Latest Updates
-
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಅಡುಗೆಯಲ್ಲಿ ಉಪ್ಪು ಜಾಸ್ತಿಯಾದರೆ ಹೀಗೆ ಮಾಡಿ

ಉಪ್ಪು ಜಾಸ್ತಿಯಾದರೆ ಹೀಗೆ ಮಾಡಿ:
ಅಡುಗೆ ಮಾಡುವಾಗ ಸ್ವಲ್ಪ ಉಪ್ಪನ್ನು ಬಳಸಿ, ಉಪ್ಪು ಸಾಲಲಿಲ್ಲ ಅಂದರೆ ಮತ್ತೆ ಸೇರಿಸಬಹುದು. ಈ ರೀತಿ ಮಾಡಿದರೆ ಅಡುಗೆಯಲ್ಲಿ ಉಪ್ಪು ಹೆಚ್ಚಾಗಿ ಹಾಳಾಗುವುದನ್ನು ತಡೆಯಬಹುದು. ಕೆಲವೊಮ್ಮೆ ಅಳತೆ ಮೀರಿ ಉಪ್ಪು ಜಾಸ್ತಿಯಾದರೆ ಹೀಗೆ ಮಾಡಿ.
1.ಒಂದು ವೇಳೆ ಸಾರಿನಲ್ಲಿ ಉಪ್ಪು ಸ್ವಲ್ಪ ಹೆಚ್ಚಾದರೆ ಸ್ವಲ್ಪ ನೀರು ಸೇರಿಸಿ ಕುದಿಸಬೇಕು.
2. ಪಲ್ಯದಂತಹ ಅಡುಗೆಗೆ ಸ್ವಲ್ಪ ಆಲೂಗೆಡ್ಡೆ ಕತ್ತರಿಸಿ ಹಾಕಿ 5 ನಿಮಿಷ ಬೇಯಿಸಿ ನಂತರ ಆಲೂಗೆಡ್ಡೆ ತೆಗೆಯಬೇಕು.
3. ಗೋಧಿ ಹಿಟ್ಟನ್ನು ಕಲೆಸಿ ಉಂಡೆ ರೀತಿ ಮಾಡಿ ಉಪ್ಪು ಹೆಚ್ಚಾಗಿರುವ ಖಾದ್ಯಕ್ಕೆ ಸೇರಿಸಿದರೆ ಗೋಧಿ ಹಿಟ್ಟು ಅಧಿಕವಾಗಿರುವ ಉಪ್ಪಿನಂಶವನ್ನು ಹೀರಿಕೊಳ್ಳುತ್ತದೆ.
4. ಗ್ರೇವಿಯಲ್ಲಿ ಉಪ್ಪು ಜಾಸ್ತಿಯಾದರೆ 1 ಚಮಚ ಅಕ್ಕಿ ಹಿಟ್ಟನ್ನು ಸೇರಿಸಿ 5-6 ನಿಮಿಷ ಕುದಿಸಬೇಕು. ಆಗ ಹಿಟ್ಟು ಅಧಿಕ ಉಪ್ಪನ್ನು ಹೀರಿಕೊಂಡು ಗ್ರೇವಿಯ ಮೇಲ್ಭಾಗದಲ್ಲಿ ತೇಲುತ್ತಿರುತ್ತದೆ. ನಂತರ ಚಮಚದಿಂದ ಆ ಹಿಟ್ಟನ್ನು ತೆಗೆಯಬೇಕು.
5. ಗ್ರೇವಿಯಲ್ಲಿ ಆಲೂಗೆಡ್ಡೆಯನ್ನು ಕತ್ತರಿಸಿ ಹಾಕಿ 6-7 ನಿಮಿಷ ಬೇಯಿಸಿದರೆ ಅಧಿಕ ಉಪ್ಪನ್ನು ಆಲೂಗೆಡ್ಡೆ ಹೀರಿಕೊಳ್ಳುತ್ತದೆ. ನಂತರ ಆ ಆಲೂಗೆಡ್ಡೆ ತುಂಡುಗಳನ್ನು ಗ್ರೇವಿಯಿಂದ ತೆಗೆಯಬೇಕು.
6. ಸಾರಿನಲ್ಲಿ ಸ್ವಲ್ಪ ಉಪ್ಪು ಜಾಸ್ತಿಯಾದರೆ ಸ್ವಲ್ಪ ಹುಣಸೆ ಹಣ್ಣಿನ ರಸ ಅಥವಾ ವಿನಿಗರ್ ಸೇರಿಸಿದರೆ ಸಾಕು.



Click it and Unblock the Notifications