೆ ನನ್ನ ಕೋಪ ನಿನಗೆ ನೋವಿಸದಿರಲಿ .
ಆದರೆ ಈಗ ನಗುವಿಲ್ಲ , ನಲಿವಿಲ್ಲ ಬರೀ ನೋವು, ಬರೀ ಸೋಲಿನ ಕಾವು. ಕಂಬನಿ ಧಾರೆಯ ಮುತ್ತು. ನಾ ಮಾಡಿದ ಯಾವ ತಪ್ಪಿಗಾಗಿ ಈ ಕಠಿಣ ಶಿಕ್ಷೆ ನಾ ಕಾಣೇ , ನನ್ನಿಂದ ಮೌನವಾಗಿ ದೂರವಾದೆ . ಆದರೆ ಈ ಹೃದಯ ನಿನಗಾಗಿ ಬಿಕ್ಕಿ-ಬಿಕ್ಕಿ ಆಳುವುದು ಕಾಣದೇ ಹೋಯಿತೇ? ನಿನ್ನ ಮನಸ್ಸು ಕಲ್ಲಾಗಿ ಹೋಯಿತೇ? ನಿನ್ನ ನೆನಪೇ ಕಾಡುತ್ತಿರುವುದು ನನಗೆ. ನೀ ಸುಮ್ಮನೆ ಕುಳಿತರೇ ನಾ ಅಳುವೆ ಇಲ್ಲಿ. ಜೀವದ ಆಸೆಯೇ ಇಲ್ಲ. ನಿನ್ನ ಹುಡುಕಿದೆ ಎಲ್ಲ ಕಡೇ . ನಿನ್ನ ಸುಳಿವೇ ಇಲ್ಲ.
ನೆನಪಿನಾಳದಲ್ಲಿ ಪ್ರೀತಿಯ ನೆಲೆ, ಹಾತೊರೆಯಿತು ಕನಸು , ನೆನೆದು ಬತ್ತಿ ಸೊರಗಿತು ಮನ. ಬೆಳಕು ಕೂಡ ಕತ್ತಲಾಯಿತೆಂದು ತಿಳಿದೇ . ನನ್ನ ಪ್ರೀತಿಯು ಈ ಬೆಳಕಿನ ಹಾಗೇ ಮಾಯವಾಯಿತೆಂದು ತಿಳಿದು . ಪ್ರೀತಿ ಇಲ್ಲದ ಮೇಲೆ ಬೇಡದ ಜೀವ...



Click it and Unblock the Notifications