Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ದಾಂಪತ್ಯದಲ್ಲಿ ಇರಲೇ ಬೇಕಾದ ಅಂಶಗಳಿವು

ಹೀಗೆ ಡಿವೋರ್ಸ್ ಆಗುತ್ತಿರುವರಲ್ಲಿ ಶ್ರೀಮಂತ ವರ್ಗ, ಮತ್ತು ಮೇಲ್ಮಧ್ಯಮ ವರ್ಗದವರೆ ಹೆಚ್ಚು. ಬಾಹ್ಯವಾಗಿ ನೋಡಲು ಯಾವುದೇ ತೊಂದರೆ ಕಾಣುವುದಿಲ್ಲ. ಆದರೆ ಅವರಿಬ್ಬರಲ್ಲಿ ಪ್ರೀತಿಯ ಸೆಳೆತದ ಬದಲು ತಮ್ಮ ಅಹಂ ಹೆಚ್ಚಾಗಿರುತ್ತದೆ. ಗಂಡ-ಹೆಂಡತಿ ನಡುವಿನ ಸಂಬಂಧ ನೆಲೆಗೊಳ್ಳುವುದು ಇತರರ ಉಪದೇಶಗಳಿಂದಲ್ಲ, ಪರಸ್ಪರ ಅರ್ಥೈಹಿಸಿ ಕೊಳ್ಳುವುದರಿಂದ.
ಸಂಬಂಧದಲ್ಲಿ ಉತ್ತಮ ಭಾಂದವ್ಯ ಬೆಳೆಸಿಕೊಳ್ಳುವುದು ಅದೇ ಸಂಬಂಧ ಅರ್ಧದಲ್ಲಿ ಮುರಿದು ಬೀಳುವುದು ಎಲ್ಲಾ ಅವರವರ ಕೈಯಲ್ಲಿದೆ. ಉತ್ತಮ ಗಂಡ-ಹೆಂಡತಿ ಸಬಂಧಕ್ಕೆ ಬೇಕಾಗಿರುವುದು ಪರಸ್ಪರ ಒಬ್ಬರನ್ನೊಬ್ಬರು ಅರ್ಥೈಹಿಸಿಕೊಳ್ಳುವುದು ಅದಕ್ಕಾಗಿ ನೀವು ಮಾಡಬೇಕಾದದು ಇಷ್ಟೆ-
1. ಉತ್ತಮ ಸ್ನೇಹಿತರಾಗಿರುವುದು: ಗಂಡ ಮೊದಲು ಉತ್ತಮ ಸ್ನೇಹಿತನಾಗಿದ್ದರೆ ಮಾತ್ರ ಒಳ್ಳೆಯ ಗಂಡನಾಗಿರಲು ಸಾಧ್ಯ. ಸ್ನೇಹಿತರಾದರೆ ತಪ್ಪುಗಳು ಅಷ್ಟು ದೊಡ್ಡದಾಗಿ ಕಾಣುವುದಿಲ್ಲ. ಸಂಬಂಧವನ್ನೆ ಹಾಳು ಮಾಡುವ ಸಂಶಯ ರೋಗ ಬರುವುದಿಲ್ಲ. ಪರಸ್ಪರ ಒಬ್ಬರಿಗೊಬ್ಬರು ತಮ್ಮ ಭಾವನೆಗಳನ್ನು ಹಂಚಿಕೊಳ್ಳಬಹುದು.
2. ಸ್ಪರ್ಶ: ಪ್ರೀತಿಯ ಒಂದು ಸ್ಪರ್ಶ ಸಾಕು ಉತ್ತಮ ಸಂಬಂಧಕ್ಕೆ. ನೋವು ಇರಲಿ, ನಲಿವು ಇರಲಿ ಒಬ್ಬರಿಗೊಬ್ಬರು ಆಲಂಗಿಸಿಕೊಂಡಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಕೋಪ ಬಂದಾಗ ಪರಸ್ಪರ ಕಿತ್ತಾಡುವುದಕ್ಕಿಂತ ತಪ್ಪನ್ನು ತಿದ್ದುಕೊಳ್ಳುವ ಪ್ರಯತ್ನ ಮಾಡಬೇಕು.
3. ಪ್ರೀತಿ: ಮದುವೆಯಾಗುವುದಕ್ಕಿಂತ ಮೊದಲು ದಿನಕ್ಕೆ ನೂರು ಬಾರಿ ಐ ಲವ್ ಯೂ ಅಂದವರು ಮದುವೆ ನಂತರ ಆ ಪದ ಮರೆಯುವುದರಿಂದಲೆ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ನಿಷ್ಕಲ್ಮಶ ನಗುವಿನ ಜೊತೆ ನಿಮ್ಮ ಪ್ರೀತಿಯನ್ನು ಆಗಾಗ ವ್ಯಕ್ತ ಪಡಿಸುವುದರಿಂದ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ.
4. ಸಂಶಯ ತೊಡೆದು ಹಾಕಬೇಕು: ಒಂದು ಸಂಸಾರ ಒಡೆದು ಹಾಕಲು ಸಂಶಯವೆಂಬ ಭೂತ ಸಾಕು. ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಸಂಶಯ ಬಂದ ಮೇಲೆ ಅಂದರೆ ಅದನ್ನು ಮೊಳಕೆಯಲ್ಲಿ ತೊಡೆದು ಹಾಕಬೇಕು.
5. ಅಭಿಪ್ರಾಯ: ಪ್ರತಿ ದಿನಾ ಏನೆಲ್ಲಾ ನಡೆಯುವುದು ಅನ್ನುವ ವರದಿ ಒಪ್ಪಿಸಿ ಅಂತ ಹೇಳುತ್ತಿಲ್ಲ. ಆದರೆ ನಿಮ್ಮ ಅನುಭವಗಳನ್ನು ಹೇಳಿಕೊಳ್ಳುವುದರಿಂದ ಪರಸ್ಪರ ಸ್ನೇಹ ಮತ್ತಷ್ಟು ಹೆಚ್ಚಾಗುವುದು.
6. ಕ್ಷಮೆ ಕೇಳಲು ಹಿಂದೇಟು ಹಾಕಬಾರದು: ತಪ್ಪು ನಿಮ್ಮದಾಗಿದ್ದರೆ ಯಾವುದೇ ಅಹಂ ಇಲ್ಲದೆ ಕ್ಷಮೆ ಕೇಳಬೇಕು. ಇದರಿಂದ ಸಂಬಂಧ ಮತ್ತಷ್ಟು ಸುಂದರವಾಗುವುದು.
ಈ ಮೇಲಿನ ಅಂಶಗಳು ಉಪದೇಶವಲ್ಲ, ಸುಂದರ ಬದುಕಿನ ಮಾರ್ಗದರ್ಶಿಗಳಷ್ಟೆ.



Click it and Unblock the Notifications