Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ದಾಂಪತ್ಯದಲ್ಲಿ ಇರಲೇ ಬೇಕಾದ ಅಂಶಗಳಿವು

ಹೀಗೆ ಡಿವೋರ್ಸ್ ಆಗುತ್ತಿರುವರಲ್ಲಿ ಶ್ರೀಮಂತ ವರ್ಗ, ಮತ್ತು ಮೇಲ್ಮಧ್ಯಮ ವರ್ಗದವರೆ ಹೆಚ್ಚು. ಬಾಹ್ಯವಾಗಿ ನೋಡಲು ಯಾವುದೇ ತೊಂದರೆ ಕಾಣುವುದಿಲ್ಲ. ಆದರೆ ಅವರಿಬ್ಬರಲ್ಲಿ ಪ್ರೀತಿಯ ಸೆಳೆತದ ಬದಲು ತಮ್ಮ ಅಹಂ ಹೆಚ್ಚಾಗಿರುತ್ತದೆ. ಗಂಡ-ಹೆಂಡತಿ ನಡುವಿನ ಸಂಬಂಧ ನೆಲೆಗೊಳ್ಳುವುದು ಇತರರ ಉಪದೇಶಗಳಿಂದಲ್ಲ, ಪರಸ್ಪರ ಅರ್ಥೈಹಿಸಿ ಕೊಳ್ಳುವುದರಿಂದ.
ಸಂಬಂಧದಲ್ಲಿ ಉತ್ತಮ ಭಾಂದವ್ಯ ಬೆಳೆಸಿಕೊಳ್ಳುವುದು ಅದೇ ಸಂಬಂಧ ಅರ್ಧದಲ್ಲಿ ಮುರಿದು ಬೀಳುವುದು ಎಲ್ಲಾ ಅವರವರ ಕೈಯಲ್ಲಿದೆ. ಉತ್ತಮ ಗಂಡ-ಹೆಂಡತಿ ಸಬಂಧಕ್ಕೆ ಬೇಕಾಗಿರುವುದು ಪರಸ್ಪರ ಒಬ್ಬರನ್ನೊಬ್ಬರು ಅರ್ಥೈಹಿಸಿಕೊಳ್ಳುವುದು ಅದಕ್ಕಾಗಿ ನೀವು ಮಾಡಬೇಕಾದದು ಇಷ್ಟೆ-
1. ಉತ್ತಮ ಸ್ನೇಹಿತರಾಗಿರುವುದು: ಗಂಡ ಮೊದಲು ಉತ್ತಮ ಸ್ನೇಹಿತನಾಗಿದ್ದರೆ ಮಾತ್ರ ಒಳ್ಳೆಯ ಗಂಡನಾಗಿರಲು ಸಾಧ್ಯ. ಸ್ನೇಹಿತರಾದರೆ ತಪ್ಪುಗಳು ಅಷ್ಟು ದೊಡ್ಡದಾಗಿ ಕಾಣುವುದಿಲ್ಲ. ಸಂಬಂಧವನ್ನೆ ಹಾಳು ಮಾಡುವ ಸಂಶಯ ರೋಗ ಬರುವುದಿಲ್ಲ. ಪರಸ್ಪರ ಒಬ್ಬರಿಗೊಬ್ಬರು ತಮ್ಮ ಭಾವನೆಗಳನ್ನು ಹಂಚಿಕೊಳ್ಳಬಹುದು.
2. ಸ್ಪರ್ಶ: ಪ್ರೀತಿಯ ಒಂದು ಸ್ಪರ್ಶ ಸಾಕು ಉತ್ತಮ ಸಂಬಂಧಕ್ಕೆ. ನೋವು ಇರಲಿ, ನಲಿವು ಇರಲಿ ಒಬ್ಬರಿಗೊಬ್ಬರು ಆಲಂಗಿಸಿಕೊಂಡಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಕೋಪ ಬಂದಾಗ ಪರಸ್ಪರ ಕಿತ್ತಾಡುವುದಕ್ಕಿಂತ ತಪ್ಪನ್ನು ತಿದ್ದುಕೊಳ್ಳುವ ಪ್ರಯತ್ನ ಮಾಡಬೇಕು.
3. ಪ್ರೀತಿ: ಮದುವೆಯಾಗುವುದಕ್ಕಿಂತ ಮೊದಲು ದಿನಕ್ಕೆ ನೂರು ಬಾರಿ ಐ ಲವ್ ಯೂ ಅಂದವರು ಮದುವೆ ನಂತರ ಆ ಪದ ಮರೆಯುವುದರಿಂದಲೆ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ನಿಷ್ಕಲ್ಮಶ ನಗುವಿನ ಜೊತೆ ನಿಮ್ಮ ಪ್ರೀತಿಯನ್ನು ಆಗಾಗ ವ್ಯಕ್ತ ಪಡಿಸುವುದರಿಂದ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ.
4. ಸಂಶಯ ತೊಡೆದು ಹಾಕಬೇಕು: ಒಂದು ಸಂಸಾರ ಒಡೆದು ಹಾಕಲು ಸಂಶಯವೆಂಬ ಭೂತ ಸಾಕು. ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಸಂಶಯ ಬಂದ ಮೇಲೆ ಅಂದರೆ ಅದನ್ನು ಮೊಳಕೆಯಲ್ಲಿ ತೊಡೆದು ಹಾಕಬೇಕು.
5. ಅಭಿಪ್ರಾಯ: ಪ್ರತಿ ದಿನಾ ಏನೆಲ್ಲಾ ನಡೆಯುವುದು ಅನ್ನುವ ವರದಿ ಒಪ್ಪಿಸಿ ಅಂತ ಹೇಳುತ್ತಿಲ್ಲ. ಆದರೆ ನಿಮ್ಮ ಅನುಭವಗಳನ್ನು ಹೇಳಿಕೊಳ್ಳುವುದರಿಂದ ಪರಸ್ಪರ ಸ್ನೇಹ ಮತ್ತಷ್ಟು ಹೆಚ್ಚಾಗುವುದು.
6. ಕ್ಷಮೆ ಕೇಳಲು ಹಿಂದೇಟು ಹಾಕಬಾರದು: ತಪ್ಪು ನಿಮ್ಮದಾಗಿದ್ದರೆ ಯಾವುದೇ ಅಹಂ ಇಲ್ಲದೆ ಕ್ಷಮೆ ಕೇಳಬೇಕು. ಇದರಿಂದ ಸಂಬಂಧ ಮತ್ತಷ್ಟು ಸುಂದರವಾಗುವುದು.
ಈ ಮೇಲಿನ ಅಂಶಗಳು ಉಪದೇಶವಲ್ಲ, ಸುಂದರ ಬದುಕಿನ ಮಾರ್ಗದರ್ಶಿಗಳಷ್ಟೆ.



Click it and Unblock the Notifications