Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ರವಿಯ ಆಗಮನಕ್ಕಾಗಿ ಕಾದಿಹ ನೀರಜೆ

ಆದರೆ ಈ ಪ್ರೀತಿಯ ಅಲೆಗೆ ನಾ ಸಿಲುಕುವೇ ಎಂಬ ಪರಿವೇ ಇರಲಿಲ್ಲ. ನನ್ನ ಗಮನಕ್ಕೆ ಬರದೇ ನಾ ಅವನ ಪ್ರೀತಿಯ ಬಲೆಗೆ ಸಿಕ್ಕಿ ಅವನ ಅತಿಥಿಯಾದೆ. ಅವನ ಸಿಹಿ-ಮಾತು, ನನಗೇ ತೋರಿಸುವ ಅಕ್ಕರೆ, ನನ್ನ ಕಣ್ಣುಗಳಲ್ಲಿ ನೀರು ಬಂದರೆ ಅವನ ಕಣ್ಣುಗಳಲ್ಲಿ ರಕ್ತ ಬರುವ ಹಾಗೇ ದುಃಖ ಪಡುವ ಅವನ ಪುಟ್ಟ ಹೃದಯ. ಮನಸ್ಸು ಶೂನ್ಯವಾಗಿದೆ, ರವಿಯ ಆಗಮನಕ್ಕಾಗಿ ಕಾದಿಹ ನೀರಜೆಯಂತೆ, ಮೃದುನುಡಿಗಳಿಂದ ಹೃದಯದ ತಾಳ ತಪ್ಪಿಸಿದ, ಕಣ್ಣೋಟದ ಹೊಬಾಣದಿಂದ ತನುಮನ ಅರಳಿಸಿದ. ನಿನ್ನ ಕಾಣಲು ನನ್ನ ನಯನಗಳು ಅರಳಿವೆ.
ಒಂದು ದಿನ ನಿನ್ನ ದರ್ಶನವಾಗದಿದ್ದಾರೆ ದೇವರಿಗೆ ನೂರಾರು ನಮನ. ಒಮ್ಮೆ ಬಾರೋ ನನ್ನ ಮುಂದೆ . ನಾ ಏಕೆ ನಿನ್ನ ಹುಚ್ಚಿಯಂತೆ ಪ್ರೀತಿಸಿದೆ? ನಾ ಏನು ಬರೆಯಲು ಹೋದರು ನನ್ನ ಕೈಗಳು ನನ್ನ ಗಮನಕ್ಕೆ ಬರದೇ ನಿನ್ನ ಹೆಸರನ್ನೇ ಬರೆಸುತ್ತಿತ್ತು. ನಿನ್ನ ಹೆಜ್ಜೆಯ ಮೇಲೆಯ ಮೇಲೆ ಹೆಜ್ಜೆ ಇಡುವಾಗ ಬದುಕಿನ ಆಸೆಯನ್ನು ಹೆಚ್ಚಿಸುತ್ತಿತ್ತು. ಕನಸುಗಳು ನನಸಾದ ಕನಸು ಕಾಣುತ್ತಿದೆ, ಒಮ್ಮೊಮ್ಮೆ ಕೋಳಿ ಜಗಳಗಳು ನಡೆದರು ಅದರಲ್ಲಿ ಏನೋ ಒಂಥರಾ ಪ್ರೀತಿ. ಆದರೆ ನನ್ನ ಕೋಪ ನಿನಗೆ ನೋವಿಸದಿರಲಿ .
ಆದರೆ ಈಗ ನಗುವಿಲ್ಲ , ನಲಿವಿಲ್ಲ ಬರೀ ನೋವು, ಬರೀ ಸೋಲಿನ ಕಾವು. ಕಂಬನಿ ಧಾರೆಯ ಮುತ್ತು. ನಾ ಮಾಡಿದ ಯಾವ ತಪ್ಪಿಗಾಗಿ ಈ ಕಠಿಣ ಶಿಕ್ಷೆ ನಾ ಕಾಣೇ , ನನ್ನಿಂದ ಮೌನವಾಗಿ ದೂರವಾದೆ . ಆದರೆ ಈ ಹೃದಯ ನಿನಗಾಗಿ ಬಿಕ್ಕಿ-ಬಿಕ್ಕಿ ಆಳುವುದು ಕಾಣದೇ ಹೋಯಿತೇ? ನಿನ್ನ ಮನಸ್ಸು ಕಲ್ಲಾಗಿ ಹೋಯಿತೇ? ನಿನ್ನ ನೆನಪೇ ಕಾಡುತ್ತಿರುವುದು ನನಗೆ. ನೀ ಸುಮ್ಮನೆ ಕುಳಿತರೇ ನಾ ಅಳುವೆ ಇಲ್ಲಿ. ಜೀವದ ಆಸೆಯೇ ಇಲ್ಲ. ನಿನ್ನ ಹುಡುಕಿದೆ ಎಲ್ಲ ಕಡೇ . ನಿನ್ನ ಸುಳಿವೇ ಇಲ್ಲ.
ನೆನಪಿನಾಳದಲ್ಲಿ ಪ್ರೀತಿಯ ನೆಲೆ, ಹಾತೊರೆಯಿತು ಕನಸು , ನೆನೆದು ಬತ್ತಿ ಸೊರಗಿತು ಮನ. ಬೆಳಕು ಕೂಡ ಕತ್ತಲಾಯಿತೆಂದು ತಿಳಿದೇ . ನನ್ನ ಪ್ರೀತಿಯು ಈ ಬೆಳಕಿನ ಹಾಗೇ ಮಾಯವಾಯಿತೆಂದು ತಿಳಿದು . ಪ್ರೀತಿ ಇಲ್ಲದ ಮೇಲೆ ಬೇಡದ ಜೀವ...



Click it and Unblock the Notifications
