Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ದಾಂಪತ್ಯದಲ್ಲಿ ಇರಲೇ ಬೇಕಾದ ಅಂಶಗಳಿವು

ಹೀಗೆ ಡಿವೋರ್ಸ್ ಆಗುತ್ತಿರುವರಲ್ಲಿ ಶ್ರೀಮಂತ ವರ್ಗ, ಮತ್ತು ಮೇಲ್ಮಧ್ಯಮ ವರ್ಗದವರೆ ಹೆಚ್ಚು. ಬಾಹ್ಯವಾಗಿ ನೋಡಲು ಯಾವುದೇ ತೊಂದರೆ ಕಾಣುವುದಿಲ್ಲ. ಆದರೆ ಅವರಿಬ್ಬರಲ್ಲಿ ಪ್ರೀತಿಯ ಸೆಳೆತದ ಬದಲು ತಮ್ಮ ಅಹಂ ಹೆಚ್ಚಾಗಿರುತ್ತದೆ. ಗಂಡ-ಹೆಂಡತಿ ನಡುವಿನ ಸಂಬಂಧ ನೆಲೆಗೊಳ್ಳುವುದು ಇತರರ ಉಪದೇಶಗಳಿಂದಲ್ಲ, ಪರಸ್ಪರ ಅರ್ಥೈಹಿಸಿ ಕೊಳ್ಳುವುದರಿಂದ.
ಸಂಬಂಧದಲ್ಲಿ ಉತ್ತಮ ಭಾಂದವ್ಯ ಬೆಳೆಸಿಕೊಳ್ಳುವುದು ಅದೇ ಸಂಬಂಧ ಅರ್ಧದಲ್ಲಿ ಮುರಿದು ಬೀಳುವುದು ಎಲ್ಲಾ ಅವರವರ ಕೈಯಲ್ಲಿದೆ. ಉತ್ತಮ ಗಂಡ-ಹೆಂಡತಿ ಸಬಂಧಕ್ಕೆ ಬೇಕಾಗಿರುವುದು ಪರಸ್ಪರ ಒಬ್ಬರನ್ನೊಬ್ಬರು ಅರ್ಥೈಹಿಸಿಕೊಳ್ಳುವುದು ಅದಕ್ಕಾಗಿ ನೀವು ಮಾಡಬೇಕಾದದು ಇಷ್ಟೆ-
1. ಉತ್ತಮ ಸ್ನೇಹಿತರಾಗಿರುವುದು: ಗಂಡ ಮೊದಲು ಉತ್ತಮ ಸ್ನೇಹಿತನಾಗಿದ್ದರೆ ಮಾತ್ರ ಒಳ್ಳೆಯ ಗಂಡನಾಗಿರಲು ಸಾಧ್ಯ. ಸ್ನೇಹಿತರಾದರೆ ತಪ್ಪುಗಳು ಅಷ್ಟು ದೊಡ್ಡದಾಗಿ ಕಾಣುವುದಿಲ್ಲ. ಸಂಬಂಧವನ್ನೆ ಹಾಳು ಮಾಡುವ ಸಂಶಯ ರೋಗ ಬರುವುದಿಲ್ಲ. ಪರಸ್ಪರ ಒಬ್ಬರಿಗೊಬ್ಬರು ತಮ್ಮ ಭಾವನೆಗಳನ್ನು ಹಂಚಿಕೊಳ್ಳಬಹುದು.
2. ಸ್ಪರ್ಶ: ಪ್ರೀತಿಯ ಒಂದು ಸ್ಪರ್ಶ ಸಾಕು ಉತ್ತಮ ಸಂಬಂಧಕ್ಕೆ. ನೋವು ಇರಲಿ, ನಲಿವು ಇರಲಿ ಒಬ್ಬರಿಗೊಬ್ಬರು ಆಲಂಗಿಸಿಕೊಂಡಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಕೋಪ ಬಂದಾಗ ಪರಸ್ಪರ ಕಿತ್ತಾಡುವುದಕ್ಕಿಂತ ತಪ್ಪನ್ನು ತಿದ್ದುಕೊಳ್ಳುವ ಪ್ರಯತ್ನ ಮಾಡಬೇಕು.
3. ಪ್ರೀತಿ: ಮದುವೆಯಾಗುವುದಕ್ಕಿಂತ ಮೊದಲು ದಿನಕ್ಕೆ ನೂರು ಬಾರಿ ಐ ಲವ್ ಯೂ ಅಂದವರು ಮದುವೆ ನಂತರ ಆ ಪದ ಮರೆಯುವುದರಿಂದಲೆ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ನಿಷ್ಕಲ್ಮಶ ನಗುವಿನ ಜೊತೆ ನಿಮ್ಮ ಪ್ರೀತಿಯನ್ನು ಆಗಾಗ ವ್ಯಕ್ತ ಪಡಿಸುವುದರಿಂದ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ.
4. ಸಂಶಯ ತೊಡೆದು ಹಾಕಬೇಕು: ಒಂದು ಸಂಸಾರ ಒಡೆದು ಹಾಕಲು ಸಂಶಯವೆಂಬ ಭೂತ ಸಾಕು. ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಸಂಶಯ ಬಂದ ಮೇಲೆ ಅಂದರೆ ಅದನ್ನು ಮೊಳಕೆಯಲ್ಲಿ ತೊಡೆದು ಹಾಕಬೇಕು.
5. ಅಭಿಪ್ರಾಯ: ಪ್ರತಿ ದಿನಾ ಏನೆಲ್ಲಾ ನಡೆಯುವುದು ಅನ್ನುವ ವರದಿ ಒಪ್ಪಿಸಿ ಅಂತ ಹೇಳುತ್ತಿಲ್ಲ. ಆದರೆ ನಿಮ್ಮ ಅನುಭವಗಳನ್ನು ಹೇಳಿಕೊಳ್ಳುವುದರಿಂದ ಪರಸ್ಪರ ಸ್ನೇಹ ಮತ್ತಷ್ಟು ಹೆಚ್ಚಾಗುವುದು.
6. ಕ್ಷಮೆ ಕೇಳಲು ಹಿಂದೇಟು ಹಾಕಬಾರದು: ತಪ್ಪು ನಿಮ್ಮದಾಗಿದ್ದರೆ ಯಾವುದೇ ಅಹಂ ಇಲ್ಲದೆ ಕ್ಷಮೆ ಕೇಳಬೇಕು. ಇದರಿಂದ ಸಂಬಂಧ ಮತ್ತಷ್ಟು ಸುಂದರವಾಗುವುದು.
ಈ ಮೇಲಿನ ಅಂಶಗಳು ಉಪದೇಶವಲ್ಲ, ಸುಂದರ ಬದುಕಿನ ಮಾರ್ಗದರ್ಶಿಗಳಷ್ಟೆ.



Click it and Unblock the Notifications











