Just In
Don't Miss
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- News ಬೆಂಗಳೂರಿನಲ್ಲಿ ಖಾಲಿ ಚೊಂಬು ಹಿಡಿದು ಕಾಂಗ್ರೆಸ್ ಪ್ರತಿಭಟನೆ
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Movies ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಿವಿಹಲಸಿನ ಕಾಯಿ ಸಾಂಬಾರ್ ರೆಸಿಪಿ
ಕೆಲವರಿಗೆ ಸಾಂಬಾರ್ ಇದ್ದರೆ ಮಾತ್ರ ಊಟ ರುಚಿಸುತ್ತದೆ. ಅನ್ನದ ಜೊತೆ ಸಾಂಬಾರ್ ನಷ್ಟು ಬೆಸ್ಟ್ ಕಾಂಬಿನೇಷನ್ ಇನ್ನೊಂದಿಲ್ಲ. ಕೆಲವು ತರಕಾರಿಗಳು ವರ್ಷಪೂರ್ತಿ ಲಭ್ಯವಿರುತ್ತದೆ. ಆದರೆ ಇನ್ನು ಕೆಲವು ಸೀಸನಲ್ ತರಕಾರಿಗಳು. ಅಂತಹ ತರಕಾರಿಗಳಲ್ಲಿ ಒಂದು ದಿವಿಹಲಸು ಅಥವಾ ಜೀಗುಜ್ಜೆ.
ಈ ದಿವಿಹಲಸನ್ನು ಬಳಸಿ ಅನೇಕ ಅಡುಗೆಗಳನ್ನು ತಯಾರಿಸಬಹುದು. ನಾವಿಲ್ಲಿ ದಿವಿಹಲಸನ್ನು ಬಳಸಿ ಸಾಂಬಾರ್ ತಯಾರಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ.
Recipe By: Sushma
Recipe Type: Veg
Serves: 5
-
ಬೇಕಾಗುವ ಸಾಮಗ್ರಿಗಳು
ದಿವಿಹಲಸು - 1 ಕಾಯಿ
ಮೆಂತ್ಯೆ- ಕಾಲು ಸ್ಪೂನ್
ಜೀರಿಗೆ - ಅರ್ಧ ಸ್ಪೂನ್
ಕೊತ್ತುಂಬರಿ ಬೀಜಗಳು - ಎರಡು ಸ್ಪೂನ್
ಕೆಂಪು ಬ್ಯಾಡಗಿ ಮೆಣಸು - ಆರರಿಂದ ಏಳು
ಕರಿಬೇವಿನ ಸೊಪ್ಪುಗಳು- 10 ರಿಂದ 12 ಎಲೆಗಳು
ತೆಂಗಿನ ಕಾಯಿ - ಒಂದು ಕಾಯಿ
ಅಡುಗೆ ಎಣ್ಣೆ - ಎರಡರಿಂದ ಮೂರು ಸ್ಪೂನ್
ತೊಗರಿಬೇಳೆ - ಒಂದು ಕಪ್
ಅರಿಶಿನ - ಚಿಟಿಕೆ
ಉಪ್ಪು- ರುಚಿಗೆ ತಕ್ಕಷ್ಟು
ಹುಣಸೆ ಹಣ್ಣು - ಒಂದು ಅಡುಕೆ ಗಾತ್ರ
ಬೆಲ್ಲ - ಒಂದು ಸ್ಪೂನ್
-
ಮಾಡುವ ವಿಧಾನ -
. ದಿವಿಹಲಸು ಅಥವಾ ಜೀಗುಜ್ಜೆಯನ್ನು ತ್ರಿಕೋನಾಕೃತಿಯಲ್ಲಿ ಕತ್ತರಿಸಿಕೊಂಡು ನೀರಿಗೆ ಹಾಕಿ. ಕತ್ತರಿಸುವಾಗ ನೀರಿಗೆ ಹಾಕಿಕೊಳ್ಳದೇ ಇದ್ದರೆ ಹೋಳುಗಳು ಕಪ್ಪಗಾಗುವ ಸಾಧ್ಯತೆ ಇರುತ್ತದೆ.
. ತೊಗರಿಬೇಳೆಯನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ.
