Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಅಡಿಗಡಿಗೆ ಉಪಯೋಗಕ್ಕೆ ಬರುವ ಸಲಹೆಗಳು

* ಮೆಣಸಿನಕಾಯಿ ಹೆಚ್ಚಿದ ಅಥವಾ ತುಂಡರಿಸಿದ ನಂತರ ಕೈಗೆ ಯಾವುದೇ ಎಣ್ಣೆ ಹಚ್ಚಿಕೊಂಡು ಪೇಪರ್ನಿಂದ ಒರೆಸಿ ಸಾಬೂನಿನಿಂದ ತೊಳೆದರೆ ಕೈಲಿ ಖಾರ ಉಳಿಯುವುದಿಲ್ಲ.
* ಈರುಳ್ಳಿ ಹೆಚ್ಚುವಾಗ ಕಣ್ಣಲ್ಲಿ ನೀರು ಸುರಿಯುತ್ತದೆಯಲ್ಲವೇ?? ಕನ್ನಡಕ ಧರಿಸಿ ಹೆಚ್ಚಿ. ಕಣ್ಣಲ್ಲಿ ನೀರು ಬರುವುದಿಲ್ಲ.
* ಟೀ ಮಾಡುವಾಗ ಕಿತ್ತಳೆ ಸಿಪ್ಪೆ, ಹಸಿ ಶುಂಠಿ, ತುಳಸಿ, ಹೀಗೆ ಒಂದೊಂದುಸಲ ಒಂದೊಂದನ್ನು ಹಾಕಿ ಟೀ ಮಾಡಿದರೆ ಬಹಳ ರುಚಿ ಕೊಡುತ್ತೆ. ಆರೋಗ್ಯಕ್ಕೂ ಒಳ್ಳೆಯದು.
* ಅಡಿಗೆ ಮನೆಯ ಸಿಂಕ್ ಹತ್ತಿರ ಒಂದು ಹಳೆಯ ಟೂತ್ ಬ್ರಷ್ ಇಡಿ, ನಕಾಸೆ ಇರುವ ಪಾತ್ರೆ ತಿಕ್ಕಲು ಉಪಯೋಗವಾಗುತ್ತೆ.
* ಮನೆ ಗುಡಿಸುವ ಪೊರಕೆ, ಬಾತ್ರೂಂ ತೊಳೆಯುವ ಪೊರೆಕೆಗೆ ದಾರದ ಕುಣಿಕೆ ಹಾಕಿ ಬಾಗಿಲ ಹಿಂದೆ/ಮೂಲೆಯಲ್ಲಿ ನೇತುಹಾಕಿ, ಪೊರಕೆ ಕಡ್ಡಿ ಹಾಳಾಗುವುದಿಲ್ಲ.
* ಬಾಳೆ ಹಣ್ಣಿನ ರಸಾಯನ ಮಾಡುವಾಗ ಒಂದು ಅರ್ಧ ಚಮಚ ಒಳ್ಳೆ ತುಪ್ಪ ಹಾಕಿದರೆ ಬಾಳೆಹಣ್ಣು ಕಪ್ಪಾಗುವುದಿಲ್ಲ, ರುಚಿಯು ಹೆಚ್ಚುತ್ತದೆ.
* ಒಂದುಪಾವು ಗೋಧಿ ಹಿಟ್ಟಿಗೆ ಸ್ವಲ್ಪ ಉಪ್ಪು ಮತ್ತು ಒಂದೆರಡು ಬ್ರೆಡ್ಡಿನ ಬಿಳಿಭಾಗದ ಪುಡಿ (ಮಿಕ್ಸಿಯಲ್ಲಿ ಮಾಡಿ) ಹಾಕಿ ಕಲೆಸಿದರೆ ಚಪಾತಿ ತುಂಬಾ ಮೃದುವಾಗಿ ಆಗುತ್ತದೆ.
* ನಿಮ್ಮ ಮನೆಯಲ್ಲಿ ಮೂರು ನಾಲ್ಕು ಬೇಡವಾದ ಗ್ಯಾಸ್ ಲೈಟರ್ಗಳಿದ್ದರೆ ಅವುಗಳನ್ನು ಆಗಾಗ್ಗೆ ಬದಲಾಯಿಸುತ್ತಾ ಉಪಯೋಗಿಸಿದರೆ, ಎಲ್ಲಾ ಲೈಟರ್ಗಳೂ ಚೆನ್ನಾಗಿ ಕೆಲಸ ಮಾಡುತ್ತವೆ.
* ಕಬ್ಬಿಣದ ಬಾಣಲೆ, ರೊಟ್ಟಿ ತವ ಉಪಯೋಗಿಸಿ ತೊಳೆದ ನಂತರ ಒರೆಸಿ ಸ್ವಲ್ಪ ಅಡಿಗೆ ಎಣ್ಣೆ ಹಚ್ಚಿಡಿ, ಮತ್ತೊಮ್ಮೆ ಉಪಯೋಗಿಸುವಾಗ ಮೇಲಿಂದ ತೊಳೆದು (ಉಜ್ಜದೆ) ಉಪಯೋಗಿಸಿ. ಚಿಟಿಕೆ ಉಪ್ಪು ಹಾಕಿ ತವ ಮೇಲೆ ಉಜ್ಜಿದರೆ ರೊಟ್ಟಿ ಅಥವಾ ದೋಸೆ ಸಲೀಸಾಗಿ ಎದ್ದು ಬರುತ್ತದೆ.



Click it and Unblock the Notifications