Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ದಾಂಪತ್ಯದಲ್ಲಿ ಇರಲೇ ಬೇಕಾದ ಅಂಶಗಳಿವು

ಹೀಗೆ ಡಿವೋರ್ಸ್ ಆಗುತ್ತಿರುವರಲ್ಲಿ ಶ್ರೀಮಂತ ವರ್ಗ, ಮತ್ತು ಮೇಲ್ಮಧ್ಯಮ ವರ್ಗದವರೆ ಹೆಚ್ಚು. ಬಾಹ್ಯವಾಗಿ ನೋಡಲು ಯಾವುದೇ ತೊಂದರೆ ಕಾಣುವುದಿಲ್ಲ. ಆದರೆ ಅವರಿಬ್ಬರಲ್ಲಿ ಪ್ರೀತಿಯ ಸೆಳೆತದ ಬದಲು ತಮ್ಮ ಅಹಂ ಹೆಚ್ಚಾಗಿರುತ್ತದೆ. ಗಂಡ-ಹೆಂಡತಿ ನಡುವಿನ ಸಂಬಂಧ ನೆಲೆಗೊಳ್ಳುವುದು ಇತರರ ಉಪದೇಶಗಳಿಂದಲ್ಲ, ಪರಸ್ಪರ ಅರ್ಥೈಹಿಸಿ ಕೊಳ್ಳುವುದರಿಂದ.
ಸಂಬಂಧದಲ್ಲಿ ಉತ್ತಮ ಭಾಂದವ್ಯ ಬೆಳೆಸಿಕೊಳ್ಳುವುದು ಅದೇ ಸಂಬಂಧ ಅರ್ಧದಲ್ಲಿ ಮುರಿದು ಬೀಳುವುದು ಎಲ್ಲಾ ಅವರವರ ಕೈಯಲ್ಲಿದೆ. ಉತ್ತಮ ಗಂಡ-ಹೆಂಡತಿ ಸಬಂಧಕ್ಕೆ ಬೇಕಾಗಿರುವುದು ಪರಸ್ಪರ ಒಬ್ಬರನ್ನೊಬ್ಬರು ಅರ್ಥೈಹಿಸಿಕೊಳ್ಳುವುದು ಅದಕ್ಕಾಗಿ ನೀವು ಮಾಡಬೇಕಾದದು ಇಷ್ಟೆ-
1. ಉತ್ತಮ ಸ್ನೇಹಿತರಾಗಿರುವುದು: ಗಂಡ ಮೊದಲು ಉತ್ತಮ ಸ್ನೇಹಿತನಾಗಿದ್ದರೆ ಮಾತ್ರ ಒಳ್ಳೆಯ ಗಂಡನಾಗಿರಲು ಸಾಧ್ಯ. ಸ್ನೇಹಿತರಾದರೆ ತಪ್ಪುಗಳು ಅಷ್ಟು ದೊಡ್ಡದಾಗಿ ಕಾಣುವುದಿಲ್ಲ. ಸಂಬಂಧವನ್ನೆ ಹಾಳು ಮಾಡುವ ಸಂಶಯ ರೋಗ ಬರುವುದಿಲ್ಲ. ಪರಸ್ಪರ ಒಬ್ಬರಿಗೊಬ್ಬರು ತಮ್ಮ ಭಾವನೆಗಳನ್ನು ಹಂಚಿಕೊಳ್ಳಬಹುದು.
2. ಸ್ಪರ್ಶ: ಪ್ರೀತಿಯ ಒಂದು ಸ್ಪರ್ಶ ಸಾಕು ಉತ್ತಮ ಸಂಬಂಧಕ್ಕೆ. ನೋವು ಇರಲಿ, ನಲಿವು ಇರಲಿ ಒಬ್ಬರಿಗೊಬ್ಬರು ಆಲಂಗಿಸಿಕೊಂಡಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಕೋಪ ಬಂದಾಗ ಪರಸ್ಪರ ಕಿತ್ತಾಡುವುದಕ್ಕಿಂತ ತಪ್ಪನ್ನು ತಿದ್ದುಕೊಳ್ಳುವ ಪ್ರಯತ್ನ ಮಾಡಬೇಕು.
3. ಪ್ರೀತಿ: ಮದುವೆಯಾಗುವುದಕ್ಕಿಂತ ಮೊದಲು ದಿನಕ್ಕೆ ನೂರು ಬಾರಿ ಐ ಲವ್ ಯೂ ಅಂದವರು ಮದುವೆ ನಂತರ ಆ ಪದ ಮರೆಯುವುದರಿಂದಲೆ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ನಿಷ್ಕಲ್ಮಶ ನಗುವಿನ ಜೊತೆ ನಿಮ್ಮ ಪ್ರೀತಿಯನ್ನು ಆಗಾಗ ವ್ಯಕ್ತ ಪಡಿಸುವುದರಿಂದ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ.
4. ಸಂಶಯ ತೊಡೆದು ಹಾಕಬೇಕು: ಒಂದು ಸಂಸಾರ ಒಡೆದು ಹಾಕಲು ಸಂಶಯವೆಂಬ ಭೂತ ಸಾಕು. ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಸಂಶಯ ಬಂದ ಮೇಲೆ ಅಂದರೆ ಅದನ್ನು ಮೊಳಕೆಯಲ್ಲಿ ತೊಡೆದು ಹಾಕಬೇಕು.
5. ಅಭಿಪ್ರಾಯ: ಪ್ರತಿ ದಿನಾ ಏನೆಲ್ಲಾ ನಡೆಯುವುದು ಅನ್ನುವ ವರದಿ ಒಪ್ಪಿಸಿ ಅಂತ ಹೇಳುತ್ತಿಲ್ಲ. ಆದರೆ ನಿಮ್ಮ ಅನುಭವಗಳನ್ನು ಹೇಳಿಕೊಳ್ಳುವುದರಿಂದ ಪರಸ್ಪರ ಸ್ನೇಹ ಮತ್ತಷ್ಟು ಹೆಚ್ಚಾಗುವುದು.
6. ಕ್ಷಮೆ ಕೇಳಲು ಹಿಂದೇಟು ಹಾಕಬಾರದು: ತಪ್ಪು ನಿಮ್ಮದಾಗಿದ್ದರೆ ಯಾವುದೇ ಅಹಂ ಇಲ್ಲದೆ ಕ್ಷಮೆ ಕೇಳಬೇಕು. ಇದರಿಂದ ಸಂಬಂಧ ಮತ್ತಷ್ಟು ಸುಂದರವಾಗುವುದು.
ಈ ಮೇಲಿನ ಅಂಶಗಳು ಉಪದೇಶವಲ್ಲ, ಸುಂದರ ಬದುಕಿನ ಮಾರ್ಗದರ್ಶಿಗಳಷ್ಟೆ.



Click it and Unblock the Notifications