. ದಿವಿಹಲಸಿನ ಹೋಳುಗಳನ್ನು ಉಪ್ಪು, ಬೆಲ್ಲ, ಚಿಟಿಕೆ ಅರಿಶಿನ ಹಾಕಿ ಬೇಯಿಸಿಕೊಳ್ಳಿ( ಕುಕ್ಕರ್ ನಲ್ಲಿ ಬೇಯಿಸಿದರೆ ಕರಗಿಹೋಗುವ ಸಾಧ್ಯತೆ ಹೆಚ್ಚು. ಗಟ್ಟಿಯಾದ ಹೋಳುಗಳೇ ಆಗಿದ್ದರೂ ಇದು ಬಹಳ ಬೇಗನೆ ಬೇಯುತ್ತದೆ. ಹಾಗಾಗಿ ಕುಕ್ಕರ್ ನಲ್ಲಿ ಬೇಯಿಸದೇ ಇರುವುದೇ ಒಳಿತು.)
. ತೊಗರಿ ಬೇಳೆಯೊಂದಿಗೆ ಬೇಯಿಸಿದ ಹೋಳುಗಳನ್ನು ಸೇರಿಸಿ.
. ಎರಡು ಸ್ಪೂನ್ ಅಡುಗೆ ಎಣ್ಣೆಗೆ ಮೆಂತ್ಯೆ,ಜೀರಿಗೆ, ಕೊತ್ತುಂಬರಿ ಬೀಜಗಳನ್ನು ಸೇರಿಸಿ ಹುರಿದುಕೊಳ್ಳಿ, ಕೆಂಬಣ್ಣಕ್ಕೆ ಬಂದಾಗ ಬ್ಯಾಡಗಿ ಮೆಣಸು ಸೇರಿಸಿ ಹುರಿಯಿರಿ.
. ಹುರಿದ ಮಿಶ್ರಣಕ್ಕೆ ತೆಂಗಿನತುರಿ,ಹುಣಸೆ ಹಣ್ಣನ್ನು ಸೇರಿಸಿ ರುಬ್ಬಿಕೊಳ್ಳಿ.
. ರುಬ್ಬಿದ ಮಿಶ್ರಣವನ್ನು ದಿವಿಹಲಸಿನ ಹೋಳುಗಳೊಂದಿಗೆ ಸೇರಿಸಿ ಐದು ನಿಮಿಷ ಹಸಿವಾಸನೆ ಹೋಗುವವರೆಗೆ ಕುದಿಸಿ.
. ನಂತರ ಬೇವಿನಸೊಪ್ಪುಗಳನ್ನು ಹಾಕಿ ಒಗ್ಗರಣೆ ನೀಡಿ ಅಥವಾ ಹಾಗೆಯೇ ಕುದಿಯುವಾಗ ಹಾಕಿದರೂ ಕೂಡ ಪರವಾಗಿಲ್ಲ.
- ನಿಮ್ಮ ದಿನನಿತ್ಯದ ಅಗತ್ಯತೆಯ 23% ಪೊಟಾಷಿಯಂ ಇದರಿಂದ ಲಭ್ಯವಾಗುತ್ತದೆ .ಮೆಗ್ನೇಷಿಯಂ,ಮ್ಯಾಂಗನೀಸ್,ಕಾಪರ್, ಸತು,ಕಬ್ಬಿಣ,ಕ್ಯಾಲ್ಸಿಯಂ,ಪಾಸ್ಪರಸ್, ಸೆಲೇನಿಯಂ ಸೇರಿದಂತೆ ಹಲವು ಪೋಷಕಾಂಶಗಳು ಇದರಲ್ಲಿ ಲಭ್ಯವಿದೆ. .ಡಯಾಬಿಟೀಸ್ ಸಮಸ್ಯೆ ಇರುವವರು ಸೇವಿಸಬಹುದಾದ ಅತ್ಯುತ್ತಮ ಆಹಾರ. ಒಮೆಗಾ-3 ಫ್ಯಾಟಿ ಆಸಿಡ್ ಸೇರಿದಂತೆ ಫೈಬರ್ ಅಂಶಗಳು ಇದರಲ್ಲಿದೆ. .ವಿಟಮಿನ್ ಸಿ ಅಂಶಗ ಕೂಡ ಇದರಲ್ಲಿದ್ದು ಚರ್ಮಕ್ಕೆ ಆರೋಗ್ಯವನ್ನು ಒದಗಿಸುತ್ತದೆ. . ಕೂದಲಿನ ಆರೋಗ್ಯವನ್ನು ಹೆಚ್ಚಿಸುವಲ್ಲಿ ನೆರವಾಗುವ ಇದು ಡ್ಯಾಂಡ್ರಫ್ ಸಮಸ್ಯೆಯನ್ನು ನಿವಾರಿಸುತ್ತದೆ.
- 100 Gram -