Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಖರ್ಜೂರ ಹಲ್ವಾ: ಹಬ್ಬದ ಸ್ಪೆಷಲ್
ಎಲ್ಲೆಲ್ಲಿಯೂ ಹಬ್ಬಗಳ ಸಡಗರ, ಮುಸ್ಲಿಂರಿಗೆ ನಾಳೆ ಪವಿತ್ರ ರಂಜಾನ್ ಹಬ್ಬದ ಸಡಗರ, ಹಿಂದೂಗಳಿಗೆ ಶ್ರಾವಣ ಮಾಸವೆಂದರೆ ಹಬ್ಬಗಳ ಸಾಲು. ಹಬ್ಬ ಹರಿದಿನಗಳಲ್ಲಿ ಸಿಹಿ ತಿಂಡಿಗಳಿಗೆ ಎಲ್ಲಿಲ್ಲದ ಪ್ರಾಮುಖ್ಯತೆ. ಸಾಮಾನ್ಯವಾಗಿ ಹಬ್ಬಗಳಲ್ಲಿ ಸಾಂಪ್ರದಾಯಕವಾದ ಕೆಲವೊಂದು ಸಿಹಿ ತಿಂಡಿಗಳನ್ನು ತಪ್ಪದೇ ಮಾಡುತ್ತೇವೆ.
ಅದರ ಜೊತೆಗೆ ಹಬ್ಬದ ದಿನದಂದು ಮಾಡಲು ಸುಲಭವಾದ, ಆದರೆ ಅತ್ಯಂತ ರುಚಿಕರವಾದ ಸಿಹಿ ತಿಂಡಿಯ ರೆಸಿಪಿಯನ್ನು ಹುಡುಕಾಟದಲ್ಲಿ ಇದ್ದರೆ ಇದೋ ಇಲ್ಲಿದೆ ರೆಸಿಪಿ:

ಬೇಕಾಗುವ ಸಾಮಾಗ್ರಿಗಳು
ಖರ್ಜೂರ 2 ಕಪ್ ಬಿಸಿ ಹಾಲು 2 ಕಪ್
ಸಕ್ಕರೆ ಒಂದು ಕಪ್ (ಸಿಹಿಗೆ ತಕ್ಕಷ್ಟು)
ತುಪ್ಪ ಅರ್ಧ ಕಪ್
ಏಲಕ್ಕಿ ಪುಡಿ 1 ಚಮಚ
ಬಾದಾಮಿ 5-6
ತಯಾರಿಸುವ ವಿಧಾನ:
* ಬಿಸಿ ಹಾಲಿನಲ್ಲಿ ಖರ್ಜೂರವನ್ನು ಕಮ್ಮಿಯೆಂದರೂ 3 ಗಂಟೆಗಳ ಕಾಲ ನೆನೆ ಹಾಕಬೇಕು. ನಂತರ ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ಮಾಡಿ.
* ನಂತರ ತಟ್ಟೆಗೆ 1 ಚಮಚ ತುಪ್ಪ ಸವರಿ ಬದಿಯಲ್ಲಿ ಇಡಿ.
* ಈಗ ಪ್ಯಾನ್ ಗೆ ತುಪ್ಪ ಹಾಕಿ ಬಿಸಿ ಮಾಡಿ, ನಂತರ ಖರ್ಜೂರ ಪೇಸ್ಟ್, ಸಕ್ಕರೆ ಹಾಕಿ ಸಾಧಾರಣ ಉರಿಯಲ್ಲಿ ಸಕ್ಕರೆ ಸಂಪೂರ್ಣ ಕರಗುವವರೆಗೆ ಸೌಟ್ ನಿಂದ ಆಡಿಸಿ.
* ಬೇಕಿದ್ದರೆ ಸ್ವಲ್ಪ ಹಾಲು ಸೇರಿಸಬಹುದು, ಇದನ್ನು ಸಾಧರಣ ಉರಿಯಲ್ಲಿ 20 ನಿಮಿಷ ಬೇಯಿಸಿ, ಆಗಾಗ ಸೌಟ್ ನಿಂದ ಚೆನ್ನಾಗಿ ತಿರುಗಿಸಿ, ನಂತರ ಏಲಕ್ಕಿ ಹಾಕಿ ತಿರುಗಿಸಿ, ಈ ಮಿಶ್ರಣವನ್ನು ತಟ್ಟೆಗೆ ಸುರಿಯಿರಿ, ಅದರ ಮೇಲೆ ಬಾದಾಮಿಯ ಪೀಸ್ ಗಳನ್ನು ಉದುರಿಸಿ, ತಣ್ಣಗಾಗಲು ಬಿಡಿ.
* ಮಿಶ್ರಣ ತಣ್ಣಗಾಗಿ ಗಟ್ಟಿಯಾಗುವಾಗ ಬೇಕಾದ ಆಕಾರದಲ್ಲಿ ಕತ್ತರಿಸಿದ ಖರ್ಜೂರದ ಹಲ್ವಾ ರೆಡಿ.



Click it and Unblock the Notifications











